ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೧೨೫. ಸಶರೀರ ಬೃಂದಾವನ ಪ್ರವೇಶ
ಶ್ರೀರುಧಿರೋದ್ಗಾರಿ ಸಂವತ್ಸರದ ಶ್ರಾವಣಬಹುಳ ಪ್ರತಿಪದೆಯಂದು ಶ್ರೀರಾಯರು ಶ್ರೀಮೂಲರಾಮನ ಪೂಜಾರಾಧನೆಯಲ್ಲಿ ಮಗ್ನರಾಗಿದ್ದಾರೆ. ಪ್ರಿಯಶಿಷ್ಯರಾದ ಶ್ರೀಯೋಗೀಂದ್ರತೀರ್ಥರು ಗುರುಗಳ ಸನಿಹದಲ್ಲಿ ಕುಳಿತು ಪೂಜಾಕಾರ್ಯದಲ್ಲಿ ಸಹಾಯಮಾಡುತ್ತಾ ಸೇವಿಸುತ್ತಿದ್ದಾರೆ. ಪೂಜ್ಯಗುರುವರರು ಸರ್ವಜನರಿಗೂ ದೃಗ್ಗೋಚರವಾಗಿ ನೆರವೇರಿಸುತ್ತಿರುವ ಮಹಾಸಂಸ್ಥಾನದ ಆರಾಧ್ಯಪ್ರತಿಮೆಗಳ ಚರಮ ಪೂಜಾರಾಧನೆಯನ್ನು ನೋಡಿ ಜನ್ಮ ಸಾಫಲ್ಯತೆಯನ್ನು ಪಡೆದು ಕೃತಾರ್ಥರಾಗಬಯಸಿ ಸಹಸ್ರಾರುಜನರು ಭಕ್ತಿಶ್ರದ್ಧೆಗಳಿಂದ ಕರಮುಗಿದು ಕುಳಿತಿದ್ದಾರೆ. ಮಂಗಳವಾದ್ಯಗಳು, ಭೇರಿ ಕಹಳೆ, ನಗಾರಿ, ವಿವಿಧ ವಾದ್ಯಗಳು ಮೊಳಗುತ್ತಿವೆ. ಪಂಡಿತರು ಸುಸ್ತರವಾದ ವೇದಘೋಷಮಾಡುತ್ತಿದ್ದಾರೆ. ವೈಭವದಿಂದ ಸಾಗಿದೆ ಶ್ರೀಮೂಲರಾಮನ ಪೂಜೆ !
ಕಳಶಪೂಜೆ, ಅಭಿಷೇಕ, ಗಂಧ, ಅಕ್ಷತೆ, ಮಂತ್ರಪುಷ್ಪ ಸಮರ್ಪಣೆ, ತುಳಸಿ ಪುಷ್ಪಾರ್ಚನೆ. ನೈವೇದ್ಯಾದಿಗಳಾಗಿ ಗುರುಗಳು ದೇವರಿಗೆ ಮಹಾನೀರಾಜವನ್ನರ್ಪಿಸಿದರು. ಆನಂತರ ಶ್ರೀರಮಾನೇವೇದ್ಯಾಂಗವಾಗಿ ಶ್ರೀಶಂಖ, ಮುಖ್ಯಪ್ರಾಣ ದೇವರು. ಶ್ರೀಮಹಾಚಾರ್ಯರಪ್ರತಿಮೆ, ಗರುಡ-ಶೇಷಾದಿಗಳಿಗೆ ತೀರ್ಥ-ಗಂಧಾಕ್ಷತೆ. ಭಗವದರ್ಪಿತ ತುಳಸೀಪುಷ್ಪಗಳನ್ನರ್ಪಿಸಿ ರಮಾನೇವೇದ್ಯವನ್ನು ನೆರವೇರಿಸಿ ಮೂಲರಾಮನಿಗರ್ಪಿತವಾದ ಮಂಗಳಾರತಿಯನ್ನು ಬೆಳಗಿಸಿದರು. ಆ ತರುವಾಯ ಸಂಕಲ್ಪಪೂರ್ವಕ ಆದಿಗುರುಗಳಾದ ಶ್ರೀಪದ್ಮನಾಭತೀರ್ಥರು. ಶ್ರೀಜಯತೀರ್ಥರು. ಶ್ರೀವಿಜಯಾಂದ್ರ-ಸುಧೀಂದ್ರತೀರ್ಥರುಗಳ ಬೃಂದಾವನಗಳನ್ನು ಪೂಜಿಸಿ, ತೀರ್ಥ-ಗಂಧಾಕ್ಷತೆ-ತುಳಸೀಪುಷ್ಪಗಳನ್ನರ್ಪಿಸಿ, ಹಸ್ತೋದರವನ್ನು ಸಮರ್ಪಿಸಿ ಮಂಗಳಾರತಿ ಮಾಡಿದರು.
ಆನಂತರ ಶ್ರೀರಾಘವೇಂದ್ರಗುರುಪಂಗವರು ತಲೆಕಟ್ಟನ್ನು ಬಿಚ್ಚಿ ಶ್ರೀಮೂಲರಾಮನಲ್ಲಿ ಆವಾಹನವಾಡಿದ್ದ ಬಿಂಬಮೂರ್ತಿ ಯನ್ನು ಮತ್ತೆ ತಮ್ಮ ಹೃದಯಕಮಲದಲ್ಲಿ ಪ್ರತಿಷ್ಠಾಪಿಸಿ ಶ್ರೀಮೂಲರಾಮನಿಗೆ ಶಿರಬಾಗಿ ಧ್ಯಾನಿಸಹತ್ತಿದರು. ಆಗ ಶ್ರೀ ಮೂಲರಾಮನಪ್ರತಿಮೆಯಿಂದ ಅದ್ಭುತ ಕಮನೀಯ ಕಾಂತಿಪುಂಜವೊಂದು ಹೊರ ಹೊಮ್ಮಿ ತಮ್ಮ ಹೃದಯವನ್ನು ಪ್ರವೇಶಿಸುತ್ತಿರುವಂತೆ ಗುರುಗಳಿಗೆಭಾಸವಾಯಿತು! ಭಕ್ತಿ-ಆನಂದ ಪುಳಕಿತಗಾತ್ರರಾದ ಶ್ರೀಗಳವರು ನಿಮೀಲಿತನೇತ್ರರಾಗಿ ಧ್ಯಾನರತರಾದರು. ಆಗ ತಮ್ಮ ಹೃದಯಕಮಲದಲ್ಲಿ ಗುರುರಾಜರಿಗೆ ಅಪೂರ್ವದೃಶ್ಯವೊಂದು ಗೋಚರಿಸಿತು. ಗುರುಸಾರ್ವಭೌಮರ ಹೃದಯಮಂಟಪದಲ್ಲಿ ಸುರುಚಿರ ತೇಜಪುಂಜ ಪ್ರಭಾಮಂಡಲದಲ್ಲಿ ಜಗದಭಿರಾಮನಾದ ಶ್ರೀಮೂಲರಾಮಚಂದ್ರ ದೇವನು ದರಹಸಿತವದನನಾಗಿ ಅಭಯಪ್ರದಾನಮಾಡುತ್ತಾ ಹೃತುಂಡರೀಕದಲ್ಲಿ ನೆಲೆಸಿದಂತಾಯಿತು! ಪರಮಾನಂದನಿರ್ಭರರಾಗಿ ಹಾಗೆಯೇ ಧ್ಯಾನಾಸಕ್ತರಾಗಿ ಗುರುಗಳು ನಿರೀಕ್ಷಿಸುತ್ತಿರುವಂತೆಯೇ ಶ್ರೀನರಸಿಂಹದೇವರು, ಶ್ರೀಬಾದರಾಯಣ ದೇವರು, ಮುರಳೀಮೋಹನರಾದ ಶ್ರೀಕೃಷ್ಣರು ನಗೆಮಲ್ಲಿಗೆಯನ್ನು ಹೊರಸೂಸುತ್ತ ಅಭಯಹಸ್ತರಾಗಿ ಒಬ್ಬರಾದಮೇಲೊಬ್ಬರು ಗುರುಗಳ ಹೃತ್ವದದಲ್ಲಿ ನೆಲೆನಿಂತರು! ಆಗ ಗುರುಗಳ ಶರೀರದಲ್ಲಿ ಅಪೂರ್ವ ಅದ್ವೀತೀಯ-ಅಸಾಧಾರಣ ಶಕ್ತಿಯೊಂದು ಸಂಚರಿಸದಂತಾಗಿ ರೋಮಾಂಚಿತರಾದರು. ಅವರ ಹೃದಯ ಭಕ್ಕುದ್ದೇಗದಿಂದ ಕಂಪಿಸಿತು! ಧ್ಯಾನಸಕ್ತರಾಗಿ ನೋಡುತ್ತಿರುವಂತೆಯೇ ಶ್ರೀಲಕ್ಷ್ಮೀನಾರಾಯಣರು ವರದಹಸ್ತರಾಗಿ ಗುರುಗಳ ಹೃನ್ಮಂಡಲವನ್ನು ಪ್ರವೇಶಿಸಿದಂತಾಯಿತು! ಹಾಗೆಯೇ ಭಕ್ತಿಪುಳಕಿತರಾಗಿ ಗುರುಗಳು ಧ್ಯಾನಸ್ಥರಾಗಿ ನೋಡುತ್ತಿರುವಾಗ ಅವರ ಪರಮಪಾವನವಾದ ಹೃದಯಕಮಲದಲ್ಲಿ ಶ್ರೀಮೂಲರಾಮ-ನರಹರಿ-ವೇದವ್ಯಾಸ-ಕೃಷ್ಣ ಲಕ್ಷ್ಮೀನಾರಾಯಣರು ಒಟ್ಟಾಗಿ ನಿಂತು ಆಶೀರ್ವದಿಸಿ ಬಲಕರವನ್ನು ಬೀಸಿ ಕರೆದಂತಾಗಿ ಅದೃಶ್ಯರಾದರು! ಕೂಡಲೇ ದಿವ್ಯತೇಜಸ್ಸಿನಿಂದ ಕಂಗೊಳಿಸುವ ಜಗತ್ತಾಣರಾದ, ಶ್ರೀಮುಖ್ಯಪ್ರಾಣದೇವರು (ವಾಯುದೇವರು) ತಮ್ಮ ಹನುಮ-ಭೀಮ-ಮದ್ದ ರೂಪಗಳಿಂದ ಪ್ರಸನ್ನಚಿತ್ತರಾಗಿ ಗುರುಗಳ ಹೃದಯಸಿಂಹಾಸನದಲ್ಲಿ ದರ್ಶನವಿತ್ತು ಆರ್ಶಿವ್ರದಿಸಿ ಕಣ್ಮರೆಯಾದರು! ಇವೆಲ್ಲವೂ ಒಂದು ಕ್ಷಣದಲ್ಲಿ ಜರುಗಿ ಹೋಯಿತು! ಶ್ರೀಗಳವರ ಹೃದಯ ಆನಂದಭರದಿಂದ ಉಬ್ಬಿತು. ಭಕ್ತಿಪಾರವಶದಿಂದ ನೇತ್ರಗಳಿಂದ ಆನಂದಸಲಿಲ ಹರಿಯತೊಡಗಿತು. ರೋಮಾಂಚಿತರಾದ ಗುರುರಾಜರು ಗದ್ಗದಕಂಠದಿಂದ ಮನದಲ್ಲೇ “ದೇವದೇವ! ಈ ಚರಣಕಿಂಕರನಲ್ಲಿ ಪಂಚರೂಪದಿಂದ ನೆಲೆನಿಂತು ಈ ಪಾಮರನಿಂದ ಲೋಕಕಲ್ಯಾಣಮಾಡಿಸಿ ಅನುಗ್ರಹಿಸಲು ಸಂಕಲ್ಪಿಸಿರುವೆಯಾ? ಆಹಾ ನಿನ್ನ ಭಕ್ತವಾತ್ಸಲ್ಯ ಅಸದೃಶ! ಪ್ರಭು, ನಿನ್ನ ಆಹ್ವಾನದಂತೆ ನನ್ನ ಅವತಾರವನ್ನು ಪರಿಸಮಾಪ್ತಿಗೊಳಿಸಿ ನೀನು ಆಡಿಸಿದಂತೆ ಆಡಲು ಸಿದ್ಧನಾಗಿದ್ದೇನೆ. ಶ್ರೀಹರಿ ನಿನಗೆ ಅನಂತ ನಮಸ್ಕಾರಗಳು ಎಂದು ಉದ್ಧರಿಸಿ ಮನಸಾ ಶ್ರೀಮೂಲರಘುಪತಿ-ನರಹರಿ-ವೇದವ್ಯಾಸ- ಮುರಳೀಮೋಹನ-ಲಕ್ಷ್ಮೀನಾರಾಯಣರಿಗೆ ನಮಿಸಿ ಧ್ಯಾನದಿಂದ ಬಹಿರ್ಮುಖರಾಗಿ ಕಣ್ಣೆರೆದರು.
ಆಗ ಶ್ರೀಗುರುರಾಜರ ಶರೀರವು ವಿಚಿತ್ರಕಾಂತಿಯಿಂದ ಹೊಳೆಯಹತ್ತಿತು. ವಿವಿಧ ವರ್ಣರಂಜಿತ ಕಾಂತಿಪುಂಜಗಳು ಆ ಮಹಾತ್ಮರ ಶರೀರದಸುತ್ತ ಭರದಿಂದ ಸುತ್ತುತ್ತಿರುವಂತೆ ಭಾಸವಾಯಿತು. ಗುರುಗಳ ಪಾವನಶರೀರದಸುತ್ತಲೂ ದಿವ್ಯ ಕಾಂತಿಯ ಪ್ರಭಾಪುಂಜ ಬೆಳಗತೊಡಗಿತ್ತು. ಹಿಂದೆಂದೂ ಕಾಣದ ಆ ಅಪೂರ್ವ ತೇಜೋವಿಭೂಷಿತರಾದ ಶ್ರೀಗುರುಸಾರ್ವಭೌಮರ ಅಂದಿನ ಆ ತೇಜಸ್ಸು-ವರ್ಚಸ್ಸುಗಳನ್ನು ಕಂಡು ಸರ್ವಸಜ್ಜನರೂ ಆಶ್ಚರಾನಂದಗಳಿಂದ ಕರವೆತ್ತಿನಮಿಸಿಸ್ತುತಿಸಿದರು!
ಆನಂದಪರವಶರಾದ ಶ್ರೀಗುರುರಾಜರು ಶ್ರೀಮೂಲರಾಮದೇವರನ್ನು ಕರದಲ್ಲಿ ಪಿಡಿದು ದೇವರಮುಖವನ್ನು ತದೇಕದೃಷ್ಟಿಯಿಂದ ಈಕ್ಷಿಸುತ್ತಾನಮಿಸಿ ಸಮಸ್ತಶಿಷ್ಯಭಕ್ತಜನರಿಗೂ ದೇವರದರ್ಶನ ಮಾಡಿಸಿದರು. ಆನಂತರ ಶ್ರೀದಿಗ್ವಿಜಯರಾಮ ಜಯರಾಮ-ಮಂಥಾನದಾಮಕರ ಶ್ರೀಕೃಷ್ಣ-ಶ್ರೀವ್ಯಾಸಮುಷ್ಟಿಗಳು, ಬಲಮುರಿ ಶಂಖ, ರತ್ನಗರ್ಭಶಾಲಿಗ್ರಾಮಗಳನ್ನೂ ದರ್ಶನಮಾಡಿಸಿ ದೇವರನ್ನು ಭುಂಜಿಸಿ ಘಂಟಾನಾದಪೂರ್ವಕವಾಗಿ ಮೇಲೆದ್ದು ದಂಡಕಮಂಡಲುಧಾರಿಗಳಾಗಿ, ಪ್ರಿಯಶಿಷ್ಯ ಸಹಿತರಾಗಿ ದೇವರಿಗೆ ಪ್ರದಕ್ಷಿಣೆ ನಮಸ್ಕಾರಗಳನ್ನರ್ಪಿಸಿ ದಂಡೋದಕವಿತ್ತು ತೀರ್ಥವನ್ನು ಸ್ವೀಕರಿಸಿ ಭಗವದರ್ಪಿತ ತುಳಸೀ ಗುಚ್ಛಗಳನ್ನು ಕರ್ಣಗಳು, ನಾಭಿ, ಶಿರಗಳಲ್ಲಿ ಧರಿಸಿದರು. ತರುವಾಯ ಶ್ರೀಯೋಗೀಂದ್ರರಿಗೆ ತೀರ್ಥಪ್ರಸಾದವನ್ನು ಕರುಣಿಸಿದರು ಅನಂತರ ಶ್ರೀಪಾದಪುತ್ರರು, ಪಂಡಿತರು, ಪ್ರಮುಖಧಾರ್ಮಿಕರು, ಶಿಷ್ಯಭಕ್ತಜನರಗಳಿಗೆ ತೀರ್ಥಪ್ರಸಾದವನ್ನು ಅನುಗ್ರಹಿಸಿದರು. ಆ ತರುವಾಯ ವಿದ್ವಜ್ಜನರು, ವಿದ್ಯಾರ್ಥಿಗಳು ಆತ್ಮೀಯರು ದಿವಾನ್ ವೆಂಕಣ್ಣ ಪಂತ, ಪ್ರಮುಖಶಿಷ್ಟ ಭಕ್ತಜನರುಗಳ ಸಮ್ಮುಖದಲ್ಲಿ ಕುಳಿತು ತತ್ವವಿಚಾರಮಾಡುತ್ತಾಭಿಕ್ಷಾ ಸ್ವೀಕಾರಮಾಡಿದರು. ಅನೇಕ ಸಹಸ್ರ ಜನರು ಮೃಷ್ಟಾನ್ನಭೋಜನಮಾಡಿ ಸಂತುಷ್ಟರಾದರು.
ಅಂದು ಮಧ್ಯಾಹ್ನ ಶ್ರೀಯೋಗೀಂದ್ರತೀರ್ಥರಿಂದೊಡಗೂಡಿದ ಶ್ರೀಗುರುವರರು ಶ್ರೀಪಾದಪುತ್ರ ಲಕ್ಷ್ಮೀನಾರಾಯಣಾ- ಚಾರರು, ವೆಂಕಟನಾರಾಯಣಾಚಾರ, ನಾರಾಯಣಾಚಾರ, ಕೃಷ್ಣಾಚಾರ, ಮುದ್ದುವೆಂಕಟಕೃಷ್ಣಾಚಾರ, ಪುರುಷೋತ್ತಮಾಚಾರ, ಪ್ರಮುಖವಂಶಬಂಧುಗಳನ್ನೂ, ಆತ್ಮೀಯಪಂಡಿತರನ್ನೂ ಪ್ರೀತ್ಯಾಸ್ಪದನಾದ ದಿವಾನ್ ವೆಂಕಣ್ಣಪಂತನನ್ನೂ ಕರೆಯಿಸಿಕೊಂಡು ಏಕಾಂತವಾಗಿ ಮಾತುಕತೆ ನಡೆಸಿ ಶ್ರೀಹರಿಯಸಂಕಲ್ಪ. ಆದೇಶಗಳಂತೆ ತಾವು ಮರುದಿನ ತಮ್ಮ ಅವತಾರಕಾರ್ಯವನ್ನು ಪರಿಸಮಾಪ್ತಿಗೊಳಿಸಿ ಸಶರೀರರಾಗಿ ಬೃಂದಾವನ ಪ್ರವೇಶಮಾಡಲು ನಿರ್ಧರಿಸಿರುವ ವಿಚಾರವನ್ನೂ, ತಮ್ಮ ಬೃಂದಾವನ ಪ್ರವೇಶಕ್ರಮದ ವಿವರವನ್ನೂ ಆ ತರುವಾಯ ಜರುಗಬೇಕಾದಸಮಸ್ತ ಕಾರ್ಯಕ್ರಮಗಳನ್ನೂ ಪ್ರೀತಿವಿಶ್ವಾಸಪೂರ್ವಕವಾಗಿ ನಿರೂಪಿಸಿದರು. ಆಗ ಸಮಸ್ತರೂ ದುಃಖ-ದುಮ್ಮಾನಗಳಿಂದ ಕಣ್ಣೀರಿಟ್ಟರು. ಆಗ ಗುರುರಾಜರು ಎಲ್ಲರಿಗೂ ಸಮಾಧಾನ ಹೇಳಿ ಶ್ರೀಹರಿವಾಯುಗಳ ಸಂಕಲ್ಪ, ಪ್ರೇರಣೆಗಳಿಗೆ ವಿರುದ್ಧ ಚಿಂತಿಸಿ ದುಃಖಿಸಬಾರದೆಂದು ಹೇಳಿ ಈ ಮಹತ್ಕಾರದಲ್ಲಿ ಎಲ್ಲರೂ ಸೇವೆ ಸಲ್ಲಿಸಿ, ಹರಿವಾಯುಗಳ ಮತ್ತು ತಮ್ಮ ಅನುಗ್ರಹಕ್ಕೆ ಪಾತ್ರರಾಗಬೇಕೆಂದೂ ಆಜ್ಞಾಪಿಸಿದರು. ಗುರುಗಳು ಆಜ್ಞಾಪಿಸುತ್ತಿರುವಂತೆ ಸಮಸ್ತರ ಕಣ್ಣುಗಳಿಂದ ದುಃಖಾಶ್ರು ಹರಿಯಹತ್ತಿತ್ತು. ಗುರುಸಾರ್ವಭೌಮರ ವಿಯೋಗ ವಿರಹದ ದುಃಖ ಉದ್ವೇಗಗಳಿಂದ ಪರಿತಪಿಸಹತ್ತಿದರು. ಆದರೂ ಗುರುರಾಜರಿಗೆ ಎದುರುಹೇಳುವ ಶಕ್ತಿಯಿಲ್ಲದೆ ತಲೆ ತಗ್ಗಿಸಿ ವಿಧೇಯರಾಗಿ ಸರ್ವರೂ ತಮ್ಮ ದುಃಖವನ್ನು ಹತ್ತಿಕ್ಕಿ, ಗದ್ಗದ ಕಂಠದಿಂದ ಗುರುದೇವರ ಅಣತಿಯನ್ನು ಶಿರಸಾ ಧರಿಸಿದ್ದೇವೆ. ಅಪ್ಪಣೆಯಂತೆ ವರ್ತಿಸುತ್ತೇವೆ” ಎಂದು ವಿಜ್ಞಾಪಿಸಿ ಸಕಲರೂ ಗುರುರಾಜರ ಪಾದಸ್ಪರ್ಶಮಾಡಿ ಅಭಿವಂದಿಸಿದರು.
ಅನಂತರ ಗುರುರಾಜರು ಸಾಯಂದೀಪಾರಾಧನೆಗೊಸ್ಕರ ಮೇಲೆದ್ದರು. ಪ್ರಿಯಶಿಷ್ಟ ಸಹಿತರಾದ ಶ್ರೀಯವರು ಸಾಯಂಸ್ನಾನ-ಅಜ್ಞಕ-ಜಪತಪಗಳನ್ನು ನೆರವೇರಿಸಿ ವೈಭವದಿಂದ ಶ್ರೀಮೂಲರಾಮದೇವರಿಗೆ ಸಾಯಂದೀಪಾರಾಧನೆಯನ್ನು ಭಕ್ತಿಪೂರ್ವಕವಾಗಿ ಆಚರಿಸಿದರು. ತರುವಾಯ ಸಂಪ್ರದಾಯ ಪ್ರಕಾರವಾಗಿ ವಿದ್ಯಾಸಿಂಹಾಸನ ಮಂಡಿತರಾಗಿ ವಿದ್ದತಭೆಯನ್ನು ನೆರವೇರಿಸಿ ಜನತೆಗೆ ತಾತ್ವಿಕ - ಧಾರ್ಮಿಕ ಉಪದೇಶ ನೀಡಿ ಮಾಲಕಿ ಮಂಗಳಾರತಿಯು ಜರುಗಿದ ಮೇಲೆ ಮಂತ್ರಾಕ್ಷತೆಯನ್ನು ಬೀಜಾಕ್ಷರ ಮಹಾಮಂತ್ರಗಳಿಂದ ಅಭಿಮಂತ್ರಿಸಿ ಶಿರಸಾಧರಿಸಿ ಸರ್ವರಿಗೂ ಫಲಮಂತ್ರಾಕ್ಷತೆಯನ್ನು ಕರುಣಿಸಿದರು.
ಶ್ರಾವಣ ಬಹುಳ ಬಿದಿಗೆ ಬೆಳಗಿನ ಝಾವ, ಶ್ರೀಮಠದಲ್ಲಿ ಶ್ರೀರಾಯರು ವರಕುಮಾರರೊಡನೆ ಸ್ನಾನಾಕ-ಜಪ- ತಪಾದನುಷ್ಠಾನಗಳನ್ನು ಪೂರೈಸಿ ಶ್ರೀಮೂಲ ರಾಮದೇವರಿಗೆ ನಮಸ್ಕರಿಸಿ ಶ್ರೀವೆಂಕಟೇಶ್ವರನಿಗೆ ಮಂಗಳಾರತಿಯನ್ನು ಬೆಳಗಿ, ಶ್ರೀ ತುಳಸೀವಂದನ, ಗೋಪೂಜೆಗಳನ್ನು ನೆರವೇರಿಸಿ ಗೋಗ್ರಾಸವನ್ನು ನೀಡಿ ಆತ್ಮೀಯ ಜನ ಪರಿವೃತರಾಗಿ ಭದ್ರಾಸನದಲ್ಲಿ ಮಂಡಿಸಿ ಧ್ಯಾನಸಕ್ತರಾದರು. ಯೋಗೀಂದ್ರ ತೀರ್ಥರು, ವಿದ್ವಾಂಸರು-ವಿದ್ಯಾರ್ಥಿಗಳು, ಗುರುಗಳ ಪೂರ್ವಾಶ್ರಮ ಬಂಧುಗಳು. ವೆಂಕಣ್ಣಪಂತಪ್ರಮುಖರು ಶ್ರೀಯವರ ಮುಂಭಾಗದಲ್ಲಿ ಕುಳಿತರು. ದೇಶವಿದೇಶಗಳಿಂದ ಬಂದಿದ್ದ ಲೌಕಿಕ ವೈದಿಕ ಧರ್ಮಾಭಿಮಾನಿ ಸಜ್ಜನರು ಗುರುಗಳ ತೇಜಃ ಪುಂಜಮುಖ ಕಮಲವನ್ನೇ ನೆಟ್ಟ ದೃಷ್ಟಿಯಿಂದ ಅವಲೋಕಿಸುತ್ತ ಆ ದೈವೀತೇಜಸ್ಸಿಗೆ ಶಿರಬಾಗಿ ಕರಾಂಜಲಿಪುಟರಾಗಿ ಕುಳಿತಿದ್ದಾರೆ.
ಭಗವಾನ್ ದಿನಮಣಿಯು ನಿಜವಂಶದೀಪಕನಾದ ಸಿರಿಮೂಲರಾಮನ ಆರಾಧಕರಾದ ಯತಿರಾಜರು ಅಂದು ನೆರವೇರಿಸಲಿರುವ ಬೃಂದಾವನ ಪ್ರವೇಶ ಸಮಾರಂಭವನ್ನು ತಾನೂ ಕಂಡಾನಂದಿಸಲೋ ಎಂಬಂತೆ ಸಡಗರದಿಂದ ತನ್ನ ಹೊಂಗಿರಣಗಳಿಂದ ಪೂರ್ವದಿಗಂತವನ್ನು ಬೆಳಗಿಸುತ್ತಾ ಪೂರ್ವಾಚಲದಿಂದ ಮೇಲೆದ್ದು ಬಂದು ಜಗತ್ತನ್ನು ತನ್ನ ತರುಣಾರುಣಕಾಂತಿ ಪೂಜೆಗಳಿಂದ ಬೆಳಗಹತ್ತಿದನು.
ಶ್ರೀಪಾದಪುತ್ರರೇ ಮೊದಲಾದ ಗುರುರವರ ಆತ್ಮೀಯ ಬಂಧುಗಳನ್ನು ಪಂಡಿತರನ್ನು ಮುಂದಿಟ್ಟುಕೊಂಡು ಮಾನವದನನಾದ ದಿವಾನ್ ವೆಂಕಣ್ಣ ಪಂತನು ಕಣ್ಣಿನಿಂದ ಹೊರಹೊಮ್ಮುತ್ತಿರುವ ದುಃಖಾಶ್ರುಗಳನ್ನು ಬಹು ಕಷ್ಟದಿಂದ ತಡೆ ಹಿಡಿದು ಶ್ರೀಗುರುರಾಜರಿಗೆ ನಮಿಸಿ ಗದ್ದದಕಂಠದಿಂದ “ಮಹಾಸ್ವಾಮಿ, ಅಪ್ಪಣೆಯಂತೆ ಸಕಲವ್ಯವಸ್ಥೆಯಾಗಿದೆ. ತಮ್ಮ ಚರಮ ವಿಜಯಯಾತ್ರೆಗಾಗಿ ಸಕಲವೂ ಸಿದ್ಧವಾಗಿದೆ. ಚಿತ್ತೆಸಬೇಕು. ಗುರುದೇವ” ಎಂದು ವಿಜ್ಞಾಪಿಸಿದನು. ಗುರು ವಿಯೋಗದುಃಖವನ್ನು ಹೇಗೋ ತಡೆಹಿಡಿದು ಆಶ್ರುಸಿಕ್ತನಯನರಾದ ಯೋಗಿಂದ್ರ ತೀರ್ಥ ಗುರುಗಳು ಪೂಜ್ಯಗುರುಪಾದರಿಗೆ ಹಸ್ತಲಾಘವ ನೀಡುತ್ತಿರಲು ಯತಿಸಾರ್ವಭೌಮರು ಭದ್ರಾಸನದಿಂದ ಮೇಲೆದ್ದು ಶ್ರೀರಾಮಭದ್ರನನ್ನು ಮುಂದುಮಾಡಿಕೊಂಡು ಶ್ರೀವೆಂಕಟೇಶ್ವರನ ದೇವಾಲಯದ ಪ್ರಾಂಗಣಕ್ಕೆ ದಯಮಾಡಿಸಿದರು.
ಸಿರಿವೆಂಕಟೇಶನ ಗುಡಿಯ ಮುಂಭಾಗದಲ್ಲಿ ಶ್ರೀಮಠದ “ಮಾಹೇಂದ್ರ” ಎಂಬ ಗಜರಾಜನು ಅಲಂಕೃತ ಸುವರ್ಣ ಅಂಬಾರಿಯನ್ನು ಬೆನ್ನಮೇಲೆ ಹೊತ್ತು ನಿಂತಿದ್ದಾನೆ. ಗುರುಗಳು ಬಂದಕೂಡಲೇ ಗಜೇಂದ್ರ ತನ್ನ ಸೊಂಡಲನ್ನು ಮೇಲೆತ್ತಿ ಘೀಳಿಟ್ಟು ಗುರುಗಳಿಗೆ ಅಭಿನಂದಿಸಿದನು! ಶ್ರೀರಾಯರು ಶ್ರೀಮೂಲರಾಮದೇವರ ಪೆಟ್ಟಿಗೆ, ದಂಡಕಮಂಡಲುಗಳೊಡನೆ ಅಂಬಾರಿಯನ್ನೇರಿ ಸುವರ್ಣಪೀಠದಲ್ಲಿ ಮಂಡಿಸಿದರು. ಆಗ ಸಹಸ್ರಾರು ಜನರು ರಾಜಧಿರಾಜ, ಪರಮಹಂಸಕುಲಶೇಖರ ಶ್ರೀಮದಾನಂದತೀರ್ಥಭಗವತ್ಪಾದಾಚಾರ ಪ್ರತಿಷ್ಠಾಪಿತ ದೈತವೇದಾಂತ ಸಾಮ್ರಾಜ್ಯ ಚಕ್ರೇಶ್ವರ, ಸಕಲಯತಿನುತಪಾದಪಂಕಜ, ಶ್ರೀಮದ್ರಾಘವೇಂದ್ರಗುರುಸಾರ್ವಭೌಮ ಜಯ ಜಯ” ಎಂದು ಹರ್ಷಧ್ವನಿಮಾಡಿದರು. ನಾಲ್ಕಾರುಜನ ಸುಮಂಗಲೆಯರು ಮುಂದೆ ಬಂದು ಗುರುಗಳಿಗೆ ಆರತಿಬೆಳಗಿ ನಮಿಸಿ ತೆರಳಿದರು. ಆನಂತರ ಗಜರಾಜ ಜಗದ್ಗುರುಗಳನ್ನು ಹೊತ್ತು ಧೀರಗಂಭೀರ ನಡೆಯಿಂದ ರಾಜ ಠೀವಿಯಿಂದ ಹೊರಟ, ಅದೊಂದು ಅಪೂರ್ವ-ಅದ್ಭುತ-ನಯನಮನೋಹರ ಮೆರವಣಿಗೆಯಾಗಿತ್ತು!
ಆ ಭವ್ಯ ಮೆರವಣಿಗೆಯು ಪೂರ್ವಾಭಿಮುಖವಾಗಿ ಹೊರಟು ಊರಿನ ದಿಡಿಯ ಬಾಗಿಲನ್ನು ದಾಟಿ ಮುಂದುವರೆಯಿತು. ಮುಂಭಾಗದಲ್ಲಿ ಚಟಪಟನೆ ಹಾರಾಡುತ್ತಿರುವ ಪ್ರಣವಧ್ವಜವನ್ನು ಹೊತ್ತು ಆನೆ, ಅದರ ಹಿಂದೆ ಎರಡು ನಗಾರಿಗಳು ಧ್ವನಿಸುತ್ತಿರಲು ಹೊರಟ ಗಜರಾಜ, ಅದರ ಹಿಂದೆ ನಿಶಾನೆ ಒಂಟೆ, ಅದರ ಹಿಂದೆ ಹೌದಾದಲ್ಲಿ ನವಪತ್ತುವಾದ್ಯಗಾರರನ್ನು ಹೊತ್ತು ಎರಡು ಹೌದಾ ಆನೆಗಳು, ಡಂಕಾವಾದಗಳು ಧ್ವನಿಸುತ್ತಿರಲು ಹೊರಟ ಎರಡು ಕರಿಯ ಕುದುರೆಗಳು. ಅದರ ಹಿಂದೆ ಸುವರ್ಣಪಾಲಕಿ, ಆಲಂಕೃತ ಸಾರಂಗ, ಜಿಂಕೆಗಳು, ವಿವಿಧ ವರ್ಣದ ವಸ್ತ್ರಗಳಿಂದ ಶೋಭಿಸುವ ಹತ್ತಾರು ಗೋವುಗಳು, ಆನಂತರ ಹನ್ನೆರಡು ಭಲ್ಲೆ ಹಿಡಿದವರಿಂದ ಶೋಭಿಸಿದ ಶ್ವೇತಾಶ್ವಗಳು, ಆ ತರುವಾಯ ಈ ಮಹೋತ್ಸವಕ್ಕಾಗಿಯೇ ಆದವಾನಿಯಿಂದ ಬಂದಿದ್ದ ಸಿದ್ಧಿಮಸೂದಖಾನನ ಬಿರುದಾವಳಿಗಳು ಮತ್ತು ಸಮವಸ್ತ್ರಧರಿಸಿದ ಖಾಸಾಸೈನಿಕರು, ತಳತಳನೆ ಹೊಳೆಯುವ ಕತ್ತಿ. ಚಂದ್ರಾಯುಧಗಳನ್ನು ಹಿಡಿದು ಸಾಗಿದ್ದಾರೆ. ಅವರಹಿಂಭಾಗದಲ್ಲಿ ನಡುಚಪ್ಪರ, ಮಕರತೋರಣ, ಧ್ವಜಪತಾಕೆಗಳು, ಶ್ರೀಮಠದ ಬಿಚ್ಚು ಕತ್ತಿ ಪಹರೆಯವರು, ಅವರ ಹಿಂಭಾಗದಲ್ಲಿ ಸುಸ್ವರವಾಗಿ ನಾದಸ್ವರಮಾಡುತ್ತಾ ಹೊರಟ ಓಲಗದವರು, ಅವರ ಹಿಂದೆ ನಾಲ್ಕು ಭೂಛತ್ರ ಕೊಡೆಗಳು, ಎರಡು ಶ್ವೇತಛತ್ರ, ಅಪ್ತಾಗಿರಿಗಳು, ಹಸಿರು, ಕೆಂಪು ನೀಲಿವರ್ಣದ ಛತ್ರಗಳನ್ನೂ, ಶಂಖ, ಚಕ್ರ, ಗದಾ, ಪದ್ಮ, ನಾರಾಯಣಾದಿ ವೈಷ್ಣವ ಚಿನ್ನಾಂಕಿತ ಅಪ್ತಾಗಿರಿಗಳನ್ನು ಹಿಡಿದವರು ಜಯಕಾರ ಮಾಡುತ್ತಾ ಬರುತ್ತಿದ್ದಾರೆ. ಶ್ರೀಮಠದ ಬಿರುದಾವಳಿಗಳನ್ನು ಹೊತ್ತವರು. ಅವರ ತರುವಾಯ ವಿವಿಧದೇಶೀಯ ವಾದ್ಯಗಳನ್ನು ನುಡಿಸುತ್ತಾ ಹೊರಟ ಕಲೆಗಾರರು, ಕಹಳೆ, ಡಕ್ಕಾ, ರಾಹುಕೇತು ವಾದ್ಯ, ತಾಳಸ್ತುತಿಪಾಠಕರೇ ಮುಂತಾದವರು ಗಂಭೀರಧ್ವನಿಯಿಂದ ಘೋಷ ಮಾಡುತ್ತಾ ಹೊರಟಿದ್ದಾರೆ. ಆ ಜನರ ಹಿಂಭಾಗದಲ್ಲಿ ಸುಸ್ವರ ವೇದಪಾರಾಯಣ ಮಾಡುತ್ತಿರುವ ಪಂಡಿತರು, ವಿದ್ಯಾರ್ಥಿಗಳು, ಅವರ ಹಿಂದೆ ನಾಲ್ಕು ಜನ ರಜತ ಸ್ವರ್ಣದಂಡಧಾರಿಗಳು, ಇಬ್ಬರು ಸುವರ್ಣ-ರಜತ ಛತ್ರಧಾರಿಗಳು, ಅದರ ಹಿಂದೆ ರಜತಪಾಲಕಿ, ಮೇನೆಗಳನ್ನು ಹೊತ್ತವರು, ಸುವರ್ಣರಜತ ಹಿಡಿಕೆಯ ಚೌರಿಗಳು, ಚಾಮರಗಳನ್ನು ಬೀಸುತ್ತಾ ಬರುತ್ತಿರುವ ಶ್ರೀಮಠದ ಪರಿವಾರದವರು, ಅಂಬಾರಿಯ ಸನಿಹದಲ್ಲಿ ಶ್ರೀಯೋಗೀಂದ್ರತೀರ್ಥರು ಆತ್ಮೀಯ ಬಂಧುಗಳೊಡನೆ ದಿವಾನ್ ವೆಂಕಣ್ಣಪಂತನಿಂದೊಡಗೂಡಿ ಗುರುಗಳಿಗೆ ಚಾಮರವನ್ನು ಬೀಸುತ್ತಾ ಬರುತ್ತಿದ್ದಾರೆ. ಅಂಬಾರಿಯ ಹಿಂಭಾಗದಲ್ಲಿ ಶ್ರೀಮಠದ ಶಿಷ್ಯರು ಭಕ್ತರು, ಪರಿವಾರದವರು ಧರ್ಮಾಭಿಮಾನಿಗಳಾದ ಸ್ತ್ರೀಪುರುಷರು ಸಹಸ್ರಾರುಜಜನ ಭಕ್ತಿ ನವಾಂಗರಾಗಿ ಮೆರವಣಿಗೆಯಲ್ಲಿ ಬರುತ್ತಿದ್ದಾರೆ. ಶ್ರೀಗುರುಸಾರ್ವಭೌಮರನ್ನು ಹೊತ್ತ ಮಾಹೇಂದ್ರಿಯು ಗಂಭೀರನಡೆಯಿಂದ ಮುಂದುವರೆದಂತೆಲ್ಲಾದಾರಿಯ ಇಕ್ಕೆಲಗಳಲ್ಲಿ ಭಕ್ತಿಭರದಿಂದ ಕರಮುಗಿದು ನಿಂತ ಚಾತುರ್ವಣ್ಯದ ಸ್ತ್ರೀಪುರುಷ ಭಕ್ತಾನೀಕವು ಗುರುಗಳ ಜಯಘೋಷಮಾಡುತ್ತಾ “ಈ ಮಹಾನುಭಾವರನ್ನು ನಾವು ಇನ್ನು ಬಹುಕಾಲ ಸೇವಿಸಿ ಆಶೀರ್ವಾದ ಪಡೆಯುವ ಭಾಗ್ಯ ನಮಗಿಲ್ಲವಾಗುವುದಲ್ಲಾ!” ಎಂದು ಕಣ್ಣೀರುಸುರಿಸುತ್ತಿರುವ ಆ ಮನಕರಗಿಸುವ ದೃಶ್ಯ ಎಂಥ ಕಠಿಣಾತ್ಮನ ಮನಸ್ಸನ್ನೂ ದ್ರವಿಸುವಂತೆ ಮಾಡುತ್ತಿರುವುದೆಂದ ಮೇಲೆ ಉಳಿದವರ ಪಾಡೇನು?
ಗುರುಸಾರ್ವಭೌಮರ ವಿಜಯಯಾತ್ರಾ ಮೆರವಣಿಗೆಯು ದಕ್ಷಿಣಕ್ಕೆ ತಿರುಗಿ ಮುಂದುವರೆದು, ಅಲ್ಲಿಂದ ಪಶ್ಚಿಮಾಭಿಮುಖವಾಗಿ ಹೊರಟು ತುಂಗಾನದಿಯ ಸಮೀಪದ ಪವಿತ್ರ ತಟದ ಕಡೆಗೆ ಮುಂದುವರೆಯಿತು. ಅಲ್ಲಿನ ದೃಶ್ಯ ಮನೋಹರವಾಗಿದ್ದಿತು.
ಶ್ರೀಹರಿಪಾದೋದ್ಭವಳಾದ ಜಗನ್ಮಂಗಳೆಯಾದ ಗಂಗೆಯಂತೆ ಪವಿತ್ರಾತ್ಮಳಾಗಿ ಜಗತ್ತನ್ನು ತನ್ನ ಸ್ಪರ್ಶ ಮಾತ್ರದಿಂದ ಪಾವನಗೊಳಿಸುವ ಶ್ರೀವರಾಹನಂದಿನಿಯಾದ ತುಂಗಭದ್ರೆಯು ತನ್ನ ಉತ್ತುಂಗಮಂಗಳತರಂಗಗಳಿಂದ ಮಂಜುಳಧ್ವನಿಗೈಯುತ್ತಾ ಲೋಕಗುರು ಶ್ರೀರಾಘವೇಂದ್ರಯತೀಂದ್ರರ ಅಭೂತಪೂರ್ವ ಬೃಂದಾವನಪ್ರವೇಶ ಮಹೋತ್ಸವವನ್ನು ಕಂಡಾನಂದಿಸಬೇಕೆಂಬ ಮನೀಶೆಯಿಂದ ಸಡಗರ ಸಂಭ್ರಮೋತ್ಸಾಹಗಳಿಂದ ಓಡೋಡಿ ಬರುತ್ತಿರುವಳೋ ಎಂಬಂತೆ ಕಲಕಲರವಗೈಯುತ್ತಾ ಭರದಿಂದ ಸಳಸಳನೆ ಹರಿಯುತ್ತಿದ್ದಾಳೆ! ಲೋಕವಿಲೋಕನಾದ ಕೆಂಗಿರಣನ ಹೊಂಗಿರಣಗಳು ಕೋಲಬಾಲೆಯ ಕಮನೀಯತರಂಗಗಳಮೇಲೆ ಪ್ರತಿಫಲಿಸಿ ವಿವಿಧವರ್ಣಗಳಿಂದ ಸರ್ವರಚಿತ್ರವನ್ನೂ ಆಕರ್ಷಿಸುತ್ತಿವೆ. ಅದೊಂದು ಮಂಗಳಕರ ನೋಟವೆಂದರೆ ಅಚ್ಚರಿಯಲ್ಲ. ತುಂಗಭದ್ರೆಯ ಮಂಗಳತರಂಗ ಘಟ್ಟ, ನದಿಯ ಮನಮೋಹಕವಾಗಿರುವ ತಟದಲ್ಲಿ ವಿಸ್ತಾರವಾಗಿ ಹರಡಿರುವ ಶ್ಯಾಮಲ ಶಿಲಾಫಲಕದಿಂದ ದೇದೀಪ್ಯಮಾನವಾದ ಆ ಪ್ರದೇಶದಲ್ಲಿ ಎಲ್ಲಿ ನೋಡಿದರಲ್ಲಿ ಜನಸಮ್ಮರ್ದ! ಶ್ರೀಗುರುರಾಜರ ಬೃಂದಾವನ ಪ್ರವೇಶ ದಿದೃಕ್ಷುಗಳಾಗಿ ದೇಶದ ಎಲ್ಲ ಭಾಗಗಳಿಂದ ಆಗಮಿಸಿರುವ ಪಂಡಿತಪಾಮರರು. ಕವಿ-ಸಾಹಿತಿ-ಸಂಗೀತ-ಕಲೆಗಾರರು. ಹರಿದಾಸರು, ಧರ್ಮಾಭಿಮಾನಿಗಳಾದ ಸಹಸ್ರಾಧಿಕ ಶಿಷ್ಯ-ಭಕ್ತ ಸಂದೋಹದಿಂದ ಆ ಪರಮಪ್ರದೇಶವೆಲ್ಲಾ ಕೋಲಾಹಲಪೂರ್ಣ- ವಾಗಿದೆ! ಗುರುವರರ ದರ್ಶನ, ಸೇವನ ಉಪದೇಶಗಳಿಂದ ಕೃತಾರ್ಥರಾಗಬಯಸಿ ಬಂದಿರುವ ಆ ಜನಸಾಗರದ ಸಂಭ್ರಮ, ಸಡಗರ, ವಿವಿಧಾಕಾರಗಳಿಂದ ಅವರ ಮುಖದಲ್ಲಿ ಒಡಮೂಡುತ್ತಿರುವ ಕುತೂಹಲ ಭಾವನೆಗಳು ಕಂಡುಬರುತ್ತಿವೆ. ಇದರಂತೆ ದೈಹಿಕಮಾನಸಿಕಾದಿ ವಿವಿಧ ರೋಗರುಜಿನಗಳಿಂದ ಬಳಲಿ ಬೆಂಡಾಗಿ ನೊಂದಜನರೂ ಸಹ ಗುರುಕೃಪಾದೃಷ್ಟಿಗೆ ಪಾತ್ರರಾಗಿ ತಮ್ಮೆಲ್ಲ ಕಷ್ಟ-ದುಃಖ ದುಮ್ಮಾನಗಳಿಂದ ಪಾರಾಗಿ ಉದ್ಧತರಾಗಬಯಸಿ ಅಲ್ಲಿ ಬಂದು ನೆರೆದಿದ್ದಾರೆ. ಆ ಒಂದು ಅಭೂತಪೂರ್ವದೃಶ್ಯ-ಸಂಭ್ರಮವನ್ನು ನೋಡಿ ಆನಂದಿಸಬೇಕೇ ವಿನಃ ಅದನ್ನು ನಮ್ಮ ಬರಡುಮಾತುಗಳಿಂದ ಬಣ್ಣಿಸಲು ನಾವೆಂತು ಸಮರ್ಥರಾದೇವು ?
ಶ್ರೀಶಾಲಿವಾಹನ ಶಕೆ ೧೫೯೩ ನೆಯ ಶ್ರೀವಿರೋಧಿಕೃನ್ನಾಮಸಂವತ್ಸರದ ಶ್ರಾವಣ ಬಹುಳ ಬಿದಿಗೆ ಶುಕ್ರವಾರ (ಕ್ರಿಸ್ತಶಕೆ ೧೬೭೧ ನೆಯ ಆಗಸ್ಟ್ ಮಾದೆ). ತುಂಗಭದ್ರಾನದಿಯ ತಟದ ಸನಿಹದ ವಿಸ್ತಾರವಾದ ಬಯಲುಪ್ರದೇಶದಲ್ಲಿ ಶ್ರೀಗುರುಸಾರ್ವಭೌಮರ ಆದೇಶದಂತೆ ಶ್ರೀಪ್ರಹ್ಲಾದಾದ್ದರಪೂತ ಯಜ್ಞವೇದಿಕೆಯ ಮೇಲೆ ನಿರ್ಮಿತವಾಗಿರುವ ದ್ವಾದಶಸ್ತಂಭ- ಗಳಿಂದ ಅಲಂಕೃತವಾದ ಭವಶಿಲಾ ಮಂಟಪವು (ಗರ್ಭಾಲಯ) ದ್ವಾದಶಾಕ್ಷರ ಮಂತ್ರಪ್ರತಿಪಾದನಾದ ಶ್ರೀವಾಸುದೇವನ ವಿಜಯಸ್ತಂಭದಂತೆ ರಾರಾಜಿಸುತ್ತಿದೆ! ಆ ಸುಮನೋಹರ ಗರ್ಭಾಲಯದ ಸುತ್ತಲು ಸಹ ಸಹಸ್ರಾರು ಜನರು ನಿಂತು ಗುರುವರರ ಬೃಂದಾವನ ಪ್ರವೇಶವನ್ನು ಕಂಡು ಕೃತಾರ್ಥರಾಗಲು ಅನುಕೂಲವಾಗುವಂತೆ ಅತ್ಯಂತ ವಿಸ್ತಾರವಾದ ಚಪ್ಪರವು ತಳಿರುತೋರಣ, ಬಾಳೆಕಂಬ, ಮಾವಿನ ತೋರಣ, ಫಲ-ಪುಷ್ಪ, ವಿವಿಧ ವರ್ಣರಂಜಿತ ಧ್ವಜಪತಾಕೆಗಳಿಂದ ಅಲಂಕೃತವಾಗಿ ಸರ್ವರನ್ನೂ ಆಕರ್ಷಿಸುತ್ತಾ ಪರಿಶೋಭಿಸುತ್ತಿದೆ! ಗರ್ಭಾಲಯಕ್ಕೆ ಸ್ವಲ್ಪ ದೂರದಲ್ಲಿ ಬಲಭಾಗದಲ್ಲಿ ಉತ್ತಾರಾಭಿಮುಖವಾಗಿ ಭವವೇದಿಕೆಯೊಂದು ನಿರ್ಮಿತವಾಗಿದ್ದು, ಅದರ ಮಧ್ಯಭಾಗದಲ್ಲಿ ಶ್ರೀಮದಾಚಾರರ ವೇದಾಂತಸಾಮ್ರಾಜ್ಯ ದಿಗ್ವಿಜಯ ವಿದ್ಯಾಸಿಂಹಾಸನವು ಜಗಜಗಿಸುವ ಶ್ವೇತ ಛತ್ರದಿಂದ ಶೋಭಿತವಾಗಿ ವಿರಾಜಿಸುತ್ತಿದೆ.
ಗರ್ಭಾಲಯದ ಮುಂಭಾಗದಲ್ಲಿ ಸ್ವಲ್ಪದೂರದಲ್ಲಿ ಶಿಲಾಮಂಟಪವೊಂದು ಶೋಭಿಸುತ್ತಿದ್ದು, ಅಲ್ಲಿ ಶ್ರೀಪ್ರಾಣದೇವರ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು ಪ್ರತಿಷ್ಠಾಪನೆಗೆ ಸಕಲವ್ಯವಸ್ಥೆಗಳನ್ನೂ ಮಾಡಿ ಪುರೋಹಿತಾದಿಗಳು ಮುಂದಿನ ಕಾರ ನೆರವೇರಿಸಲು ಗುರುಗಳ ಅಪ್ಪಣೆಗಾಗಿ ಕಾದುನಿಂತಿದ್ದಾರೆ.
ಶ್ರೀರಾಯರ ವೈಭವದ ಮೆರವಣಿಗೆಯು ಆ ಮಹಾಚಪ್ಪರದ ಬಳಿಗೆ ಬಿಜಯಂಗೈದಾಗ ಹತ್ತಾರು ಸಹಸ್ರ ಜನರು ಏಕಕಂಠದಿಂದ ಶ್ರೀಗುರುವರರ ಜಯ ಘೋಷಮಾಡಲಾರಂಭಿಸಿದರು ಶ್ರೀರಾಯರು ನಗೆಮೊಗದಿಂದ ಅಂಬಾರಿಯಿಂದಿಳಿದು ನಿಂತರು. ಗುರುಗಳ ಸೋದರಳಿಯಂದಿರಾದ ಪಂಡಿತ ನಾರಾಯಣಾಚಾರ್ಯರು ಶ್ರೀಮೂಲರಾಮದೇವರ ಪೆಟ್ಟಿಗೆಯನ್ನು ಶಿರದಲ್ಲಿ ಹೊತ್ತು ಮುಂದೆ ಹೊರಟರು. ಶ್ರೀರಾಘವೇಂದ್ರಯತಿಚಂದ್ರಮರು ನಸುನಗೆಯ ಬೆಳದಿಂಗಳನ್ನು ಹೊರಸೂಸಿ ಜನತೆಯ ಹೃದಯಕುಮುದಗಳನ್ನು ಅರಳಿಸಿ ಅಪರಿಮಿತಾನಂದ ನೀಡುತ್ತಾ ಚಪ್ಪರವನ್ನು ಪ್ರವೇಶಿಸಿ ವೇದಿಕೆಯನ್ನೇರಿದರು. ಶ್ರೀಯೋಗೀಂದ್ರತೀರ್ಥರು, ಶ್ರೀಪಾದ ಪುತ್ರರು, ಪೂರ್ವಾಶ್ರಮಬಂಧುಗಳು, ಆತ್ಮೀಯ ಪಂಡಿತಶಿಷ್ಯರು, ದಿವಾನ್ ವೆಂಕಣ್ಣ ಪಂತ ಮುಂತಾದ ಪ್ರಮುಖರು ಗುರುಗಳನ್ನು ಹಿಂಬಾಲಿಸಿ ವೇದಿಕೆಯನ್ನೇರಿದರು ಶ್ರೀಯವರ ಬಲಪಾರ್ಶ್ವದಲ್ಲಿ ಹಾಕಲಾಗಿದ್ದ ಸುವರ್ಣಪೀಠದಲ್ಲಿ ದೇವರಪೆಟ್ಟಿಗೆಯನ್ನು ಮಂಡಿಸಿದ ಮೇಲೆ ಶ್ರೀರಾಯರು ವಿದ್ಯಾಸಿಂಹಾಸವನ್ನೇರಿ ಕುಳಿತರು. ಶ್ರೀ ಗುರುರಾಜರು ಸುತ್ತಮುತ್ತ ಭಕ್ತಿಭಾವದಿಂದ ನಿಂತಿರುವ ಧಾರ್ಮಿಕ ಜನತೆಯ ಮೇಲೆ ಒಮ್ಮೆ ತಮ್ಮ ಕರುಣಾದ್ರ್ರ ದೃಷ್ಟಿಯನ್ನು ಪಸರಿಸಿ, ಮಂದಹಾಸದಿಂದ ಅಭಯಪ್ರದಾನನಮಾಡಿದರು. ಆಶ್ಚರ್ಯ ಆಗ ಅಲ್ಲಿ ಅನೇಕ ಅದ್ಭುತ ಘಟನೆಗಳು ಜರುಗಿ ಸಕಲ ಜನರೂ ವಿಸ್ಮಯಾನಂದತುಂದಿಲರಾಗಿ ಗುರುಗಳ ಮಹಿಮಾತಿಶಯವನ್ನು ಕೊಂಡಾಡುತ್ತಾ ಜಯಜಯಕಾರಮಾಡಿದರು.
ಸಾವಿರಾರು ಜನರ ಮಧ್ಯೆ ನಾಲ್ಕು ಜನರ ಸಹಾಯದಿಂದ ರಾಯರ ದರ್ಶನಕ್ಕಾಗಿ ಬಂದುಕುಳಿತಿದ್ದ ಹೆಳವನೊಬ್ಬನು ರಾಯರ ಕೃಪಾದೃಷ್ಟಿಯ ತನ್ನ ಮೇಲೆ ಬಿದ್ದೊಡನೆಯೇ ಆವೇಶ ಬಂದವನಂತೆ ದಿಗ್ಗನೆ ಮೇಲೆದ್ದು ಕುಣಿದಾಡುತ್ತಾ ಅಡ್ಡಬಂದ ಜನರನ್ನು ಅತ್ತಿತ್ತ ಸರಿಸುತ್ತಾ ಓಡಿಬಂದು ಗುರುರಾಜರಿಗೆ ಅಡ್ಡ ಬಿದ್ದು ಮಹಾತ್ಮಾ, ಗುರುದೇವ, ನಿಮ್ಮ ದಯದಿಂದ ನಡೆದಾದುವ ಸಾಮರ್ಥ್ಯ ಪಡೆದು ಉದ್ಘತನಾದ ನಿಮಗೆ ನಮೋನಮ” ಎಂದು ಕಣ್ಣೀರುಸುರಿಸುತ್ತಾ ಗುರುಗಳನ್ನು ಸ್ತುತಿಸ ಹತ್ತಿದನು! ಮೂರು-ನಾಲ್ಕು ಜನರು ಎತ್ತಿತಂದುಕೂಡಿಸಿದ್ದ ಆ ಗುರುಭಕ್ತನು ಎಲ್ಲರಂತೆ ನಡೆದಾಡಲು ಸಮರ್ಥನಾಗುವಂತೆ ಅವನ ಹೆಳವತನವನ್ನು ಕಳೆದ ಶ್ರೀರಾಯರ ಕರುಣೆಯನ್ನು ಜನರು ಕೊಂಡಾಡುತ್ತಿರಲು, ಮತ್ತೊಂದು ಮೂಲೆಯಲ್ಲಿ ದುಃಖ ತಪ್ತನಾಗಿ ಕುಳಿತಿದ್ದ ಮೂಕನಾದ ಯುವಕನೊಬ್ಬನು ರಾಘವೇಂದ್ರ! ಭಕ್ತವತ್ಸಲ, ದಯಾಘನ! ನಿಮಗೆ ನಮಸ್ಕಾರ” ಎನ್ನುತ್ತಾ ಗುರುಗಳನ್ನು ಪೊಗಳುತ್ತಾ ಓಡಿಬಂದು ಗುರುರಾಜರ ಚರಣಕಮಲಗಳಿಗೆರಗಿದನು! ಅಚ್ಚರಿಯ ಮೇಲಚ್ಚರಿ! ಅತಿದೂರದಲ್ಲಿ ಕುಳಿತಿದ್ದ ಹುಟ್ಟು ಕುರುಡನೊಬ್ಬನು ಆನಂದದಿಂದ ಹುಚ್ಚೆದ್ದು ಕುಣಿಯುತ್ತಾ “ಆಹಾ ಗುರುಸಾರ್ವಭೌಮ ಕರುಣಾಸಾಗರ ತಮ್ಮ ಮಹಿಮಾತಿಶಯದಿಂದ ಪ್ರಭಾವಿತನಾಗಿ ತಮ್ಮ ದರ್ಶನ ಪಡೆವ ಭಾಗ್ಯಕೊಡಿರೆಂದು ನಿಮ್ಮನ್ನು ಪ್ರಾರ್ಥಿಸಲು ಬಂದಿದ್ದ ಈ ಪಾಮರನಾದ ಅಂಧನಲ್ಲಿ ಅಮಿತಾನುಕಂಪ ತೋರಿ ಅನುಗ್ರಹಿಸಿದಿರಲ್ಲವೇ ಗುರುವೇ ಮಂಗಳಮೂರ್ತಿ ತಮ್ಮ ಭವ್ಯ ಸ್ವರೂಪದರ್ಶನ ಮಾಡಲೆನಗೆ ದೃಷ್ಟಿ ಕರುಣಿಸಿದ ನಿಮಗೆ ಸರಿಸಾಟಿಯಾದ ದಯಾಳುಗಳು ಬೇರಾರಿದ್ದಾರೆ. ಮಹಾತ್ಮ ಇಕೋ ನನ್ನ ಭಕ್ತಿನಮನಗಳನ್ನು ಸ್ವೀಕರಿಸಿ ಆಶೀರ್ವದಿಸಿರಿ!' ಎಂದು ಗುರುಗಳ ಬಳಿಸಾರಿ ಆನಂದದಿಂದ ಸಾಷ್ಟಾಂಗವೆರಗಿದನು! ಈ ಪರಮಾದ್ಭುತ ಘಟನೆಗಳನ್ನು ಕಂಡು ಅದೇ ವೇಳೆಗೆ ಓರ್ವ ಸುಮಂಗಲಿಯು ಪತಿಯೊಡನೆ ಎಂಟು ವರ್ಷದ ಕುಷ್ಟ ರೋಗಪೀಡಿತನಾದ ಪುತ್ರನನ್ನು ಗುರುಗಳ ವೇದಿಕೆಯತ್ತ ಕರೆತಂದು “ತಂದೆ, ದೀನದಲಿತ ಜನೋದ್ದಾರಕ, ಭಕ್ತಬಾಂಧವ, ಕುಷ್ಟರೋಗದಿಂದ ಬಳಲುತ್ತಿರುವ ನನ್ನೀ ಕುವರನಲ್ಲಿ ಕರುಣೆತೋರು ಮಹಾನುಭಾವ” ಎಂದು ದುಃಖಾರ್ತಳಾಗಿ ಪ್ರಾರ್ಥಿಸಿದಳು. ಆ ಬಾಲಕನನ್ನು ಕಂಡ ಗುರುಗಳ ಹೃದಯದಲ್ಲಿ ಕಾರುಣ್ಯಝರಿ ಉಕ್ಕೇರಿಹರಿಯಿತು! ಗುರುಗಳು ಕಾರುಣ್ಯಪೂರ್ಣರಾಗಿ ಆ ಬಾಲಕನನ್ನು ಈಕ್ಷಿಸಿ “ಶ್ರೀಹರಿ, ಮೂಲರಾಮ! ಈ ಬಾಲಕನಲ್ಲಿ ಅನುಗ್ರಹಿಸುವ ದೇವ” ಎಂದು ಪ್ರಾರ್ಥಿಸುತ್ತಿರುವಂತೆಯೇ ಕ್ಷಣಾರ್ಧದಲ್ಲಿ, ಆ ಬಾಲಕನ ಕುಷ್ಟರೋಗ ನಿವಾರಣೆಯಾಗಿ ಸರ್ವಾಂಗಸುಂದರನಾಗಿ ಕಂಗೊಳಿಸಿದನು ಆ ಮುದ್ದು ಬಾಲಕ.
ಹೀಗೆ ಒಂದಾದ ಮೇಲೊಂದರಂತೆ ಜರುಗಿದ ಆ ಅದ್ಭುತ ಘಟನೆಗಳು ಮುಂದೆ ಶ್ರೀಗುರುಗಳ ಬೃಂದಾವನ ಸನ್ನಿಧಿಯಲ್ಲಿ ಶತಶತಮಾನಗಳವರೆಗೆ ಸತತವಾಗಿ ಜರುಗಲಿರುವ ಅಸದೃಶಪವಾಡ, ಮಹಿಮೆಗಳ ಭವಿಷ್ಯಸೂಚಕವೆಂದು ಸಮಸ್ತಭಕ್ತ ಜನರು ಹರ್ಷಪುಳಕಿತಗಾತ್ರರಾಗಿ ಗುರುಗಳ ಮಹಿಮಾತಿಶಯವನ್ನು ಕೊಂಡಾಡಹತ್ತಿದರು. ಶ್ರೀಗುರುಸಾರ್ವಭೌಮರು ಒಂದೇ ಒಂದು ಕ್ಷಣದಲ್ಲಿ ತಮ್ಮ ಕೃಪಾದೃಷ್ಟಿವೀಕ್ಷಣಮಾತ್ರದಿಂದ ವಿವಿಧರೋಗಗಳಿಂದ ನೊಂದು ಬಳಲುತ್ತಿದ್ದ ದೀನಜನರನ್ನು ಅನುಗ್ರಹಿಸಿದರು. ಆ ಮಹಾಮಹಿಮರ ಭಕ್ತವಾತ್ಸಲ್ಯವನ್ನು ಅದಾರುತಾನೆ ವರ್ಣಿಸಲು ಶಕ್ತರಾದಾರು ?
ಗುರುರಾಜರ ಈ ಭಕ್ತಾನುಗ್ರಹರೂಪ ಘಟನೆಗಳನ್ನು ಸುಜನರು ಭಕ್ತಿಪರವಶರಾಗಿ ಮೆಲುಕುಹಾಕುತ್ತಾ ಮೈಮರೆತಿರಲು ಗುರುರಾಜರು ಶಿಷಮಂಡಲಿಯೊಡನೆ ತುಂಗಭದ್ರಾನದಿಗೆ ತೆರಳಿ ಪ್ರಿಯಶಿಷ್ಯರೊಡನೆ ಸ್ನಾನಮಾಡಿ ಭಕ್ತಜನರಿಗೆ ದಂಡೋದಕವಿತ್ತು ಕಾಷಾಯಾಂಬರಧರಿಸಿ ಬಂದು ವೇದಿಕೆಯ ಮೇಲೆ ಕುಳಿತು ನಾಮಮುದ್ರೆಗಳನ್ನು ಧರಿಸಿ, ಆತ್ಮಕ, ಜಪತಪಾದಿಗಳನ್ನು ನೆರವೇರಿಸಿ ಸ್ವಲ್ಪಕಾಲ ಧ್ಯಾನಮಗ್ನರಾಗಿದ್ದು ಅನಂತರ ಬಹಿರ್ಮುಖರಾಗಿ ತರುವಾಯ ಆನಂದಬಾಷ್ಪಸಿಕ್ತನಯನರಾಗಿ ಪರಮಭಕ್ತಿಶ್ರದ್ಧೆಗಳಿಂದ ಶ್ರೀಮೂಲರಾಮದೇವರ ಪೇಟಿಕಾಕ್ಕೆ ತುಳಸೀ-ಪುಷ್ಪ-ಗಂಧಾಕ್ಷತೆ-ಫಲಮಂತ್ರಾಕ್ಷತೆಗಳನ್ನರ್ಪಿಸಿ, ಫಲಸಮರ್ಪಣೆಮಾಡಿ ಮಹಾಮಂಗಳಾರತಿಯನ್ನು ಬೆಳಗಿ ಪ್ರದಕ್ಷಿಣೆ ನಮಸ್ಕಾರಗಳನ್ನು ಸಮರ್ಪಿಸಿ ವಿದ್ಯಾಸಿಂಹಾಸನದಲ್ಲಿ ಕುಳಿತು ಪ್ರಿಯವರಕುಮಾರರಾದ ಶ್ರೀಯೋಗೀಂದ್ರತೀರ್ಥರಿಗೆ ಶ್ರೀಮದಾಚಾರರ ಮಹಾಸಂಸ್ಥಾನವನ್ನು ಒಪ್ಪಿಸಿಕೊಟ್ಟು ರಹಸ್ಯವಾಗಿ ಕೆಲವಿಚಾರಗಳನ್ನು ಉಪದೇಶಿಸಿ ಆಶೀರ್ವದಿಸಿ ಧೀರಗಂಭೀರಠೀವಿಯಿಂದ ಮೇಲೆದ್ದು ದಂಡ-ಕಮಂಡಲುಧಾರಿಗಳಾಗಿ ಭವ್ಯಪಾದುಕೆಗಳನ್ನು ಮೆಟ್ಟಿ ನಿಂತರು! ಆಹಾ ಅದೆಂತಹ ಅಪೂರ್ವ ದೃಶ್ಯ! ಅದನ್ನು ಅವಲೋಕಿಸುತ್ತಿದಮತೆ ಆ ಪ್ರದೇಶದಲ್ಲೆಲ್ಲಾ ಒಂದುಬಗೆಯ ಸಾತ್ವಿಕ ವಾತಾವರಣವೇ, ನಿರ್ಮಿತವಾಗಿ ದೇವಲೋಕದ ಕಲ್ಪತರುವೇ ಧರೆಗಿಳಿದುಬಂದ ಭಾವನೆ ಎಲ್ಲರಲ್ಲೂ ಜಾಗೃತವಾಗುತ್ತಿದೆ! ಆಗ ಜ್ಯೋತಿಷಶಾಸ್ತ್ರವಿಶಾರದರಾದ ಶ್ರೀಮಠದ ಪಂಡಿತರು ಶ್ರೀಯವರ ಸನ್ನಿಧಿಗೆ ಬಂದು ನಮಸ್ಕರಿಸಿ “ಮಹಾಸ್ವಾಮಿ, ಸುಮುಹೂರ್ತವು ಸನ್ನಿಹಿತವಾಗುತ್ತಿದೆ” ಎಂದು ಗದ್ಗದಕಂಠದಿಂದ ಭಕ್ತಿನಮಾಂಗರಾಗಿ ವಿನೀತರಾಗಿ ವಿಜ್ಞಾಪಿಸಿದರು.
ಆಗ ಶಿಷ್ಯರು ಹಿಡಿದು ನಿಂತಿದ್ದ ವರ್ಣರಂಜಿತ ನಡುಚಪ್ಪರಕ್ಕೆ ಗುರುರಾಜರು ದಯಮಾಡಿಸಿದರು. ಗುರುಸಾರ್ವಭೌಮರು ಇನ್ನೇನು ಸಶರೀರವಾಗಿ ಬೃಂದಾವನ ಪ್ರವೇಶಮಾಡಲು ಹೊರಟರೆಂದು ಅರಿವಾದ ಕೂಡಲೇ ನಿಖಿಲಜನತೆಯ ವಿವಿಧ ಭಾವನೆಗಳಿಂದ ಗುರುಗಳ ಗುಣಗಳನ್ನು ನೆನೆನೆನೆದು ಕಣ್ಣೀರಿಡುತ್ತಿತ್ತು.
ಸಂಚಿತ ಪಾಪಗಳ ಕಳೆದು ಚಿಂತಿತ ವಾಂಛಿತಾರ್ಥಗಳಿತ್ತು ಸಂತತ ಪೊರೆಯುತಿಹ ಅನಂತನ ಅಂತರಂಗಭಕ್ತಾಗ್ರಣಿಗಳಾದ ಈ ಸಂತ ಸಾರ್ವಭೌಮರ ದರ್ಶನ ಅನುಗ್ರಹಗಳಿಲ್ಲದೆ ಮುಂದೆ ನಾವೆಂತು ಸಂತಸದಿಂದ ಜೀವಿಸಲಾಪೆವೆಂದು ಭಕ್ತಸಂದೋಹವು ನೊಂದು ಕಣ್ಣೀರಿಡುತ್ತಿರಲು: ವಾದಿವಾರಣಕುಂಭಭೇದನ ಪಂಚಾನನರಾದ ಈ ಶರಣಜನಭರಣ, ಮನೋರಥವಿತರಣಚರಣರ ಕರುಣೆಯೆಮಗಿನ್ನು ದೊರಕದಂತಾವುದಲ್ಲಾ ಎಂದು ಶಿಷ್ಯ ಸಂಘವು ಕಳವಳಿಸುತ್ತಿರಲು ಅಖಂಡಬ್ರಹ್ಮಾಂಡನಾಯಕನಾದ ಪುಂಡರೀಕವದನನಾದ ಶ್ರೀಪಾಂಡುರಂಗಾಭಿನ್ನ ಶ್ರೀಸಿರಿರಮಣನೊಬ್ಬನೇ ಸಮಸ್ತವೇದಾದಿಶಾಸ್ತ್ರಗಳಿಂದ ವೇದ್ಯನೆಂದು ಸಾರುತ್ತಾ ರೈತಸಿದ್ಧಾಂತರಕ್ಷಕಗಳಾದ ಅಸಾಧಾರಣಗ್ರಂಥರಚನೆಗಳಿಂದ ಜಗನ್ಮಾನ್ಯರಾಗಿ, ಪುಂಡರೀಕಾಕ್ಷನ ಪದಪುಂಡರೀಕ ನಿಷೇವಣದಿಂದ ಅನಿತರಸಾಧಾರಣ ಪುರುಷಾರ್ಥ ಸಂತಪ್ರಧಾನ ಮಹಾಶಕ್ತಿಸಂಪನ್ನರಾದ ಈ ಪಂಡಿತಪುಂಡರೀಕರಂಥ ಭಕ್ತಬಂಧುಗಳನ್ನು ನಾವು ಈ ಬ್ರಹ್ಮಾಂಡದೊಳು ಮತ್ತೆಲ್ಲೆಲ್ಲಿಯೂ ಕಂಡರಿಯೆವೆಂದು ಪಂಡಿತಮಂಡಲಿಯು ಕಡುನೊಂದು ನಿಟ್ಟುಸಿರುಬಿಡುತ್ತಿರಲು, ಇಂದಿರಾಹೃದಯಮಂದಿರನಾದ, ಇಂದೀವರ ಘನ ಶ್ಯಾಮಸುಂದರನಾದ ನಂದನಂದನ ಗೋವಿಂದನ ಚರಣಾರವಿಂದ ಮತ್ತಮಧುಕರರಾಗಿ ನಮ್ಮೆಲ್ಲರ ಕಲ್ಯಾಣಕ್ಕಾಗಿಯೇ ಧರೆಗುದಿಸಿಬಂದ ಈ ದೇವೋತ್ತಮರಾದ ಭಕ್ತ ಬಂಧುಗಳ ಸಂದರ್ಶನೋಪ ದೇಶಗಳು ಹೆಚ್ಚು ಕಾಲ ಪಡೆವ ಭಾಗ್ಯ ನಮಗಿಲ್ಲವಾಯಿತಲ್ಲಾ ಎಂದು ಸಕಲ ಧರ್ಮಾಭಿಮಾನಿ ಗುರುಭಕ್ತರು ಗುರುರಾಜರ ವಿಯೋಗ ವಿರಹದುಃಖದಿಂದ ಬಳಲಹತ್ತಿದರು!
ಆಗ ಪೊಡವಿಯ ಜನತೆಯ ಕಲ್ಯಾಣಕ್ಕಾಗಿ ಪಾಲ್ಗಡಲೊಡಲಿನೊಳು ವಿಷಧರನ ಮಂಚದೊಳು ಪವಡಿಸಿದ ಪೊಡವಿಗೊಡೆಯನ ಪರಮತಪವ ಕೈಗೊಂಡು ಬೃಂದಾವನ ಪ್ರವೇಶಕ್ಕಾಗಿ ಪೊಡಮೊಟ್ಟ ಆ ಪೊಡವಿಯ ಗುರುಗಳು ಸಡಗರದಿಂದ ನಡುಚಪ್ಪರದಡಿಗೆ ಧೀರಗಂಭೀರನೆಡೆಯೊಳ್ಳೆ ತಂದುನಿಂತರು!
ಪರಮಭಕ್ತನಾದ ವೆಂಕಣ್ಣ ಪಂತನು ರಾಯರಿಗೆ ಶ್ವೇತಛತ್ರವನ್ನು ಹಿಡಿದನು. ಶ್ರೀಯೋಗೀಂದ್ರ ತೀರ್ಥರು ಭಕ್ತಿನಮಾಂಗರಾಗಿ ಗುರುಪಾದರಿಗೆ ಹಸ್ತಲಾಘವ ನೀಡಿದರು. ಲಕ್ಷ್ಮೀನಾರಾಯಣಾಚಾರಾದಿ ಬಂಧುಗಳು ರಾಯರ ಅಕ್ಕಪಕ್ಕದಲ್ಲಿ ನಿಂತು ಚೌರಿಯನ್ನು ಹಿಡಿದು ಚಾಮರಗಳನ್ನು ಬೀಸತೊಡಗಿದರು. ಪಂಡಿತಶಿಷ್ಯಮಂಡಲಿ ಪುರೋಹಿತರು ಸುಸ್ವರದಲ್ಲಿ ವೇದ, ಉಪನಿಷತ್, ಗೀತಾ, ಬ್ರಹ್ಮಸೂತ್ರಭಾಷ್ಯಗಳನ್ನು ಪಾರಾಯಣಮಾಡಲಾರಂಭಿಸಿದರು. ಹರಿದಾಸರು ಕಾಲಿಗೆ ಗೆಜ್ಜೆ ಕಟ್ಟಿ ಶ್ರೀಹರಿಯ ಲೀಲಾವಿಲಾಸಚರಿತೆಗಳನ್ನು ಮೈಮರೆತು ನರ್ತಿಸಿತೋರುತ್ತಿದ್ದಾರೆ, ಭಾಗವತರು ಗುರುಮಹಿಮಾಪರಪದಗಳನ್ನು ಮಂಜುಳಧ್ವನಿ- ಯಿಂದ ಹಾಡುತ್ತಿದ್ದಾರೆ. ವಿವಿಧವಾದ ಕೋವಿದರು ವೀಣಾ, ವೇಣು, ಸ್ವರಮಂಡಲ, ಮೃದಂಗಾದಿವಾದಗಳನ್ನು ನುಡಿಸುತ್ತಿದ್ದಾರೆ. ಸಂಗೀತವಿಶಾರದರು ಅಪರೋಕ್ಷಜ್ಞಾನಿಗಳ ಪದಗಳನ್ನು ವಿವಿಧ ರಾಗ-ತಾಳಗಳೊಡನೆ ಹಾಡುತ್ತಿದ್ದಾರೆ. ಮಂಗಳವಾದ್ಯಗಳು ಮೊಳಗುತ್ತಿವೆ. ವಿಜಯಶಂಖ, ತಾಳ, ಜಾಗಟೆ, ಕಹಳೆ, ಛೇರಿ, ಮಡ್ಡುಕವಾದ್ಯ, ರಾಹುಕೇತುವಾದ್ಯ, ನವಪತ್ತು, ನಗಾರಿಗಳು ಧ್ವನಿಸಹತ್ತಿವೆ. ವಂಧಿಮಾಗಧರರು ಯತಿಸಾರ್ವಭೌಮರ ಅನುಪಮ ಬಿರುದಾವಳಿಗಳನ್ನು ಘೋಷಿಸುತ್ತಿದ್ದಾರೆ. ಈ ಎಲ್ಲ ಧ್ವನಿಗಳೊಂದಾಗಿ ಸೇರಿ ನಭೋಮಂಡಲವನ್ನೆ ಭೇದಿಸುವುದೋ ಎಂಬಂತೆ ದಿಗಂತರಾಳಗಳನ್ನೆಲ್ಲಾ ಶಬ್ದಾಯಮಾನಗೊಳಿಸುತ್ತಾ ಶ್ರೀರಾಘವೇಂದ್ರ68 ಅಂತರಂಗಭಕ್ತರ ಶ್ರೀರಾಘವೇಂದ್ರನ 69 ವಿಶೇಷಾಯುಕ್ತರಾದ, ಶ್ರೀರಾಘವೇಂದ್ರಯತಿಪುಂಗವರ ಮಂಗಳ ಮಹಿಮೆಗಳ ಜಯಘೋಷಮಾಡುತ್ತಿವೆಯೋ ಎಂಬಂತೆ “ರಾಘವೇಂದ್ರ, ರಾಘವೇಂದ್ರ” ಎಂಬ ಪಾವನ-ಅಮರನಾಮವು ಸಕಲಭಕ್ತರ ಹೃದಯಾಂಬರದಲ್ಲಿಯೂ ಪ್ರತಿಧ್ವನಿಸುತ್ತಾ ಸಕಲರ ಮೈ-ಮನಗಳನ್ನು ಪುಳಕಗೊಳಿಸುತ್ತಿದೆ.
ಗುರುವರ್ಯರ ವೃಂದಾವನಪ್ರವೇಶ ವಿಜಯಯಾತ್ರೆ ವೈಭವದಿಂದ ಮುಂದುವರೆಯಿತು. ಗುರುರಾಜರ ಮುಂಭಾಗದಲ್ಲಿ ಸುವರ್ಣರಜತ ದಂಡಧಾರಿಗಳು, ಸಿಂಹ ಲಲಾಟಮಂಡಿತದಂಡಧಾರಿಗಳು, ಚೌರಿ-ಚಾಮರಗಳನ್ನು ಹಿಡಿದವರು, ಬಿಚ್ಚುಕತ್ತಿ ಪಹರೆಯವರು, ಹಗಲು ದೀವಟಿಗೆ ಕರದೀಪ ಪಿಡಿದವರು, ವಿವಿಧ ಛತ್ರ - ಅಪ್ತಾಗಿರಿ ಹಿಡಿದವರು, ಕತ್ತಿಗಳನ್ನು ಹಿಡಿದವರು ಸಂಭ್ರಮದಿಂದ ಹೊರಟಿದ್ದಾರೆ. ಗುರುಗಳ ಸವಾರಿ ಚಿತೈಸುತ್ತಿದ್ದಂತೆ, ಅಬಾಲವೃದ್ಧರು ಗುರುಗಳಿಗೆ ಸಾಷ್ಟಾಂಗವೆರಗುತ್ತಿದ್ದಾರೆ, ಅನೇಕ ಸುಮಂಗಲಿಯರು ಕದಲಾರತಿ, ರತ್ನಾರತಿ, ದೀಪಾರತಿಗಳನ್ನು ಬೆಳಗುತ್ತಿದ್ದಾರೆ. ಮುತ್ತೈದೆಯರು ತಮ್ಮ ಹಸಿಗೂಸುಗಳನ್ನು ಗುರುಗಳ ಚರಣದಡಿ ಮಲಗಿಸಿ ಆಶೀರ್ವಾದಪಡೆಯುತ್ತಿದ್ದಾರೆ. ಶ್ರೀಮಠದ ಲಕ್ಷ್ಮೀ ಎಂಬ ಮರಿಯಾನೆಯು ಸೊಂಡಲಿನಲ್ಲಿ ಜೋಡಿ ಚಾಮರಗಳನ್ನು ಹಿಡಿದು ಕಣ್ಣಿನಿಂದ ಧಾರಾಕಾರವಾಗಿ ಅಶ್ರು ಪ್ರವಹಿಸುತ್ತಿರಲು ತನ್ನ ಪ್ರೇಮ-ಭಕ್ತಿಗಳನ್ನು ಹೊರಸೂಸುತ್ತಾ ಚಾಮರಸೇವೆ ಮಾಡುತ್ತಿದೆ - ಗುರುಗಳಿಗೆ ಪ್ರಿಯವಾದ ಮಠದ ನಾಲ್ಕಾರು ಗೋವುಗಳು, ತಮ್ಮ ಬಾಲಗಳನ್ನು ಮೇಲೆತ್ತಿ ಕಣ್ಣೀರುಸುರಿಸುತ್ತಾ ಪುಟಪುಟಿದು ನೆಗೆದಾಡುತ್ತಾ ಎವೆಯಿಕ್ಕದೆ ಗುರುಗಳ ಮಂಗಳಸ್ವರೂಪವನ್ನೇ ನೋಡುತ್ತಾ ಬರುತ್ತಿವೆ. ಈ ವಿಸ್ಮಯಕಾರಕ ನೋಟವನ್ನು ಕಂಡು ಸುಜನವೃಂದ “ಆಹಾ, ಮೂಕಪ್ರಾಣಿಗಳಿಗೂ ನಮ್ಮ ಗುರುಸಾರ್ವಭೌಮರಲ್ಲಿ ಅದೆಂಥ ಭಕ್ತಿ, ಪ್ರೇಮ ! ಅವರ ವಿಯೋಗದ ಅರಿವಾಗಿ ಅವಾ ಕಣ್ಣೀರಿಡುತ್ತಿವೆಯಲ್ಲಾ' ಎಂದು ಅಚ್ಚರಿಗೊಳುತ್ತಿದೆ. ಸಮಸ್ತಭಕ್ತಜನರೂ ಅರುಳು-ಹೂವು-ಮಂತ್ರಾಕ್ಷತೆಗಳನ್ನು ಭಕ್ತಿಯಿಂದ ಜಯಘೋಷಪೂರ್ವಕ ಗುರುಗಳ ಮೇಲೆ ವರ್ಷಿಸುತ್ತಿದ್ದಾರೆ. ಅಬ್ಬಾ, ಆ ವೈಭವ, ಭಕ್ತಿಯಮಹಾಪೂರ, ಸಂಭ್ರಮ, ಆ ಪರವಶತೆಗಳನ್ನು ಅಂದು ಕಣ್ಣಾರೆ ಕಂಡು ಧನ್ಯರಾದ ಪುಣ್ಯಾತ್ಮರೇ ಮಹಾಭಾಗ್ಯ ಶಾಲಿಗಳು ! ಅದೊಂದು ಅಭೂತಪೂರ್ವ ವರ್ಣನಾತೀತ ಪರಮಮಂಗಳಕರ ದೃಶ್ಯ.
ತೇಜಪುಂಜ ಸಾತ್ವಿಕಮುಖ ಮುದ್ರೆಯಿಂದೊಪ್ಪಿ ಮೆಲ್ಲಮೆಲ್ಲನೆ ಧೀರಗಂಭೀರ ಠೀವಿಯಿಂದ ಬಿಜಯಂಗೈಯುತ್ತಲಿರುವ ಶ್ರೀಗುರುಸಾರ್ವಭೌಮಠ ಆ ಭವ್ಯಾಕೃತಿ ಸಮಸ್ತರನ್ನೂ ಆಕರ್ಷಿಸಿ ಸಕಲರ ತನು-ಮನಗಳನ್ನು ಪಾವನಗೊಳಿಸಿ ಭಕ್ತಿಪ್ರಕರ್ಷದಿಂದ ರೋಮಾಂಚನಗೊಳಿಸುತ್ತಿದೆ! ಪ್ರದಕ್ಷಿಣಾಕಾರವಾಗಿ ಹೊರಟ ಶ್ರೀಗುರುರಾಜರು ಗರ್ಭಾಲಯದ ಮುಂದೆ ಬಂದು ನಿಂತರು. ಭಕ್ತವೃಂದ ಮೈಮರೆತು ಜಯ ಜಯಕಾರಮಾಡಿತು! ಶ್ರೀಗುರುರಾಜರ ಆಗಿನ ಪಾವನರೂಪ ಅಪೂರ್ವ ವರ್ಚಸ್ಸಿನಿಂದ ಕಂಗೊಳಿಸುತ್ತಿತ್ತು.
ಅದ;ಶುಭ್ರ ಶ್ವೇತಛತ್ರದಡಿಯಲ್ಲಿ ರಾರಾಜಿಸುತ್ತಿರುವ ಆ ಮನೋಹರ ತೇಜೋಮೂರ್ತಿಗಳನ್ನು ಅವಲೋಕಿಸಿದ ಸಕಲ ಜನರೂ ತಮ್ಮ ನೇತ್ರಗಳಿಂದು ಗುರುದರ್ಶನದಿಂದ ಸಾರ್ಥಕವಾದವೆಂದು ಹರ್ಷಿಸಿದರು.
ಚೊಕ್ಕ ಚಿನ್ನದಂತೆ ನಿಚ್ಚಳ ಸ್ವಚ್ಛದೀಪ್ತಿ ಪ್ರಭೆಯಿಂದ ಚಿತ್ತಾಕರ್ಷಕವಾಗಿರುವ ಸುಮಕೋಮಲ ಸುವರ್ಣಛವಿಯಿಂದೊಪ್ಪವ ಆ ಸುರಚಿರಸುಂದರ ಭವ್ಯಾಕೃತಿಯನ್ನು ಕಂಡಾನಂದಿಸುವುದೇ ಒಂದು ಮಹಾಭಾಗ್ಯ! ಮಂಗಳ ಸ್ವರೂಪರಾದ ಯತಿಪುಂಗವರು ಬಲಕರದಲ್ಲಿ ದಂಡ ಮತ್ತು ಕಮಲಾಕ್ಷಮಾಲೆಯನ್ನು ಹಿಡಿದು ಪ್ರಣವಮಂತ್ರ ಜಪಾಸಕ್ತರಾಗಿರುವ ಆ ಪರಿ ಎಷ್ಟು ರಮ್ಯ! ಆ ತಪಸ್ವಿಗಳ ಎಡಕರದಲ್ಲಿ ಶಾಪಾನುಗ್ರಹಶಕ್ತ ಮಂತ್ರಪಾತ ಜಲಪೂರ್ಣಕಮಂಡಲು ತಳತಳಿಸುತ್ತಿದೆ. ತರುಣಾರುಣ ವರ್ಣರಂಜಿತ ಕಾಷಾಯವಸನಾಲಂಕೃತರಾದ ಆ ಮುನೀಂದ್ರರ ಮನೋಜ್ಞವಕ್ಷಸ್ಥಳದಲ್ಲಿ ಹೊಚ್ಚ ಹೊಸತಾದ, ಹಚ್ಚ ಹಸುರಾದ ಭಗವದರ್ಪಿತ ತುಳಸೀಮಾಲೆ, ಕಮಲಾಕ್ಷ-ತುಳಸೀಸರಗಳು ಉಜ್ವಲವಾಗಿ ಪ್ರಕಾಶಿಸುತ್ತಿವೆ. ಯೋಗೀಶ್ವರಿವರೆಂದು ಸಾರಿ ಹೇರುವ ಪರಿಶುಭ್ರ ರೋಮರಾಜಿಗಳಿಂದ, ಕಂಗೋಳಿಸುವ ಆ ಕಮನೀಯ ಕಪೋಲಗಳ ಸೊಬಗು ಅದೆಷ್ಟು ಚೆನ್ನ! ಪೊಳೆವ ಊರ್ಧ್ವ ಪುಂಡ್ರ-ಗಂಧಾಕ್ಷತೆಗಳಿಂದೊಪ್ಪುವ ಆ ಯತಿರಾಜರ ತೇಜಪುಂಜಮುಖದಲ್ಲಿ ಮಂದಹಾಸದ ಮಿಂಚು ಮಿನುಗುತ್ತಿದೆ. ನಿಮೀಲಿತಾರ್ಧನಯನರಾಗಿ, ಮನದಲ್ಲಿ ಸಿರಿಮೂಲರಾಮನನ್ನು ಧ್ಯಾನಿಸುತ್ತಾ ಜ್ಞಾನ-ಭಕ್ತಿ-ವೈರಾಗ್ಯ-ತಪಸ್ಸುಗಳ ಸಾಕಾರ ತ್ರಿವೇಣೀಸಂಗಮದಿಂದಂಗವಣಿಸಿ, ಅಭಯ-ವರದ ಮುದ್ರಾಂಕಿತರಾಗಿ ಜಗದ ಜನತೆಯ ಮನೋಭಿಷ್ಟಪೂರೈಸಲು ಕೃಪಕಟಾಕ್ಷವೀಕ್ಷಣರೂಪ ಮಂಗಳದ ಮಳೆಗರೆಯುತ್ತಾ ಶ್ರೀಯೋಗೀಂದ್ರತೀರ್ಥಗುರುಪುಂಗವ ಸಂಸೇವ್ಯಮಾನ ಪಾದಪಂಕಜರಾಗಿ ವಿರಾಜಿಸುತ್ತಿರುವ ಆ ತಪೋಮೂರ್ತಿಗಳನ್ನು ತದೇಕದೃಷ್ಟಿಯಿಂದ ಅವಲೋಕಿಸುತ್ತಾ ಅಮಂದಾನಂದತುಂದಿಲರಾಗಿ ಭಕ್ತಿಭರದಿಂದ ಅಭಿನಂದಿಸುತ್ತಾ “ಜಯ ಜಯ ಶ್ರೀಮೂಲರಾಮ, ಜಯ ಜಯ ಪಾವನ ಪವಮಾನ, ಜಯ ಜಯ ಶ್ರೀರಾಘವೇಂದ್ರ ಗುರುಸಾರ್ವಭೌಮ, ಶರಣಜನಮಂದಾರ ಕಾಮಿತಪ್ರದ ಕಾಮಧೇನೋ. ಚಿಂತಿತಾರ್ಥಚಿಂತಾಮಣೆ, ಭಕ್ತವತ್ಸಲ, ಜಯ ಜಯ” ಎಂಬ ಜಯ ಧ್ವನಿಗೈಯುತ್ತಿರಲು ಮಂತ್ರಾಲಯದ ಆ ಮಾಂತ್ರಿಕರ ಮೋಡಿಗೊಳಗಾಗಿ ಅಲ್ಲಿನ ಗಾಳಿ, ಬೆಳಕು, ಜಲ, ನೆಲ, ಭೂಮಿಯರಜಗಳು, ಪಶುಪಕ್ಷಿಗಳು, ಸಮಸ್ತಚೇತನವರ್ಗ, ಆ ಪವಿತ್ರ ಪರಿಸರವೆಲ್ಲ ಶ್ರೀರಾಘವೇಂದ್ರಮಯವಾಗಿ ಜನರು ಒಂದು ಬಗೆಯ ಸಾತ್ವಿಕದೈವೀಭಾವನೆಯಲ್ಲಿ ಮೈಮರೆತಿದ್ದಾರೆ. ಆವೊಂದು ಪರಮಪಾವನ ವಾತಾವರಣ ಭಾವುಕತೆಯ, ಮಹಾಪೂರ, ವೈಭವವನ್ನು ಎಷ್ಟು ಬಣ್ಣಿಸಿರೂ ಸ್ವಲ್ಪವೇ ಸರಿ!!
ಆಗ ಗುರುರಾಜರು ಪ್ರಿಯಶಿಷ್ಯರಾದ ಶ್ರೀಯೋಗೀಂದ್ರತೀರ್ಥರಿಗೆ ತಾವು ಮೆಟ್ಟಿದ್ದ ಪರಮಪಾವನ ಪಾದುಕೆಗಳನ್ನು ಕರುಣಿಸಿ “ಪ್ರೀತಿಪಾತ್ರರೇ, ನೀವು ಮತ್ತು ಇನ್ನು ಮುಂದೆ ಈ ಮಹಾಪೀಠಪರಂಪರೆಯ ಯತಿವರ್ಯರುಗಳು ನಮ್ಮಿ ಪಾದುಕೆಗಳನ್ನು ಪೂಜಿಸುತ್ತಾ ಸ್ನಾನ-ಜಪ-ಶ್ರೀಮೂಲರಘತಿ ವೇದವ್ಯಾಸದೇವರ ಪೂಜಾರಾಧನೆ, ಪಾಠಪ್ರವಚನ, ಅತಾತ್ವಿಕಮತ ಪ್ರಸಾರಕ-ದುರ್ವಾದಿಗಳ ವಿಜಯಪಾರ್ವಕ ದೈತಸಿದ್ಧಾಂತಸ್ಥಾಪನೆ, ತತ್ವವಾದಮತವನ್ನು ಬಲಪಡಿಸಲು ಗ್ರಂಥರಚನೆ, ತತ್ವ-ಧರ್ಮ, ಶ್ರೀಹರಿವಾಯು ಭಕ್ತಿ, ಭಾಗವತ ಧರ್ಮ, ಸಂಸ ತಿಗಳ ಪ್ರಸಾರ ಕಾರಾಸಕ್ತರಾಗಿ ಶಿಷ್ಯಕೋಟಿಯನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಾ ಸರ್ವಜನರ ಉದ್ಧಾರಮಾಡುತ್ತಾ, ಜನತೆಯ ಐಹಿಕಾಮುತ್ಮಿಕ ಸಾಧನೆ ಮಾಡಿಸುವ ಮೂಲಕ ಸಕಲರೂ ಶ್ರೇಯಃ ಪ್ರೇಯಗಳಿಗೆ ಪಾತ್ರರಾಗುವಂತೆ ಮಾಡುತ್ತಾ ಶ್ರೀಹರಿ ವಾಯುಗಳ ಅನುಗ್ರಹ, ಕೀರ್ತಿಗಳನ್ನು ಗಳಿಸಿ ಕರ್ತವ್ಯನಿರತರಾಗಿ ಶ್ರೇಯೋವಂತರಾಗಬೇಕು!
ಭಾರತ ಸಂಸ ಪ್ರಿಯ ವರಕುಮಾರರೇ, ಭಗವದ್ಭಕ್ತಿಯೇ ಮಾನವ ಜನಾಂಗದ ಅಭ್ಯುದಯ ಕಲ್ಯಾಣಗಳಿಗೆ ಕಾರಣವಾಗಿದೆ. ನಮ್ಮ ತಿಯ ಮುಖ್ಯ ಉಪದೇಶವಾದ ವೇದಾದಿಶಾಸ್ತ್ರಗಳಲ್ಲಿ ನಂಬಿಕೆ, ಭಗವಂತನಲ್ಲಿ ನಿಷ್ಕಾಮಭಕ್ತಿ, ಇವು ಅತಿಮುಖ್ಯ ಶ್ರೀಹರಿಯನ್ನು ಒಲಿಸಿಕೊಂಡು ಸರ್ವಸುಜೀವರ ಮೂಲಗುರಿಯಾದ ಶಾಶ್ವತಸುಖ ಸಂಪಾದನೆಗೆ ಶ್ರೀಹರಿಯ ಪ್ರಸಾದವೇ ಮುಖ್ಯವಾದ್ದರಿಂದ ಶ್ರೀಹರಿಯು ಪ್ರಸಾದವನ್ನು ಅನುಗ್ರಹವನ್ನು ಸರ್ವರೂ ಗಳಿಸಿ ಶ್ರೇಯೋವಂತರಾಗುವಂತೆ ಮಾಡುವ ಮಹತ್ತರವಾದ ಹೊಣೆಯು ಶ್ರೀಹಂಸವಂಶಭೂಷಣರಾದ, ಶ್ರೀಸರ್ವಜ್ಞಸಿಂಹಾಸನಾಧಿಪತಿಗಳಾದ ನಿಮ್ಮ ಮತ್ತು ಶಿಷ್ಯಪರಂಪರೆಯ ಯತಿಗಳ ಮೇಲೆ ಇದೆಯೆಂಬುದನ್ನು ಮರೆಯದೆ ಜಾಗೃತರಾಗಿದ್ದು ಈ ಮಹಾಕರ್ತವ್ಯವನ್ನು ಯಶಸ್ವಿಗೊಳಿಸಿ ಕೀರ್ತಿಶಾಲಿಗಳಾಗಬೇಕು. ಈ ಪವಿತ್ರ ಕಾರ್ಯ ನೆರವೇರಿಸಲು ಸರ್ವದಾ ನಮ್ಮ ಅನುಗ್ರಹ-ಆಶೀರ್ವಾದಗಳು ನಿಮಗಿವೆ, ನಿಮಗೆ ಮಂಗಳವಾಗಲಿ” ಎಂದು ವಾತ್ಸಲ್ಯದಿಂದ ಉಪದೇಶಿಸಿ, ಅವರ ಶಿರದ ಮೇಲೆ ತಮ್ಮ ಅಮೃತಕರವಿರಿಸಿ ಆಶೀರ್ವದಿಸಿದರು. ಗುರುಪಾದರ ಕರಸ್ಪರ್ಶ ಆಶೀರ್ವಾದಗಳಿಂದ ಶ್ರೀಯೋಗೀಂದ್ರರಿಗೆ ಅದಾವುದೋ ಒಂದು ಅವಕಶಕ್ತಿ ತಮ್ಮ ದೇಹದಲ್ಲಿ ಸಂಚರಿಸಿದ ಅನುಭವವಾಗಿ ರೋಮಪುಲಕಿತಗಾತ್ರರಾಗಿ ಹರ್ಷದಿಂದ ಗುರುಪಾದರ ಚರಣಗಳ ಮೇಲೆ ಶಿರವಿರಿಸಿ ನಮಸ್ಕರಿಸಿ “ಪೂಜ್ಯ ಗುರುಪಾದರ ಅಪ್ಪಣೆಯನ್ನು ಶಿರಸಾ ಧರಿಸಿದ್ದೇನೆ” ಎಂದು ಆನಂದಾಶ್ರುಹರಿಸುತ್ತಾ ವಿಜ್ಞಾಪಿಸಿದರು.
ಆ ತರುವಾಯ ದುಃಖಾತಿರೇಕದಿಂದ ಕಣ್ಣೀರು ಸುರಿಸುತ್ತಾ ನಿಂತಿದ್ದ ಪೂರ್ವಾಶ್ರಮಪುತ್ರರಾದ ಲಕ್ಷ್ಮೀನಾರಾಯಣಾಚಾರ್ಯ, ಸೋದರಳಿಯ ನಾರಾಯಣಾಚಾರ್ಯ, ಅಣ್ಣಂದಿರ ಪುತ್ರ-ಪೌತ್ರರಾದ ವೆಂಕಟನಾರಾಯಣಾಚಾರ್ಯ, ಮುದ್ದುವೆಂಕಟಕೃಷ್ಣಾಚಾರ, ಪೌತ್ರ ಪುರುಷೋತ್ತಮಾಚಾರ ಮತ್ತು ಸ್ಮೃತಿಮುಕ್ತಾವಳೀಕಾರರೂ ಶಿಷ್ಯರೂ ಆದ ಕೃಷ್ಣಾಚಾರ್ಯ ಮುಂತಾದ ಆತ್ಮೀಯ ಪಂಡಿತರು, ಶಿಷ್ಯರು ಹಾಗೂ ದಿವಾನ್ ವೆಂಕಣ್ಣ ಪಂತ ಮೊದಲಾದವರನ್ನು ಸಾಂತ್ವನಗೊಳಿಸಿ ಆಶೀರ್ವದಿಸಿದ ಮೇಲೆ ತಮ್ಮ ಚರಮೋಪದೇಶಪಡೆಯಲು ದೇಶವಿದೇಶಗಳಿಂದ ಬಂದು ಉಪಸ್ಥಿತರಾಗಿದ್ದ ಸಹಸ್ರಾರು ಜನ ಶಿಷ್ಯ-ಭಕ್ತ-ಧರ್ಮಾಭಿಮಾನಿಗಳತ್ತ ತಿರುಗಿ ಕಿರುನಗೆಯನ್ನು ಹೊರಸೂಸುತ್ತಾ ಗಂಭೀರ - ಸುಮಧುರವಾಣಿಯಿಂದ ಶ್ರೀಹರಿಸರ್ವೊತ್ತಮಾತಾದಿ ಸತ್ತತ್ವಗಳನ್ನು ಉಪದೇಶಿಸಿ ಕಾರುಣ್ಯಪೂರ್ಣರಾಗಿ ಇಂತು ಅಪ್ಪಣೆಕೊಡಿಸಿದರು -
“ಆತ್ಮೀಯ ಶಿಷ್ಯರೇ, ಭಕ್ತರೇ, ಶ್ರೀಹರಿಗುರುನಿಷ್ಠರಾದ ಧರ್ಮಾಭಿಮಾನಿಗಳೇ! ನಮ್ಮಲ್ಲಿ ನಿಮಗಿರುವ ಭಕ್ತಿಶ್ರದ್ಧೆಗಳನ್ನೂ, ನಾವು ಬೃಂದಾವನಪ್ರವೇಶ ಮಾಡುತ್ತೇವೆಂದು ನಿಮಗಾಗಿರುವ ಅಪಾರದುಃಖವನ್ನೂ ನಾವು ಬಲ್ಲೆವು! ಇದು ಶ್ರೀಹರಿಯ ಸಂಕಲ್ಪ! ಅವನ ಅಪ್ಪಣೆ ಶ್ರೀವಾಯುದೇವರ ಪ್ರೇರಣೆಗಳಂತೆ ನಾವೀಕಾರ್ಯವನ್ನು ಕೈಗೊಂಡಿದ್ದೇವೆ. ಶ್ರೀಹರಿಯ ಚಿತ್ತಾನುಸಾರವಾಗಿ ವರ್ತಿಸುವುದು ಅವನ ದಾಸರಾದ ನಮ್ಮ ಕರ್ತವ್ಯವಾಗಿದೆ. ಶ್ರೀಹರಿಸಂಕಲ್ಪಕ್ಕೆ ವಿರುದ್ಧವಾಗಿ ಜಗತ್ತಿನಲ್ಲಿ ಏನೂ ಜರಗದು ! ಆದ್ದರಿಂದ ನಾವು ಶರೀರರಾಗಿ ಬೃಂದಾವನ ಪ್ರವೇಶಮಾಡುತ್ತೇವೆಂದು ನೀವಾರೂ ಚಿಂತಿಸಬಾರದು, ದುಃಖಿಸಬಾರದು. ಅದು ಶ್ರೀಭಗವತ್ಸಂಕಲ್ಪಕ್ಕೆ ವಿರುದ್ಧವಾಗುವುದು ನಾವು ಸರೀರರಾಗಿ ಬೃಂದಾವನ ಪ್ರವೇಶ ಮಾಡುತ್ತೇವೆ ನಿಜ. ಆದರೆ ಶರೀರತ್ಯಾಗ ಮಾಡುವುದಿಲ್ಲ ! ಶ್ರೀಮೂಲರಘುಪತಿವೇದವ್ಯಾಸದೇವರು ಹಾಗೂ ಜೀವೋತ್ತಮರಾದ ವಾಯುದೇವರ ಸಂಕಲ್ಪ ಹಾಗೂ ಅಣತಿಯಂತೆ ನಾವು ಈ ಬೃಂದಾವನದಲ್ಲಿ ಏಳುನೂರು ವರ್ಷಗಳ ಕಾಲ ಸಶರೀರರಾಗಿಯೇ ಇದ್ದು ಜಗತ್ಕಲ್ಯಾಣ, ನಿಮ್ಮೆಲ್ಲರ ಉದ್ದಾರ, ಸರ್ವಸುಜನರ ಮನೋಭೀಷ್ಟಪೂರಣಕ್ಕಾಗಿ ರಾಮ-ನರಹರಿ-ವೇದವ್ಯಾಸ-ಕೃಷ್ಣ-ನಾರಾಯಣದೇವರನ್ನು ಕುರಿತು ತಪಸ್ಸಿನಲ್ಲಿ ನಿರತರಾಗುತ್ತೇವೆ. ನಾವು ಗಳಿಸಿದ ಅಖಂಡ ಪುಣ್ಯರಾಶಿಯನ್ನು ಲೋಕಕಲ್ಯಾಣಕ್ಕಾಗಿ ದಾನಮಾಡಬೇಕಾಗಿದೆ. ಶ್ರೀಹರಿವಾಯುಗಳು ಏಳುನೂರು ವರ್ಷಗಳ ಕಾಲ ನಮ್ಮಲ್ಲಿ ಸದಾ ಸನ್ನಿಹಿತರಾಗಿದ್ದು ನಮ್ಮ ಸೇವೆಯನ್ನು ಸ್ವೀಕರಿಸುತ್ತಾ ಸಮಸ್ತಜನರ ವಿವಿಧ ದುಃಖಪರಿಹಾರಪೂರ್ವಕವಾಗಿ ನಿಖಿಲವಾಂಛಿತಾರ್ಥಗಳನ್ನು ಕೊಡಿಸಿ ಎಲ್ಲರ ಸರ್ವಾಂಗೀಣ ಅಭ್ಯುದಯ ಮಾಡಿಸಿ ಜಗತ್ತಿನ ಜನತೆಗೆ ನಮ್ಮಿಂದ ಮಂಗಳಮಾಡಿಸಿ ಆ ಕೀರ್ತಿಯನ್ನು ಅವರ ದಾಸಾನುದಾಸರಾದ ನಮಗಿತ್ತು ತಮ್ಮ ಭಕ್ತವಾತ್ಸಲ್ಯವನ್ನು ಪ್ರಕಟಿಸಲಿದ್ದಾರೆ! ಪ್ರೀತ್ಯಾಸ್ಪದರೇ, ಏಳುನೂರು ವರ್ಷಗಳ ಕಾಲ ಈ ಮಂತ್ರಾಲಯವು, ನಮ್ಮಿ ಬೃಂದಾವನವು ಧರ್ಮ, ಅರ್ಥ, ಕಾಮ, ಮೋಕ್ಷರೂಪ ಚತುರ್ವಿಧ ಪುರುಷಾರ್ಥಗಳನ್ನು ಬಯಸುವ ಸುಜೀವಿಗಳ ಪರಮಯಾತ್ರಾಸ್ಥಳವಾಗಿ ಪರಿಣಮಿಸಿ, ಅಖಂಡಭಾರತದ ಮಾತ್ರವಲ್ಲ, ವಿಶ್ವದ ಸುಜೀವಿಗಳ ಕಲ್ಯಾಣಕೇಂದ್ರವೆನಿಸಿ ಮನುಕುಲದ ಉದ್ದಾರವಾಗಲಿದೆ, ಇದೂ ಶ್ರೀಹರಿಯ ಸಂಕಲ್ಪ.
ಪ್ರಿಯ ಶಿಷ್ಯರೇ, ಭಕ್ತರೇ! ನಾವೀಗ ಹೇಳುವ ವಿಚಾರ ಸರ್ವದಾ ನಿಮ್ಮ ಗಮನದಲ್ಲಿರಲಿ, ಭಾರತದೇಶದ ವೇದ-ಉಪನಿಷತ್ -ಗೀತಾ-ಬ್ರಹ್ಮ ಸೂತ್ರಾದಿ ಸಮಸ್ತ ಶಾಸ್ತ್ರಗಳ ಸಾರವೇ ಅನಾದೃವಿಚ್ಛಿನ್ನ ಪರಂಪರಾಪ್ರಾಪ್ತವಾದ ವೈಷ್ಣವಸಿದ್ಧಾಂತ! ಈ ವೈಷ್ಣವಸಿದ್ಧಾಂತವೇ ಭಾರತದ ಭವ್ಯಸಂಸ ತಿಯ ಕೇಂದ್ರಬಿಂದು, “ಅದುಃಖಮಿತರತ್ನರ್ವ೦ ಜೀವಾ ಏವ ತು ದುಃಖಿನ ! ತೇಷಾಂ ದುಃಖಪ್ರಹಾಣಾಯ ಶ್ರುತಿರೇಷಾ ಪ್ರವರ್ತತೇ।।” - ಈಶ್ವರ ಸ್ವತಂತ್ರನಾದ್ದರಿಂದ, ಜಡಕ್ಕೆ ದುಃಖಾನುಸಂಧಾನವಿಲ್ಲದ್ದರಿಂದ ಅವರಿಗೆ ದುಃಖಪ್ರಸಕ್ತಿಯಿಲ್ಲ. ಇನ್ನುಳಿದುದು ಚೇತನ ಪ್ರಪಂಚ. ಆದ್ದರಿಂದ ಸಮಸ್ತಜೀವರೇ ಎಲ್ಲ ವಿಧ ದುಃಖಗಳಿಗೆ ಭಾಗಿಗಳಾಗಿದ್ದಾರೆ. ಇಂತು ದುಃಖಭಾಜನರಾದ ಜೀವರ ಸಕಲ ದುಃಖಗಳನ್ನೂ ಪರಿಹರಿಸಲೆಂದೇ ಶ್ರುತಿಯು ಪ್ರವೃತ್ತವಾಗಿದೆ-ಎಂದು ವೇದಪುರುಷ ಅಪ್ಪಣೆಕೊಡಿಸಿದ್ದಾನೆ. ಈ ಜಗತ್ತಿನಲ್ಲಿ ದುಃಖಕ್ಕೆ ಭಾಜನರಾದ ಜೀವರನ್ನು ಜನನಮರಣರೂಪ ದುಃಖದಿಂದ ಬಿಡುಗಡೆ ಮಾಡಿ ಸಕಲಜೀವನಿಷ್ಠವಾದ ಸ್ವರೂಪಾನಂದಾವಿರ್ಭಾವರೂಪವಾದ ಶಾಶ್ವತಸುಖ(ಮೋಕ್ಷ)ವನ್ನು ನೀಡುವ ಮಹಾಪ್ರಭುವು ಶ್ರೀಮನ್ನಾರಾಯಣನೊಬ್ಬನೇ ! “ನಾರಾಯಣೋSಸ್ ಪರಮೋ ವಿಚಿಂತ್ಯ ಮುಮುಕ್ಷುಭಿಃ ಕರ್ಮಪಾಶಾದಮುಷ್ಮಾತ್” ಎಂಬ ಶ್ರುತಿಯು ಸರ್ವೋತ್ತಮನೂ, ಜಗಜ್ಜನ್ಮಾದಿಕಾರಣನೂ, ಅನಿಮಿತ್ತ ಬಂಧುವೂ, ಭಕ್ತವತ್ಸಲನೂ ಆದ ಶ್ರೀಮನ್ನಾರಾಯಣನೇ ಆತ್ಯಂತಿಕ ದುಃಖ ಪರಿಹಾರಪೂರ್ವಕವಾಗಿ ಸರ್ವಜೀವರಿಗೆ ಶಾಶ್ವತಸುಖಪ್ರದನೆಂದು ಸಾರುವುದು.
ಜಗತ್ತಿನ ಜನರ ಆತ್ಯಂತಿಕ ದುಃಖಪರಿಹಾರದ್ವಾರಾ ಶಾಶ್ವತ ಸುಖವನ್ನು ಕರುಣಿಸಿ ಉದ್ದರಿಸಬೇಕೆಂದು ಶ್ರೀಹರಿಯನ್ನು ಒಲಿಸಿಕೊಳ್ಳಲು ತಪೋನಿರತರಾಗಲೆಂದೇ ಆ ಮಹಾನುಭಾವನ ಪ್ರೇರಣೆಯಂತೆ ಇಂದು ನಮ್ಮ ಅವತಾರಕಾರವನ್ನು ಪರಿಸಮಾಪ್ತಿಗೊಳಿಸಿ ವೃಂದಾವನ ಪ್ರವೇಶಮಾಡಲು ಸಿದ್ಧರಾಗಿದ್ದೇವೆ. ಇನ್ನು ಏಳುನೂರು ವರ್ಷಗಳ ಕಾಲ ಈ ಬೃಂದಾವನದಲ್ಲಿ ಯೋಗಾಸನ ಸನ್ನಿಷಣ್ಣರಾಗಿ ನಮ್ಮ ಹೃದಯಕಮಲನಿವಾಸಿಯದ ಶ್ರೀಮನ್ನಾರಾಯಣನ ತಪಸ್ಸಿನಲ್ಲಿ ನಿರತರಾಗಿ ಅವನನ್ನು ಆರಾಧಿಸಿ ಒಲಿಸಿಕೊಂಡು ನಮ್ಮ ಸಮಸ್ತ ಜ್ಞಾನ, ಭಕ್ತಿ, ವೈರಾಗ್ಯ, ತಪಸ್ಸು ಮತ್ತು ಈವರೆಗೆ ನಾವು ಗಳಿಸಿರುವ ಪುಣ್ಯರಾಶಿ - ಎಲ್ಲವನ್ನೂ ಮಾನವ ಜನಾಂಗದ ಅಭ್ಯುದಯ, ಕಲ್ಯಾಣಗಳಿಗಾಗಿಯೇ ಮೀಸಲಾಗಿರಿಸುತ್ತೇವೆ.
ಸಜ್ಜನರೇ, ಶ್ರೀಹರಿಯೇ ಪರದೈವವೆಂದು ನಂಬಿ ಅವನಲ್ಲಿ ನಿಷ್ಕಾಮ ಭಕ್ತಿ ಮಾಡುತ್ತಾ, ನಿಮ ನಿಮಗೆ ವಿಹಿತವಾದ ವರ್ಣಾಶ್ರಮಾನುಗುಣವಾಗಿ ಸತ್ಕರ್ಮಾನುಷ್ಠಾನರತರಾಗಿ ಸಾಧನಮಾಡಿಕೊಳ್ಳಿರಿ, ನಿರ್ಮಲಚಿತ್ತರಾಗಿ ಸಾತ್ವಿಕಭಾವನೆಯನ್ನು ಬೆಳೆಸಿಕೊಳ್ಳಿರಿ, ಜಗತ್ತಿನ ಎಲ್ಲಮತ, ಪಂಥ, ಧರ್ಮಗಳ ಜನರೆಲ್ಲರೂ ಭಗವಂತನಿಂದ ಸೃಷ್ಟರಾದವರೆಂದು ನಂಬಿ ಎಲ್ಲರೊಡನೆ ಪ್ರೀತಿ, ವಿಶ್ವಾಸಗಳಿಂದ ವರ್ತಿಸಿರಿ, ದ್ವೇಷ, ಅಸೂಯೆ, ಸ್ವಾರ್ಥ, ಅಹಂಕಾರ, ಮಮಕಾರ, ಕೋಪ ತಾಪಗಳಿಂದ ದೂರಾಗಿ, ಪರಸ್ಪರ ಸ್ನೇಹ ಸೌಹಾರ್ದಗಳಿಂದ ವರ್ತಿಸುತ್ತಾ, ಶೀಲಸಂಪನ್ನರಾಗಿ, ಸದಾಚಾರರಾಗಿ, ಸತ್ಯ-ಧರ್ಮಮಾರ್ಗದಲ್ಲಿ ಮುನ್ನಡೆಯಿರಿ. ತಂದೆ-ತಾಯಿಗಳು, ಗುರು-ಹಿರಿಯರುಗಳಲ್ಲಿ ವಿಧೇಯತೆಯಿಂದ ನಡೆದುಕೊಳ್ಳಿರಿ, ಶಾಂತಿ, ದಯೆ ಪರೋಪಕಾರ, ಪ್ರೇಮ, ಭೂತದಯೆ, ಪಶ್ಚಾತ್ತಾಪ, ಸ್ವಾಧ್ಯಾಯ, ಶೀಲ - ಇವು ನಿಮಗೆ ಶ್ರೇಯಃಸಾಧನಗಳಾಗುವುವು. ಶ್ರೀಹರಿಪರಮಾತ್ಮನಲ್ಲಿ ಅಚಲಭಕ್ತಿ ವಿಶ್ವಾಸಗಳಿಟ್ಟು ಭಾರತದ ಭವ್ಯಸಂಸ ತಿಗೆ ಗೌರವ ತರುವ, ರಾಷ್ಟ್ರಕ್ಕೆ ಕೀರ್ತಿ ತರುವ ಸತ್ಪಜೆಗಳಾಗಿ ಬಾಳಿರಿ. ಶ್ರೀಮದಾನಂದತೀರ್ಥ ಭಗವಾತ್ಪಾದರು ತೋರಿದ ಆನಂದಮಾರ್ಗದಲ್ಲಿ ಮುಂದುವರೆಯಿರಿ. ಅಂದರೆ ನಿಮೆಗೆಲ್ಲರಿಗೂ ಗೋವಿಂದನ ಆನಂದ ಸಾಮ್ರಾಜ್ಯದಲ್ಲಿ ಸದಾ ಸುಖಿಸುವ ಭಾಗ್ಯವು ನಿಶ್ಚಯವಾಗಿ ಲಭಿಸುವುದು. ಇದು ಸತ್ಯ! ಇದಕ್ಕೆ ನಾವೇ ಸಾಕ್ಷಿ!
ಆಸ್ತಿಕ ಶಿರೋಮಣಿಗಳೇ, ಹೆಚ್ಚೇನು ಹೇಳುವುದಿದೆ? ನಾವು ಈ ಮೊದಲೇ ತಿಳಿಸಿದಂತೆ ಜಗತ್ತಿನ ಸಕಲಸುಜೀವಿಗಳ ಸರ್ವವಿದ ದುಃಖಗಳನ್ನು ಪರಿಹರಿಸಿ ಸಕಲ ಸಜ್ಜನರಿಗೂ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನೂ ಶ್ರೀಹರಿಯಿಂದ ಕೊಡಿಸಿ, ನೀವೆಲ್ಲರೂ ಸುಖಸಂತೋಷ ಮಂಗಳಗಳಿಗೆ ಭಾಗಿಗಳಾಗುವಂತೆ ಮಾಡುವುದೇ ನಮ್ಮ ತಪಸ್ಸಿನ ಮುಖ್ಯಗುರಿಯಾಗಿದೆ! ಆದ್ದರಿಂದ ಸಜ್ಜನರೇ -
“ಸಮಾಯಾತ ಸಮಾಯಾತ ಪುರುಷಾರ್ಥಾರ್ಥಿನೋ ಜನಾಃ |
ಸಮಾಶ್ರಯಜ್ಞಮಸ್ಕಹತಸ್ಥಳಂ ರಮಾಪತಿಮ್ ||”
ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳನ್ನು ಅಪೇಕ್ಷಿಸುವ ಸಜ್ಜನರೇ ಬನ್ನಿರಿ ! ನಮ್ಮ ಹೃದಯಕಮಲ ವಿರಾಜಿತನಾದ ಶ್ರೀಲಕ್ಷ್ಮೀಪತಿಯಾದ ಶ್ರೀಮನ್ನಾರಾಯಣನನ್ನು ಆಶ್ರಯಿಸಿ ಭಜಿಸಿರಿ. ಆದರಿಂದ ನಿಮ್ಮೆಲ್ಲರ ಕಲ್ಯಾಣವಾಗುವುದು! “ಸರ್ವೇಜನಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು” ಶ್ರೀಹರಿಯು ನಿಮಗೆ ಮಂಗಳ ಪರಂಪರೆಯನ್ನು ಕರುಣಿಸಲಿ-ಇದೇ ನಾವು ನಿಮಗೆ ನೀಡುವ ಚರಮೋಪದೇಶ ! ಅಮರ ಸಂದೇಶ !!”
ಹೀಗೆ ಕಾರುಣ್ಯಪೂರ್ಣಹೃದಯರಾಗಿ ಜನತೆಗೆ ಉಪದೇಶಿಸಿದ ಶ್ರೀಮದ್ರಾಘವೇಂದ್ರಗುರುಸೌರ್ವಭೌಮರು. ಮಂದಹಾಸ- ವಿಕಸಿತ ಮುಖಾರವಿಂದರಾಗಿ ಅತ್ಯಂತ ದಯಾದ್ರ್ರದೃಷ್ಟಿಯಿಂದ ಭಕ್ತಜನರನ್ನು ಅವಲೋಕಿಸಿ ಅಭಯಪ್ರದಾನಪೂರ್ವಕವಾಗಿ ಆಶೀರ್ವದಿಸಿ, ಗರ್ಭಗುಡಿಯ ಮೆಟ್ಟಲುಗಳನ್ನೇರಿ ಸಶರೀರರಾಗಿ ಬೃಂದಾವನ ಪ್ರವೇಶಮಾಡಿ, ಕೂರ್ಮಾಸನದ ಕೆಳಭಾಗದಲ್ಲಿ ಸಿದ್ದಪಡಿಸಲಾದ ಅರಡಿಯು ಚಚೌಕ ಅಂತರ್ಗುಹೆಯಲ್ಲಿ ಕೃಷ್ಣಾಜಿನದ ಮೇಲೆ ಪದ್ಮಾಸನಾಸೀನರಾಗಿ, ದಂಡಕಮಂಡಲ, ಜಪಮಾಲಾವಿರಾಜಿತರಾಗಿ ಯೋಗಾಸನದಲ್ಲಿ ಪೂರ್ವಭಿಮುಖವಾಗಿ ಕುಳಿತು ನಿಮೀಲಿತಾರ್ಧನಯನರಾಗಿ ತಮ್ಮ ಹೃದಯ ಮಂಟಪದಲ್ಲಿ ಶ್ರೀಮೂಲರಾಮ, ನರಹರಿ, ವೇದವ್ಯಾಸ, ಮರುಳೀಮೋಹನ ಕೃಷ್ಣ, ಶ್ರೀಲಕ್ಷ್ಮೀನಾರಾಯಣರನ್ನು ನೆಲೆಗೊಳಿಸಿ ಶ್ರೀರಮಾರಮಣನ ತರುಣಾರುಣಚರಣಕಮಲಗಳಲ್ಲಿ ತಮ್ಮ ಮನಸ್ಸನ್ನು ಸ್ಥಿರಗೊಳಿಸಿ ಜಗನ್ಮಂಗಲ ತಪೋನಿರತರಾದರು !! ಆಗ ಅಲ್ಲಿ ಅನೇಕ ಮಿಂಚಿನಗೊಂಚಲುಗಳು ಮಿನುಗಿದಂತಾಗಿ, ವಿವಿಧ ವರ್ಣರಂಜಿತ ಪ್ರಭಾಮಂಡಲದಿಂದ ಉಜ್ವಲವಾಗಿ, ದೇದೀಪ್ಯಮಾನವಾಗಿ ಶ್ರೀಗುರುಸಾರ್ವಭೌಮರು ತಪ್ತಕಾಂಚನ ವರ್ಣಕಾಂತಿಯಿಂದ ಕಂಗೊಳಿಸಿದರು! ಆ ಅಪೂರ್ವ ಘಟನೆಯಿಂದ ರೋಮಾಂಚಿತರಾದ ಸಕಲಜನರೂ ಆ ಪರಮಕಾಂತಿಯಿಂದ ಬೆಳಗುತ್ತಿರುವ ಶ್ರೀಗುರುರಾಜರ ದಿವ್ಯಮಂಗಳ ಸ್ವರೂಪಾವಲೋಕನ- ದಿಂದ ಮೈಮರೆತು ಗುರುಗಳ ಜಯಜಯಕಾರಮಾಡಲಾರಂಭಿಸಿದರು.
ಆಗ ಗುರುಸಾರ್ವಭೌಮರ ಕರದಲ್ಲಿ ಜಪಮಾಲೆಯನ್ನು ಹಿಡಿದು ಪ್ರಣವಮಂತ್ರವನ್ನು ಜಪಿಸಲಾರಂಭಿಸಿದರು. ಶ್ರೀರಾಯರ ಮುಖಾರವಿಂದದಿಂದ, “ಓಂ ಓಂ” ಎಂಬ ಪ್ರಣವಧ್ವನಿ ಹೊರಹೊಮ್ಮಿತು! ಆ ಓಂಕಾರಧ್ವನಿಯು ಸಮಸ್ತಜನರ ತನುಮನಗಳಲ್ಲಿ ಪ್ರತಿಧ್ವನಿಸಿ ಸಕಲರನ್ನೂ ರೋಮಾಂಚನಗೊಳಿಸಿತು. ಆ ಕಾರುಣ್ಯ ಮೂರ್ತಿಗಳ ಮುಖದಿಂದ ಅವ್ಯಾಹತವಾಗಿ ಹೊರಟ ಓಂಕಾರವು ಸಕಲದಿಗಂತರಾಲಗಳಲ್ಲಿಯೂ ವ್ಯಾಪಿಸಿ ಜಗತ್ತೇ ಓಂಕಾರಮಯವಾಯಿತೋ ಎಂಬಂತೆ ಓಂ ಓಂ ಓಂ ಎಂಬ ದಿವ್ಯನಾದದಿಂದ ಪರಿಪೂರ್ಣವಾಯಿತು! ಹಾಯ್, ಹಾಯ್ ಈ ಕರುಣಾಮೂರ್ತಿಗಳಾದ, ಶರಣಜನಮಂದಾರರಾದ ಗುರುರಾಜರು ಬೃಂದಾವನವನ್ನು ಪ್ರವೇಶಿಸಿಬಿಟ್ಟಿರಲ್ಲಾ ಎಂದು ಸಮಸ್ತಜನರು ಭಕ್ತಿನಾಂಗರಾಗಿ ನೀರು ತುಂಬಿದ ಕಣ್ಣುಗಳಿಂದ ಗುರುರಾಜರ ಭವ್ಯಚರಮದರ್ಶನಮಾಡಿ ಗದ್ಗದ ಕಂಠದಿಂದ “ಗುರುಸಾರ್ವಭೌಮ, ದಯಾಘನ, ಭಕ್ತವತ್ಸಲ, ಕಲಿಯುಗ ಕಲ್ಪತರೋ! ನಿಮಗೆ ನಮೋ ನಮೋ”ಎಂದು ಸ್ತುತಿಸುತ್ತಿರಲು ಯೋಗಾಸನಾಸೀನರಾಗಿ ಗುರು ಪುಂಗವರು ಕುಳಿತಿದ್ದ ಅಂತರ್ಗುಹೆಯ ಮೇಲ್ಬಾಗದಲ್ಲಿ ಕೂರ್ಮಾಸನ ಶಿಲೆಯನ್ನು ಮುಚ್ಚಿದ ಕೂಡಲೇ ಶ್ರೀಗುರುಸಾರ್ವಭೌಮರು ಜಗತ್ತಿನ ಜನತೆಯ ದೃಷ್ಟಿಗೆ ಅಗೋಚರರಾದರು, ಅದೃಶ್ಯರಾದರು !
ಅನಂತರ ಕೂರ್ಮಾಸನ ಶಿಲೆಯಮೇಲೆ ಬೃಂದಾವನವನ್ನು ಸ್ಥಾಪಿಸಿ ಏಳುನೂರು ಶ್ರೀಲಕ್ಷ್ಮೀನಾರಾಯಣ ಶಾಲಿಗ್ರಾಮಗಳು, ಇನ್ನೂ ಸಹಸ್ರಾರು ಭಗವದವತಾರರೂಪ ಶಾಲಿಗ್ರಾಮಗಳು ನೂರಾರು ಭಗವದ್ಧಿಗ್ರಹಗಳನ್ನು (ಪ್ರತಿಮೆಗಳು) ಮಂಡಿಸಿ ಮೇಲ್ಬಾಗವನ್ನು ರಜತಫಲಕದಿಂದ ಮುಚ್ಚಿ ಅದರ ಮೇಲೆ ಪವಿತ್ರಮೃತ್ತಿಕೆಯನ್ನು ತುಂಬಿ, ಮೇಲ್ಬಾಗದಲ್ಲಿ ತೆನೆಗಳನ್ನು ಸ್ಥಾಪಿಸಿ, ಲಕ್ಷ್ಮೀನರಸಿಂಹ - ಶ್ರೀನಿವಾಸದೇವರುಗಳ ಪ್ರತಿಮೆಗಳನ್ನು ಸ್ಥಾಪಿಸಲಾಯಿತು. ಆಗ ಶ್ರೀಯೋಗೀಂದ್ರತೀರ್ಥರು ಬೃಂದಾವನದ ಮುಂಭಾಗದ ಮಂಟಪದಲ್ಲಿ ಸ್ಥಾಪಿಸಿದ ಶ್ರೀಪ್ರಾಣದೇವರ ಪ್ರತಿಮೆಗೆ ಕುಂಭಾಭಿಷೇಕಮಾಡಿ, ಪ್ರತಿಷ್ಠಾಮಹೋತ್ಸವವನ್ನು ನೆರವೇರಿಸಿ ಮಂಗಳಾರತಿ ಮಾಡಿ ಬಂದು ಶ್ರೀಗುರುರಾಜರ ಬೃಂದಾವನಕ್ಕೆ ಕುಂಭಾಭಿಷೇಕಮಾಡಿ, ತತ್ವನ್ಯಾಸ, ಮಾತೃಕಾನ್ಯಾಸ, ಅಷ್ಟಾಕರಮಂತ್ರಜಪಾದಿಗಳನ್ನು ನೆರವೇರಿಸಿ ತುಳಸೀ ಪುಷ್ಪಮಾಲೆಗಳನ್ನು ಅರ್ಪಿಸಿ ಮಹಾಮಂಗಳಾರತಿ ಮಾಡಿದರು. ಇಂದ್ರನೀಲಮಣಿಕಾಂತಿಯಿಂದ ಬೆಳಗುವ ಶ್ರೀಗುರುರಾಜರ ಭವ್ಯ ಬೃಂದಾವನ ದರ್ಶನದಿಂದ ಪುಳಕಿತಗಾತ್ರರಾದ ಸಕಲಸಜ್ಜನರು “ರಾಜಾಧಿರಾಜ ಶ್ರೀರಾಘವೇಂದ್ರ ಗುರುಸಾರ್ವಭೌಮ ಗೋವಿಂದಾ ಗೋವಿಂದ” ಎಂದು ಉಚ್ಚ ಕಂಠದಿಂದ ಘೋಷಿಸಿದರು.
ಆನಂತರ ಸಾಷ್ಟಾಂಗ ನಮಸ್ಕಾರಮಾಡಿದ ಶ್ರೀಯೋಗೀಂದ್ರತೀರ್ಥರು, ಶ್ರೀಗುರುರಾಜರು ಆಜ್ಞಾಪಿಸಿದಂತೆ ಅಂದು ಶ್ರೀಬೃಂದಾವನ ಸನ್ನಿಧಿಯಲ್ಲಿಯೇ ಶ್ರೀಮೂಲರಾಮದೇವರ ಪೂಜಾರಾಧನೆಯನ್ನು ಪೂರೈಸಿ ಶ್ರೀಗುರುರಾಜರ ಮಹಾಸಮಾರಾಧನೆಯನ್ನೂ ನೆರವೇರಿಸಿದರು. ಮಹಾಸಮಾರಾಧನಾಂಗವಾಗಿ ಅಲಂಕಾರ ಬ್ರಾಹ್ಮಣರುಗಳ ಪಾದಪ್ರಕ್ಷಾಳನ, ಅವಾಹನಾದಿ ಪೂಜಾಕಾರಗಳನ್ನು ಶ್ರೀಪಾದ ಪುತ್ರರಾದ ಶ್ರೀಲಕ್ಷ್ಮೀನಾರಾಯಣಾಚಾರ್ಯರಿಂದ ಮಾಡಿಸಿದ ಶ್ರೀಯೋಗೀಂದ್ರ ಗುರುವರರು ಶ್ರೀಗುರುರಾಜರ ಬೃಂದಾವನಸನ್ನಿಧಿಗೆ ಚಿತ್ತೆಸಿದರು. ಆ ಹೊತ್ತಿಗಾಗಲೇ ಶ್ರೀಗುರುಗಳ ಬೃಂದಾವನವನ್ನು ಪಟ್ಟೆ ಪೀತಾಂಬರಗಳು, ಸುವರ್ಣಮುಕ್ತಾಮಾಲೆಗಳು ಇತರ ವಿವಿಧ ಪುಷ್ಪಮಾಲೆಗಳು, ತುಳಸೀಮಾಲೆಗಳು ದ್ವಾದಶನಾಮಮುದ್ರೆ, ಊರ್ಧ್ವಪುಂಡ್ರ, ಗಂಧಾಕ್ಷತೆಗಳಿಂದ ಆಲಂಕರಿಸಲಾಗಿತ್ತು. ಶ್ರೀಯೋಗೀಂದ್ರತೀರ್ಥರು ಶ್ರೀರಾಯರ ಬೃಂದಾವನದ ಕಂಕಣಭಾಗದಲ್ಲಿ ಸುವರ್ಣ ಪೀಠದ ಮೇಲೆ ಶ್ರೀಮೂಲರಾಮ ದಿಗ್ವಿಜಯರಾಮ ಜಯರಾಮ-ಸಂತಾನ ಗೋಪಾಲಕೃಷ್ಣ-ವ್ಯಾಸಮುಷ್ಟಿ-ಬಲಮುರಿ ಶಂಖ, ರತ್ನಗರ್ಭಶಾಲಿಗ್ರಾಮ, ರಾಮ ಟಂಕಿವರಹಗಳನ್ನಿಟ್ಟು ಕನಕಾಭಿಷೇಕಮಾಡಿ ಶ್ರೀಗುರುಗಳಿಗೆ ಸಂಪ್ರದಾಯನುಸಾರವಾಗಿ ಹಸ್ತೋದಕ- ವನ್ನು ಸಮರ್ಪಿಸಿ, ಭಕ್ಷ್ಯತಿಶಯದಿಂದ ಗದ್ಗದಸ್ವರದಿಂದ ಶ್ರೀಗುರುರಾಜರ ಮೇಲೆ ಚರಮಶ್ಲೋಕವನ್ನು ರಚಿಸಿ - “ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ
ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಲವೇ”
ದುರ್ವಾದಿಗಳೆಂಬ ಕತ್ತಲೆಗೆ ಸೂರ್ಯರಾದ, ಸದೈಷ್ಣವರೆಂಬ ಕುಮುದಪುಷ್ಪಗಳಿಗೆ ಚಂದ್ರಮರಾದ, ಅತ್ಯಂತ ದಯಾಳುಗಳಾದ ಶ್ರೀರಾಘವೇಂದ್ರಗುರುಗಳಿಗೆ ನಮಸ್ಕಾರ ! ಎಂದು ಪಠಿಸಿ, ಭಾವವನ್ನು ನಿರೂಪಿಸಿ ಗುರುಸಾರ್ವಭೌಮರಿಗೆ ಸಮರ್ಪಿಸಿ ನಮಸ್ಕರಿಸಿದರು.