
ಕಲಿಯುಗ - ಕಲ್ಪತರು
ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು
ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು
೧೮. ಶ್ರೀನೃಸಿಂಹಾವತಾರ ಮತ್ತು ದೈತ್ಯನ ಸಂಹಾರ !
ಪ್ರಹ್ಲಾದನ ಮೇಲೆ ಕೋಪಗೊಂಡ ಹಿರಣ್ಯಕಶ್ಯಪನು “ಎಲವೋ ದೈತ್ಯಕುಲಕುಠಾರ! ನಿನ್ನ ಹುಚ್ಚಾಟ ವಿಪರೀತವಾಯಿತು. ಲೋಕಪಾಲಕರೇ ನನ್ನ ಭೂವಿಭ್ರಮಣಕ್ಕೆ ಹೆದರಿ ನಡುಗುತ್ತಿರುವಾಗ ಅದಾರಬಲದಿಂದ ಹೀಗೆ ನೀನು ಗರ್ವದಿಂದ ಹರಟುತ್ತಿರುವೆಯೋ?” ಎಂದು ಪ್ರಶ್ನಿಸಿದನು.46
ಪ್ರಹ್ಲಾದ : (ನಸುನಕ್ಕು) ರಾಜನ್! ನಾನೇ ಜಗದೀಶ್ವರ, ತ್ರಿಲೋಕವಿಜಯಿ, ನನ್ನ ಪರಾಕ್ರಮಕ್ಕೆ ಎದುರಿಲ್ಲ ಎಂದು ಗರ್ವದಿಂದ ಮೆರೆಯುತ್ತಿದ್ದೆಯಲ್ಲವೆ? ಇದೀಗ ಒಂದು ಪಕ್ಷಿಯನ್ನು ಕೊಲ್ಲಲಾಗದೆ ತಲೆತಗ್ಗಿಸಿ ನಿಂತುದನ್ನು ಆಗಲೇ ಮರೆತುಬಿಟ್ಟೆಯಾ ? ಆ ಪಕ್ಷಿ ಯಾರೆಂದು ತಿಳಿದೆ? ಸಕಲಜೀವರಲ್ಲಿ ಅಂತರ್ಗತರಾಗಿದ್ದು ಶ್ರೀಹರಿಯ ಪ್ರೇರಣೆಯಂತೆ, ಸಂಕಲ್ಪದಂತೆ ಜಗತ್ಪಾಣರಾಗಿ ನಿಯಮನಗೊಳಿಸುವ ಸಾಕ್ಷಾತ್ ಮುಖ್ಯಪ್ರಾಣದೇವರು!! ಅವರ ಉಪದೇಶವನ್ನು ನಿರ್ಲಕ್ಷಿಸಿ ಅವರನ್ನೇ ಸಂಹರಿಸಲು ಉದ್ಯುಕ್ತನಾಗಿ ವಿಫಲನಾಗಿಯೂ ಈಗ ಮತ್ತೆ ನಿನಗಾರಬಲವೆಂದು ನನ್ನನ್ನು ಪ್ರಶ್ನಿಸುವೆಯಾ?
ಕೇಳು ತಂದೆಯೇ! ನನಗಾರಬಲವೆಂದು ಕೇಳಿದೆಯಲ್ಲವೇ ? ಸಾಮಾನ್ಯ ತೃಣದಿಂದ ಹಿಡಿದು ನಿನಗೆ ವರದಾನ ಮಾಡಿದ ಬ್ರಹ್ಮದೇವರ ಪರ್ಯ೦ತವಾಗಿ ಸಮಸ್ತ ಚರಾಚರ ಜಗತ್ತು ಯಾರ ವಶದಲ್ಲಿದೆಯೋ, ಅಂಥ ಬ್ರಹ್ಮಾದಿಗಳಿಗೆ ಇರುವುದೂಲೆ ಹರಿಯ ಒಂದೇ ಬಲ! ಬಲಶಾಲಿಗಳಿಗೆಲ್ಲ ಬಲಪ್ರದವಾದ ಆ ಮಹಾಬಲದ ಮುಂದೆ ಮತ್ತಾವ ಬಲವೂ ನಿಲ್ಲಲಾರದು.
ಜನಕ! ಇಷ್ಟೇ ಅಲ್ಲ: ಯಾವ ಬಲದಿಂದ ನೀನು 'ಮಹಾಬಲಿ' ಎಂದು ತಿಳಿದಿರುವೆಯೋ, ನನ್ನ ಜೀವನವು ಅದೇ ಸರ್ವಶಕ್ತಿಮಾನ್ ನನ್ನ ಪ್ರಭು ಶ್ರೀಹರಿಯ ಬಲವನ್ನೇ ಅವಲಂಬಿಸಿದೆ!17
ಹಿರಣ್ಯಕಶ್ಯಪನಿಗೆ ಕೋಪವು ಮಿತೀಮೀರಿತು. ಅಸಮಾಧಾನ, ಕ್ರೋಧಗಳಿಂದ ಕಂಪಿಸುತ್ತಾ ಸಿಂಹಾಸನದಿಂದ ಇಳಿದು ಬಂದು ಪ್ರಹ್ಲಾದನನ್ನು ಎಳೆಯುತ್ತಾ 'ಹರಿ, ಹರಿ! ಎಲ್ಲಿರುವನೋ ಆ ನಿನ್ನ ಹರಿ? ನನ್ನ ಮಮತೆಯ ಸಹೋದರನನ್ನು ಸಂಹರಿಸಿದ ಆ ವಂಚಕನಲ್ಲಿರುವನೋ?” ಎಂದಬ್ಬರಿಸಿದನು. ಮತ್ತೆ ಪ್ರಹ್ಲಾದನನ್ನು ನೋಡಿ ಅವನೇ ಹರಿಯೆಂದು ಭ್ರಮಿಸಿ ಅವನನ್ನು ಅತ್ತಿತ್ತ ತಳ್ಳಾಡುತ್ತಾ “ಹರಿ! ಹರಿ!! ಸಿಕ್ಕಿದೆಯಾ ! ಈಗ ನನ್ನ ಕೈಯಿಂದ ಹೇಗೆ ತಪ್ಪಿಸಿಕೊಳ್ಳುವೆಯೋ ನೋಡುತ್ತೇನೆ” ಎಂದು ಹೇಳಿದನು.
ಆಗ ಪ್ರಹ್ಲಾದನು ಶಾಂತರೀತಿಯಿಂದಲೇ ತಂದೆಗೆ ಹೇಳಿದನು - “ಜನಕ! ಹರಿಯ ದ್ವೇಷದಿಂದ ಮತ್ತನಾದ ನಿನಗೆ ಎಲ್ಲವೂ ಹರಿಮಯವಾಗಿಯೇ ಕಾಣುವುದು, ಸಹಜ ಅಪ್ಪಾ, ನಾನು ಶ್ರೀಹರಿಯಲ್ಲ, ಅವನ ದಾಸನಾದ ಪ್ರಹ್ಲಾದನು”. ಹಿರಣ್ಯಕಶ್ಯಪು : (ಎಚ್ಚೆತ್ತು) ನೀನು ಹರಿಯಲ್ಲವೇ? ಹಾಗಾದರೆ ಆ ಮಾಯಾವಿ ಎಲ್ಲಿರುವನು, ಹೇಳು ? ಪ್ರಹ್ಲಾದ : ಜನಕ! ಶ್ರೀಹರಿಯು ಎಲ್ಲ ಕಡೆಯಲ್ಲಿಯೂ ಇರುವನು. ಅವನಿಲ್ಲದ ಸ್ಥಳವೇ ಇಲ್ಲ, ಅವನು ನನ್ನಲ್ಲಿರುವನು, ನಿನ್ನಲ್ಲಿಯೂ ಇರುವನು.
ಹಿರಣ್ಯಕಶ್ಯಪು : ಹಾಂ, ನನ್ನಲ್ಲಿರುವನೇ ?
ಪ್ರಹ್ಲಾದ : ಅಹುದು ತಂದೆಯೇ, ಅವನು ಎಲ್ಲರಲ್ಲಿಯೂ ಇರುವನು.
ಹಿರಣ್ಯಕಶ್ಯಪನು ಗುರುಗಳಾದ ಶುಕ್ರಾಚಾರ್ಯರು ಹೇಳಿದಂತೆ ವರ್ತಿಸಿದರೆ ಎಲ್ಲಿದ್ದರೂ ಆ ಹರಿಯು ಪ್ರಹ್ಲಾದನನ್ನು ರಕ್ಷಿಸಲು ಬರುವವನು, ಆಗ ತಾನು ಅವನನ್ನು ಸುಲಭವಾಗಿ ನಾಶಪಡಿಸಬಹುದೆಂಬ ಸಂತಸದಿಂದ ಉಬ್ಬಿ - “ಪ್ರಹ್ಲಾದ! ಆ ನಿನ್ನ ವಿಷ್ಣುವು ಎಲ್ಲ ಕಡೆ ಇರುವನೆಂದೆಯಲ್ಲವೇ ? ಅಜ್ಞಬಾಲಕ! ನಿನ್ನನ್ನು ಈಗಲೇ ಸಂಹರಿಸುವೆನು! ನಿನ್ನನ್ನು ಆ ನಿನ್ನ ಹರಿ ಹೇಗೆ ರಕ್ಷಿಸುವನೋ ನೋಡುವೆನು” ಎಂದು ಪ್ರಹ್ಲಾದನನ್ನು ಸಂಹರಿಸಲು ಖಡ್ಗವನ್ನು ಮೇಲೆತ್ತಿದನು.
ಪ್ರಹ್ಲಾದ : (ನಿರ್ಭೀತಿಯಿಂದ) ಭಕ್ತರ ಯೋಗಕ್ಷೇಮವನ್ನು ಸರ್ವದಾ ನಿರ್ವಹಿಸುತ್ತಿರುವ ಆ ನನ್ನ ಸ್ವಾಮಿಗೆ ಅಲ್ಪಶಕ್ತನಾದ ನಿನ್ನಿಂದ ನನ್ನನ್ನು ಕಾಪಾಡುವುದೊಂದು ಮಹತ್ಕಾರ್ಯವಲ್ಲ. ಪಾಪ, ನನಗೆ ಜನ್ಮವಿತ್ತ ನಿನಗೆ ನನ್ನೀ ಶರೀರದ ಮೇಲೆ ಅಧಿಕಾರವಿದೆ. ನನ್ನ ಸಂಹಾರದಿಂದ ನಿನ್ನ ಹರಿದ್ವೇಷ ಶಾಂತವಾಗುತ್ತಿದ್ದರೆ ಇಕೋ ನಿನ್ನ ಖಡ್ಗಕ್ಕೆ ನನ್ನ ಶಿರವು ಸಿದ್ಧವಾಗಿರುವುದು. (ಕರಜೋಡಿಸಿ) ಹರಿನಾರಾಯಣ, ಜಯನಾರಾಯಣ.
ಹಿರಣ್ಯಕಶ್ಯಪು : ಎಲ್ಲಿರುವನೋ ಆ ನಿನ್ನ ಹರಿ ? ಈ ಸಿಂಹಾಸನದಲ್ಲಿರುವನೇ?
ಪ್ರಹ್ಲಾದ : ಇರುವನು ತಂದೆಯೇ!
ಹಿರಣ್ಯಕಶ್ಯಪು : (ಪ್ರಹ್ಲಾದನನ್ನು ಎಳೆದು) ಈ ಗೋಡೆಯಲ್ಲಿ?
ಪ್ರಹ್ಲಾದ : ಅಲ್ಲಿಯೂ ಇರುವನು.
ಹಿರಣ್ಯಕಶ್ಯಪು : (ಭೂಮಿಯನ್ನು ಕಾಲಿನಿಂದಪ್ಪಳಿಸಿ) ಇಲ್ಲಿ?
ಪ್ರಹ್ಲಾದ : (ದೃಢವಾಗಿ) ಇರುವನು.
ಆಗ ಹಿರಣ್ಯಕಶ್ಯಪನು ಸಭೆಯಲ್ಲಿದ್ದ ಉಕ್ಕಿನ ಸ್ತಂಭವನ್ನು ತೋರಿ “ಪ್ರಹ್ಲಾದ, ಆ ಮಾಯಾವಿ, ನಿನ್ನ ಸ್ವಾಮಿ, ಹರಿಯು ಇಲ್ಲಿರುವನೇನು ?” ಎಂದಾರ್ಭಟಿಸಿದನು.
ಪ್ರಹ್ಲಾದ : ಜನಕ, ಅವನಿರದ ಸ್ಥಳವೇ ಇಲ್ಲ. ಶ್ರೀಹರಿಯು ಆ ಸ್ತಂಭದಲ್ಲಿಯೂ ಇರುವನು.
ಹಿರಣ್ಯಕಶ್ಯಪು : ಎಲವೋ ಬಾಲಕ ನಿಜ, ನೀನೀಗ ಮರಣವನ್ನು ಬಯಸುತ್ತಿರುವೆ. ಅಂತೆಯೇ ಹೀಗೆ ಅಸಂಬದ್ಧ
ಪ್ರಲಾಪ ಮಾಡುತ್ತಿರುವೆ. ಶ್ರೀನಾರಾಯಣನೇ ನಿನಗೆ ಬಲಪ್ರದನೆಂದು ಕೊಚ್ಚಿದೆಯಲ್ಲವೆ?
ಅವನು ಸರ್ವತ್ರವ್ಯಾಪ್ತನಾಗಿದ್ದರೆ, ಈ ಸ್ತಂಭದಲ್ಲಿ ಏಕೆ ಕಾಣಿಸುತ್ತಿಲ್ಲ? ಬಾಯಿಬಡುಕನಂತೆ ಬಡಬಡಿಸುವ ನಿನ್ನ ತಲೆಯನ್ನು ಈಗಲೇ ಕತ್ತರಿಸುವೆನು! ಆ ಹರಿಯು ನಿನ್ನನ್ನು ಅದೆಂತು ರಕ್ಷಿಸುವನೋ ನೋಡುವೆನು !50 ಹೀಗೆ ಕೆಟ್ಟಮಾತುಗಳಿಂದ ಭಗವದ್ಭಕ್ತನಾದ ಪ್ರಹ್ಲಾದನನ್ನು ನಿಂದಿಸಿ, ಕಾಲಿಂದ ಒದ್ದು, ಖಡ್ಗವನ್ನು ಎತ್ತಿಹಿಡಿದು ಸ್ತಂಭವನ್ನು ಮುಷ್ಟಿಯಿಂದ ಬಲವಾಗ ಗುದ್ದಿದನು.
ಅದೇನಾಶ್ಚರ್ಯ! ಕೂಡಲೇ ಆ ಸ್ತಂಭದಿಂದ ಅತ್ಯಂತ ಭಯಂಕರವಾದ ಶಬ್ದವೊಂದು ಕೇಳಿಬಂದಿತು. ಆ ಮಹಾನಾದು ಅಖಂಡಬ್ರಹ್ಮಾಂಡಭಾಂಡವೇ ತುಂಡಾಗುತ್ತಿರುವುದೋ ಎಂಬಂತೆ ಅತಿಕಠೋರ ಪ್ರಚಂಡವಾಗಿದ್ದು, ಸರ್ವರ ಗುಂಡಿಗೆಯನ್ನು ನಡುಗಿಸುವಂತಿತ್ತು. ಆ ಪ್ರಚಂಡ ಭಯಪ್ರದ ನಿನಾದವನ್ನಾಲಿಸಿ ರುದ್ರಾದಿ ದೇವಸಂದೋಹವು ತಮ್ಮ ತಮ್ಮ ಲೋಕನಾಶ ಮಾಡಲು ಅಕಾಲಪ್ರಳಯವೇನಾದರೂ ಸಂಭವಿಸುತ್ತಿರುವುದೋ ಎಂದೇ ಭಾವಿಸಿ ಭಯಗೊಂಡರು. ನಿಜಸುತನ ಕೊಲ್ಲಲೆಣಿಸಿದ ಕ್ಷುಲ್ಲ ಹಿರಣ್ಯಕಶ್ಯಪನು ಬರಸಿಡಿಲೆರಗಿದಂತೆ ಘೋರವಾದ ಆ ಶಬ್ದವನ್ನಾಲಿಸಿ ಬೆಚ್ಚಿಬಿದ್ದು ಆ ನಿನಾದವೆತ್ತಕಡೆಯಿಂದ ಬರುತಿಪ್ಪುದೆಂದರಿಯಲೊಮ್ಮೆ ಸುತ್ತಲೂ ಪರಿಕಿಸಿದನು. ಎತ್ತ ನೋಡಿದರೂ ಆ ಭೀಕರ ನಿನಾದ ಬಂದ ತಾಣವರಿಯಲಾಗದೆ ದಿಗ್ಧಮೆಗೊಂಡು ನಿಂತನು. ಮೈ ನಡುಗಿಸುವ ಆ ಶಬ್ದದಿಂದ ದೈತ್ಯಸಾಮ್ರಾಟನ ಕಿಂಕರರಾದ ದಾನವವೀರರು ಭಯಗೊಂಡರು, ಅಂಬರದಲ್ಲಿ ಶಬ್ದವಾದರದು ಒಂದು ಚೇತನವನ್ನಾಶ್ರಯಿಸಿಯೇ ಬರಬೇಕಲ್ಲವೇ ? ಇದೇನಾಶ್ಚರ್ಯ! ಚೇತನರಿಲ್ಲದೆಯೇ ನಿನಾದ ಬರುತ್ತಿದೆಯಲ್ಲ! ಎಂದು ಹಿರಣ್ಯಕಶ್ಯಪನು ಯೋಚಿಸುತ್ತಿರುವಂತೆಯೇ ಆ ಸಭೆಯ ಸಂಭವನ್ನೊಡೆದುಕೊಂಡು ತನ್ನ ಅದ್ಭುತ ಆಕಾರದಿಂದ ಭಯಜನಕವಾದ ಒಂದು ಪ್ರಾಣಿಯು ಹೊರಬಂದಿತು!
ಅದು ಸಿಂಹವೂ ಅಲ್ಲ, ನರನೂ ಅಲ್ಲ! ಇಂತು ನರ-ಮೃಗರೂಪವಾಗಿದೆ ಆ ವಿಚಿತ್ರ ಪ್ರಾಣಿ! ನಿಜ,
ಸತ್ಯಂ ವಿಧಾತುಂ ನಿಜನೃತ್ಯಭಾಷಿತಂ ವ್ಯಾಪ್ತಿಂ ಚ ಭೂತ್ತೇಷ್ಟಖಿಲೇಷು ಚಾತ್ಮನಃ |
ಅದೃಶ್ಯತಾತ್ಯದ್ಭುತರೂಪಮುದ್ದಹನ್ ಸಂಭೇ ಸಭಾಯಾಂ ನ ಮೃಗಂ ನ ಮಾನುಷಮ್ || - ಭಾಗವತ-೭-೮-೧೮
`ಶ್ರೀಹರಿಯು ಸರ್ವತ್ರವ್ಯಾಪ್ತನಾಗಿದ್ದಾನೆ. ಅವನು ನಮ್ಮೆಲ್ಲರ ರಕ್ಷಕನಾಗಿದ್ದಾನೆ' ಎಂದು ಏಕಾಂತಭಕ್ತ ಪ್ರಹ್ಲಾದನ ವಚನವ ಮತ್ತು ಬ್ರಹ್ಮನ ವರವು ಸತ್ಯವೆಂದು ತೋರಿಕೊಡಲು ಶ್ರೀಹರಿಯು ನರಹರಿರೂಪ ತಾಳಿ ಆ ದೈತ್ಯಸಭೆಯ ಸಂಭದಿಂದೊಡೆದು ಬಂದು ಸರ್ವರಿಗೂ ದೃಗ್ಗೋಚರನಾದನು.
ಹಿರಣ್ಯಕಶ್ಯಪನು ಆ ಘೋರರೂಪವನ್ನು ನೋಡಿ ವಿಸ್ಮಿತನಾಗಿ -
ನಾಯಂ ಮೃಗೋ ನಾಪಿ ನರೋ ವಿಚಿತ್ರ-
ಮಹೋ ಕಿಮೇತನ್ನಮೃಗೇಂದ್ರ ರೂಪಮ್ ||
“ಇದು ಸಿಂಹವೂ ಇಲ್ಲ. ಮನುಷ್ಯನೂ ಅಲ್ಲ, ವಿಚಿತ್ರವಾದ ನರಮೃಗೇಂದ್ರರೂಪಧಾರಿಯಾದ ಈ ಪ್ರಾಣಿಯು ಯಾರಾಗಿರಬಹುದು ?” ಎಂದು ಯೋಚಿಸುತ್ತಿರುವಂತೆಯೇ ಅವನ ಮುಂಭಾಗದಲ್ಲಿಯೇ ಆ ನರಸಿಂಹಾಕೃತಿಯು ಬಂದು ನಿಂತಿತು!
ಆ ಅಪೂರ್ವ ನರಸಿಂಹಾಕೃತಿಯು, ದರ್ಶನಮಾತ್ರದಿಂದ ಭಯಪ್ರದವಾಗಿದ್ದಿತು. ಕಾದಕಾಂಚನ (ಬಂಗಾರ)ದಂತೆ ಕೆಂಪಾದ ಕಣ್ಣುಗಳು, ಸುತ್ತಲೂ ಹರಡಿರುವ ಜಟಾಜೂಟಗಳ ಮಧ್ಯದಲ್ಲಿ ಭಯಂಕರವಾದ ತೆರದ ಬಾಯಿ, ಕ್ರೂರವಾದ ಕೋರೆಹಲ್ಲುಗಳು, ಮೊನಚಾದ ಕತ್ತಿಯ ಅಲಗಿನಂತೆ ಬಾಯಿಯಿಂದ ಹೊರಹೊಮ್ಮಿ ಹೊಯ್ದಾಡುತ್ತಿರುವ ನಾಲಿಗೆ, ಗಂಟುಹಾಕಿದ ಹುಬ್ಬುಗಳು, ನಿಗರಿನಿಂತ ಕಿವಿಗಳು, ಪರ್ವತ ಕಂದರಗಳಂತಿರುವ ಮೂಗಿನ ಹೊಳ್ಳೆಗಳು, ವಿಸ್ತಾರವಾದ ಕೊರೆದಂತಿರುವ ಫಾಲಪ್ರದೇಶ (ಹಣೆ), ಮುಗಿಲೆತ್ತರದ ದೀರ್ಘದೇಹ, ತುಂಬಿದ ಕುತ್ತಿಗೆ, ಪುಷ್ಪವಾಗಿ ಉಬ್ಬಿದ ಎದೆ-ತೊಡೆಗಳು, ಸಿಂಹದ ನಡುವಿನಂತಿರುವ ಕಟಿಪ್ರದೇಶ!
ಶ್ರೀನರಸಿಂಹಸ್ವಾಮಿಯು ವಿವಿಧಾಲಂಕಾರಗಳಿಂದ ಕಂಗೊಳಿಸುತ್ತಿದ್ದನು. ವಿಸ್ಕೃತೋರಸ್ಥಳದಿ ಕುಗೊಳಿಪ ಶ್ರೀವತ್ಸ-ಕೌಸ್ತುಭ- ಗಳಿಂದಲೂ, ಶ್ರೀರಮಾಲಾಲಿತ ಶ್ರೀತುಳಸೀ ಮುಕ್ತಾವಳೀ ಚಿತ್ರಾವಳೀ ಮಾಲೆಗಳಿಂದಲೂ, ಶ್ರೀಗಂಧ ಕಸೂರೀ ಲೇಪನ, ಧೀರಗಂಭೀರ ವಿದ್ಯುತ್ಪಭೆಯಂತೆಸೆದ ಕುಂಡಲೋದಾರ ಕೇಯೂರ ಕಂಕಣ ಅಂಗುಲೀಯಕಹಾರಗಳಿಂದಧಿಕಭೂಷಣ- ಗಳಿಂದುದ್ದೀಪಿಸುವ ಮಿಂಚಿನಿಂದುತ್ಪಲ್ಲಚಂದ್ರಕಿರಣವರ್ಣ (ಹಾಲುಬೆಳದಿಂಗಳಿನಂತೆ ಶುಭ್ರವಾದ) ಪ್ರಭೆಯಿಂದ ಸುರಿಸುವ ಶರೀರರೋಮಾವಳಿಯಿಂದಲೂ, ಮದಮತ್ತ ಶಂಡಾಲತುಂಡ ಪ್ರಕಾಂಡ ಭುಜಗಳಲ್ಲೊಪ್ಪುವ ಸಹಸ್ರಾಧಿಕ ಪ್ರಚಂಡಾಯುಧ- ಗಳಿಂದುದ್ದೀಪಿತ ದೀಪ್ತಿಯಿಂ ಬೆಳಗುವ ನಖಗಳಿಂದಲೂ, ಚಕ್ರ-ಶಂಖ-ಗದಾದಿ ಶ್ರೇಷ್ಠಾಯುಧಗಳಿಂದ ವಿದ್ರಾವಿತ ಕ್ಷುದ್ರ ರಾಕ್ಷಸ ಪಿಶಾಚಾದ್ಯಸುರ ಸಂದೋಹದಿಂದ ನಿತಂಬ ಸಾನುಜಂಘಾಪ್ರದೇಶದವರೆಗೆ ಆವೃತವಾದ ಹೊಳೆವ ಪೀತಕೌಶೇಯವಾಸ (ವಸ್ತ್ರಗಳಿಂ ಬೆಡಗುಗೊಂಡ, ಕಾಂಚೀದಾಮದಿಂ ಬದ್ಧ ಕಟಿಪ್ರದೇಶದಿಂದಲೂ, ಮಂಜುಳ ಮಂಜೀರದಿಂದೊಪ್ಪುವ ಪಾದಕಮಲಗಳಿಂದ ಕೋಟಿಮಾರ್ತಾಂಡ ಪ್ರಖರ ತೇಜಸ್ಸಿನಿಂದ ನೋಡಲಸದಳವಾದ ಜ್ವಾಲೆಯಂತತಿ ಭೀಕರಸ್ವರೂಪದ ಶ್ರೀನೃಸಿಂಹಾಕೃತಿಯನ್ನು ಕಂಡು ದೈತ್ಯೇಂದ್ರನು ನಿಬ್ಬೆರಗಾದನು.
ಆಗ ಹಿರಣ್ಯಕಶ್ಯಪುವು ಹೀಗೆ ಯೋಚಿಸಿದನು - “ಈ ನರಸಿಂಹಮೂರ್ತಿಯು ಬೇರಾರೂ ಅಲ್ಲ, ನನ್ನ ಸ್ವಾಭಾವಿಕ ಶತ್ರುವಾದ ನಾರಾಯಣನ ಅವತಾರನೇ ಆಗಿದ್ದಾನೆ! ನಾನು ನನ್ನ ಪುತ್ರನಾದ ಪ್ರಹ್ಲಾದನನ್ನು ಸಂಹರಿಸಲುದ್ಯುಕ್ತನಾದ್ದರಿಂದ ಆ ಹರಿಯು ನನ್ನನ್ನು ಸಂಹರಿಸಲು ಬಂದಿರುವಂತಿದೆ! ಗುರುದೇವನ ಅಣತಿಯಂತೆ ನಾನಾವ ಉದ್ದಿಶ್ಯದಿಂದ ಪ್ರಹ್ಲಾದನನ್ನು ಕೊಲ್ಲಲೆಣಿಸಿದೆನೊ ಅದೀಗ ಸಫಲವಾದಂತಾಯಿತು! ಈಗ ಪ್ರಹ್ಲಾದನನ್ನು ಸಂಹರಿಸುವುದರಿಂದ ಪ್ರಯೋಜನವಿಲ್ಲ ಹೀಗೆ ಚಿಂತಿಸುತ್ತ ಹಿರಣ್ಯಕಶ್ಯಪನು ಕರದಲ್ಲಿ ಭಯಂಕರ ಗದೆಯನ್ನು ಹಿಡಿದು ಅದನ್ನು ಬೀಸುತ್ತಾ, ಆರ್ಭಟಿಸುತ್ತಾ ಶ್ರೀನೃಸಿಂಹದೇವರು | ಧಾವಿಸಿದನು. ದೀಪವು ತನ್ನ ಮೃತ್ಯುವೆಂದರಿಯದ ಪತಂಗವು ದೀಪಜ್ವಾಲೆಯಲ್ಲಿ ಬೀಳುವಂತೆ, ಆ ದೈತ್ಯಾಪಸದನ್ನು
ಶ್ರೀನರಮೃಗೇಂದ್ರನ ಸಹಿಸಲಳವಲ್ಲದ ತೇಜೋಜ್ವಾಲೆಯಲ್ಲಿ ಬಿದ್ದನು ಆ ದೈತ್ಯನು ಮೇಲೇರಿ ಬರುತ್ತಿದ್ದರೂ ನರಹರಿಯು ಅವನ ಸಾಹಸೋದ್ಯಮವನ್ನು ಕ್ಷಣಕಾಲ ಉಪೇಕ್ಷೆ ಮಾಡಿದನು. ಪ್ರಪಂಚದ ಸೃಷ್ಟಿಯ ಮೊದಲು ಎಲ್ಲೆಡೆ ಆವರಿಸಿದ್ದ ತಮಸ್ಸನ್ನೇ ಪಾನಮಾಡಿದ ಜ್ಞಾನಾನಂದಪೂರ್ಣವಾದ ಪುರುಷರೂಪದ
ಶ್ರೀಹರಿಗೆ ಅಲ್ಪನಾದ ಈ ಖಳದೈತ್ಯನನ್ನು ಸಂಹರಿಸುವುದೊಂದು ಮಹತ್ಕಾರ್ಯವೇ ?
ಆಗ ಮಹಾದೈತ್ಯನಾದ ಹಿರಣ್ಯಕಶ್ಯಪುವು ಅತಿರೋಷದಿಂದ ಅತಿವೇಗವಾದ ತನ್ನ ಗದೆಯಿಂದ ನರಸಿಂಹದೇವರನ್ನು ಹೊಡೆದನು. ತನ್ನ ಮೇಲೆ ಬೀಳುತ್ತಿರುವ ಆ ದೈತ್ಯನನ್ನು ಗರುತ್ಮಂತನು ಸರ್ಪವನ್ನು ಹಿಡಿಯುವಂತೆ, ಗದಾಧಾರಿಯಾದ, ಗರುಡವಾಹನನಾದ ಆ ನೃಸಿಂಹದೇವನು ತನ್ನ ಕರಗಳಿಂದ ಹಿಚುಕಿದನು. ಹಿರಣ್ಯಕಶ್ಯಪನು ದೇವದೇವನ ಹಿಡಿತದಿಂದ ತಪ್ಪಿಸಿಕೊಂಡು ಪಾರಾಗಲು ಯತ್ನಿಸುತ್ತಿರುವಷ್ಟರಲ್ಲಿ, ಗರುಡನು ಹಾವಿನೊಡನೆ ಚೆಲ್ಲಾಟವಾಡುವಂತೆ ನೃಸಿಂಹಸ್ವಾಮಿಯು ಆ ದೈತ್ಯನನ್ನು ಮತ್ತೆ
ಹಿಡಿದು ಕ್ರೀಡಿಸಿದನು.
ಶ್ರೀಹರಿಯ ಹಸ್ತದಿಂದ ಮತ್ತೆ ಪಾರಾದ ದೈತ್ಯನು, ತಾನು ಮಹಾಪರಾಕ್ರಮಿಯೆಂದೂ, ತನ್ನ ಪೌರುಷಕ್ಕೆ ಹೆದು ನರಹರಿಯು ತನ್ನನ್ನು ಬಿಟ್ಟುಬಿಟ್ಟನೆಂದೂ ಮೋಹಿತನಾದನು. ಮೇಘಮಂಡಲದ ಮೇಲಿರುವ ವಿವಿಧ ಭಕ್ತರೂ ಲೋಕಪಾಲ ಆದ ಶಿವ-ಶಕ್ರಾದಿ ದಿಕ್ಷಾಲಕ ಸಮೂಹವೂ ಮತ್ತು ಚಂದ್ರಸೂರ್ಯಾದಿ ಸರ್ವ ಗ್ರಹನಿಕರವೂ ಪರಮಾತ್ಮನ ಈ ವಿಡಂಬನದಿಂದ ಆ ದುರುಳ ಹಿರಣ್ಯಕನ ಶಕ್ತಿಯೇ ಅಧಿಕವಾದಂತಿದೆಯಲ್ಲಾ, ಆ ದೈತ್ಯನು ಮತ್ತೆ ನರಹರಿಯ ಹಿಡಿತಕ್ಕೆ ಸಿಕ್ಕುವನೋ ಇಲ್ಲವೋ ಎಂದು ಸಂಶಯಗೊಂಡರು.
ಸ್ವಲ್ಪ ದೇಹಾಯಾಸವನ್ನು ಪರಿಹರಿಸಿಕೊಂಡು ದೈತ್ಯರಾಜನು ಬೇಗ ಕತ್ತಿ-ಗುರಾಣಿಗಳನ್ನು ಹಿಡಿದು ಭಗವಂತನೊಡನೆ ಯುದ್ಧಮಾಡಲು ಧಾವಿಸಿಬಂದನು. ಆಗ ನರಹರಿಯು ಶೇನ (ಗಿಡುಗ) ಪಕ್ಷಿಯಂತೆ ರಭಸದಿಂದ ಕಣ್ಣುಮುಚ್ಚಿ ಅತ್ತಿಂದಿತ್ತ ಸಂಚರಿಸುತ್ತಾ ಮಹಾಧ್ವನಿಗೈಯುತ್ತಾ ಎಲ್ಲೆಡೆ ಸುತ್ತುತ್ತಿರುವಾಗ, ಖಳನಾದ ಹಿರಣ್ಯಕಶ್ಯಪನು ಬಂಧಿಸಲು ಹವಣಿಸುತ್ತಾ ವಜ್ರಾಘಾತದಿಂದ ಕ್ಷತನಾಗದೆ ಭ್ರಾಂತನಾಗಿರಲು ಶ್ರೀನೃಸಿಂಹದೇವನು, ಹುಲಿಯು ಇಲಿಯನ್ನು ಹಿಡಿಯುವಂತೆ ಕರಗಳಲ್ಲಿ ಬಿಗಿಯಾಗಿ ಹಿಡಿದು ಸಭಾಸ್ಥಾನದ ದ್ವಾರದ ಹೊಸ್ತಿಲಿನಲ್ಲಿ ತನ್ನ ತೊಡೆಯ ಮೇಲೆ ಕೆಡವಿಕೊಂಡು ಕುಳಿತು, ಹಿರಣ್ಯಕಶ್ಯಪನ ಉದರವನ್ನು ಗರುಡನು ವಿಷೋಲ್ಬಣ ಸರ್ಪವನ್ನು ಸೀಳುವಂತೆ ಲೀಲೆಯಿಂದಲೇ ತನ್ನ ನಖಾಯುಧಗಳಿಂದ ಬಗೆದನು.
ಆಗ ಶ್ರೀನರಸಿಂಹದೇವನು ಕೋಪದಿಂದ ಕೆಂಪಾದ ಕರಾಳ ಕಣ್ಣುಗಳಿಂದ ಭಯಂಕರ ಸ್ವರೂಪನಾಗಿ ತನ್ನ ಉದ್ದವಾದ ನಾಲಿಗೆಯಿಂದ ಕೆಳದುಟಿಯನ್ನು ನೆಕ್ಕುತ್ತಾ ನೋಡಲತಿ ಭೀಕರವಾಗಿ ಕಾಣುತ್ತಿದ್ದನು. ಹಿರಣ್ಯಕಶ್ಯಪನ ರಕ್ತಮಚ್ಚಾರಸಗಳಿಂದ ಆ ದೇವನು ತನ್ನ ಕೆಂಪಾದ ಜಟೆಯನ್ನೂ, ಮುಖವನ್ನೊರೆಸಿಕೊಂಡು ಮೃಗರಾಜನು ಮದಿಸಿದ ಗಜರಾಜನ ಕುಂಭಸ್ಥಳವನ್ನು ಸೀಳಿ ಸಂಹರಿಸಿ ಅದರ ಕರುಳುಗಳನ್ನು ಕೊರಳೊಳಗೆ ಮಾಲೆಯಂತೆ ಧರಿಸುವಂತೆ, ದೈತ್ಯಹಿರಣ್ಯಕನ ಕರುಳುಮಾಲೆಗಳನ್ನು ತನ್ನ ಕುತ್ತಿಗೆಯಲ್ಲಿ ಧರಿಸಿ ಮತ್ತೆ ತೀಕ್ಷ್ಮವಾದ ನಖಗಳಿಂದ ಖಳನ ಹೃದಯಕಮಲವನ್ನು ಸೀಳಿಹಾಕಿದನು.
ಇಂತು ಆ ದಾನವಾಂತಕನು ಲೋಕಕಂಟಕನಾದ ದೈತ್ಯಾಪಸದನನ್ನು ಸಂಹಾರ ಮಾಡಿದ ಮೇಲೆ ದೈತ್ಯರಾಜನ ಅನುಚರರಾದ ದಾನವವೀರರು ತಮ್ಮ ಪ್ರಭುವು ಮೃತನಾದುದನ್ನು ಕಂಡು, ಅವನ ಶರೀರವನ್ನು ಅಲ್ಲಿಯೇ ಬಿಟ್ಟು ಶ್ರೀನೃಸಿಂಹದೇವನನ್ನು ನಾಲ್ಕೂ ನಿಟ್ಟಿನಿಂದ ಸುತ್ತುಗಟ್ಟಿ ದೇವದೇವನ ಮೇಲೇರಿ ಹೋದರು. ಆಗ ಜಗದೀಶನಾದ ಶ್ರೀನರಹರಿಯು ಆ ಎಲ್ಲ ದೈತ್ಯರನ್ನೂ ತನ್ನ ನಖಾಯುಧಗಳಿಂದ ಸಂಹರಿಸಿದನು.
ಆ ಕಾಲದಲ್ಲಿ ಅತ್ಯಂತ ಕುಪಿತನಾದ ನರಸಿಂಹಸ್ವಾಮಿಯ ಆರ್ಭಟದಿಂದ ಸಕಲ ಜಗತ್ತೂ ತಲ್ಲಣಿಸಹತ್ತಿತು. ಶ್ರೀನರಸಿಂಹದೇವನ ಜಟೆಯ ವೇಗದಿಂದ ಮೇಘಸಮೂಹಗಳು ದಿಕ್ಕೆಟ್ಟು ಚದುರಿದವು. ಸೂರ್ಯಾದಿ ನವಗ್ರಹಗಳು ಭಗವಂತನ ನೇತ್ರಾಗ್ನಿಕಾಂತಿಯ ಜ್ವಾಲೆಯಿಂದ ಮಂಕಾದವು. ಕುದ್ದನಾದ ಹರಿಯ ಉಸುರಿನಿಂದ ಸಮುದ್ರಗಳು ಅಲ್ಲೋಲಕಲ್ಲೋಲವಾದವು. ದಿಗ್ಗಜಗಳು ಆ ಜಗಜಟ್ಟಿಯ ಅಟ್ಟಹಾಸಪೂರ್ಣ ಹೂಂಕಾರದಿಂದ ದಿಕ್ಕಾಪಾಲಾಗಿ ಓಡಹತ್ತಿದವು. ಶ್ರೀನೃಸಿಂಹಸ್ವಾಮಿಯ ಜಟಾಘಾತದಿಂದ, ಹಾರಿಬಂದ ವಿಮಾನಗಳಿಂದ ಆಗಸವು ತುಂಬಿಹೋಯಿತು. ಭೂಮಿಯು, ಸ್ವಾಮಿಯ ಚರಣಗಳ ಭಾರದ ಪೀಡೆಯಿಂದ ಕಡು ನೊಂದಿತು. ಪರಮಾತ್ಮನ ಪರಮರಭಸಭರದಿಂದ ಪರ್ವತಗಳು ಹಾರಿಹೋದವು. ನರಹರಿಯ ತೇಜಸ್ಸಿನಿಂದ ಆಕಾಶದಿಕ್ಕುಗಳು ಕಾಂತಿಹೀನವಾದವು. ಇಂತು ಪರಾತ್ಪರನಾದ ಶ್ರೀನರಸಿಂಹದೇವನು ಹಿರಣ್ಯಕಶ್ಯಪು ಮತ್ತು ಅವನ ಅನುಚರರಾದ ದೈತ್ಯನಾಯಕರುಗಳನ್ನು ಕೊಂದು ತನ್ನ ಅವಯವ ವಿಶೇಷಗಳ ಪರಾಕ್ರಮವನ್ನು ತೋರಿಕೊಟ್ಟು ಸಭೆಯ ಉಚ್ಚಸ್ಥಾನದಲ್ಲಿ ವಿರಾಜಿಸಿದ್ದಸಿಂಹಾಸನದಲ್ಲಿ ಮಂಡಿಸಿದನು. ಆಗ ಆ ಪರಮಾತ್ಮನು ಅಭೂತಪೂರ್ವ ಶರೀರದಿಂದ ಭೈರವನೂ, ತೇಜಃಪುಂಜನೂ, ವಿಕಟಮುಖವಿರಾಜಿತನೂ, ಅಸಹ್ಯರೂಪನೂ (ಸಹಿಸಲಸದಳರೂಪನೂ) ಆಗಿದ್ದುದರಿಂದ ಈ ಧರಾತಲದಲ್ಲಿ ಅವನ ಸನಿಹಕ್ಕೆ ಹೋಗಲು ಯಾರೂ ಶಕ್ತರಾಗಲಿಲ್ಲ.
ತ್ರಿಲೋಕಗಳಿಗೂ ಶಿರೋಜ್ವರ(ತಲೆನೋವಾಗಿದ್ದ)ವಾಗಿದ್ದ ಆದಿದೈತ್ಯನಾದ ಹಿರಣ್ಯಕಶ್ಯಪನು ಶ್ರೀನರಹರಿಯಿಂದ ಸಂಹೃತನಾದುದನ್ನು ಕೇಳಿ ಅಮರಾಂಗನೆಯರು ಅಮಂದಾನಂದತುಂದಿಲರಾಗಿ ತಮ್ಮ ತಲೆಗಳನ್ನು ಮೇಲೆತ್ತಿ ಶ್ರೀನರಸಿಂಹದೇವ ಮೇಲೆ ಪುಷ್ಪವೃಷ್ಟಿಯನ್ನು ಮಾಡಿದರು. ಆಗ ಅಮರನಿಕರರು ಕುತೂಹಲದಿಂದ ವಿಮಾನರೂಢರಾಗಿ ಬಂದು ಶ್ರೀನರಹರಿಯ ಮಹಿಮಾತಿಯವನ್ನು ಕಾಣಲು ಗಾನಮಾಡಿದರು, ಅಪ್ಸರೆಯರು ನರ್ತಿಸಿದರು, ದೇವತೆಗಳ ಪುಷ್ಪವೃಷ್ಟಿ, ಗಾನ-ನರ್ತನಾದಿಗಳಿಂದ ನರಹರಿಯು ಪ್ರೀತವಾಗಿ ಆಗ ಅಮರಲೋಕದ ಅನಕದುಂದುಭಿಗಳು ದೈತ್ಯನ ಮರಣದಿಂದಾದ ಹರ್ಷದಿಂದ ಸ್ವಯಂಧ್ವನಿಸಿದವು, ಗಂಧರ್ಮರು ಅಂಬರದಲ್ಲಿ ತುಂಬಿ ನಿಂತರು.
ಉಗ್ರರೂಪವನ್ನು ಸ್ವಲ್ಪ ಶಾಂತಗೊಳಿಸಿದನು.
೧೯. ಬ್ರಹ್ಮಾದಿದೇವತೆಗಳ ಸ್ತೋತ್ರ
ಅಪ್ಸರಸ್ತ್ರೀಯರು-ಚಾರಣ-ಯಕ್ಷ-ಕಿಂಪುರುಷ-ವೇತಾಳ-ಕಿನ್ನರರು ಹಾಗೂ ವಿಷ್ಣುಪಾರ್ಶದರಾದ ಸುನಂದ ಕುಮುದಾದಿಗಳು ಆಗ ಬ್ರಹ್ಮ-ರುದ್ರೇಂದ್ರಾದಿದೇವತೆಗಳು ಋಷಿ-ಪಿತೃ-ಸಿದ್ಧ-ವಿದ್ಯಾಧರ-ಮಹೋರಗ-ಮನು-ಪ್ರಜಾಪತಿ-ಗಂಧರ್ವ-
ಶ್ರೀನರಹರಿಯನ್ನು ಬೇರೆ ಬೇರೆಯಾಗಿ ಸ್ತೋತ್ರಮಾಡಹತ್ತಿದರು.
ಬ್ರಹ್ಮದೇವರು : ನತೋಸ್ಟನಂತಾಯ ದುರಂತಶಕ್ತಯೇ | ವಿಚಿತ್ರವೀರ್ಯಾಯ ಪವಿತ್ರಕರ್ಮಣೇ 1 ವಿಶ್ವಸ್ಮ ಸರ್ಗಸ್ಥಿತಿ ಸಂಯಮಾನುಣ್ಣೆಃ | ಸಲೀಲಯಾ ಸಂದಧತೇಽವ್ಯಯಾತ್ಮನೇ ||
ಶ್ರೀನರಸಿಂಹದೇವ, ನೀನು ದುರಂತಜ್ಞಾನಬಲಾದಿ ಶಕ್ತಿಯುಳ್ಳವನು, ವಿಚಿತ್ರವೀರ್ಯನು, ಸುಜನವೃಂದವನ್ನು ಪಾವನಗೊಳಿಸುವವನು. ಆಯಾಸವಿಲ್ಲದೆ ಜಗತ್ತಿಗೆ ಸೃಷ್ಟಿ-ಸ್ಥಿತಿ-ಸಂಹಾರಗಳನ್ನು ತಂದುಕೊಡುವವನು. ನಿತ್ಯವಾದ ಜ್ಞಾನಾನು ಶರೀರನಾಗಿರುವೆ. ನಿನಗೆ ನಾನು ಸದಾ ಪ್ರಣತನಾಗಿದ್ದೇನೆ.
ರುದ್ರದೇವರು : ಕೋಪಕಾಲೋ ಯುಗಾಂತಸೇ | ಹತೋಯ ಸುರೋಲ್ಪಕಃ | ತತ್ಸುತಂ ಪಾಕ್ಕುವತಂ | ಭಕ್ತಂ ತೇ ಭಕ್ತವತ್ಸಲಪ್ರಭು! ಸಹಸ್ರಯುಗಾಂತಕಾಲದ ಪ್ರಳಯಕಾಲದಲ್ಲಿ ನೀನಿಂತು ಕೋಪಗೊಳ್ಳುವುದು ಯುಕ್ತವಾಗಿದೆ. ಅಲ್ಪನೂ, ಕ್ಷುದ್ರನೂ ಆದ ದೈತ್ಯನನ್ನು ವಧಿಸಲು ಇಷ್ಟು ಕೋಪವು ತರವೇ ಪರಾತ್ಪರ? ಈಗ ಆ ದೈತ್ಯನೂ ನಿನ್ನಿಂದ ಮೃತನಾಗಿದ್ದಾನೆ. ಭಕ್ತವತ್ತರಿ, ನಿನ್ನ ಈ ಕೋಪವನ್ನು ಉಪಶಮಿಸಿ ನಿನಗೆ ಶರಣಾಗತನಾಗಿರುವ ಏಕಾಂತಭಕ್ತನಾದ ಪ್ರಹ್ಲಾದನನ್ನು ಕಾಪಾಡು.
ಅನಂತರ ಇಂದ್ರಾದಿದೇವತೆಗಳೆಲ್ಲರೂ ಶ್ರೀನರಹರಿಯನ್ನು ವಿವಿಧ ರೀತಿಯಿಂದ ಸ್ತೋತ್ರ ಮಾಡಿದರು. ಆದರೂ ಜಗದೀ ಕೋಪವು ಇಳಿಯಲಿಲ್ಲ. ಆಗ ದೇವತೆಗಳು ಭಗವಂತನ ಕೋಪ ಶಮನ ಮಾಡುವಂತೆ ಶ್ರೀಲಕ್ಷ್ಮೀದೇವಿಯನ್ನು ಪ್ರಾರ್ಥಿಸಿದರು.
ರಮಾದೇವಿಯು ಹರಿ ನೂತನ ರೂಪವನ್ನು ಕಂಡು ಹೆದರಿದವಳಂತೆ ನಟಿಸಿದಳು. ಸರ್ವಜ್ಞಳಾದ ಆ ಲೋಕಮಾತೆಯು ಭಗವಂತನ ಕೋಪ ಶಮನ ಮಾಡಿದ ಕೀರ್ತಿಯು ಪ್ರಹ್ಲಾದನಿಗೆ ಬರಬೇಕೆಂದು ಬಯಸಿ ಸುಮ್ಮನೇ ನಿಂತಳು.
ಆಗ ಬ್ರಹ್ಮದೇವರು ಪ್ರಹ್ಲಾದನನ್ನು ಕರೆದು “ವತ್ಸ! ನಿನ್ನ ತಂದೆಯ ಸಂಹಾರಕ್ಕಾಗಿ ತಳೆದ ಕೋಪ-ಉಗ್ರಸ್ವರೂಪವನ್ನು ಶಾಂತಗೊಳಿಸಬೇಕೆಂದು ಶ್ರೀಹರಿಯನ್ನು ಪ್ರಾರ್ಥಿಸು” ಎಂದಾಜ್ಞಾಪಿಸಿದರು. ಭಗವಂತನ ಭಕ್ತವಾತ್ಸಲ್ಯ ಜಗತ್ತಿಗೆ ಪ್ರಕಟವಾಗಬೇಕೆಂಬುದೇ ಶ್ರೀಹರಿ-ಲಕ್ಷ್ಮೀದೇವಿಯ ಇಚ್ಛೆಯೆಂದರಿತಿದ್ದ ಬ್ರಹ್ಮದೇವರು ಭಾಗವತಾಗ್ರಣಿ ಪ್ರಹ್ಲಾದರನ್ನು ಮುಂದೆ ಮಾಡಿದರು. ಬ್ರಹ್ಮದೇವರ ಅಪ್ಪಣೆಯಂತೆ ಪ್ರಹ್ಲಾದರು ಮೆಲ್ಲನೆ ಶ್ರೀನರಹರಿಯ ಬಳಿಗೆ ಬಂದು ಶ್ರೀಹರಿಗೆ ದಂಡಪ್ರಣಾಮ ಮಾಡಿದರು.
ಶ್ರೀನೃಸಿಂಹದೇವರು ತಮ್ಮ ಪಾದಕಮಲದಡಿಯಲ್ಲಿ ಭಕೃತಿಶಯದಿಂದ ನಮಸ್ಕರಿಸಿ ಬಿದ್ದಿರುವ ಪ್ರಹ್ಲಾದನನ್ನು ಕಾರುಣ್ಯದಿಂದ ಮೇಲೆಬ್ಬಿಸಿ ತೊಡೆಯ ಮೇಲೆ ಕೂಡಿಸಿಕೊಂಡು ಪ್ರೇಮದಿಂದ ಅವನ ಮೇಲೆ ಕೈಯಾಡಿಸಿ ತಾಯಿಯಂತೆ ಆಲಂಗಿಸಿ ಶಿರಸ್ಸನ್ನಾಘ್ರಾಣಿಸಿ, ನಂತರ ಅವನ ಶಿರದಲ್ಲಿ ಅಭಯಪ್ರದ ಅಮೃತಕರವನ್ನಿರಿಸಿದರು.
೨೦. ಪ್ರಹ್ಲಾದರಾಜರ ಸ್ತೋತ್ರ
ಪರಮಮಂಗಳಮೂರ್ತಿಯಾದ ಪರಮಾತ್ಮನ ಅಮೃತಮಯಸ್ಪರ್ಶದಿಂದ ಪ್ರಹ್ಲಾದರ ಸಕಲದುರಿತಗಳೂ ಹಾರಿಹೋದವು. ಹರಿಯನುಗ್ರಹದಿಂದ ಕೂಡಲೇ ಪರಮಾತ್ಮನ ಜ್ಞಾನವು ಅಭಿವ್ಯಕ್ತವಾಗಿ ಪರಮಾನಂದತುಂದಿಲರಾದ ಪ್ರಹ್ಲಾದರಾಜರ ಕಣ್ಣುಗಳಿಂದ ಆನಂದಬಾಷ್ಪ ಹರಿಯತೊಡಗಿತು.ಶರೀರವು ರೋಮಾಂಚನ ಪುಳಕಿತವಾಯಿತು. ಆಗ ಪ್ರಹ್ಲಾದರು ಭಕ್ತು ದೇಶದಿಂದ ನೃಸಿಂಹದೇವರ ಪಾದಕಮಲಗಳನ್ನು ಧ್ಯಾನಿಸುತ್ತಾ, ಸ್ವರೂಪಾನಂದವನ್ನು ಅನುಭವಿಸುತ್ತಾ ಪ್ರೇಮ ಗದ್ಗದಕಂಠದಿಂದ ಶ್ರೀಹರಿಯನ್ನು ಏಕಾಗ್ರಚಿತ್ತದಿಂದ ಸ್ತೋತ್ರಮಾಡಲಾರಂಭಿಸಿದರು.75
ಪ್ರಹ್ಲಾದ : ದೇವಾಧಿದೇವ!
ಬ್ರಹ್ಮಾದಯಸ್ಸುರಗಣಾ ಮುನಯೋಥ ಸಿದ್ಧಾಃ ಸಕತಾನ ಮತಯೋ ವಚಸಾಂ ಪ್ರವಾಹೈಃ | ನಾಂತಂ ಪರಸ್ಯ ಪರತೋಗ್ಯಧುನಾಪಿ ಯಾಂತಿ ಕಿಂ ತೋಷ್ಟುಮರ್ಹತಿ ಸ ಮೇ ಹರಿರುಗ್ರಜಾತೇಃ ||
ವಿರಿಂಚ-ಹರಾದ್ಯಮರೋತ್ತಮರೂ, ವಸಿಷ್ಠಾದಿಮಹರ್ಷಿಗಳೂ, ಸಿದ್ಧರೂ, ಶ್ರೀಹರಿಯೊಬ್ಬನೇ ಬಲ-ಜ್ಞಾನ, ಆನಂದಾದ್ಯಭಿವ್ಯಕ್ತಿಯುಳ್ಳವನೇ ಹೊರತು ಮತ್ತೊಬ್ಬರಾರೂ ಅಲ್ಲವೆಂದು ನಿಶ್ಚಿತಮತಿಗಳಾಗಿ ಉತ್ಕೃಷ್ಟ ವೇದವಚನಗಳಿಂದ ವಿಧವಿಧವಾಗಿ ಸ್ತುತಿಸಿದರೂ ಅದ್ಯಾಪಿ ಪ್ರಕೃತ್ಯತೀತನಾದ ಭಗವಂತನ (ನಿನ್ನ) ಮಹಿಮೆಯು ಇಷ್ಟೆಂದು ತಿಳಿಯಲು ಅಸಮರ್ಥರಾಗಿರುವಾಗ, ಉಗ್ರಜಾತಿಯವನಾದ ಅಂದರೆ ಅಸುರಕುಲದಲ್ಲಿ ಜನಿಸಿದ ನಾನು, ಶತ್ರುಸಂಹಾರಕನೂ, ಇಷ್ಟಾರ್ಥದಾಯಕನೂ ಆದ ಶ್ರೀಹರಿಯನ್ನು (ನಿನ್ನನ್ನು ಸ್ತುತಿಸಲು ಶಕ್ತನಾದೇನೇ?
ಮನೇ ಧನಾಭಿಜನರೂಪತಃ ಶ್ರುತೌಜಸ್ತೇಜಃ ಪ್ರಭಾವಬಲಪೌರುಷಬುದ್ಧಿಯೋಗಾಃ |
ನಾರಾಧನಾಯ ಹಿ ಭವಂತಿ ಪರಸ್ಯ ಪುಂ ಭಕ್ತಾ ತುತೋಷ ಭಗವಾನ್ನನು ಯೂಥವಾಯ || ದೇವ! ಸಿರಿಸಂಪತ್ತು, ಸತ್ಕುಲದಲ್ಲಿ ಹುಟ್ಟುವಿಕೆ, ಧಾರಣಶಕ್ತಿ, ಬ್ರಹ್ಮವರ್ಚಸ್ಸು, ಉದಾರವಾದ ಮನಸ್ಸು, ಶಾರೀರಿಕಬಲ, ಸಮರ್ಥವಾಗಲಾರದು! ಸ್ವಾಮಿ, ನೀನು ಭಕ್ತಿಯಿಂದಲೇ ತುಷ್ಟನಾಗುತ್ತೀಯೆ. ಗಜೇಂದ್ರನ ಭಕ್ತಿಯಿಂದಲ್ಲವೇ ನೀನವನಿಗೆ ಪ್ರಸನ್ನನಾಗಿ ಪರಾಕ್ರಮ, ಏಕಾಗ್ರಚಿತ್ತವಿರುವುದು, ಧ್ಯಾನ - ಇವು ಯಾವುದೂ ನಿನ್ನನ್ನು ಒಲಿಸಿಕೊಂಡು ನಿನ್ನ ಅನುಗ್ರಹವನ್ನು ದೊರಕಿಸಿಕೊಡಲು | ಮೋಕ್ಷವನ್ನು ಕರುಣಿಸಿದಿ? ಆದುದರಿಂದ ಶ್ರೀಹರಿಯೇ, ನಿನ್ನನ್ನು ಭಕ್ತಿಯಿಂದ ಒಲಿಸಿಕೊಳ್ಳಬೇಕಲ್ಲದೆ, ಬೇರೆ ಮಾರ್ಗವಿಲ್ಲ ಹಿಂದೆ ಹೇಳಿದಂತೆ ಸಿರಿಸಂಪದಾದಿಗಳೆಲ್ಲವನ್ನೂ ನಿನಗೆ ಭಕ್ತಿಯಿಂದ ಸಮರ್ಪಿಸಿ ನಿನ್ನನ್ನು ಸಂತೋಷಪಡಿಸಬಹುದೆಂದು ನಾನು
ನುಬಿದ್ದೇನೆ.
ಸ್ವಾಮಿ, ಬ್ರಾಹ್ಮಣನು ಸತ್ಯಧರ್ಮಾದಿ ದ್ವಾದಶಗುಣಯುಕ್ತನಾಗಿದ್ದರೂ ಪರಾತ್ಪರನಾದ ನಿನ್ನಲ್ಲಿ ಭಕ್ತಿರಹಿತನಾಗಿದ್ದಲ್ಲಿ ಅಂಥ ಬ್ರಾಹ್ಮಣನಿಗಿಂತಲೂ ತ್ರಿಕರಣಪೂರ್ವಕವಾಗಿ ನಿನ್ನಲ್ಲಿ ಭಕ್ತಿಶ್ರದ್ಧೆಗಳನ್ನಿಟ್ಟಿರುವ ಚಂಡಾಲನೇ ಉತ್ತಮನೆಂದು ನಾ ಭಾವಿಸುವೆನು. ಅಂಥವನು ಅವರ ಕುಲವನ್ನೇ ಪಾವನಗೊಳಿಸುವನು. ಭಕ್ತವತ್ಸಲನಾದ ನೀನು ಭಕ್ತಜನರ ಉದ್ಧಾರಕ್ಕಾಗಿಯೇ ಅವರ ಸೇವೆಯನ್ನು ಸ್ವೀಕರಿಸುವೆಯಲ್ಲದೆ ಅದರಿಂದ ನಿನಗೇನೂ ಆಗಬೇಕಾಗಿಲ್ಲ. ಈಗ ನೀನು ತನ್ನ ಸ್ವಾರ್ಥತೆಯಿಂದ ತ್ರಿಲೋಕೇಶ್ವರನಾದ ನಿನ್ನಲ್ಲಿ ದ್ವೇಷಮಾಡಿ, ಲೋಕಕಂಟಕನಾಗಿದ್ದ ನನ್ನ ತಂದೆಯನ್ನು ಸಂಹರಿಸಿರುವೆ. ಆದ್ದರಿಂದ ದೇವ! ನಿನ್ನ ಕೋಪವನ್ನು ಉಪಸಂಹರಿಸು ಸ್ವಾಮಿ, ದುಷ್ಟಜಂತುಗಳಾದ ಚೇಳು, ಹಾವುಗಳನ್ನು ಕೊಂದರೆ ಆನಂದವಾಗುವಂತೆ ಅಹಿಂಸಾಪ್ರಿಯರಾದರೂ ಸಜ್ಜನರಿಗೆ ಈ ದೈತ್ಯನ ಸಂಹಾರದಿಂದ ಆನಂದವಾಗುವುದು. ಎಲ್ಲ ಸಜ್ಜನರೂ ಹರ್ಷದಿಂದ ತಂತಮ್ಮ ಮನೆಗಳಿಗೆ ಹೋಗಲಿ, ಶ್ರೀನೃಸಿಂಹದೇವ! ನಿನ್ನೀ ರೂಪವನ್ನು ಸಕಲರೂ ಪಾಪಪರಿಹಾರ ಮತ್ತು ಐಶ್ವರ್ಯ ಪ್ರಾಪ್ತಿಗಾಗಿ ಧ್ಯಾನಿಸುವರು.
ನಾಹಂ ಬಿಭೇಮ್ಯಜಿತ ತೇSತಿಭಯಾನಕಸ್ಯ ಜಿಹ್ವಾಗಿನೇತ್ರಭಕುಟೀರಭಸೋಗ್ರದಂಷ್ಟಾತ್ |
ಆಂತಪ್ರಜಃ ಕೃತಜಕೇಸರ ಶಂಕುಕರ್ಣಾತ್ ನಿಹ್ರ್ರಾದಭೀತದಿಗಿಭಾದರಿಭಿನ್ನಖಾಗ್ರಾತ್ || 15 ||
ಹೇ ಅಜಿತ, ನಿನ್ನ ಈ ಭಯಂಕರ ರೂಪವನ್ನು ಕಂಡು ನಾನು ಭೀತನಾಗಿಲ್ಲ. ಸ್ವಾಮಿ! ಕೆಂಡವನ್ನು ಕಾರುವ ಕಣ್ಣುಗಳು, ನಿನ್ನ ಭ್ರುಕುಟಿ, ಉಗ್ರದಂಷ್ಟ್ರಗಳು, ಕೊರಳಲ್ಲಿರುವ ಕರುಳುಮಾಲೆಗಳು, ರಕ್ತದಿಂದ ಕೆಂಪಾಗಿ ನಿಗರಿ ನಿಂತಿರುವ ಕಿವಿಗಳು, ಅಷ್ಟದಿಗ್ಗಜಗಳನ್ನೂ ಹೆದರಿಸಿದ ಹೂಂಕಾರ, ಶತ್ರುವನ್ನು ಸೀಳುವ ಈ ತೀಕ್ಷ್ಯನಖಗಳು, ಇವೆಲ್ಲವನ್ನೂ ನೋಡಿ ನಾನು ಹೆದರಿಲ್ಲ. ಆದರೆ, ದೀನರಕ್ಷಕನಾದ ಪ್ರಭು! ಉಗ್ರವಾದ ಸಂಸಾರವೆಂಬ ಸುಳಿಯಲ್ಲಿ ಸಿಲುಕಿ ಅಲ್ಲಿನ ಕಷ್ಟಗಳೊಡನೆ ಕಾದಾಡಿ, ಹೋರಾಡಿ ನಿರ್ವಿಯ್ರನಾಗಿದ್ದೇನೆ. ನಾವು, ನಮ್ಮ ಕರ್ಮದಿಂದ ಬದ್ಧರಾಗಿ ಜನನ - ಮರಣರೂಪವಾದ ಸಂಸಾರವೆಂಬ ಅನರ್ಥಕ್ಕೆ ಭಾಗಿಗಳಾಗುತ್ತೇವೆ. ಹೇ ಉಶತ್ತಮ! ಈ ಜನನ - ಮರಣಗಳಿಂದ ಹೆದರಿದವರಿಗೆ ಶರಣ್ಯನಾದ ನಿನ್ನ ಪಾದಕಮಲದೆಡೆಗೆ
ನಾನೆಂದು ಬಂದು ಸೇರುವೆನು ?
ದೇವ, ಪ್ರಿಯವಿಯೋಗ ಅಪ್ರಿಯ ಸಂಯೋಗಗಳಿಂದುಂಟಾದ ಶೋಕಾಗ್ನಿಯಿಂದ ಎಲ್ಲ ಯೋನಿಗಳಲ್ಲಿ ಬಳಲುತ್ತ ದುಃಖನಿವಾರಕೋಪಾಯವಾ ದುಃಖರೂಪವೇ ಆದ್ದರಿಂದ ಅದರ ಪರಿಹಾರ ಮಾರ್ಗವರಿಯದೆ ಒಂದು ದೇಹದಿಂದ ಮತ್ತೊಂದು ದೇಹಕ್ಕೆ ತಿರುಗುತ್ತಿದ್ದೇನೆ. ಸರ್ವಗುಣಪೂರ್ಣನಾದ ಹೇ ನೃಸಿಂಹದೇವ, ನಿನ್ನ ದಾಸನಾಗುವ ಉಪಾಯವನ್ನು ಅನುಗ್ರಹಿಸಿ ತಿಳಿಸು.
ನೀನು ನಿರ್ವಾಜ್ಯ ಪ್ರೇಮಮಯನೂ, ಅನಿಮಿತ್ತ ಬಂಧುವೂ ಆದ ಸರ್ವೋತ್ತಮ ದೇವನು. ನಿನ್ನ ಅದ್ಭುತ ಅವತಾರ ಲೀಲೆಗಳನ್ನು ಬ್ರಹ್ಮದೇವರು ಗಾನಮಾಡಿ ಸ್ತುತಿಸುತ್ತಿದ್ದಾರೆ. ಅದನ್ನು ನಾನು ಗಾನಮಾಡಿ, ಸಂಸಾರಬಂಧಮುಕ್ತರಾಗಿ ನಿನ್ನ ಪಾದವನ್ನೇ ಆಶ್ರಯಿಸಿಕೊಂಡಿರುವ ಪರಮಹಂಸರ ಸೇವೆಯಿಂದ ನಿನ್ನ ವಿಷಯಕವಾದ ತತ್ವಜ್ಞಾನವನ್ನು ಪಡೆದು ನರಕಾದನರ್ಥಗಳು ಮತ್ತು ಪತ್ನಿಸುತಾದಿ ವಿಷಯಸಂಗರೂಪ ಸಮುದ್ರವನ್ನು ದಾಟುವೆನು.79
ಸ್ವಾಮಿ, ಪುಟ್ಟ ಬಾಲಕರಿಗೆ ಮಾತಾಪಿತೃಗಳು ಸಂರಕ್ಷಕರು, ರೋಗಾರ್ತರಿಗೆ ಔಷಧವು ಹಿತಕರ, ಸಮುದ್ರದಲ್ಲಿ ಮುಳುಗೇಳುವವರಿಗೆ ದೋಣಿಯು ತಾರಕವು. ಬಿಸಿಲಿನ ತಾಪದಿಂದ ಬಳಲಿದವರಿಗೆ ನೀರಿನಿಂದ ತಾಪ ಶಮನವಾಗುವುದು. ಇವೆಲ್ಲ ಪ್ರಪಂಚದಲ್ಲಿ ಅಪೇಕ್ಷಣೀಯವು. ಇದರಂತೆ ಜನನ-ಮರಣರೂಪ ಸಂಸಾರದಿಂದ ತಪ್ತರಾದ ನಿನ್ನ ಉಪಾಸಕರನ್ನು ನೀನು ಭವಬಂಧನದಿಂದ ಬಿಡಿಸಿ ಆನಂದವನ್ನು ಕರುಣಿಸುತ್ತೀಯೆ.8
ಹೀಗೆ ಶ್ರೀನರಸಿಂಹದೇವರನ್ನು ವಿವಿಧ ರೀತಿಯಿಂದ ಸ್ತುತಿಸಿದ ಪ್ರಹ್ಲಾದರಾಜರು ಮುಂದುವರೆದು ಹೀಗೆ ಸ್ತೋತ್ರಮಾಡಹತ್ತಿದರು.
ದೇವ! ಈ ಸಂಸಾರವು ಶಾಶ್ವತವಲ್ಲ, ಕ್ಷಣಿಕವೆಂದು ಅರಿತಿರುವೆನು, ಅನಿತ್ಯವಾದ ದೇಹಯುಕ್ತರಾದ ಜೀವರು ಇಂದ್ರಿಯಭೋಗ, ಬ್ರಹ್ಮಾದಿಪರ್ಯಂತ ಆಯುಷ್ಯ, ಸಂಪತ್ತು, ಧನಕನಕಾದಿಗಳನ್ನು ಅಪೇಕ್ಷಿಬಾರದು. ಕಾಲರೂಪಿಯಾದ ನಿನ್ನಿಂದ ಅವೆಲ್ಲವೂ ನಾಶವಾಗುವುವು. ಅಂತೆಯೇ ನಾನು ಅವನ್ನು ಬಯಸುವುದಿಲ್ಲ. ಸ್ವಾಮಿ, ನಿನ್ನ ಸೇವಕರಾದ ಮುಕ್ತ ಜನರ ಗುಂಪಿಗೆ ನನ್ನನ್ನು ಸೇರಿಸಿ ಕಾಪಾಡು.
ಕ್ವಾಹಂ ರಜಃಪ್ರಭವ ಈಶ ತಮೋSಧಿಕೇಸ್ಮಿನ್ ಜಾತಸ್ಸುರೇತರಕುಲೇ ಕೈ ತವಾನುಕಂಪಾ |
ನ ಬ್ರಹ್ಮಣೋ ನ ತು ಭವಸ್ಯ ನ ವೈ ರಮಾಯಾ ಯನ್ನೇSರ್ಪಿತಃ ಶಿರಸಿ ಪದ್ಮಕರಪ್ರಸಾದಃ || ೨೬ ||
ಪರಮಾತ್ಮ ! ಅಜ್ಞಾನ ಪ್ರಚುರವಾದ ಅಸುರಕುಲದಲ್ಲಿ ಜನಿಸಿದ ನಾನೆಲ್ಲಿ? ಭಕ್ತಾನುಗ್ರಹಕಾರಕವಾದ ನಿನ್ನ ಅನುಕಂಪ (ಅನುಗ್ರಹ)ವೆಲ್ಲಿ? ಇವೆರಡೂ ಪರಸ್ಪರ ವಿರುದ್ಧವಾದವು. ಸತ್ವಪ್ರಧಾನವಾದ ಶ್ರೀಹರಿತತ್ವಜ್ಞಾನಯುಕ್ತರು ನಿನ್ನ ಅನುಗ್ರಹಕ್ಕೆ ಪಾತ್ರರು. ಹೀಗಿದ್ದರೂ ನೀನು ನನ್ನಲ್ಲಿ ಅನುಗ್ರಹ ಮಾಡಿರುವುದು ಆಶ್ಚರ್ಯಕರ! ನಿನ್ನ ಪ್ರಸಾದವೂ ಅನ್ಯಾದೃಶ. ಕಮಲದಂತೆ ಆಹ್ಲಾದಕರವಾದ ನಿನ್ನ ಅಮೃತಹಸ್ತವನ್ನು ನನ್ನ ಶಿರದ ಮೇಲಿಟ್ಟು ರಮಾ-ಬ್ರಹ್ಮ ರುದ್ರಾದಿಗಳಿಗಿಂತ ವೈಶಿಷ್ಟ್ಯಪೂರ್ಣ ವಾತ್ಸಲ್ಯವನ್ನು ನನ್ನಲ್ಲಿ ತೋರಿದ್ದೀಯೆ. ದೇವ, ಅಸುರಕುಲದಲ್ಲಿ ಜನಿಸಿದ್ದರೂ, ನನ್ನ ಭಕ್ತಿಯ ಹಿರಿಮೆ-ಮಹಿಮೆಗಳನ್ನು ತೋರಲು ನಿನ್ನ ಕರಕಮಲವನ್ನು ನನ್ನ ತಲೆಯ ಮೇಲಿರಿಸಿ ಅನುಗ್ರಹಿಸಿದ್ದೀಯೇ.
ಲೋಕದಲ್ಲಿ ಸಾಮಾನ್ಯವಾಗಿ ಇವರು ತಮ್ಮವರು, ಅವರು ಬೇರೆ ಎಂದು ಪ್ರೀತಿ-ದ್ವೇಷಗಳನ್ನು ಮಾಡುವುದು ಕಂಡುಬಂದಿದೆ. ಆದರೆ ನೀನು ಲೋಕವಿಲಕ್ಷಣಮಹಿಮನೂ, ಅನಿಮಿತ್ತ ಬಂಧುವೂ ಆಗಿರುವೆ. ನಿನ್ನ ಪ್ರಸಾದವು ಸೇವಾನುಗುಣವಾಗಿದ್ದು ಮಾಡುವ ಭಕ್ತಿ, ಯೋಗ್ಯತೆಗೆ ತಕ್ಕಂತೆ ನಿನ್ನನ್ನಾರಾಧಿಸಿ ಜನರು ಅದಕ್ಕೆ ತಕ್ಕ ಫಲವನ್ನು ಹೊಂದುವರು. ಲಕ್ಷ್ಮೀದೇವಿಯೂ ತಾನು ಮಾಡುವ ನಿರವಧಿಕ ಭಕ್ತಿಯಿಂದಲೇ ನಿನ್ನ ಅತ್ಯಂತವಾದ ಅಧಿಕವಾದ ಪ್ರಸಾದಕ್ಕೆ ಪಾತ್ರಳಾಗಿದ್ದಾಳೆ. ಶ್ರೀಹರಿ! ನೀನು ಮಾಡಿದ ಸೇವೆಗನುಗುಣವಾಗಿ ಕುಲ-ಜಾತಿಗಳನ್ನು ನೋಡದೆ ಕಲ್ಪವೃಕ್ಷದಂತೆ ಸೇವಿಪರಿಗೆ ಫಲಪ್ರದನಾಗಿದ್ದೀಯೆ.
ಪ್ರಭು ! ಸಂಸಾರಸರ್ಪವಿಷದೂಷಿತ ಗರ್ತದಲ್ಲಿ ಬಿದ್ದು ವಿಷಯಲೋಲುಪರಾದ ದೈತ್ಯಜನರಲ್ಲಿ ಹುಟ್ಟಿ, ಅವರ ಸಂಗದಿಂದ ಅನುಗ್ರಹ ಮಾಡಿದರು. ಷಡ್ಗುಣೈಶ್ಚರ್ಯಸಂಪನ್ನನಾದ ಪ್ರಭುವೇ! ಸೇವಕತನದ ರುಚಿಯನ್ನು ಕಂಡಿರುವ ನಾನು ನಿನ್ನ ಸೇವಕನಾಗಿಯೇ ಇರಬಯಸುತ್ತೇನೆ. ನಿನ್ನನ್ನು ಸೇವಿಸುವುದನ್ನು ಹೇಗೆ ಬಿಡಲಿ? ಖಂಡಿತ ಬಿಡಲಾರೆ.
ಮತಾಣರಕ್ಷಣಮನಂತಪಿತುರ್ವಧಂ ಚ ಮನ್ನೇ ಸ್ವಭ್ರತ್ಯಋಷಿವಾಕ್ಯಮೃತಂ ವಿಧಾತುಂ |
ಖಡ್ಗಂ ಪ್ರಗ್ರಹ ಯದವೋಚದಸದ್ದಿಧಿತ್ತು: ಸ್ವಾಮೀಶ್ವರೋ ಮದದರೋವತು ಕಂ ಹರಾಮಿ || 29 ||
ಹೇ ಅನಂತ! ಶ್ರೀಹರಿಯು ಸರ್ವಭೂತಗಳಲ್ಲಿಯೂ ಅಂತರ್ಯಾಮಿಯಾಗಿದ್ದು ಭಕ್ತರನ್ನು ರಕ್ಷಿಸುತ್ತಾನೆ ಎಂದು ನಾರದ ಮಹರ್ಷಿಗಳು ನನಗೆ ಉಪದೇಶಿಸಿದ್ದರು. ಅದನ್ನು ನಾನು ನನ್ನ ತಂದೆಗೆ ಎತ್ತಿಹೇಳಿ “ತಾತ! ನೀನು ಜಗದೀಶ್ವರನನ್ನು ನಿನಗಿಂತ ಭಿನ್ನನಾದ ಸರ್ವೋತ್ತಮನಾದ ಜಗದೀಶ್ವರನು ಬೇರೊಬ್ಬನಿದ್ದಾನೆ” ಎಂದು ಹೇಳಿದಾಗ ಅವನು ನಾರದರ ಮತ್ತು ನನ್ನ ವಾಕ್ಯವನ್ನು ಅಸತ್ಯಗೊಳಿಸಲು “ಪ್ರಹ್ಲಾದ! ಇಕೋ, ಈ ಖಡ್ಗದಿಂದ ನಿನ್ನ ಶಿರಸ್ಸನ್ನು ಕತ್ತರಿಸುವೆನು. ನೀನು ಹೇಳಿದ ಸರ್ವತ್ರವ್ಯಾಪ್ತನಾದ ಆ ವಿಷ್ಣುವು ಬಂದು ನಿನ್ನನ್ನು ರಕ್ಷಿಸಲಿ” ಎಂದು ಆರ್ಭಟಿಸಿದನು. ಆಗ ನೀನು ನನ್ನ ಪ್ರಾಣರಕ್ಷಣೆ, ನಿನ್ನ ಭಕ್ತರಾದ ವಾಕ್ಯವನ್ನು ಸತ್ಯಮಾಡಲು ಮತ್ತು ಹಿರಣ್ಯಕಶ್ಯಪನ ಸಂಹಾರ ಮಾಡುವ ಉದ್ದೇಶದಿಂದ ಸ್ತಂಭದಿಂದ ಹೊರಬಂದು ನಾರ- ಮಹರ್ಷಿಗಳ, ನನ್ನ ವಚನಗಳನ್ನು ಸತ್ಯಮಾಡಿ, ದುಷ್ಟನಾದ ಹಿರಣ್ಯಕಶ್ಯಪುವನ್ನು ಸಂಹರಿಸಿ ನನ್ನನ್ನು ಸಂರಕ್ಷಣೆ ಮಾಡಿದ್ದೀಯೇ.
ಕೋನ್ನತ್ರ ತೇSಖಿಲಗುರೋ ಭಗವನ್ ಪ್ರಯಾಸ ಉತ್ತಾರಣೇಸ್ಯ ಭವಸಂಭವಲೋಪಹೇತೋಃ |
ಮೂಡೇಷು ವೈ ಮಹದನುಗ್ರಹ ಆರ್ತಬಂಧೋ ಕಿಂ ತೇನ ತೇ ಪ್ರಿಯಜನಾನನುಸೇವಮಾನಃ || ೪೨ ||
ಹೇ ಅಖಿಲಲೋಕಗುರುವಾದ ಶ್ರೀಪತಿ! ಸೃಷ್ಟಿಸ್ಥಿತ್ಯಾದಿ ಕಾರ್ಯಕರಣ ಸಮರ್ಥನಾದ ನಿನಗೆ ಈ ಸಂಸಾರವೆಂಬ ವೈತರಣಿಯಿಂದ ನನ್ನನ್ನು ಪಾರುಮಾಡಲು ಸ್ವಲ್ಪವೂ ಶ್ರಮವಿಲ್ಲ. ಆಪ್ತಕಾಮನಾದ ನಿನಗೆ ಭಕ್ತರನ್ನು ಕಾಪಾಡುವುದು ಸ್ವಭಾವವಾಗಿದೆ. ತಿರ್ಯಗೋನಿಯಲ್ಲಿ ಜನಿಸಿದ ಗಜೇಂದ್ರನಂತೆ, ಅಸುರಕುಲದಲ್ಲಿ ಜನಿಸಿದ ನಮ್ಮಲ್ಲಿ ನೀನು ಅನುಗ್ರಹ ಮಾಡಬೇಕು. ಆರ್ತ ಪ್ರಾಣರಕ್ಷಣಪಾರಾಯಣ! ಭಕ್ತವತ್ಸಲ, ನನ್ನನ್ನು ಈ ಭವಬಂಧನದಿಂದ ರಕ್ಷಿಸು. ಆಪ್ತಕಾಮನಾದ ನಿನಗೆ ಅದರಿಂದಾಗ ಪ್ರಯೋಜನವಿಲ್ಲವಾದರೂ, ಅದು ನನ್ನಲ್ಲಿ ಮಹದನುಗ್ರಹವೇ ಆಗುವುದು.
ನೈವೋದ್ವಿಜೇ ಭವದುರತ್ಯಯವೈತರಣ್ಯಾತೀರ್ಥಗಾಯನಮಹಾಮೃತಮತಚಿತ್ತ |
ಶೋಚೇ ನು ತೇ ವಿಮುಖಚೇತಸ ಇಂದ್ರಿಯಾರ್ಥಮಾಯಾಸುಖಾಯ ಭರಮುದ್ದಹತೋ ವಿಮೂಢಾನ್8 || ೪೩ || ಸ್ವಾಮಿ, ನೀನು ಸರ್ವೋತ್ತಮ, ಸರ್ವತಂತ್ರಸ್ವತಂತ್ರ, ವೇದೈಕವೇದ್ಯ, ಜೀವರು ನಿನ್ನ ಪ್ರತಿಬಿಂಬರು, ಅಧೀನರು, ಭಕ್ತಿಯಿಂದ ಪ್ರಸನ್ನನಾಗಿ ನೀನು ಅವರವರ ತಾರತಮೋಪೇತ ಸಾಧನೆಗೆ ತಕ್ಕಂತೆ ಮೋಕ್ಷವನ್ನು ದಯಪಾಲಿಸುವಿ ಎಂದು ಹೇಳುವ ವೈದಿಕ ವೈಷ್ಣವ ದೈತಸಿದ್ಧಾಂತವನ್ನು ಪ್ರತಿಪಾದಿಸುವ ವೇದಾಂತಶಾಸ್ತ್ರವನ್ನು ಶ್ರವಣ-ಮನನ ಮಾಡಿ, ಗಾಯನದಿಂದ ಆ ಮಹಾತಾಮೃತಪಾನ ಮಾಡಿ, ಆನಂದತುಂದಿಲನಾದ ನನಗೆ ಈ ಸಂಸಾರವೆಂಬ ವೈತರಣಿಯ ಭಯವಿಲ್ಲ! ಆದರೆ, ಪ್ರಭು! ಶಾಸ್ತ್ರಶ್ರವಣವಿಲ್ಲದಲೇ ನಿನಗೆ ವಿಮುಖರಾಗಿ ಇಂದ್ರಿಯವಿಷಯಸಂಗದಿಂದ ಬರುವ ನಶ್ವರವಾದ ಐಹಿಕ ಸುಖೋಪಭೋಗಗಳಿಗಾಗಿ ಕುಟುಂಬಭರಣ ಮಾಡುತ್ತಿರುವ ಅಜ್ಜಜನರು ಈ ಸಂಸಾರಚಕ್ರದಿಂದ ಪಾರಾಗುವುದೆಂತೆಂದು ನಾನು ಚಿಂತಿಸುತ್ತಿದ್ದೇನೆ.
ಪ್ರಾಯೋಣ ದೇವಮುನಯೋ ಸ್ವವಿಮುಕ್ತಿಕಾಮಾ ಮೌನಂ ಚರಂತಿ ವಿಜನೇ ನ ಪರಾರ್ಥನಿಷ್ಠಾಃ |
ನೈತಾನ್ವಹಾಯ ಕೃಷಣಾನ್ ಎಮುಮುಕ್ಷ ಏಕೋ ನಾನಂ ತ್ವದಸ್ಯ ಶರಣಂ ಭ್ರಮತೋನು || ೪೪ ||
ಸ್ವಾಮಿ, ತಾತ್ವಿಕ ದೇವತೆಗಳು ಮತ್ತು ಋಷಿಗಳು ಸ್ವಾಶ್ರಿತರಾದ ಪರರಿಗೆ ಮೋಕ್ಷವಾಗಬೇಕೆಂದು ಏಕಾಂತದಲ್ಲಿ ಕಾಷ್ಠಮೌನವ್ರತವನ್ನು ಆಚರಿಸುವರು. ಅವರ ಸಹಾಯದಿಂದಲೇ ನಾನು ಕೃಪಣರಾದ ಅಜ್ಞಜನರಿಗೆ ಮೋಕ್ಷವನ್ನು ಅಪೇಕ್ಷಿಸುವೆನಾದ್ದರಿಂದ ಆ ತತ್ವಾಭಿಮಾನಿ ದೇವತೆಗಳ ವಿಶೇಷಾನುಗ್ರಹವನ್ನು ಸಂಪಾದಿಸಬಯಸುತ್ತೇನೆ, ಅದಕ್ಕೆ ನಿನ್ನ ಹೊರತು ಬೇರಾರು ನನಗೆ ಗತಿಯಿಲ್ಲ, ಆದ್ದರಿಂದ ಅನುಗ್ರಹಿಸು ದೇವ! ದೇವತೆಗಳು ತಮ್ಮನ್ನು ಆಶ್ರಯಿಸಿದವರಲ್ಲಿದಯೆಮಾಡುವಂತೆ ನಾನೂ ಸಹ ನನ್ನನ್ನು ಆಶ್ರಯಿಸಿರುವ ದೈತ್ಯಬಾಲಕರಲ್ಲಿ ಕಾರುಣ್ಯವುಳ್ಳವನಾಗಿದ್ದೇನೆ. ಅವರನ್ನು ಬಿಟ್ಟು ನಾನೊಬ್ಬನೇ ಮೋಕ್ಷವನ್ನು ಬಯಸುವುದಿಲ್ಲ! “ನನ್ನ ಪ್ರಸಾದದಿಂದ ನಿನಗೆ ಮೋಕ್ಷವಾಗಲಿ, ಉಳಿದ ದೈತ್ಯಬಾಲಕರು ತಮತಮಗೆ ಯೋಗ್ಯವಾದ ಮಾರ್ಗದಿಂದ ಮುಕ್ತರಾಗಲಿ” ಎಂದು ನೀನು ಆಜ್ಞಾಪಿಸಬಹುದು. ಆದರೆ ಪ್ರಭು! ಅವರಿಗೆ ನಿನ್ನ ಹೊರತು ಬೇರಾರೂ ಗತಿಯಿಲ್ಲ. ಆದುದರಿಂದ ಅವರಿಗೆ ನೀನೇ ಮೋಕ್ಷಮಾರ್ಗವನ್ನು ತೋರಿಸಬೇಕು.
ತ್ವಂ ವಾಯುರಗಿರವನಿರ್ವಿಯದಂದುಮಾತ್ರಾಃ ಪ್ರಾಣೇಂದ್ರಿಯಾಣಿ ಹೃದಯಂ ಚಿದನುಗ್ರಹಶ್ಚ |
ಸರ್ವಂ ತ್ವಮೇವ ಸಗುಣೋ ವಿಗುಣಶ್ಚ ಭೂಮನ್ ನಾನತ್ ತ್ವದಸ್ಯಪಿ ಮನೋವಚಸಾ ನಿರುಕ್ತಮ್7 || ೪೮ ||
ಶ್ರೀಹರಿಯೇ! ವಾಯು, ಅಗ್ನಿ, ಪೃಥ್ವಿ, ಆಕಾಶ, ಜಲಾದಿ ಪಂಚಮಹಾಭೂತಗಳು, ಮಾತ್ರಾಗಳು, ಪಂಚಜ್ಞಾನೇಂದ್ರಿಯಗಳು, ಹೃದಯ, ಸಾತ್ವಿಕ ಸಂಸಾರಿ ಮುಕ್ತಜೀವರು, ಶೌಕ್ಲಾದಿಗುಣವಿಶಿಷ್ಟ ವಸ್ತುಗಳು, ಉತ್ಪನ್ನಾನಂತರ ರಕ್ಷಣಾವನ್ನ ನಿರ್ಗುಣವಸ್ತು, ಮನೋವಾಗ್ಗೋಚರ ಪ್ರಕೃತಿ ಮುಂತಾದ ಸರ್ವವಸ್ತುವೂ ನೀನೇ ಆಗಿದ್ದೀಯೇ, ನಿನ್ನ ವಿನಃ ಅವಕ್ಕೆ ಪ್ರವೃತ್ತಿ ಮುಂತಾದ ಸತ್ತೆಗಳು ಕೂಡುವುದಿಲ್ಲವಾದ್ದರಿಂದ ಅವೆಲ್ಲವೂ ನಿನ್ನ ಅಧೀನವಾಗಿವೆ. ಎಲೈ, ಭೂಮನ್ ಸರ್ವಗುಣಪರಿಪೂರ್ಣ, ನೀನು ಪ್ರಕೃತ್ಯಾದಿ ಪ್ರಪಂಚದಿಂದ ಅತ್ಯಂತ ಭಿನ್ನನಾಗಿದ್ದು ಅದರ ಅಂತರ್ಯಾಮಿಯಾಗಿದ್ದೀಯೇ.
ದೇವ! ಸತ್ವ ರಜಸ್ತಮೋಗುಣಾಭಿಮಾನಿ ದೇವತೆಗಳು, ಮಹತ್ವಾಭಿಮಾನಿಗಳಾದ ಬ್ರಹ್ಮಾದಿ ದೇವತೆಗಳು, ಮನಸ್ತತ್ವಾಭಿಮಾನಿಗಳಾದ ರುದ್ರಚಂದ್ರಾದಿದೇವತೆಗಳು, ತಪ್ಪೇಶವ್ಯತಿರಿಕ್ತದೇವತೆಗಳು, ಮನುಷೋತ್ತಮರು, ಋಷಿಗಳು - ಇವರೆಲ್ಲರೂ ಉತ್ಪತ್ತಿ ಮತ್ತು ವಿನಾಶಗಳುಳ್ಳ ದೇಹವುಳ್ಳವರಾಗಿದ್ದಾರೆ. ಶ್ರೇಷ್ಠಜ್ಞಾನಿಗಳೂ ಸಹ ಯಕ್ಕಾದಿಗಳಿಂದ ನಿನ್ನನ್ನು ಸಾಕಲೇನ ತಿಳಿಯಲಾರರು. ನಿನ್ನ ಮಹಿಮೆಯನ್ನು ವೇದಗಳ ಸಮೂಹದಿಂದಲೇ ಗುರೂಪದೇಶದ್ವಾರಾ, ಶ್ರವಣಮನನಾದಿಗಳಿಂದ ತಿಳಿದು ನಿನ್ನನ್ನು ಸಾಕ್ಷಾತ್ಕರಿಸಿಕೊಂಡು ಮುಕ್ತರಾಗುವರು.
ತತ್ವಮನೋದರ್ಶನೇದ್ರಗಪಿಸ್ತುತ್ ಚ ವಾಕ್ಯರ್ಮಣಿ ಹಪಿ ಕರೌ ಶ್ರವಣಂ ಕಥಾಯಾಮ್ |
ಸಂಸೇವೆಯಾ ತ್ವಯಿ ವಿನೇತಿ ಷಡಂಗಯಾ ಕಿಂ ಭಕ್ತಿಂ ಜನಃ ಪರಮಹಂಸಗತ್ ಲಭೇತ್89 || ೫೦ ||
ದೇವದೇವ! ಯೋಗಿಗಳು ನಿನ್ನನ್ನು ಷಡಂಗಸೇವೆಯಿಂದ ಒಲಿಸಿಕೊಂಡು ನಿನ್ನ ಅತ್ಯರ್ಥಪ್ರಸಾದವನ್ನು ಪಡೆಯಬೇಕೇ ಕಣ್ಣುಗಳು ನಿನ್ನ ಮಂಗಳಕರಮೂರ್ತಿ ದರ್ಶನರತವಾಗಬೇಕು. ನಾಲಿಗೆಯು ನಿನ್ನ ಗುಣ ಮತ್ತು ಮಹಿಮಾದಿಗಳನ್ನು ಸ್ತುತಿಸುತ್ತಿರಬೇಕು. ವಿನಃ ಬೇರೆ ಮಾರ್ಗವಿಲ್ಲ. ಷಡಂಗಗಳಿಂದ ಸೇವಿಸುವುದೆಂದರೆ - ಪ್ರಭು ! ಸರ್ವದಾ ಮನಸ್ಸು ನಿನ್ನ ರೂಪವನ್ನು ಚಿಂತಿಸುತ್ತಿರಬೇಕು. ಕರಗಳು ನಿನ್ನ ಕೈಂಕರ್ಯ ಮಾಡಬೇಕು. ಚರಣಗಳು ನಿನ್ನ ಪಾವನವಾದ ಕ್ಷೇತ್ರಯಾತ್ರೆ ಮಾಡಬೇಕು. ಕರ್ಣಗಳು ನಿನ್ನ ಅಮರಚರಿತ್ರೆ | ಲೀಲಾವಿಲಾಸಕಥೆಗಳನ್ನು ಆಲಿಸುತ್ತಿರಬೇಕು, ಹೀಗೆ ಯೋಗಿಗಳು ಷಡಂಗಯುಕ್ತವಾದ ನಿನ್ನ ಸೇವೆಯಿಂದ ಪರಮಹಂಸ ಪ್ರಾಪ್ಯನಾದ ನಿನ್ನಲ್ಲಿ ಭಕ್ತಿಮಾಡಿ ಒಲಿಸಿಕೊಂಡು ನಿನ್ನ ಅತ್ಯರ್ಥಪ್ರಸಾದವನ್ನು ಪಡೆಯುವರು. ಹಾಗಿಲ್ಲದೆ ನಿನ್ನ ಅತ್ಯರ್ಥಪ್ರಸಾದಕ್ಕೆ ಬೇರೆ ಮಾರ್ಗವಿಲ್ಲ.
ಹೀಗೆ ಪ್ರಹ್ಲಾದರಾಜನು ತನ್ನ ಯೋಗ್ಯತಾನುಸಾರವಾಗಿ ಅತ್ಯಂತ ಭಕ್ತಿ-ಶ್ರದ್ಧೆಗಳಿಂದ ಶ್ರೀನರಸಿಂಹದೇವರನ್ನು ಸ್ತೋತ್ರಮಾಡಿರು ಮತ್ತು ಪರಮಾತ್ಮನ ಚರಣಕಮಲಗಳಿಗೆ ಸಾಷ್ಟಾಂಗ ಪ್ರಣಾಮ ಮಾಡಿದನು.
ಇಂತು ಪ್ರಹ್ಲಾದರಾಜನು ಸ್ತೋತ್ರಮಾಡಲು ನಿರ್ಗುಣನಾದ (ಅಂದರೆ ಪ್ರಾಕೃತ ಸತ್ವಾದಿಗುಣಹೀನನಾದ) ಶ್ರೀನೃಸಿಂಹದೇವು ಬಾಲಭಕ್ತನ ಸ್ತುತಿಯಿಂದ ಸುಪ್ರಸನ್ನನಾಗಿ ಕೋಪವನ್ನು ತ್ಯಜಿಸಿ ಶಾಂತನಾದನು.