|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೧೧೨. ಬಿದರಹಳ್ಳಿ ಶ್ರೀನಿವಾಸಾಚಾರ್ಯರಲ್ಲಿ ಅನುಗ್ರಹ

ಗುರುರಾಜರು ವ್ಯಾಸಪಂಥ-ದಾಸಪಂಥಗಳಪ್ರೇರಕಶಕ್ತಿಯಾಗಿದ್ದರು, ಉಭಯ ಪಂಥದವರೂ ಶ್ರೀಯವರನ್ನು ತಮ್ಮ ನಾಯಕರೆಂದು ಹೆಮ್ಮೆ ಪಡುತ್ತಿದ್ದರು. ರಾಯರು ವ್ಯಾಸ-ದಾಸ ವಾಲ್ಮೀಯದ ಸರ್ವಾಂಗೀಣ ಅಭಿವೃದ್ಧಿಯ ಕೇಂದ್ರಬಿಂದುವಾಗಿದ್ದರು. ಸ್ಫೂರ್ತಿಯ ಸೆಲೆಯಾಗಿದ್ದರು. ರಾಯರು ತಮ್ಮ ಉದಾರಾಶ್ರಯದಿಂದ ಅವಕ್ಕೆ ಪೋಷಕರಾಗಿ ಸರ್ವರನ್ನೂ ಸಂತೋಷಪಡಿಸುತ್ತಿದ್ದರು. ಆ ಜ್ಞಾನ ಗಂಗೋತ್ರಿಯಲ್ಲಿ ಮಿಂದು ಸಾವಿರಾರು ಜನ ಸಜ್ಜನರು ಪವಿತ್ರಾಂತಃಕರಣರಾಗಿ ಹರ್ಷಿಸುತ್ತಿದ್ದರು. ಈ ಪ್ರಕರಣವು ನಡೆದ ವೇಳೆಗಾಗಲೇ ರಾಯರ ಟಿಪ್ಪಣಿಗಳೊಡನೆ ಎಲ್ಲೆಲ್ಲಿಯೂ ವೇದಾಂತಶಾಸ್ತ್ರದ ಪಾಠಪ್ರವಚನಗಳು ವಿಶೇಷಾಕಾರವಾಗಿ ಜರುಗುತ್ತಿದ್ದು, ಶ್ರೀಯವರ ಲೋಕಮಾನ್ಯಗ್ರಂಥಗಳು, ನೂತನ ಗ್ರಂಥರಚನೆಮಾಡಲಪೇಕ್ಷಿಸುವವರಿಗೆ ಸ್ಪೂರ್ತಿಯಿತ್ತು, ಗ್ರಂಥರಚನೆಯ ಒಂದು ಹೊಸಪರಂಪರೆಯ ನಿಲ್ದಾಣಕ್ಕೆ ಅವಕಾಶಮಾಡಿಕೊಟ್ಟಿದ್ದವು! ಅಂತೆಯೇ ಅನೇಕ ಪಂಡಿತರು ತಮ್ಮ ಗ್ರಂಥರಚನೆಗೆ ಶ್ರೀರಾಯರಿಂದ ಮಾರ್ಗದರ್ಶನ ಪಡೆಯಲು, ತಮ್ಮ ಗ್ರಂಥಗಳನ್ನು ಗುರುರಾಜರ ಮುಂದೆ ಓದಿ, ಆಚಾರಪರಂಪರಾಗತ ಸಿದ್ಧಾಂತ ನಿರ್ಣಯ, ಕ್ಲಿಷ್ಟವಾದ ಘಟ್ಟಗಳನ್ನು ಅರ್ಥೈಸುವಿಕೆಗಳ ಕ್ರಮವನ್ನು ರಾಯರಿಂದ ಅರಿತು, ತಮ್ಮ ಗ್ರಂಥಗಳನ್ನು ಸರಿಪಡಿಸಿಕೊಂಡು, ಸ್ತ್ರೀಯಗ್ರಂಥಗಳಿಗೆ ಗುರುಗಳ ಸಮ್ಮತಿಯ ಮುದ್ರೆಯನ್ನು ದೊರಕಿಸಿಕೊಂಡು ಅನುಗ್ರಹೀತವಾಗಿ ಹೋಗುತ್ತಿದ್ದರು. 

ದೈತಮತದಲ್ಲಿ ಶ್ರೀಯಾದವಾರ್ಯರೆಂಬ ಮಹನೀಯರು ಉತ್ತಮಗ್ರಂಥಕಾರರಾಗಿದ್ದರು. ಅವರು ಶ್ರೀಸ್ವಾಮಿಗಳ ಟಿಪ್ಪಣಿನ್ನಿಟ್ಟುಕೊಂಡು ಪಾಠ ಹೇಳುತ್ತಾ ಖ್ಯಾತಿಗಳಿಸಿದ್ದರು, ಅವರ ಸಹೋದರರು ಶ್ರೀಬಿದರಹಳ್ಳಿ ಶ್ರೀನಿವಾಸಾಚಾರ್ಯರು. ಶ್ರೀಯಾದವಾರರು ಶ್ರೀರಾಯರ ಟಿಪ್ಪಣಿಗಳ ವೈಶಿಷ್ಟ್ಯ, ಶ್ರೇಷ್ಠತೆಗಳನ್ನು ತಮ್ಮಂದಿರಿಗೆ ಅಡಿಗಡಿಗೆ ಹೇಳಿ, ಶ್ರೀಸ್ವಾಮಿಗಳವರ ಟಿಪ್ಪಣಿಗಳಿಂದ ತತ್ವಶಾಸ್ತ್ರಪ್ರಪಂಚ, ಅದರಲ್ಲೂದೈತಸಿದ್ಧಾಂತಕ್ಕಾಗಿರುವ ಮಹೋಪಕಾರಗಳನ್ನು ಮುಕ್ತಕಂಠದಿಂದ ಶ್ಲಾಘಿಸಿ, ಆ ಮಹನೀಯರ ಅನುಗ್ರಹಾಶೀರ್ವಾದಗಳಿಲ್ಲದೆ, ಪಂಡಿತರೆನಿಸಲು, ಗ್ರಂಥಕಾರರೆಂದು ಹೆಸರು ಪಡೆಯಲು ಸಾಧ್ಯವಿಲ್ಲವೆಂದು ಹೇಳುತ್ತಿದ್ದರು. 

ತಮಗೆ ಪೂಜ್ಯರಾದ ಅಣ್ಣಂದಿರ ಈ ಉಪದೇಶ ಶ್ರೀನಿವಾಸಾಚಾರರ ಮೇಲೆ ಬಹಳ ಪರಿಣಾಮವನ್ನುಂಟುಮಾಡಿತ್ತು. ಆದ್ದರಿಂದಲೇ ಅವರು, ತಾವು ಗ್ರಂಥಕಾರರೆನಿಸಿ ಗುರುರಾಜರ ಮೆಚ್ಚುಗೆ, ಆಶೀರ್ವಾದಗಳನ್ನು ಪಡೆಯಬೇಕೆಂದು ಹಾತೊರೆಯುತ್ತಿದ್ದರು. ಶ್ರೀರಾಯರ ಕೃಪೆಯು ಅವರಲ್ಲಾಯಿತೆಂದು ತೋರುತ್ತದೆ. ಶ್ರೀನಿವಾಸಾಚಾರ್ಯರು ಅನೇಕ ದಿನಗಳ ಸತತ ಪರಿಶ್ರಮ, ಶ್ರದ್ಧೆಗಳಿಂದ ಶ್ರೀಮಧ್ವಶಾಸ್ತ್ರದ ಮೇಲೆ ಕೆಲ ವಾಖ್ಯಾನಗ್ರಂಥಗಳನ್ನು ರಚಿಸಿ ಶ್ರೀಯಾದವಾರ್ಯರಿಗೆ ತೋರಿಸಿದರು. ಅವರು ಸಹೋದರರ ಗ್ರಂಥಗಳನ್ನು ಪರಿಶೀಲಿಸಿ, ಸಂತೋಷದಿಂದ “ಶ್ರೀನಿವಾಸ, ನಿನ್ನ ಗ್ರಂಥಗಳೂ ಪ್ರಸಿದ್ದಿ ಪಡೆದು, ನೀನೂ ಒಬ್ಬ ಗ್ರಂಥಕಾರನೆಂದು ಹೆಸರು ಗಳಿಸಬೇಕಾದರೆ, ಟಿಪ್ಪಣ್ಯಾಚಾರ್ಯ ಸಾರ್ವಭೌಮರೂ, ಜ್ಞಾನಿನಾಯಕರೂ, ಮಹಾಮಹಿಮರೂ ಆದ ಶ್ರೀರಾಯರ ಸಮ್ಮತಿಯ ಮುದ್ರೆ ದೊರಕಿಸಿಕೊಂಡು, ಆ ಮಹನೀಯರ ಸಂಪೂರ್ಣ ಅನುಗ್ರಹಕ್ಕೆ ಪಾತ್ರನಾಗಿ ಆಶೀರ್ವಾದ ಪಡೆಯಬೇಕು” - ಎಂದು ಅಪ್ಪಣೆ ಮಾಡಿದರು. ಶ್ರೀನಿವಾಸಾಚಾರ್ಯರು ಅಣ್ಣಂದಿರ ಆಜ್ಞೆಯನ್ನು ಶಿರಸಾಧರಿಸಿ, ಗುರುರಾಜರ ಅನುಗ್ರಹವನ್ನು ಬಯಸಿ, ಚಾತುರ್ಮಾಸಸಂಕಲ್ಪ ಕಾಲದಲ್ಲಿ ಶ್ರೀರಾಯರ ಸನ್ನಿಧಿಗೆ ಬಂದರು. 

ಶ್ರೀನಿವಾಸಾಚಾರ್ಯರು ಗುರುಸಾರ್ವಭೌಮರ ದರ್ಶನಪಡೆದು ತಾವು ರಚಿಸಿದ ಗ್ರಂಥಗಳನ್ನು ಗುರುಗಳ ಚರಣಕಮಲ- ಗಳಿಗರ್ಪಿಸಿ ನಮಸ್ಕರಿಸಿ, ಅನುಗ್ರಹಿಸಬೇಕೆಂದು ಪ್ರಾರ್ಥಿಸಿದರು. ರಾಯರು ಅವರ ಗ್ರಂಥವನ್ನು ಅವಲೋಕಿಸಿ ಉದಾರ ಹೃದಯದಿಂದ ಅವರ ಪರಿಶ್ರಮವನ್ನು ಕಂಡು ಸಂತೋಷಿಸಿದರು. ಶ್ರೀನಿವಾಸಾಚಾರ್ಯರು “ಗುರುದೇವ! ನಾನು ತಮ್ಮ ಅನುಗ್ರಹಾಕಾಂಕ್ಷಿಯಾಗಿ ಬಂದಿದ್ದೇನೆ. ನನ್ನ ಗ್ರಂಥಕ್ಕೆ ತಮ್ಮ ಆಶೀರ್ವಾದನೀಡಿ ನಾನು ಶ್ರೀಸರ್ವಜ್ಞರ ಸೇವೆಯನ್ನು ಮುಂದೂ ಮಾಡಿಕೊಂಡುಬರುವಂತೆ ಅನುಗ್ರಹಿಸಿ ಕೃತಾರ್ಥನನ್ನಾಗಿ ಮಾಡಬೇಕೆಂದು ಪ್ರಾರ್ಥಿಸುತ್ತೇನೆ” ಎಂದು ವಿಜ್ಞಾಪಿಸಿದರು. ಉತ್ತಮ ಪಂಡಿತರಾದ ಶ್ರೀನಿವಾಸಾಚಾರ್ಯರನ್ನು ಆದರಿಸಿ ಶ್ರೀಯವರು ನಸುನಗುತ್ತಾ “ಶ್ರೀಮದಾಚಾರ್ಯರ ಸೇವೆ ಮಾಡಿದ್ದೀರಿ. ನಿಮ್ಮಿ ಸೇವೆಯಿಂದ ಶ್ರೀಹರಿವಾಯುಗಳು ಪ್ರೀತರಾಗಿದ್ದಾರೆ, ನಿಮ್ಮಿಂದ ಹೆಚ್ಚಾಗಿ ಸಿದ್ಧಾಂತ ಸೇವೆ ನೆರವೇರಲೆಂದು ನಾವು ಸಂತಸದಿಂದ ಆಶೀರ್ವದಿಸುತ್ತೇವೆ. ನಿಮಗೆ ಶ್ರೇಯಸ್ಸಾಗಲಿ” ಎಂದು ವಾತ್ಸಲ್ಯಪೂರ್ಣರಾಗಿ ಆಜ್ಞಾಪಿಸಿದರು. ಶ್ರೀನಿವಾಸಚಾರ್ಯರಿಗೆ ದೈತಸಾಮ್ರಾಜ್ಯಾಧೀಶ್ವರರೂ, ಜ್ಞಾನನಿಧಿಗಳೂ, ಜಗನ್ಮಾನರೂ ಆದ ಜಗದ್ಗುರುಗಳ ಆಶೀರ್ವಾದದಿಂದ ಅಪರಿಮಿತ ಆನಂದವಾಯಿತು. “ಕೃತಾರ್ಥನಾದೆ ಗುರುದೇವ” ಎಂದು ರಾಯರಿಗೆ ಸಾಷ್ಟಾಂಗವೆರಗಿದರು. 

ಶ್ರೀಮೂಲ ರಘುಪತಿ ವೇದವ್ಯಾಸದೇವರ ಪೂಜಾರಾಧನೆ, ತೀರ್ಥ-ಪ್ರಸಾದಗಳಾದ ಮೇಲೆ ಶ್ರೀಗುರು ಸಮ್ಮುಖದಲ್ಲಿ ವಿದ್ವಜ್ಜನರೊಡನೆ ಶ್ರೀನಿವಾಸಾಚಾರರು ಭೋಜನಕ್ಕೆ ಕುಳಿತರು. ಅಡಿಗೆಯಲ್ಲಿ ಸಾಸುವೆಯನ್ನು ಉಪಯೋಗಿಸಿದ್ದರಿಂದ ಶ್ರೀನಿವಾಸಾಚಾರ್ಯರು ಊಟಮಾಡಲು ಹಿಂಜರಿದಾಗ, ಅವರ ಮಾನಸಿಕ ತಳಮಳವನ್ನು ಗಮನಿಸಿದ ಉದಾರ ಅಂತಃಕರಣದ ಶ್ರೀರಾಯರು ಅವರಿಗಾಗಿ ಪ್ರತ್ಯೇಕವಾಗಿ ಸಾಸುವೆಯಿಲ್ಲದೆ ಅಡಿಗೆಮಾಡಿ ಬಡಿಸುವಂತೆ ಪಾರುಪತ್ತೇದಾರರಿಗೆ ಆಜ್ಞಾಪಿಸಿದರು. ಶ್ರೀನಿವಾಸಾಚಾರ್ಯರ ಈ ವರ್ತನೆ ವಿದ್ವಜ್ಜನರ ಅಸಮಾಧಾನಕ್ಕೆ ಕಾರಣವಾದರೂ ಶ್ರೀಯವರ ಔದಾರ್ಯವನ್ನು ಪಂಡಿತರು ಕೊಂಡಾಡಿದರು. ಭೋಜನವಾದಮೇಲೆ ಶ್ರೀನಿವಾಸಾಚಾರ್ಯರು ಶ್ರೀಯವರಲ್ಲಿಗೆ ಬಂದರು. ರಾಯರು ಶ್ರೀಮದಾಚಾರ್ಯ ಮಹಾಸಂಸ್ಥಾನದ ಸಂಪ್ರದಾಯದಂತೆ ಶ್ರೀನಿವಾಸಾಚಾರ್ಯರಿಗೆ ಪಂಡಿತಯೋಗ್ಯ ರೀತಿಯಲ್ಲಿ ಗೌರವಮಾಡಿ ಫಲಮಂತ್ರಾಕ್ಷತೆ ಕರುಣಿಸಿದರು. ತಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿ ತಮ್ಮಲ್ಲಿ ಅನುಗ್ರಹಮಾಡಿದ್ದರಿಂದ ಆನಂದಪುಳಕಿತಗಾತ್ರರಾಗಿ ಶ್ರೀನಿವಾಸಾಚಾರ್ಯರು ಶ್ರೀರಾಯರ ಅಪ್ಪಣೆ ಪಡೆದು ಶ್ರೀಯಾದವಾರ್ಯರಿದ್ದಲ್ಲಿಗೆ ಬಂದು ಸೇರಿದರು. ಶ್ರೀನಿವಾಸಾಚಾರ್ಯರ ಮುಖದಲ್ಲಿ ಸ್ತೋತ್ತಮದ್ರೋಹಲಕ್ಷಣವನ್ನು ಕಂಡು ಅಧೀರರಾದ ಶ್ರೀಯಾದವಾರರು, ಶ್ರೀಗುರುರಾಜರು ಅನುಗ್ರಹಿಸಿದ ಮಂತ್ರಾಕ್ಷತೆಯನ್ನು ಬಿಚ್ಚಿದಾಗ ಕೆಂಪಗಿರಬೇಕಾಗಿದ್ದ ಮಂತ್ರಾಕ್ಷತೆಯು ಕಪ್ಪಾಗಿರುವುದನ್ನು ಕಂಡು ಯಾದವಾರ್ಯರು ಧರೆಗಿಳಿದು ಹೋದರು, ಅವರಿಗೆ ಅಪಾರದುಃಖವಾಯಿತು. ಯಾತನಾಶ್ವರದಲ್ಲಿ ಶ್ರೀಯಾದವಾರ್ಯರು ಸಹೋದರನನ್ನು ನೋಡಿ “ಶ್ರೀನಿವಾಸ, ಗುರದ್ರೋಹ ಸಂಪಾದಿಸಿಕೊಂಡು ಬಂದೆಯಲ್ಲೋ ! ನೀನು ಗುರುಸಾರ್ವಭೌಮರ ಸನ್ನಿಧಿಗೆ ಹೋದಾಗಲೇ ಏನಾದರೂ ಅವಿವೇಕ ಮಾಡಿಕೊಂಡು ಬರುವಿಯೇನೋ ಎಂಬ ಭಯವಾಗಿತ್ತು. ಅದು ಸತ್ಯವಾಯಿತು! ನೀನು ಭಾಗ್ಯಹೀನ, ಹೂಂ, ಹೇಳು, ಅಲ್ಲಿ ಏನು ಅಪಚಾರ ಮಾಡಿದೆ?” ಎಂದರು. 

ಶ್ರೀನಿವಾಸಾಚಾರ್ಯರು ದುಃಖಿತರಾಗಿ, “ತಮ್ಮ ಅಪ್ಪಣೆಯಂತೆ ಗುರುರಾಜರ ದರ್ಶನಮಾಡಿ ಗ್ರಂಥವನ್ನರ್ಪಿಸಿದೆ. ಶ್ರೀಸ್ವಾಮಿಗಳವರು ನನ್ನ ಗ್ರಂಥವನ್ನು ಅವಲೋಕಿಸಿ ಸಂತೋಷಪಟ್ಟು, ಗೌರವಿಸಿ ಆಶೀರ್ವದಿಸಿದರು. ನಾನಾವ ಅಪರಾಧವನ್ನೂ ಮಾಡಲಿಲ್ಲ” ಎಂದರು. “ಶ್ರೀನಿವಾಸ, ಮಹಾತ್ಮರ ನಿಗ್ರಹವನ್ನಂತೂ ಸಂಪಾದಿಸಿದ್ದೀಯೆ! ಯೋಚಿಸಿ ಹೇಳು ಅಲ್ಲೇನು ನಡೆಯಿತು?” ಎಂದು ಶ್ರೀಯಾದವಾಚಾರ್ಯರು ಪ್ರಶ್ನಿಸಿದಾಗ ಶ್ರೀನಿವಾಸಾಚಾರ್ಯರಿಗೆ ಭೋಜನಕಾಲದಲ್ಲಿ ಜರುಗಿದ ಸಾಸುವೆ ಪ್ರಕರಣ ನೆನಪಿಗೆ ಬಂದಿತು. ಅದನ್ನು ಅಣ್ಣಂದಿರಲ್ಲಿ ವಿಜ್ಞಾಪಿಸಿದರು. ಶ್ರೀಯಾದವಾರ್ಯರು ನಿಟ್ಟುಸಿರುಬಿಟ್ಟು “ಶ್ರೀನಿವಾಸ, ಎಂಥ ಅಪಚಾರ ಮಾಡಿಬಿಟ್ಟೆ! ಮಹಾಜ್ಞಾನಿಗಳೂ, ಸಂಪ್ರದಾಯಾರ್ಥ ಕೋವಿದರೂ ಆದ ಗುರುಸಾರ್ವಭೌಮರ ಮುಂದೆ ನಿನ್ನದೇನು ಶಾಠ ? ಯಾವುದು ಸ್ವೀಕಾರಾರ್ಹ, ಯಾವುದಲ್ಲ-ಎಂಬುದನ್ನು ಮಹಾಮಹಿಮರಾದ ಶ್ರೀಗುರುಸಾರ್ವಭೌಮ- ರಿಗಿಂತ ನೀನು ಬಲ್ಲೆಯಾ ? ಜ್ಞಾನಿಗಳ ಸನ್ನಿಧಿಯಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದನ್ನೂ ಅರಿಯದ ನೀನೆಂಥ ಗ್ರಂಥಕಾರನೋ? ಶ್ರೀಮೂಲರಾಮದೇವರಪ್ರಸಾದ ಶ್ರೀಗುರುಗಳ ಹಸ್ತೋದಕವನ್ನು ತಿರಸ್ಕರಿಸಬಹುದೇ? ಹೊರಡು, ಮೊದಲು ಆ ಮಹಾನುಭಾವರ ಕ್ಷಮೆಯಾಚಿಸಿ, ಪೂರ್ಣಾನುಗ್ರಹವನ್ನು ಸಂಪಾದಿಸಿಕೊಂಡು ಬಾ, ಇಲ್ಲದಿದ್ದರೆ - ಗ್ರಂಥಕಾರನಾಗಬಯಸಿದ ನಿನಗೆ ಶ್ರೀಮದಾಚಾರ್ಯರ, ಶ್ರೀಟೀಕಾಚಾರ್ಯರ ಅನುಗ್ರಹವು ಖಂಡಿತ ದೊರಕದು!” ಎಂದು ಹೇಳಲು, ಖಿನ್ನಮನಸ್ಕರಾದ ತಿರುಗಿಬಂದ ಶ್ರೀನಿವಾಸಾಚಾರ್ಯನನ್ನು ಕಂಡು ಗುರುರಾಜರು ಮುಗುಳುನಗೆ ಬೀರುತ್ತಾ “ಶ್ರೀನಿವಾಸಾಚಾರ್ಯರೇ, ಶ್ರೀಯಾದವಾರ್ಯರು ಕಳಿಸಿದರೇನು ?” ಎಂದು ಪ್ರಶ್ನಿಸಿದರು. ಆ ಮಾತು ಕೇಳಿದೊಡನೆಯೇ ಶ್ರೀನಿವಾಸಾಚಾರ್ಯರಿಗೆ ಶ್ರೀರಾಯರು ಭೂತಭವಿಷ್ಯದ್ವರ್ತಮಾನಗಳನ್ನು ಕರತಲಾಮಲಕಮಾಡಿಕೊಂಡ ಮಹಾತ್ಮರೆಂಬುದು ಸ್ಪಷ್ಟವಾಯಿತು. ಅವರ ಕಣ್ಣಿನಿಂದ ದುಃಖಾಶ್ರು ಹರಿಯಹತ್ತಿತು. ದೀನರಾಗಿ ಗುರುಗಳ ಪಾದಹಿಡಿದು “ಮಹಾಸ್ವಾಮಿ, ನನ್ನಿಂದ ಮಹಾ ಅಪರಾಧ ಘಟಿಸಿತು. ಶರಣಾಗತನಾಗಿ ಬಂದಿರುವ ನನ್ನಲ್ಲಿ ಕೃಪೆದೋರಿ, ಸರ್ವ ಅಪರಾಧಗಳನ್ನು ಕ್ಷಮಿಸಿ ಕರಪಿಡಿದು ಕಾಪಾಡಬೇಕು” ಎಂದು ಅತ್ಯಂತ ದೀನರಾಗಿ ಮತ್ತೆ ಮತ್ತೆ ಪ್ರಾರ್ಥಿಸಿದರು. ಶ್ರೀರಾಯರು ಶ್ರೀನಿವಾಸಾಚಾರ್ಯರ ಮೇಲೆ ಕಾರುಣ್ಯಪೂರ್ಣಕಟಾಕ್ಷಬೀರಿ “ಏಳಿ ಶ್ರೀನಿವಾಸಾಚಾರ್ಯರೇ, 'ತಂ ನ ಶೋಚಯೇತ್ಪಾಜ್' ನಡೆದುದನ್ನು ಮರೆತುಬಿಡಿ, ಶ್ರೀಮೂಲರಾಮನು ಪ್ರಸಾದವನ್ನು ಸ್ವೀಕರಿಸಲಿಲ್ಲವೆಂದು ಸಿಟ್ಟಾದನೋ ಏನೋ, ಈಗ ಶ್ರೀಮೂಲರಾಮನಿಗೆ ನಿವೇದಿತವಾದ ಪ್ರಸಾದವನ್ನು ಸ್ವೀಕರಿಸಿದರಾಯಿತು. ಇದಕ್ಕೆ ಇಷ್ಟೇಕೆ ಚಿಂತಿಸುವಿರಿ?” ಎಂದು ಸಮಾಧಾನ ಪಡಿಸಿದರು. 

“ಮಹದಾಜ್ಞಾ” ಎಂದು ವಿನೀತರಾಗಿ ವಿಜ್ಞಾಪಿಸಿದ ಶ್ರೀನಿವಾಸಾಚಾರ್ಯರು ಶ್ರೀಯವರ ಅಮೃತಹಸ್ತದಿಂದ ತೀರ್ಥ-ಪ್ರಸಾದಗಳನ್ನು ಭಯಭಕ್ತಿಗಳಿಂದ ಪಡೆದು ಸಮ್ಮುಖದಲ್ಲಿ ಕುಳಿತು ಸಾಸುವೆಯನ್ನು ಉಪಯೋಗಿಸಿದ್ದ ಭಗವತ್ನಸಾದವನ್ನು ಸಂತೋಷದಿಂದ ಭೋಜನಮಾಡಿದರು. 

ಭೋಜನಾನಂತರ ಗುರುರಾಜರು ಶ್ರೀನಿವಾಸಾಚಾರ್ಯರಿಗೆ ಗೌರವಸಂಭಾವನೆ ಫಲಮಂತ್ರಾಕ್ಷತೆಗಳನ್ನು ಕರುಣಿಸಿ “ಶ್ರೀನಿವಾಸಾಚಾರ್ಯರೇ, ಇದು ಯಾದವಾರರಿಗೆ” ಎಂದು ಪ್ರತ್ಯೇಕ ಫಲಮಂತ್ರಾಕ್ಷತೆಯನ್ನು ಅನುಗ್ರಹಿಸಿದರು. ಶ್ರೀನಿವಾಸಾಚಾರ್ಯರು ಅಣ್ಣಂದಿರ ಬಳಿಗೆ ಬಂದು ಗುರುಸಾರ್ವಭೌಮರು ನನ್ನಲ್ಲೂ ಅನುಗ್ರಹ ಮಾಡಿದ್ದಾರೆ” ಎಂದಾನಂದಿಸಿ ಶ್ರೀಯಾದವಾರರು ಶ್ರೀಯವರು ಕಳಿಸಿದ ಮಂತ್ರಾಕ್ಷತೆಯನ್ನು ಶಿರಸಾಧರಿಸಿದರು. 

ಜೀವನದಲ್ಲಿ ಬಂದೊದಗಿದ ವಿವಿಧ ಸಮಸ್ಯೆ, ತೊಂದರೆ-ತೊಡಕುಗಳನ್ನು ಆಳವಾಗಿ ವಿವೇಚಿಸಿ ಜೀವನಪಥದಲ್ಲಿ ಮುಂದೆ ಸಾಗಬಯಸುವವರಿಗೆ ಬಿದರಹಳ್ಳಿ ಶ್ರೀನಿವಾಸಾಚಾರ್ಯರ ಮೇಲಿನ ಪ್ರಕರಣವು ಒಂದು ಗುಣಪಾಠವಾಗಿದೆ. ನಾವು ಕ್ರಮಿಸುವ ಮಾರ್ಗ ಸುಸ್ಪಷ್ಟವಾಗಿದ್ದರೂ, ಮಾನವರು ಸಮಯ, ಸನ್ನಿವೇಶ, ಸನ್ನಿಧಿಗಳನ್ನು ಅರಿತು ಅದಕ್ಕೆ ತಕ್ಕಂತೆ ನಡೆಯಬೇಕಾಗುವುದು, ಅದನ್ನು ಮರೆತು, ಸ್ತೋತ್ತಮರಾದ ಜ್ಞಾನಿಗಳ ಸನ್ನಿಧಿಯಲ್ಲಿ ಅಹಂಕಾರ, ಠೀವಿ, ದರ್ಪ, ಢಂಬಾಚಾರಗಳಿಂದ, ತಮ್ಮ ದೊಡ್ಡಸ್ತಿಕೆಯನ್ನು ಪ್ರದರ್ಶಿಸಲು ಯತ್ನಿಸಿದಲ್ಲಿ, ಅದು ಅಪಚಾರವಾಗುವುದು. ದೊಡ್ಡವರ ಸನ್ನಿಧಿಯಲ್ಲಿ ಸಾಮಾನ್ಯ ಮಾನವರಾದ ನಾವು ನಮ್ಮ ಶಾಠವನ್ನು ತೋರಲು ಹೋಗಬಾರದು - ಎಂಬುದಕ್ಕೆ ಬಿದರಹಳ್ಳಿ ಶ್ರೀನಿವಾಸಾಚಾರ್ಯರ ಈ ಪ್ರಕರಣವು ಮಾನವಜನಾಂಗಕ್ಕೆ ನೀತಿಬೋಧಕವಾಗಿದೆ.