|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೧೨೪, ಮಂತ್ರಾಲಯಾಂಬಿಕೆಯ ದರ್ಶನ ವರಪ್ರಾಪ್ತಿ

ಶ್ರೀಶಾಲಿವಾಹನಶಕೆ ೧೫೯೩ ನೇ ವಿರೋಧಿಕೃತ್‌ ಸಂವತ್ಸರವು ಪ್ರಾರಂಭವಾಯಿತು. ಶ್ರೀರಾಘವೇಂದ್ರಸ್ವಾಮಿಗಳವರು ತಮ್ಮ ಪ್ರಿಯಶಿಷ್ಯರಾದ ಶ್ರೀಯೋಗೀಂದ್ರತೀರ್ಥ ಶ್ರೀಪಾದಂಗಳವರೊಡನೆ ಶ್ರೀವೆಂಕಟೇಶ್ವರನ ಸನ್ನಿಧಿಯಲ್ಲಿ ಚಾತುರ್ಮಾಸವ್ರತವನ್ನು ಸ್ವೀಕರಿಸಿ ವಿಶೇಷ ಸಂಭ್ರಮದಿಂದ ಜ್ಞಾನಪ್ರಸಾರ ಸಜ್ಜನೋದ್ದಾರ ಕಾರ್ಯನಿರತರಾದರು.

ಒಂದು ದಿನ ಸೂರ್ಯೋದಯಾನಂತರ ಸ್ನಾನ-ಆಕ-ಜಪತಪಾದನುಷ್ಠಾನಗಳನ್ನು ಪೂರೈಸಿ ಶ್ರೀಗುರುರಾಜರು ದ್ವಾರಪಾಲಕನೊಡನೆ ಪ್ರಹ್ಲಾದರಯಜ್ಞಕುಂಡದ ಬಳಿಗೆ ಬಂದು ದ್ವಾರಪಾಲಕನನ್ನು ದೂರದಲ್ಲಿ ಕಾವಲಿರಲು ಆಜ್ಞಾಪಿಸಿ ಯಜ್ಞವೇದಿಕೆಗೆ ನಮಸ್ಕರಿಸಿ, ಯಜ್ಞಕುಂಡದಲ್ಲಿ ಸನ್ನಿಹಿತಳಾಗಿದ ಪ್ರಹ್ಲಾದರ ಕುಲದೇವತೆಯೂ, ಕ್ಷೇತ್ರದೇವತೆಯೂ ಆಗಿದ್ದ ಸಾಕ್ಷಾತ್ ಶ್ರೀದುರ್ಗಾದೇವಿಯನ್ನು (ಮಂತ್ರಾಲಯಾಂಬಿಕಾ) ಏಕಾಂತವಾಗಿ ಭಕ್ತಿಭರದಿಂದ ಸ್ತುತಿಸಲಾರಂಭಿಸಿದರು. 

“ನಮೋಸ್ತು ವರದೇ ಕೃಷ್ಣ ಕೌಮಾರಿ ಬ್ರಹ್ಮಚಾರಿಣಿ | ಬಾಲಾರ್ಕಸದೃಶಾಕಾಯೇ ಪೂರ್ಣಚಂದ್ರ ನಿಭಾನನೇ ||

ಭಾಸಿ ದೇವಿ ಯಥಾ ಪದ್ಮಾ ನಾರಾಯಣ ಪರಿಗ್ರಹಾ | ಸ್ವರೂಪೇ ಬ್ರಹ್ಮಚರ್ಯಂ ಚ ವಿಶದಂ ತವ ಖೇಚರಿ || 

ಕೌಮಾರಂ ವ್ರತಮಾಸ್ಥಾಯ ತ್ರಿದಿವಂ ಪಾವಿತಂ ತ್ವಯಾ | ತೇನ ತ್ವಂ ಸೂಯಸೇ ದೇವಿ ತ್ರಿದಶ್ಯ: ಪೂಜ್ಯಸೇsಪಿ ಚ || ತ್ರೈಲೋಕರಕ್ಷಣಾರ್ಥಾಯ ಮಹಿಷಾಸುರನಾಶಿನಿ | ಪ್ರಸನ್ನಾ ಮೇ ಸುರಶ್ರೇಷ್ಟೇ ದಯಾಂ ಕುರು ಶಿವಾ ಭವ || ಪ್ರಣಮಂತಿ ಚ ಯೇ ತ್ವಾಂ ಹಿ ಪ್ರಭಾತೇ ತು ನರಾ ಭುವಿ | ನ ತೇಷಾಂ ದುರ್ಲಭಂ ಕಿಂಚಿತ್ ಪುತ್ರತೋ ಧನತೋSಪಿ ವಾ || ದುರ್ಗಾತ್ತಾರಯಸೇ ದುರ್ಗೆ ತಂ ದುರ್ಗಾ ಸ್ಮೃತಾ ಭುಧೈಃ | ತ್ವಂ ಕೀರ್ತಿಃ ಶ್ರೀರ್ಧೃತಿಃ ಸಿದ್ಧಿರ್ಹಿವಿ್ರದ್ಯಾ ಸಂತತಿರ್ಮತಿಃ || ಸಂಧ್ಯಾ ರಾತ್ರಿ ಪ್ರಭಾ ನಿದ್ರಾ ಜೊತ್ಸಾ ಕಾಂತಿಃ ಕ್ಷಮಾ ದಯಾ | ಪ್ರಣತಶ್ಚ ತಥಾ ಮೂರ್ಧಿ ತವ ದೇವಿ ಸುರೇಶ್ವರಿ || ತಾಹಿ ಮಾಂ ಪದ್ಮಪತ್ರಾಕ್ಷಿ ಸತ್ಯಾಸತ್ಯಾ ಭವಸ್ತ ನಃ | ಶರಣಂ ಭವ ಮೇ ದುರ್ಗೆ ಶರಣ್ಯ ಭಕ್ತವತ್ಸಲೆ ||' “ಮಹಾಲಕ್ಷ್ಮೀ ಚ ವಿದ್ಯಹಿ ವಿಷ್ಣುಪತ್ನಿ ಚ ಧೀಮಹಿ ತನ್ನೋ ಲಕ್ಷ್ಮೀಃ ಪ್ರಚೋದಯಾತ್ |"463 “ತಾಮಗ್ನಿವರ್ಣಾ೦ ತಪಸಾ ಜ್ವಲಂತೀಂ ವೈರೋಚನೀಂ ಕರ್ಮಫಲೇಷು ಜುಷ್ಮಾಂ | ದುರ್ಗಾ೦ ದೇವೀಗ್೦ ಶರಣಮಹಂ ಪ್ರಪದೇ ಸುತರಸಿತರಸೇ ನಮಃ” “ಕಾತ್ಯಾಯನಾಯ ವಿದ್ಮಹೇ ಕನ್ಯಕುಮಾರಿ ಧೀಮಹಿ | ತನ್ನೋ ದುರ್ಗಿ ಪ್ರಚೋದಯಾತ್ ||”

ಭಕ್ತಿಶ್ರದಾನ್ವಿತರಾದ ಶ್ರೀಸ್ವಾಮಿಗಳವರ ವದನಾರವಿಂದದಿಂದ ನಿರರ್ಗಳವಾಗಿ ಶ್ರೀದುರ್ಗಾಸ್ತೋತ್ರ ಹೊರಹೊಮ್ಮುತ್ತಿರಲು ಭಾಗವತಾಗಣಿಗಳಾದ ಪ್ರಹ್ಲಾದರಾಜರ ಅವತಾರರಾದ ಶ್ರೀಗುರುರಾಜರ ಭಕ್ತಿಗೆ ಮೆಚ್ಚಿದ ದೇವಿಯು ಮೈದೋರಿದಳು. ತರುಣಾರುಣ ಕಾಂತಿಪುಂಜದಿಂದ ಆ ಪ್ರದೇಶವೆಲ್ಲವೂ ಬೆಳಗಿತು. ಸರ್ವಾಭರಣ ಭೂಷಿತಳಾದ ಸಿಂಹವಾಹಿನಿಯು ಅರಳಿದ ನಗೆಮಲ್ಲಿಗೆಯ ಮುಖದಿಂದ ಶೋಭಿಸುತ್ತಾ, ವಾತ್ಸಲ್ಯ ಕಾರುಣ್ಯಗಳ ಬೆಳದಿಂಗಳ ತಂಗಿರಣಗಳನ್ನು ವರ್ಷಿಸುತ್ತಾ ಅಭಯವರದ ಮುದ್ರಾಂಕಿತ ಮಂಗಳಕರಳಾಗಿ “ವತ್ಸ! ಬಹುಕಾಲದ ನಂತರ ತಾಯಿಯ ನೆನಪಾಯಿತೇ ? ಏಕೆ ಕರೆದೆ ಮಗು ? ನನ್ನೊಡೆಯನೇ ನಿನ್ನ ಕರೆಗೆ ಕಂಬದಿಂದೊಡೆದು ಬಂದು ಎಡಬಿಡದೆ ನಿನ್ನೊಡನಿದ್ದು ನಲಿದೊಲಿದು ಪೊರೆಯುತ್ತಿರಲು ನನ್ನಿಂದೇನು ಅಪೇಕ್ಷಿಸುವೆ ಕುಮಾರ” ಎಂದು ಮೃದುಮಧುರ ನುಡಿಗಳಿಂದ ಪ್ರಶ್ನಿಸಿದಳು.

ಅನುಗ್ರಹೋನ್ಮಖಳಾಗಿ ಮೈದೋರಿಬಂದು ತಮ್ಮೆದುರು ನಿಂತ ಜಗನ್ಮಾತೆಯನ್ನು ಕಂಡು ಭಕ್ತತಿಶಯದಿಂದ ಆನಂದದ ಕಣ್ಣೀರು ಹರಿಯುತ್ತಿರಲು ಶ್ರೀಗುರುರಾಜರು ಗದ್ಗದಕಂಠದಿಂದ ನಮೋ ನಮೋ ಲೋಕಜನನಿ. ನಾರಾಯಣ ಮನೋಹಾರಿಣಿ, ಚತುರಾನನ ವರಜನನಿ, ದೈತ್ಯ ಸಂಹಾರಿಣಿ, ಖಿಲಕುಲದಮನಿ, ಲೋಕಕಲ್ಯಾಣಿ ಭಕ್ತಜನ ಚಿಂತಾಮಣಿ, ಶರಣಜನ ಮನೋಲ್ಲಾಸಿನಿ, ಕಮಲಾಲಯೆ, ಕಮಲೆ, ಮತ್ಕುಲಸಂರಕ್ಷಿಣಿ! ಮಾತೆ, ನಿನ್ನ ದರ್ಶನದಿಂದ ಧನ್ಯನಾದೆನಮ್ಮ! ವತ್ತನೊಡನೆ ವಿನೋದವೇ ವಿಷ್ಣುರಮಣಿ ? ನೀನಿಲ್ಲದೆಡೆಯುಂಟೆ ಈ ಹದಿನಾಲ್ಕು ಲೋಕದೊಳು ? ತಾಯಿ,ನನ್ನೊಡನೆಡೆಬಿಡದಿಹನೆಂದಿಯಲ್ಲವೇ ? ನಿತ್ಯಾಪಿಯೋಗಿನಿಯಾದ ನೀನು ನನ್ನ ಪ್ರಭುವನ್ನು ಬಿಟ್ಟಿರದವಳೆಂದು ವೇದಗಳು ಸಾರುತ್ತಿರುವ ಮಹಾಮಹಿಮಳು ನೀನೆಂದು ನಾನರಿಯೆನೇ ? 

“ಯಂ ಕಾಮಯೇ ತಂ ತಮುಗ್ರಂ ಕೃಮಿ 

ತಂ ಬ್ರಹ್ಮಾಣಂ ತಮೃಷಿಂ ತಂ ಸುಮೇಧಾಮ್” 

“ಯತಃ ಪ್ರಸೂತಾ ಜಗತಃ ಪ್ರಸೂತಿ ಮುಂತಾಗಿ ವೇದಗಳಿಂದ ಗೇಗೀಯಮಾನಳಾದ ನೀನು ಬ್ರಹ್ಮರುದ್ರೇಂದ್ರಾದಖಿಲ ಬೃಂದಾರಕವೃಂದವಂದನೀಯ ಪಾದಾರವಿಂದಳಾಗಿದ್ದೀಯೆ! ಹೆಚ್ಚೇನು ತಾಯಿ, ಪ್ರಳಯಕಾಲದಲ್ಲಿ ಏನೂ ಇಲ್ಲದಂತಾಗಲೂ ಆಲದೆಲೆಯರೂಪತಾಳಿ, ಮಹಾನುಭಾವಳಾದ ನೀನು ಶ್ರೀಹರಿಯು ಪವಡಿಸಲೊಡಲಿತ್ತು ಎಡೆಬಿಡದೆ ಪರಾತ್ಪರನಾದ ಪರಮಾತ್ಮನನ್ನು ಸೇವಿಸುಪಿ ಎಂಬುದನ್ನು ನಾನರಿತಿರುವೆನಮ್ಮ! ಹೇ ವೈಷ್ಣವಿ! ನಿನ್ನ ಪ್ರಭುವಿನ ಸಂಕಲ್ಪದಂತೆ ನಾನು ಈ ಯಜ್ಞವೇದಿಕೆಯಲ್ಲಿ ಏಳುನೂರು ವರ್ಷಗಳ ಪರ್ಯಂತ ಲೋಕಕಲ್ಯಾಣವೆಸಗಲು ಬೃಂದಾವನಾಂತರ್ಗತನಾಗಿದ್ದು, ಜಗದೊಡೆಯನಾದ ನನ್ನ ಸ್ವಾಮಿಯನ್ನು ತಪಸ್ಸಿನಿಂದ ಸಂತೋಷಪಡಿಸಲಾಶಿಸಿದ್ದೇನೆ. ದೇವಿ, ನಾನಿಲ್ಲಿ ವಾಸಿಸಲನುಮತಿ ನೀಡಮ್ಮ, ನನ್ನನ್ನು ಆಶ್ರಯಿಸಿ ಬಂದು ಭಜಿಸುವ ಭಕ್ತಸಮುದಾಯಕ್ಕೆ ನಾನು ಕೊಡಬಯಸಿದ ಅಪಾರವಾದ ಚತುರ್ವಿಧಪುರುಷಾರ್ಥಸಂಪತ್ತನ್ನು ನೀನೊಲಿದು ಕರುಣಿಸಬೇಕಮ್ಮ, ನಾನು ಪ್ರಾರ್ಥಿಸಿದಾಗಲೆಲ್ಲ ಸಂಪದಭಿಮಾನಿನಿಯಾದ ನೀನು ಸುಪ್ರಸನ್ನಳಾಗಿ, ನನ್ನ ಮೂಲಕವಾಗಿ ನಿಖಿಲಭಕ್ತಜನತೆಗೆ ಸಂಪತ್ತು-ಸನ್ಮಂಗಳಗಳೇ ಮುಂತಾದ ವಾಂಛಿತಾರ್ಥಗಳನ್ನು ಕೊಡಿಸಿ ಕಾಪಾಡಬೇಕಮ್ಮ! ನನ್ನಲ್ಲಿ ಕೃಪೆದೋರಿ ಈ ವರವನ್ನು ನನಗೆ ಕರುಣಿಸು ತಾಯಿ' ಎಂದು ಪ್ರಾರ್ಥಿಸಿ ದೇವಿಗೆ ಸಾಷ್ಟಾಂಗವೆರಗಿದರು. 

ಮಂದಹಾಸವದರನಾರವಿಂದ ಸಂಶೋಭಿತಳಾದ, ನಂದನಂದನನಾದಗೋವಿಂದನ ಅಂದದರಾಣಿಯಾದ ಇಂದಿರೆಯು ಮುಂದೆ ಬಂದು ಭಕ್ತಬಂಧುಗಳಾದ ಶ್ರೀರಾಘವೇಂದ್ರರ ಬಂಧುರ ಶಿರಸ್ತನಲ್ಲಿ ತನ್ನ ಅಮೃತಹಸ್ತವಿರಿಸಿ, “ಕುಮಾರ! ತಥಾಸ್ತು” ಎ೦ದು ವರವಿತ್ತು ಹರಸಿದಳು. 

ಆನಂತರ ರಾಯರಲ್ಲಿ ಸುಪ್ರಸನ್ನಳಾದ ಆ ದೇವಿಯು “ತಾಯಿಯು ಮಗನಲ್ಲಿ ಮಮತೆ ತೋರುವುದು ಸ್ವಾಭಾವಿಕವಲ್ಲವೇ ಕುದ! ಹಿಂದೆ ನಿನ್ನ ಕುಲದೇವತೆಯಾಗಿದ್ದ ನನ್ನನ್ನು ನೀನು ಬಹುವಾಗಿ ಆರಾಧಿಸಿದಿಯೇ; ಈಗಲೂ ನೀನು ನನ್ನನ್ನು ಕುಲದೇವತೆಯನ್ನಾಗಿ ಮಾಡಿಕೋ, ಕುಮಾರ, ನಿನ್ನ ಎಲ್ಲ ಕಾರ್ಯಗಳಿಗೂ ನಾನು ಬೆಂಗಾವಲಾಗಿದ್ದು ಸಲಹುವನು. ಮುಂದೆ ಧರ್ಮವು ಸಂಪೂರ್ಣವಾಗಿ ಗ್ಲಾನಿಯಾಗುವ ಪರಿಸ್ಥಿತಿ ಬಂದೊದಗುವುದು. ಆಗ ನಾನು ಮತ್ತೆ ಅವತರಿಸಿ ಧರ್ಮಸಂಸ್ಥಾಪನೆ ಮಾಡಬೇಕೆಂದು ಶ್ರೀಹರಿಯ ಆಜ್ಞೆಯಾಗಿದೆ! ಅಲ್ಲಿಯವರೆಗೆ ಧರ್ಮಸಂರಕ್ಷಣೆಯ ಭಾರ ನಿನಗೆ ಸೇರಿದೆ! ಮಗು, ನಮ್ಮಿಬ್ಬರ ಕಾರ್ಯವೂ ಒಂದೇ ಆಗಿದೆ. ಶ್ರೀಹರಿಯ ವಿಶೇಷಾನುಗ್ರಹ, ನನ್ನ ಕಾರುಣ್ಯ, ವಾಯುದೇವನ ಪರಿಪೂರ್ಣ ಸಹಾಯ ನಿನಗಿರುವುದರಿಂದ ಇತರರಿಂದ ಮಾಡಲಾಗದ ಮಹತ್ಕಾರ್ಯಗಳನ್ನು ನೀನು ಸುಲಭವಾಗಿ ನೆರವೇರಿಸಲು ಸಮರ್ಥನಾಗಿದ್ದೀಯೆ! ನಾನು ಭಕ್ತಾಗ್ರಣಿಯಾದ ನಿನ್ನ ಮಹಿಮೆಯನ್ನು ಮೆರೆಸಲು ನಿನ್ನಾಲಯದ ಮುಂದೆ ವಾಸಮಾಡುವೆನು. ಕಂದ, ನನ್ನ ಗುರುತಾಗಿ ನಿನ್ನಾಲಯದ ಮಹಾದ್ವಾರದ ಒಳಭಾಗದಲ್ಲಿ ಇಕೋ ಈ ಮೇಷಮಸ್ತಕಗಳನ್ನು ಸ್ಥಾಪಿಸು !466 ನಾನು ಸಕಲ ದುಷ್ಟ ಶಕ್ತಿಗಳನ್ನು ನಿಗ್ರಹಿಸಿ ಸದಾ ನಿನ್ನ ಮತ್ತು ನಿನ್ನ ಭಕ್ತಕೋಟಿಯ ಬೆಂಗಾವಲಾಗಿದ್ದು ರಕ್ಷಿಸುವೆನು! ಇನ್ನು ಮುಂದೆ ಜಗತ್ತಿನಲ್ಲಿ ಈನಿನ್ನ ಕ್ಷೇತ್ರವು “ಮಂತ್ರಸಿದ್ದಿ ಕ್ಷೇತ್ರ ಎಂದು ಪ್ರಖ್ಯಾತವಾಗಿ ಭಾರತದ ಭವ್ಯ ಸಂಸ ತಿಯ ಸಂಕೇತವಾಗಿ, ಲೋಕವಿಖ್ಯಾತವಾಗಿ ಆಸ್ತಕಜನತೆಯ ಯಾತ್ರಾಸ್ಥಳವಾಗಿ ರಾಜಿಸುವುದು! ಕಲಿಯುಗದ ಜನತೆಯ ಉದ್ಧಾರ-ಕಲ್ಯಾಣಗಳು ನಿನ್ನಿಂದ ಅವ್ಯಾಹತವಾಗಿ ನೆರವೇರುವುದು. ಯತಿರಾಜ! ನೀನು ವಿಶ್ವಗುರುವೆಂದು ಅಖಂಡ ಕೀರ್ತಿಗಳಿಸಿ ವಿಶ್ವದ ಜನತೆಯ ಹಿತಸಾಧಕನಾಗಿ ಮೆರೆಯುತ್ತೀಯೇ, ನಿನ್ನಿಂದಾಗಿ ಭಾರತದಲ್ಲಿ ಸಹಸ್ರಾರು ವರ್ಷಗಳ ಕಾಲ ವೈದಿಕಸವೈಷ್ಣವತತ್ವ-ಧರ್ಮಗಳು ಬೆಳಗುವವು. ವತ್ಸ, ನಿನಗೆ ಮಂಗಳವಾಗಲಿ” ಎಂದು ನುಡಿದು ದೇವಿಯು ಇಂದಿನ ಮಂತ್ರಾಲಯಮ್ಮನ ಆಲಯವಿರುವಲ್ಲಿಗೆ ನಡೆತಂದು, ಮತ್ತೊಮ್ಮೆ ಶ್ರೀಗುರುರಾಜರನ್ನು ಆಶೀರ್ವದಿಸಿ, ಶಿಲಾರೂಪತಾಳಿ ನಿಂತಳು! ಅಂದಿನಿಂದ ಆ ಲೋಕಮಾತೆಯು ಮಂತ್ರಾಲಯಾಂಬಿಕೆ ಎಂಬ ನಾಮವಿಭೂಷಿತಳಾಗಿ ಸರ್ವಭಕ್ತಸಂದೋಹ ವಂದಿತಳಾಗಿ ರಾರಾಜಿಸುತ್ತಿರುವಳು. 

ದೇವಿಯದರ್ಶನ ಅನನ್ಯ ಸಾಧಾರಣವರಗಳನ್ನು ಪಡೆದು ಪರಮಾನಂದತುಂದಿಲರಾದ ಶ್ರೀರಾಘವೇಂದ್ರ ಗುರುಸಾರ್ವಭೌಮರು, ಅಂದು ಶ್ರಾವಣಮಾಸದ ಮೊದಲ ಶುಕ್ರವಾರ, ವರಮಹಾಲಕ್ಷ್ಮಿಯ ವ್ರತವಾದ್ದರಿಂದ ತಮಗೊಲಿದು ಅನುಗ್ರಹಿಸಿದ ಮಂತ್ರಾಲಯಾಂಬಿಕೆಗೆ ಅಂದು ಪಂಚಾಮೃತ, ಕುಂಕುಮಾರ್ಚನೆ, ಪುಷ್ಪಾರ್ಚನೆ, ನೈವೇದ್ಯ ಸಮರ್ಪಣೆ, ಮಹಾಮಂಗಳಾರತಿ ಮುಂತಾಗಿ ವಿಶೇಷೋತ್ಸವವನ್ನು ಸ್ವಹಸ್ತದಿಂದ ನೆರವೇರಿಸಿ ಕೃತಾರ್ಥರಾದರು 467. 

ಈ ವೇಳೆಗಾಗಲೇ ಶ್ರೀಗುರುಸಾರ್ವಭೌಮರು ತಮ್ಮ ಉತ್ತರಾಧಿಕಾರಿಗಳನ್ನು ನೇಮಿಸಿ “ಶ್ರೀಯೋಗೀಂದ್ರತೀರ್ಥರೆಂಬ ಹೆಸರಿನಿಂದ ಸಾಮ್ರಾಜ್ಯಾಭಿಷೇಕ ಮಾಡಿದ ವಿಚಾರ ಮತ್ತು ಶ್ರೀಗುರುರಾಜರು ಶ್ರಾವಣ ಬಿದಿಗೆಯೆಂದು ಸಶರೀರರಾಗಿ ಬೃಂದಾವನ ಪ್ರವೇಶಮಾಡುವ ವಿಷಯಗಳು ದೇಶಾದ್ಯಂತ ಜನಜನಿತವಾಗಿ ಅಭೂತಪೂರ್ವ ಐತಿಹಾಸಿಕಘಟನೆಯನ್ನು ಕಣ್ಣಾರೆಕಂಡು ಪಾವನರಾಗಲೂ, ದೇವಾಂಶಸಂಭೂತರಾದ ಆ ಮಹಾಮಹಿಮರ ಚರಮದರ್ಶನ ಪಡೆದು, ಅವರನ್ನು ಸೇವಿಸಿ ಅನುಗ್ರಹಾ- ಶೀರ್ವಾದಗಳನ್ನು ಸಂಪಾದಿಸಿ ಉತ್ಕೃತರಾಗಬಯಸಿ ಶಿಷ್ಯ-ಭಕ್ತ-ಧರ್ಮಾಭಿಮಾನಿಗಳು, ಪಂಡಿತರು ಸಹಸ್ರಸಂಖ್ಯೆಗಳಲ್ಲಿ ಮಂತ್ರಾಲಯಕ್ಕೆ ಬಂದು ಸೇರಲಾರಂಭಿಸಿದರು. ಶ್ರೀಗುರುರಾಜರ ಬೃಂದಾವನ ಪ್ರವೇಶವು ಒಂದು ದೊಡ್ಡ ಮಂಗಳಕರ ಜಾತ್ರೆಯಂತಾಗಹತ್ತಿತ್ತು.

466 ಮಂತ್ರಾಲಯದಲ್ಲಿ ರಾಯರ ಗುಡಿಯ ಹಿತ್ತಾಳೆಯ ಮಹಾದ್ವಾರದ ಒಳಭಾಗದಲ್ಲಿ ದೇವಿಯ ಅಣತಿಯಂತೆ ಶ್ರೀರಾಯರು ಸ್ಥಾಪಿಸಿರುವ ಮೇಷಮಸ್ತಕಗಳನ್ನು ಭಕ್ತರು ಕಾಣಬಹುದಾಗಿದೆ. - ಗ್ರಂಥಕರ್ತ 

467 ಶ್ರೀರಾಯರಿಗೊಲಿದ ಮಂತ್ರಾಲಯಾಂಬಿಕೆಯು ರಾಯರ ಕರುಣೆಯ ಕಂದರೆಂದು ಖ್ಯಾತರಾದ ಶ್ರೀಮತ್ತುಯಮೀಂದ್ರತೀರ್ಥರಿಗೊಲಿದು ಸ್ವಪ್ನದಲ್ಲಿ “ಯತಿರಾಜ! ನನ್ನ ಪ್ರಿಯಭಕ್ತನಾದ ಗುರುರಾಜನಿಗೊಲಿದು ಅವನಿಗೆ ಇಲ್ಲಿ ನೆಲೆಸಲು ವರವಿತ್ತೆ. ಆ ನನ್ನ ಪ್ರಿಯಭಕ್ತನ ಪರಮಭಕ್ತನಾದ ನಿನ್ನಲೂ ಒಲಿದು ನಿನಗಿಲ್ಲಿ ಸ್ಥಾನನೀಡುವೆನು, ನೀನು ನನ್ನ ವಿಶೇಷಪೂಜಾರಾಧನೆಯನ್ನು ಶಾಶ್ವತವಾಗಿ ನೆರವೇರುವಂತೆ ಮಾಡು” ಎಂದು ಆಜ್ಞಾಪಿಸಿದಳು. ಶ್ರೀಸುಯಮೀಂದ್ರರು ಅಂದು ನವರಾತ್ರಿಯ ದುರ್ಗಾಷ್ಟಮಿಯಾದ್ದರಿಂದ ದೇವಿಗೆ ವಿಶೇಷಪೂಜಾರಾಧನೆ ಮಾಡಿಸಿದರು. ಭವ್ಯವಾದ ಮಂದಿರವನ್ನು ಕಟ್ಟಿಸಿ ಮಂಗಳವಾರ, ಶುಕ್ರವಾರ, ಶ್ರಾವಣಮಾಸ, ನವರಾತ್ರಿಗಳಲ್ಲಿ ವಿಶೇಷ ಸೇವೆಗಳು ಶಾಶ್ವತವಾಗಿ ನೆರವೇರುವಂತೆ ವ್ಯವಸ್ಥೆ ಮಾಡಿದ್ದಲ್ಲದೆ, ಪ್ರತಿದಿನವೂ ಶ್ರೀರಾಯರಿಗೆ ಸಾಯಂದೀಪಾರಾಧನೆಗೆ ಮೊದಲು ದೇವಿಯದರ್ಶನ ವಂದನ, ಮಂಗಳಾರತಿ ನೆರವೇರಿಸಿಕೊಂಡುಬರುವ ಪದ್ಧತಿಯನ್ನು ಏರ್ಪಡಿಸಿ, ಯಾತ್ರಾರ್ಥಿಗಳು ಸೇವಾರ್ಥಿಗಳು ಮೊದಲು ಶ್ರೀಮಂತ್ರಾಲಯಮ್ಮನ ಸೇವೆಮಾಡಿ ನಂತರ ರಾಯರ ಸೇವೆಮಾಡುವ ಸಂಪ್ರದಾಯ- ವನ್ನೇರ್ಪಡಿಸಿದರು. ಅಂದಿನಿಂದ ಆ ಸಂಪ್ರದಾಯದಂತೆ ಸಹಸ್ರಾರುಭಕ್ತರು ದೇವಿಯ ಸೇವೆಮಾಡಿ ಅನುಗೃಹೀತರಾಗುತ್ತಿರುವುದನ್ನು ಮಂತ್ರಾಲಯದಲ್ಲಿ ಪ್ರತಿನಿತ್ಯ ಕಾಣಬಹುದು.