ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೧೨೨. ಅವತಾರ ಪರಿಸಮಾಪ್ತಿ ನಿರ್ಧಾರ !
ಶ್ರೀರಾಘವೇಂದ್ರಸ್ವಾಮಿಗಳವರು ಜಗತ್ತಿನ ಜನರ ದೃಷ್ಟಿಗೆ ವಿಷಯರಾಗಿ ಮಾಡಬೇಕಾಗಿದ್ದ ಕರ್ತವ್ಯವು ಮುಗಿದಂತಾಯಿತೆಂದು ಅರಿತು, ಶ್ರೀಹರಿಯ ಸಂಕಲ್ಪದಂತೆ, ತಮ್ಮ ಅವತಾರ ಕಾರ್ಯವನ್ನು ಪರಿಸಮಾಪ್ತಿಗೊಳಿಸಲು ಸಂಕಲ್ಪಿಸಿದರು! ಆ ಕಾರ್ಯವು ಯಶಸ್ವಿಜರುಗಿಸಲು ಶ್ರೀಪಾದಂಗಳವರು ಕುಂಭಕೋಣದಿಂದ ತಮ್ಮ ಆತ್ಮೀಯರನ್ನೂ, ವೆಂಕಟನಾರಾಯಣಾಚಾರ, ನಾರಾಯಣಾಚಾರ, ಗೋವಿಂದಾಚಾರ ಮುಂತಾದವರನ್ನೂ ಆದವಾನಿಯಿಂದ ದಿವಾನ್ ವೆಂಕಣ್ಣ ಪಂತನನ್ನೂ ಕರೆಯಿಸಿಕೊಂಡು ಒಂದು ದಿನ ಏಕಾಂತದಲ್ಲಿ ಆಪ್ತಾಲೋಚನೆಮಾಡಿದರು. ಶ್ರೀಗುರುರಾಜರು ಶ್ರೀಹರಿವಾಯುಗಳ ಪ್ರೇರಣೆ, ಸಂಕಲ್ಪಗಳಂತೆ ತಾವು ಅತಿ ಶೀಘ್ರವಾಗಿ ತಮ್ಮ ಅವತಾರಕಾರ್ಯವನ್ನು ಮುಗಿಸಿ ಸಶರೀರರಾಗಿ ಬೃಂದಾವನ ಪ್ರವೇಶ ಮಾಡಲಿರುವ ವಿಚಾರವನ್ನು ಎಲ್ಲರಿಗೂ ತಿಳಿಸಿದರು. ಗುರುಗಳ ಮಾತನ್ನಾಲಿಸಿ ಸರ್ವರಿಗೂ ವಜ್ರಾಘಾತವಾದಂತಾಗಿ ಸಕಲರೂ ಕಂಪಿಸಿದರು. ಉದ್ವಿಗ್ನರಾದ ಅವರು ಕಿಂಕರ್ತವ್ಯ ಮೂಢರಾಗಿ, ಉದ್ದಾರಕಗುರುಪಾದರು ತಮ್ಮನ್ನು ಅನಾಥರನ್ನಾಗಿಮಾಡಿ ಅಗಲುವರೆಂಬ ದುಃಖ, ದುಮ್ಮಾನಗಳಿಂದ ಕಂಗೆಟ್ಟರು. ಅವರ ಕಣ್ಣುಗಳಿಂದ ದುಃಖಾಶ್ರುಪೂರವೇ ಹರಿಯಹತ್ತಿತು. ಏನು ಹೇಳಲೂ ತೋಚದೆ ಸರ್ವರೂ ಸ್ತಬರಾಗಿ ಕುಳಿತರು.
ಆಗ ರಾಯರ ಪೂರ್ವಾಶ್ರಮ ಅಣ್ಣಂದಿರ ಮಕ್ಕಳಾದ ವೆಂಕಟನಾರಾಯಣಾಚಾರ್ಯರು ಕಳವಳದಿಂದ “ಮಹಾಸ್ವಾಮಿ, ನಮ್ಮಿಂದ ಅಪರಾಧವೇನಾದರೂ ಘಟಿಸಿರುವುದೇ ? ಹೀಗೆ ಇದ್ದಕ್ಕಿದ್ದಂತೆ ನಮ್ಮೆಲ್ಲರನ್ನೂ ಅನಾಥರನ್ನಾಗಿ ಮಾಡುವುದು ನ್ಯಾಯವೇ?” ಎಂದು ವಿಜ್ಞಾಪಿಸಿದರು; ಶ್ರೀಪಾದಪುತ್ರರಾದ ಶ್ರೀಲಕ್ಷ್ಮೀನಾರಾಯಣಾಚಾರರಿಗಂತೂ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಯಿತು. ದಿಕ್ಕೆಟ್ಟಂತವರಾಗಿ ದುಃಖದಾವೇಗವನ್ನು ತಡೆಯಲಾರದೆ ಅವರು ಗುರುರಾಜರ ಪಾದಗಳನ್ನು ಕಣ್ಣೀರಿನಿಂದ ತೊಳೆಯುತ್ತಾ “ಮಹಾಸ್ವಾಮಿ, ತಮ್ಮ ಈ ನಿರ್ಧಾರವನ್ನು ಬದಲಿಸಿ ನಮ್ಮೆಲ್ಲರನ್ನೂ ಕಾಪಾಡಬೇಕು, ಗುರುಪಾದರ ವಿಯೋಗ ದುಃಖವನ್ನು ಸಹಿಸುವಶಕ್ತಿ ನಮಗಿಲ್ಲ! ಕರುಣೆದೋರಬೇಕು” ಎಂದು ಪ್ರಾರ್ಥಿಸಿದರು.
ಶ್ರೀರಾಯರು ಲಕ್ಷ್ಮೀನಾರಾಯಣಾಚಾರ್ಯರ ತಲೆಯನ್ನು ಸವರಿ, ಭುಜಗಳನ್ನು, ಹಿಡಿದು ಮೇಲೆಬ್ಬಿಸಿ “ಲಕ್ಷ್ಮೀನಾರಾಯಣಾ, ವೆಂಕಟನಾರಾಯಣಾ ! ಇದೇನು ಬಾಲಕರಂತೆ ವರ್ತಿಸುತ್ತಿದ್ದೀರಿ! ಸಕಲಶಾಸ್ತ್ರಪಾರಂಗತರು, ವಿಚಾರಶೀಲರೂ ಆದ ನೀವಿಂತು ಧೃತಿಗೆಡಬಹುದೇ ? ನೀವ್ಯಾರೂ ಯಾವ ವಿಧವಾದ ಅಪರಾಧವನ್ನೂ ಮಾಡಿಲ್ಲ. ಇದು ಶ್ರೀಹರಿಯ ಸಂಕಲ್ಪದಂತೆ ನಾವೇ ಕೈಗೊಂಡಿರುವ ನಿರ್ಧಾರ! ಮಾನವರಾಗಿ ಜನಿಸಿದ ಮೇಲೆ ಎಂದಾದರೊಂದುದಿನ ಈ ಭೂಮಿಯ ಋಣ ಮುಗಿಯಲೇ ಬೇಕಲ್ಲವೇ ? ಕುಂಭಕೋಣದಲ್ಲಿ ಕೆಲವರ್ಷಗಳ ಹಿಂದೆ ಮೂವರು ಜ್ಯೋತಿಷಿಗಳು ನುಡಿದ ಭವಿಷ್ಯ ನಿಮಗೆ ನೆನಪಿದೆಯೇ ? ಓರ್ವ ಜ್ಯೋತಿಷಿಯು ನಮ್ಮ ಆಯುಷ್ಯ ನೂರುವರುಷಗಳೆಂದೂ, ಅಂದರೆ ಎಪ್ಪತ್ತೆಂಟು-ಎಂಭತ್ತನೆಯ ವರ್ಷದಲ್ಲಿ ಅದೃಶ್ಯರಾಗುವ ಸಂಭವವಿದೆಯೆಂದೂ ಹೇಳಿದ್ದನ್ನು ನೆನಪಿಸಿಕೊಳ್ಳಿರಿ! ಮತ್ತೊಬ್ಬ ಜ್ಯೋತಿಷಿಯು ಏಳುನೂರು ವರ್ಷಗಳ ಕಾಲ ನಾವು ಜೀವಿಸುತ್ತೇವೆಂದು ಭವಿಷ್ಯನುಡಿದಿದ್ದನ್ನೂ ಸ್ಮರಿಸಿ! ಆಗ ನಾವು ಅವರ ಭವಿಷ್ಯ ಸತ್ಯವೆಂದು ಹೇಳಿದ್ದು ಜ್ಞಾಪಕವಿಲ್ಲವೇ ? ಈಗ ಅವರಿಬ್ಬರ ಭವಿಷ್ಯವೂ ಸತ್ಯವಾಗಿ ಕಾರ್ಯರೂಪಕ್ಕಿಳಿಯಲಿದೆ! ನಾವು ಸಶರೀರರಾಗಿ ಬೃಂದಾವನ ಪ್ರವೇಶಮಾಡುವುದರಿಂದ ಜಗತ್ತಿನ ಜನತೆಯ ಕಣ್ಣುಗಳಿಗೆ ಅದೃಶ್ಯರಾಗುವುದರಿಂದ ಆತನ ಭವಿಷ್ಯ ಸತ್ಯವಾಗಲಿದೆ! ನಾವು ಬೃಂದಾವನದಲ್ಲಿ ಏಳುನೂರುವರ್ಷಗಳ ಕಾಲ ಸಶರೀರರಾಗಿದ್ದು ಲೋಕ ಕಲ್ಯಾಣಾರ್ಥವಾಗಿ ಶ್ರೀಹರಿಯನ್ನು ಕುಳಿತು ತಪಸ್ಸಿನಲ್ಲಿ ಆಸಕ್ತರಾಗಿ, ನಮ್ಮನ್ನು ಆಶ್ರಯಿಸಿ ಬಂದವರನ್ನು ಪೊರೆಯುತ್ತಿರುತ್ತೇವಾದ್ದರಿಂದ ಆ ಜ್ಯೋತಿಷಿಯ ಭವಿಷ್ಯವಾ ಸತ್ಯವೇ ಆಗುತ್ತದೆ! ಇದು ಶ್ರೀಶೇಚ್ಛಾ. ಆದ್ದರಿಂದಲೇ ಅನಿವಾರ್ಯ. ನೀವೆಲ್ಲರೂ ಸಲ್ಲದ ದುಃಖ-ಕಳವಳಗಳನ್ನು ತೊರೆದು, ಭಗವತ್ಥಂಕಲ್ಪದಂತೆ ಕರ್ತವ್ಯ ಪರರಾಗಿರುವ ನಮ್ಮ ಅಭಿಲಾಷೆಯನ್ನು ಪೂರೈಸಲು ನಗುತ್ತಾ ಸಹಕರಿಸಿ ಶ್ರೇಯೋಭಾಗಿಗಳಾಗಬೇಕು. ಅದಕ್ಕೆಂದೇ ನಿಮ್ಮೆಲ್ಲರನ್ನೂ ಕರೆಸಿಕೊಂಡು ನಮ್ಮ ನಿರ್ಧಾರವನ್ನು ಬಿಚ್ಚುಮನಸ್ಸಿನಿಂದ ತಿಳಿಸಿದ್ದೇವೆ. ನಮ್ಮಿ ನಿರ್ಧಾರ ಅಚಲ! ಸುಮ್ಮನೇ ದುಃಖಿಸುವುದರಿಂದ ಪ್ರಯೋಜನವಿಲ್ಲ. ಅದು ಶ್ರೀಹರಿಸಂಕಲ್ಪಕ್ಕೆ ವಿರುದ್ಧವೂ ಆದೀತು !” ಎನಲು ಸರ್ವರೂ ತಲೆಬಾಗಿಸಿ ಕುಳಿತರು. ನಂತರ ಶ್ರೀರಾಯರು “ಈಗ ನಾವು ಹೇಳುವ ಮಹಾಸಂಸ್ಥಾನದ ಬಗ್ಗೆ ನಾವು ಕೈಗೊಳ್ಳಲಿರುವ ಕೆಲ ವಿಚಾರಗಳನ್ನು ಎಲ್ಲರೂ ಸಾವಧಾನವಾಗಿ ಕೇಳಿರಿ” ಎಂದು ಆಜ್ಞಾಪಿಸಿದರು.
ತಲೆತಗ್ಗಿಸಿ ಕುಳಿತಿದ್ದ ದಿವಾನ್ ವೆಂಕಣ್ಣ ಪಂತನು ಶ್ರೀಯವರಿಗೆ ಕರಮುಗಿದು “ಗುರುವರ್ಯ, ಅನಾಥನಾದ ನನಗೇ ಈ ವಿಚಾರದಿಂದ ಸಹಿಸಲಳ್ಳವಲ್ಲದ ದುಃಖವಾಗುತ್ತಿರುವ, ಇನ್ನು ಬಾಲ್ಯದಿಂದಲೂ ತಮ್ಮ ಅಗಣಿತ ಸದ್ಗುಣಗಳು, ಕಾರುಣ್ಯಾದಿಗಳನ್ನು ಕಾಣುತ್ತಾ ತಮ್ಮನ್ನೇ ಸರ್ವಸ್ವವೆಂದು ತಿಳಿದಿರುವ ಈ ಆತ್ಮೀಯಬಂಧುಗಳಿಗೆ ಎಂತಹ ಅಘಾತವಾಗಿರಬಹುದು ? ಸ್ವಾಮಿ, ತಮ್ಮ ಆಜ್ಞೆಯನ್ನು ಯಾರು ತಾನೇ ಮೀರಬಲ್ಲರು? ಅಪ್ಪಣೆಯಾಗಲಿ” ಎಂದು ವಿಜ್ಞಾಪಿಸಿದರು.
ಶ್ರೀರಾಯರು ಕರುಣಾರಸಾದ್ರ್ರ ದೃಷ್ಟಿಯಿಂದ ಎಲ್ಲರನ್ನೂ ಅವಲೋಕಿಸುತ್ತಾ ಶ್ರೀಹರಿಚಿತ್ತಕ್ಕೆ ಯಾರೂ ವಿರುದ್ಧವಾಗಿ ವರ್ತಿಸಬಾರದು. ನಿಮ್ಮ ಸಂಕಟವನ್ನು ನಾವು ಬಲ್ಲೆವು. ಅದು ನಮ್ಮಲ್ಲಿ ನಿಮಗಿರುವ ನಿರತಿಶಯ ಭಕ್ತಿಯ ದ್ಯೋತಕ! ಆದರೇನು ಮಾಡುವುದು ? ನೀವು ನಮ್ಮ ವಿಯೋಗ ವಿರಹವ್ಯಥೆಯನ್ನು ಸಹಿಸಲೇಬೇಕು. ನಮ್ಮ ಪ್ರೀತ್ಯಾಸ್ಪದ ಬಂಧುಗಳೂ, ಶಿಷ್ಯರೂ ಆದ ನೀವು ಧೈರ್ಯದಿಂದ ವರ್ತಿಸಬೇಕು. ಹೂಂ, ಒಂದು ವಿಚಾರವಂತೂ ನಿರ್ಧಾರವಾದಂತಾಯಿತು. ಇನ್ನು ಮಹಾಸಂಸ್ಥಾನದ ಮುಂದಿನ ವ್ಯವಸ್ಥೆಯ ಬಗ್ಗೆ ನಮ್ಮ ನಿರ್ಣಯ ಅಭಿಪ್ರಾಯಗಳನ್ನೀಗ ನಿಮಗೆ ತಿಳಿಸುತ್ತೇವೆ” ಎಂದು ಹೇಳಿ ಸೂಚ್ಯವಾಗಿ ತಮ್ಮ ಪಾರ್ವಾರ್ಶಮ ಸೋದರಳಿಯಂದಿರೂ, ಪ್ರೀಯಶಿಷ್ಯರೂ ಆದ ನಾರಾಯಣಾಚಾರ್ಯರತ್ತ ದೃಷ್ಟಿ ಬೀರಿದರು! ಶ್ರೀಯವರ ವಚನವನ್ನಾಲಿಸಿ ಅವರ ದೇಹದಲ್ಲಿ ವಿದ್ಯುತ್ತಂಚಾರವಾದಂತಾಯಿತು. ಹಿಂದೊಮ್ಮೆ ಕುಂಭಕೋಣದಲ್ಲಿ ಗುರುರಾಜರು ಮಹಾಸಂಸ್ಥಾನದ ಮುಂದಿನ ವ್ಯವಸ್ಥೆಯ ವಿಷಯವಾಗಿ ತಮಗೆ ಏಕಾಂತದಲ್ಲಿ ತಿಳಿಸಿದ್ದ ವಿಚಾರಗಳು ನೆನಪಿಗೆ ಬಂದು ನಾರಾಯಣಾಚಾರ್ಯರು ಪುಳಕಿತಗಾತ್ರರಾದರು.
ಶ್ರೀರಾಘವೇಂದ್ರಸ್ವಾಮಿಗಳವರು ಮುಂದುವರೆದು - “ನಾವು ವಿರಾಜಿಸುವ ಶ್ರೀಹಂಸನಾಮಕ ಪರಮಾತ್ಮನ ಶ್ರೀಮದಾಚಾರ್ಯರ ಈ ಮಹಾಪೀಠವು ಪರಮ ಪಾವನವಾದದು. ಇದು ಆಚಂದ್ರಾರ್ಕವಾಗಿ ತನ್ನ ಕರ್ತವ್ಯ ಪರಿಪಾಲನೆಮಾಡುತ್ತಾ ಸರ್ವಸಜ್ಜನರ ಸರ್ವಾಂಗೀಣ ಅಭ್ಯುದಯ ಕಾರಾಸಕ್ತವಾಗಿ ಲೋಕಮಾನ್ಯವಾಗಿ ಮೆರೆಯಬೇಕಾಗಿದೆ. ನಮ್ಮ ಗ್ರಂಥಗಳ ಪಾಠಪ್ರಚನದ್ವಾರಾ ಈ ಪೀಠದಲ್ಲಿ ಮಂಡಿಸಿದ ಯತೀಶ್ವರರು, ಶ್ರೀಮದಾಚಾರ್ಯರ ಸತ್ತಿದಾಂತವನ್ನು ಮುಂದುವರೆಸಿಕೊಂಡು ಬಂದು ಜ್ಞಾನಜ್ಯೋತಿಯನ್ನು ಬೆಳಗಬೇಕಾಗಿದೆ. ಈ ಕಾರ್ಯವು ಯಶಸ್ವಿಯಾಗಲು ಆಚಾರ ಶ್ರೀಮದ್ದರಂತೆ ನಾವೂ ಈ ಮಹಾಪೀಠವನ್ನಾಳಲು ಅರ್ಹರಾದವರನ್ನು ಆರಿಸಬೇಕಾಗಿದೆ. ನಾವೀಗಾಗಲೇ ಅದನ್ನು ನಿರ್ಧರಿಸಿದ್ದೇವೆ. ಈ ವಿಚಾರವು ನಾರಾಯಣನಿಗೆ ತಿಳಿದಿದೆ. ಸಾವಕಾಶವಾಗಿ ನಮ್ಮ ನಾರಾಯಣನು ನಿಮ್ಮೆಲ್ಲರಿಗೂ ಅದನ್ನು ತಿಳಿಸುತ್ತಾನೆ.
ನಾವು ಈ ಮಹಾಪೀಠವನ್ನು ನಮ್ಮ ತರುವಾಯ ಆಳಲು ಅರ್ಹರಾದ ನಾಲ್ಕು ಜನರನ್ನು ಆರಿಸಿದ್ದೇವೆ. ಇನ್ನು ಮುಂದೆ ಶ್ರೀಸರ್ವಜ್ಞರ ಈ ವಿದ್ಯಾಸಿಂಹಾಸನದಲ್ಲಿ ನಮ್ಮ ಪೂರ್ವಾಶ್ರಮವಂಶೀಯರೇ ಪರಂಪರೆಯಾಗಿ ವಿರಾಜಿಸಿ ತತ್ವಜ್ಞಾನ-ಧರ್ಮ ಪ್ರಸಾರ, ಲೋಕಕಲ್ಯಾಣ ಕಾರಾಸಕ್ತರಾಗಿ, ದೈತಸಿದ್ಧಾಂತವನ್ನು ಬಹುಮುಖವಾಗಿ ಅಭಿವೃದ್ಧಿಪಡಿಸಿ, ಶ್ರೀಮದಾಚಾರ-ಪದ್ಮನಾಭ-ಜಯತೀರ್ಥ-ವಿಬುಧೇಂದ್ರ ವಿಜಯೀಂದ್ರ ಪರಂಪರೆಯಿಂದ ಅವಿಚ್ಛಿನ್ನವಾಗಿ ನಡೆದುಬಂದಿರುವ ಪಾಠಪ್ರವಚನ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರಬೇಕೆಂಬುದು ಶ್ರೀಮೂಲರಾಮನ ಇಚ್ಛೆ ! ಶ್ರೀಮದಾಚಾರ-ಟೀಕಾಕೃತ್ಪಾದರ ಸಂಕಲ್ಪ! ಅವರ ಪ್ರೇರಣೆಯಂತೆಯೇ ನಾವೀ ನಿರ್ಧಾರವನ್ನು ಕೈಗೊಂಡಿದ್ದೇವೆ.
ನಮ್ಮ ತರುವಾಯ ಒಬ್ಬರಾದ ಮೇಲೊಬ್ಬರಂತೆ ಶ್ರೀಯೋಗಿಂದ್ರತೀರ್ಥರು, ಶ್ರೀಸೂರೀಂದ್ರತೀರ್ಥರು, ಶ್ರೀಸುಮತೀಂದ್ರ- ತೀರ್ಥರು ಮತ್ತು ಶ್ರೀಉಪೇಂದ್ರತೀರ್ಥರು ಎಂಬ ಅಭಿಮಾನದಿಂದ ನಮ್ಮ ಶಿಷ್ಯರು ಈ ಮಹಾಸಂಸ್ಥಾನವನ್ನು ಪರಿಪಾಲಿಸಬೇಕಾಗಿದೆ” ಎಂದು ಅಪ್ಪಣೆ ಕೊಡಿಸಿದರು. ಎಲ್ಲರೂ ಆ ಭಾಗ್ಯಶಾಲಿಗಳಾರಾಗಿರಬಹುದು ? ಎಂದು ಯೋಚಿಸುತ್ತಿರುವಾಗ ಶ್ರೀರಾಯರು ವೆಂಕಟನಾರಾಯಣಾಚಾರರನ್ನು ನೋಡುತ್ತಾ ನಗುಮುಖದಿಂದ ಹೀಗೆ ಹೇಳಿದರು.
“ವೆಂಕಟನಾರಾಯಣ, ಆ ನಾಲ್ವರು ಭಾಗ್ಯಶಾಲಿಗಳಾರು ಗೊತ್ತೆ? ಅವರೇ ನಿನ್ನ ಸುಪುತ್ರರಾದ ವೆಂಕಣ್ಣ, ವಾಸುದೇವ, ಮುದ್ದು ವೆಂಕಟಕೃಷ್ಣ ಮತ್ತು ವಿಜಯೀಂದ್ರ ಇವರುಗಳು! ಅವರ ತರುವಾಯ ಐದನೆಯವನಾಗಿ ಈ ಶ್ರೀನಿವಾಸ ಈ ಮಹಾಪೀಠದಲ್ಲಿ ಮಂಡಿಸಿ ಕೀರ್ತಿ ಗಳಿಸಬೇಕೆಂಬುದೂ ಶ್ರೀಹರಿವಾಯುಗಳ ಸಂಕಲ್ಪ!” ಎಂದು ಹೇಳಿ ಶ್ರೀಪಾದಪತ್ರ ಲಕ್ಷ್ಮೀನಾರಾಯಣಾಚಾರ್ಯರ ತೊಡೆಯ ಮೇಲೆ ಕುಳಿತಿದ್ದ ತಮ್ಮ ಪೂರ್ವಾಶ್ರಮ ಪುತ್ರರಾದ ಲಕ್ಷ್ಮೀನಾರಾಯಣಾಚಾರ್ಯರ ಮಗ ಪುರುಷೋತ್ತಮಾಚಾರರ ಪುತ್ರನಾದ ಒಂದು - ಒಂದೂವರೆ ವರ್ಷದ ಮಗುವಾದ ಶ್ರೀನಿವಾಸನನ್ನು ತೋರಿ, ಅವನ ಶಿರದ ಮೇಲೆ ಕರವಿರಿಸಿ ಆಶೀರ್ವದಿಸಿದರು.
ಶ್ರೀಯವರ ವಚನವನ್ನಾಲಿಸಿ ಸಕಲರೂ ಅತ್ಯಾಶ್ಚರಮಗ್ನರಾಗಿ ಆನಂದಪುಳಕಿತರಾದರು. ಈ ಅದ್ಭುತ ನಿರ್ಣಯದಿಂದ ರೋಮಾಂಚಿತನಾದ ದಿವಾನ್ ವೆಂಕಣ್ಣಪಂತನು “ಮಹಾಸ್ವಾಮಿ, ಹಾಗಾದರೆ.... ಆ ಬೃಂದಾವನ !” ಎನ್ನುತ್ತಿರಲು ನಸುನಕ್ಕು ಶ್ರೀಗಳವರು “ಅಹುದು ! ಆ ಬೃಂದಾವನ ಇವರಿಗೇ ಮೀಸಲು!” ಎಂದರು.460 ವೆಂಕಣ್ಣಪಂತ ಗುರುಗಳ ದೂರದೃಷ್ಟಿ, ಎಲ್ಲವನ್ನು ಮೊದಲೇ ನಿರ್ಣಯಿಸುವ ಅಗಾಧ ಮಹಾಮಹಿಮಾದಿಗಳನ್ನು ಕಂಡು ಮೂಕವಿಸ್ಮಿತನಾದನು.
ಶ್ರೀರಾಯರ ನಿರ್ಣಯ ಕಾರ್ಯರೂಪಕ್ಕೆ ಬಂದಿತು. ಮುಂದೆ ಶ್ರೀಉಪೇಂದ್ರತೀರ್ಥರ ತರುವಾಯ ಶ್ರೀನಿವಾಸಾಚಾರರು “ಶ್ರೀವಾದೀಂದ್ರತೀರ್ಥರೆಂಬ ಅಭಿಧಾನದಿಂದ ಮಹಾಸಂಸ್ಥಾನಾಧಿಪತಿಗಳಾಗಿ, ಉಭಯವಂಶಾಚಂದ್ರಮ "ರೆಂದು ಸರ್ವಮಾನ್ಯರಾದರು !
460 ವೆಂಕಣ್ಣಪಂತ ಮೊದಲು ಸಿದ್ಧಪಡಿಸಿದ ಸುಂದರ ಬೃಂದಾವನವೇ ಮುಂದೆ ಶ್ರೀರಾಯರು ಹೇಳಿದಂತೆ ಶ್ರೀವಾದೀಂದ್ರತೀರ್ಥರ ಬೃಂದಾವನವಾಯಿತು. ಈಗಲೂ ಶ್ರೀರಾಯರ ಪಕ್ಕದಲ್ಲಿರುವ ಶ್ರೀವಾದೀಂದ್ರರ ಸುಂದರ ಬೃಂದಾವನವನ್ನು ಸಕಲರೂ ನೋಡಬಹುದಾಗಿದೆ. - ಗ್ರಂಥಕರ್