|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೧೧೯. ಕೃಷ್ಣದೈಪಾಯನರು ಹರಿಪದ ಸೇರಿದರು.

ಸೌಮ್ಯಸಂವತ್ಸರದ ದ್ವೇಷಶುಕ್ಲ ಪೂರ್ಣಿಮಾ ಪ್ರತಿದಿನದ ಪದ್ಧತಿಯಂತೆ ಶ್ರೀರಾಘವೇಂದ್ರ ಗುರುಸಾರ್ವಭೌಮರು ತುಂಗಾಭದ್ರಾನದಿಯತೀರದ ವಿಸ್ತಾರವಾದ ಬಂಡೆಯ ಮೇಲೆ ಆತ್ಮೀಯರು, ವಿದ್ವಜ್ಜನರೊಡನೆ ಮಂಡಿಸಿದ್ದಾರೆ. ಸೂರ್ಯನು ಅಸ್ತಂಗತನಾಗಲು ಇನ್ನೂ ಸಮಯವಿದೆ. ಕೋಲಬಾಲೆಯ ಮಂಜುಳ ತರಂಗಗಳ ಕಲರವ ಮಂಜುಳನಾದ, ತಣ್ಣನೆಯಗಾಳಿ ಎಲ್ಲರ ಮನಸ್ಸನ್ನೂ ಆಹ್ಲಾದಗೊಳಿಸುತ್ತಿದೆ. ವಿದ್ವಾನ್ ಕೃಷ್ಣಾಚಾರ್ಯರು ವೇದಾಂತಶಾಸ್ತ್ರದಲ್ಲಿನ ಒಂದು ಜಟಿಲ ತತ್ವ ವಿಚಾರವನ್ನೆತ್ತಿ ಶ್ರೀಯವರ ಮುಂದೆ ತಮ್ಮ ಸಂದೇಹವನ್ನು ಮಂಡಿಸಿ ಅದಕ್ಕೆ ಸಮಾಧಾನವನ್ನು ತಿಳಿಸಿ ಅನುಗ್ರಹಿಸಬೇಕೆಂದು ಪ್ರಾರ್ಥಿಸಿದರು. ಶ್ರೀಗುರುರಾಜರು ಅ ಜಟಿಲ ತತ್ವವನ್ನು ಎಳೆಎಳೆಯಾಗಿ ಬಿಡಿಸಿ, ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ನಿರೂಪಿಸುತ್ತಿದ್ದಾರೆ. ತಾವು ಅತಿ ಜಟಿಲವೆಂದು ಭಾವಿಸಿದ ವಿಚಾರವನ್ನು ಅತಿ ಸುಲಭವಾಗಿ ಅರ್ಥವಾಗುವಂತೆ ಉಪಪಾದಿಸುತ್ತಿರುವುದನ್ನು ಆಲಿಸುತ್ತಾ ಎಲ್ಲರೂ ಆನಂದಪರವಶರಾಗಿದ್ದಾರೆ. ಆಗ ಶ್ರೀಗುರುರಾಯರು ಇದ್ದಕ್ಕಿದ್ದಂತೆ ಆಕಾಶದತ್ತ ದೃಷ್ಟಿಹಾಯಿಸಿ ನಗೆಮೊಗದಿಂದ ಕರಮುಗಿದರು. ಅಲ್ಲಿದ್ದವರು ಇದೇನೆಂದು ಆಶ್ಚರ್ಯದಿಂದ ತಾವೂ ಆಕಾಶದತ್ತ ನೋಡಿದರು. ಆದರೆ ಅವರಿಗೆ ಅಲ್ಲಿ ಏನೂ ಕಾಣಿಸಲಿಲ್ಲ. 

ಶ್ರೀಗಳವರು ನಿಟ್ಟುಸುರುಬಿಟ್ಟು ತಲೆತಗ್ಗಿಸಿ ಕುಳಿತರು. ಕುತೂಹಲವನ್ನು ಹತ್ತಿಕ್ಕಲಾಗದೆ ಮಠದ ಪಂಡಿತರೊಬ್ಬರು “ಮಹಾಸ್ವಾಮಿ, ತಾವು ಇದಕ್ಕಿದ್ದಂತೆ ಆಕಾಶದತ್ತ ನೋಡಿ ಕರ ಬೀಸೋಣವಾಯಿತು. ಅದೇನೆಂದು ನಮಗೆ ಅರ್ಥವಾಗಲಿಲ್ಲ. ದಯಮಾಡಿ ಅದೇನೆಂದು ತಿಳಿಸಬೇಕಾಗಿ ಬೇಡುತ್ತೇನೆ” ಎಂದು ಬಿನ್ನವಿಸಿದರು. 

ಆಗ ಶ್ರೀಗುರುರಾಜರು “ಶ್ರೀಕೃಷ್ಣಪಾಯನರು ಹರಿಪದ ಸೇರಿದರು. ಈಗವರು ವಿಮಾನಾರೂಢರಾಗಿ ಈ ಲೋಕವನ್ನು ತ್ಯಜಿಸಿ ಹೋಗುತ್ತಿದ್ದರು. ನಮ್ಮನ್ನು ಕಂಡು ಅಭಿವಂದಿಸಿದರು, ಶ್ರೀಹರಿಪುರಕ್ಕೆ ದಯಮಾಡಿಸುತ್ತಿರುವ ಅವರಿಗೆ ನಾವೂ ಪ್ರತ್ಯಭಿವಾದನ ಮಾಡಿದೆವು, ಅಷ್ಟೇ” ಎಂದು ಅಪ್ಪಣೆ ಕೊಡಿಸಿದರು. 

ಶ್ರೀಪಾದಂಗಳವರ ಅದ್ಭುತ ಯೋಗಶಕ್ತಿ, ಮಹಿಮಾದಿಗಳನ್ನು ಕಂಡು ಪಂಡಿತ ಮಂಡಲಿ, ಆತ್ಮೀಯರು ಸೋಜಿಗಗೊಂಡು ಶ್ರೀರಾಯರನ್ನು ಸ್ತುತಿಸಿದರು. ಶ್ರೀಮಠದ ಪಂಡಿತರಿಗೆ ಶ್ರೀಗುರುರಾಜರ ಅತಿಶಯ ಮಹಾತ್ಮ, ಅಸಾಧಾರಣ ಯೋಗಶಕ್ತಿಗಳ ಪರಿಚಯವು ಅನೇಕಸಲ ಆಗಿದ್ದರೂ ಗುರುವರರ ಅಪೂರ್ವ ಮಹಿಮಾತಿಶಯಗಳು ಅಭಿವ್ಯಕ್ತವಾದಾಗಲೆಲ್ಲಾ ಅದರಿಂದವರು ವಿಸ್ಮಿತರಾಗಿ ಗುರುಗಳ ನೂತನಮಹಿಮೆಯ ಪರಿಚಯದಿಂದ ಆನಂದಿಸುತ್ತಿದ್ದುದು ರೂಢಿಯಾಗಿ ಹೋಗಿತ್ತು! ಜ್ಞಾನಿಗಳ ವಿಚಾರವೇ ಹೀಗೆ. ಶ್ರೀಕೃಷ್ಣಪಾಯನಯತಿಗಳು ಮಹಾವೈರಾಗ್ಯ ಸಂಪನ್ನರು, ಜ್ಞಾನಿಗಳು, ಅವರು, ಪೀಠಾಧಿಪತ್ಯವನ್ನೂ ಆಶಿಸದೇ ಬಿಟ್ಟುಬಿಟ್ಟ ಮಹನೀಯರು. ಅಂತರ್ಮುಖಿಗಳಾದ ಅವರು ಸರ್ವದಾ ಜಪ-ತಪ-ಭಗವತ್ತೂಜಾರಾಧನೆ ಪಾಠಪ್ರಚನಗಳಲ್ಲೇ ಆಸಕ್ತರಾಗಿ ವೈರಾಗ್ಯ ಭಕ್ತಿಗಳಿಂದ ಶ್ರೀಹರಿಯ ಉಪಾಸನೆ, ಮಾಡುತ್ತಾ ಕಾಲಕಳೆಯುತ್ತಿದ್ದರು. 

ಶ್ರೀಕೃಷ್ಣದ್ಧಪಾಯನರ ಬೃಂದಾವನವು ಭೀಮಾನದಿಯ ತಟದ ಮೇಲ್ಬಾಗದಲ್ಲಿರುವ ಕುಸುಮೂರ್ತಿ ಎಂಬ ಗ್ರಾಮದಲ್ಲಿದೆ. ಅದೊಂದು ಅಪೂರ್ವಸ್ಥಳ, ಮಗ್ಗಲಿನಲ್ಲಿ ಭೀಮಾನದಿ, ಸ್ವಲ್ಪದೂರದಲ್ಲಿಯೇ ಕೃಷ್ಣಾ-ಭೀಮಾನದಿಗಳ ಪವಿತ್ರ ಸಂಗಮ. ಶ್ರೀಸಂಗಮೇಶ್ವರನ ದಿವ್ಯಸನ್ನಿಧಾನ. ಎಲ್ಲಕ್ಕಿಂತ ಹೆಚ್ಚಾಗಿ ಶ್ರೀರುದ್ರಾಂಶರೆಂದು ಪ್ರಖ್ಯಾತರಾದ, ಜ್ಞಾನಿನಾಯಕರೂ, ತಪೋನಿಧಿಗಳೂ, ಶ್ರೀಮದಾಚಾರ್ಯರ ಮಹಾಸಂಸ್ಥಾನಾಧಿಪತಿಗಳೂ ಆದ ಪೂಜ್ಯ ಶ್ರೀಜಿತಾಮಿತ್ರತೀರ್ಥರ ಸನ್ನಿಧಾನ! ಅಂತೆಯೇ ಶ್ರೀಕೃಷ್ಣಪಾಯನ ಯತಿವರರು ಆ ಪವಿತ್ರಸ್ಥಳಕ್ಕೆ ಸನಿಹದ ನೆಲೆಯನ್ನು ತಮ್ಮ ವಾಸಸ್ಥಳವಾಗಿ ಆರಿಸಿಕೊಂಡಿದ್ದರೆಂದು ಹೇಳಬಹುದು. 

ಶ್ರೀಗುರುಸಾರ್ವಭೌಮರು, ವಿಮಾನದಲ್ಲಿ ಶ್ರೀಕೃಷ್ಣಪಾಯನರು ಶ್ರೀಹರಿಮಂದಿರಕ್ಕೆ ಪ್ರಯಾಣ ಬೆಳೆಸುತ್ತಿದ್ದುದನ್ನು ಕಂಡು, ಅವರಿಂದ ನಮಸ ತರಾಗಿ ತಾವೂ ಅಭಿವಂದಿಸಿದ ವಿಚಾರವನ್ನೇ 455 ಶ್ರೀಮಠೀಯ ಪಂಡಿತರು, ಆತ್ಮೀಯರು ಬಹಳ ಹೊತ್ತು ಮಾತನಾಡುತ್ತಿದ್ದು ಆನಂತರ ಶ್ರೀರಾಯರೊಡನೆ ಶ್ರೀಮಠಕ್ಕೆ ತೆರಳಿದರು.