ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೧೦೮. ಮೃತ ಪೋತ ಪ್ರಾಣದಾತರು
ಗದುಗಿನಲ್ಲಿ ರಾಯರು ಬಿಡಾರಮಾಡಿದಾಗ ಸುತ್ತಮುತ್ತಲಿನ ಗ್ರಾಮವಾಸಿಗಳಾದ ಮಠದ ಶಿಷ್ಯರು, ಭಕ್ತರು, ಆಸ್ತಿಕರು ಗದುಗಿಗೆ ಬಂದು ರಾಯರ ದರ್ಶನ ಮಾಡಿ ಪುನೀತರಾಗುತ್ತಿದ್ದರು. ಇದರಂತೆ ತಮ್ಮ ತಮ್ಮ ಗ್ರಾಮಗಳಿಗೆ ಗುರುಗಳನ್ನು ಕರೆದೊಯ್ದು ಪಾದಪೂಜೆ-ಭಿಕ್ಷೆಗಳನ್ನೇರ್ಪಡಿಸಿ, ಸೇವಿಸುತ್ತಿದ್ದರು. ರಾಯರ ದರ್ಶನ, ಅವರೊಡನೆ ಭಾಷಣ, ಅವರ ಅಮೃತಕರದಿಂದ ತೀರ್ಥ ಪ್ರಸಾದ ಮಂತ್ರಾಕ್ಷತೆಗಳನ್ನು ಪಡೆಯುವುದರಿಂದ, ಅವರು ಮಾಡಿದ ಆಕಜಲ ಪ್ರೋಕ್ಷಣಾದಿಗಳಿಂದ ತಮ್ಮೆಲ್ಲ ಕಷ್ಟಗಳು ಪರಿಹಾರವಾಗಿ ಮನೋರಥವು ಸಿದ್ಧಿಸುವುದೆಂದೂ, ಸನ್ಮಂಗಳಗಳು ದೊರಕುವುದೆಂದೂ ಜನರು ನಂಬಿದ್ದರು. ಕರುಣಾ ಮೂರ್ತಿಗಳಾದ ರಾಯರು ಧರೆಯ ಜನತೆಯ ಕಲ್ಯಾಣವೇ ಗುರಿಯಾಗಿಟ್ಟುಕೊಂಡು ಶ್ರೀಹರಿಯ ಸಂಕಲ್ಪದಂತೆ ಸಜ್ಜನರ ಉದ್ಧಾರಕ್ಕಾಗಿಯೇ ಸಂಚಾರಮಾಡುತ್ತಿದ್ದುದರಿಂದ ಸ್ವಾಮಿಗಳು ತಮ್ಮನ್ನು ಅರಸಿ ಬಂದು ಸೇವಿಸುವವರ ಮನೋಭಿಷ್ಟಗಳನ್ನು ನೆರವೇರಿಸಿ ಕರುಣಿಸುತ್ತಿದ್ದುದರಿಂದ ಕಲಿಯುಗದ ಜನರ ಹಿತೈಷಿಗಳಾದ ದೇವದೂತರೇ ಅವರೆಂದು ಪ್ರಜಾಕ ಅವರನ್ನು ಆರಾಧಿಸುತ್ತಿತ್ತು.
ಗದಗಿನ ಸಮೀಪದಲ್ಲಿ ಕಿರೀಟಗಿರಿ ಎಂಬುದೊಂದು ಉತ್ತಮ ಗ್ರಾಮ. ಆ ಗ್ರಾಮದ ಯಜಮಾನ ವೆಂಕಟರಾಯದೇಶಾಯಿ. ಅವನು ಮಠದ ಪ್ರಮುಖ ಶಿಷ್ಯರಲ್ಲೊಬ್ಬ. ಆ ಮನೆತನದವರು ಮೊದಲಿನಿಂದಲೂ ಮಠದ ಅವಿಚ್ಛಿನ್ನ ಶಿಷ್ಯರೂ ಭಕ್ತರೂ ಆಗಿದ್ದರು. ವೆಂಕಟರಾಯನು, ರಾಯರು ಗದಗಿಗೆ ಬಂದಿರುವ ವಿಚಾರವರಿತು ಗುರುಗಳನ್ನು ತನ್ನ ಗ್ರಾಮಕ್ಕೆ ಕರೆಸಿಕೊಂಡು ಸತ್ಕರಿಸಿ ಕೃತಾರ್ಥನಾಗಬೇಕೆಂದು ಬಯಸಿ, ಅವನು ಗದಗಿಗೆ ಬಂದು ರಾಯರ ದರ್ಶನಮಾಡಿ ತನ್ನ ಮನದಾಸೆಯನ್ನು ವಿಜ್ಞಾಪಿಸಿ 'ಶಿಷ್ಯನ ಸೇವೆ ಸ್ವೀಕರಿಸಬೇಕು' ಎಂದು ಪ್ರಾರ್ಥಿಸಿದ. ಶಿಷ್ಟವತ್ಸಲರಾದ ಗುರುಗಳು ಆತನ ಮನವಿಯನ್ನು ಮನ್ನಿಸಿ ಕಿರೀಟಗಿರಿಗೆ ದಯಮಾಡಿಸಿದರು. ವಿಜೃಂಭಣೆಯಿಂದ ದೇಶಾಯಿ ಗುರುಗಳನ್ನು ಸ್ವಾಗತಿಸಿ ಮನೆಗೆ ಕರೆತಂದು ಪಾದಪೂಜೆ ಮಾಡಿ ಕಾಣಿಕೆ ಸಲ್ಲಿಸಿ ಪತ್ನಿಪುತ್ರ ಬಾಂಧವರೊಡನೆ ಮಂತ್ರ ಮುದ್ರಾಧಾರಣೆ ಪಡೆದು ಸಂತೋಷಿಸಿದ.
ಅಂದು ಮನೆಯಲ್ಲಿ ಶ್ರೀಪಾದಂಗಳವರಿಗೆ ಭಿಕ್ಷೆಯನ್ನೇರ್ಪಡಿಸಿ ನೂರಾರು ಜನ ಬ್ರಾಹ್ಮಣ ಸುವಾಸನಿಯರನ್ನು ಮನೆಗೆ ಕರೆದಿದ್ದ. ವಸಂತಕಾಲವಾದ್ದರಿಂದ ಅವನ ತೋಟದಲ್ಲಿ ಹೇರಳವಾಗಿ ರಸಪೂರ್ಣ ಮಾವಿನಹಣ್ಣುಗಳು ಬಿಟ್ಟಿದ್ದವು. ಬ್ರಾಹ್ಮಣರ ಭೋಜನಕ್ಕಾಗಿ ಹೇರಳವಾಗಿ ಮಾವಿನಹಣ್ಣುಗಳನ್ನು ಕಿತ್ತಿಸಿ ತರಿಸಿ ಅಂದು ಅಡುಗೆಯಲ್ಲಿ ಮಾವಿನಹಣ್ಣಿನ ರಸಾಯನವನ್ನು ಯಥೇಚ್ಛವಾಗಿ ತಯಾರಿಸುವಂತೆ ಅಡುಗೆಯವರಿಗೆ ತಿಳಿಸಿದ್ದ, ದೇಶಾಯಿಯ ಮನೆ ವಿಸ್ತಾರವಾಗಿತ್ತು. ಶ್ರೀಯವರು ನೆರವೇರಿಸುವ ದೇವರಪೂಜೆ ನೋಡಲು ಅಲ್ಲಿ ಬ್ರಾಹ್ಮಣ ಸುವಾಸಿನಿಯರು ಕಿಕ್ಕಿರಿದು ತುಂಬಿದ್ದರು. ದೇಶಾಯಿ ಸಡಗರದಿಂದ ಸಕಲ ವ್ಯವಸ್ಥೆಗಳನ್ನು ಮಾಡುತ್ತಿದ್ದ. ಐದಾರು ನೂರುಜನ ಆಹ್ವಾನಿತರಿಗೆ ಶ್ರೀಮಠದ ನೂರಾರುಜನ ಪರಿವಾರದವರಿಗೆ ಭೋಜನ ಸಿದ್ಧವಾಗಬೇಕಾದುದರಿಂದ ದೇಶಾಯಿ ಮನೆಯ ಹಿಂದಿನ ಅಂಗಳದಲ್ಲಿ ಚಪ್ಪರ ಹಾಕಿಸಿ ಅಡುಗೆಗೆ ವ್ಯವಸ್ಥೆ ಮಾಡಿದ್ದ, ಅಡುಗೆಯವರು ಒಂದು ದೊಡ್ಡ ಪಂಚಾಪಾತ್ರೆಯಲ್ಲಿ ಮಾವಿನ ಹಣ್ಣಿನ ಸೀಕರಣೆಯನ್ನು ತಯಾರಿಸಿಟ್ಟಿದ್ದರು.
ಶ್ರೀರಾಯರು ಸ್ನಾನಾನೀಕಾದಿಗಳನ್ನು ಪೂರೈಸಿ ಶ್ರೀಮೂಲರಾಮ ದೇವರ ಪೂಜಾರಾಧನೆಯಲ್ಲಿ ಮಗ್ನರಾದರು. ವಾದ್ಯ, ವೇದಘೋಷಗಳಿಂದ ಶ್ರೀಮೂಲರಾಮರ ಪೂಜೆ ಪ್ರಾರಂಭವಾಯಿತು.
ವೆಂಕಟರಾಯದೇಶಾಯಿಗೆ ಕುಲದೀಪಕನಾದ ಓರ್ವ ಸುಪುತ್ರನಿದ್ದ. ಶ್ರೀನಿವಾಸ ಎಂಬ ಆ ಬಾಲಕನಿಗೆ ಐದಾರು ವರ್ಷ ವಯಸ್ಸು. ಬಾಲಕ ಬಹು ಸ್ಪುರದ್ರೂಪಿಯಾಗಿ ಬಹು ಚಟುವಟಿಕೆಯುಳ್ಳವನಾಗಿದ್ದ, ತಮ್ಮ ಮನೆಗೆ ಗುರುಗಳು ಬಂದಿದ್ದಾರೆಂದು ಅವನಿಗೆ ಎಲ್ಲಿಲ್ಲಿದ ಸಂತೋಷ, ಸಂಭ್ರಮ !
ಎಲ್ಲರೂ ದೇವರ ಪೂಜಾ ನಿರೀಕ್ಷಣೆಯಲ್ಲಿ ಮೈಮರೆತಿದ್ದಾರೆ, ದೇಶಾಯಿಯ ಪತ್ನಿಯು ಬಂಧುಗಳು ಮತ್ತು ಆಹ್ವಾನಿತರಿಗೆ ಪೂಜೆ ನೋಡಲು ಸ್ಥಳ ಮಾಡಿಕೊಡುತ್ತಾ ಓಡಾಡುತ್ತಿದ್ದಾಳೆ. ದೇಶಾಯಿ ಹೊರಗೆ ಕಟ್ಟೆಯ ಮೇಲೆ ಕುಳಿತು ಗ್ರಾಮದ ಮುಖ್ಯಸ್ಥರೊಡನೆ ಮಾತನಾಡುತ್ತಾ ಅವರಿಗೆ ಗುರುರಾಜರ ಮಹಿಮೆಗಳನ್ನು ಬಣ್ಣಿಸುತ್ತಿದ್ದಾನೆ. ಆ ಸಮಯದಲ್ಲಿ ದೇಶಾಯಿಯ ಮಗ ಶ್ರೀನಿವಾಸ ಅತ್ತಿತ್ತ ತಿರುಗುತ್ತಾ ಅಡುಗೆ ಆಗುತ್ತಿದ್ದ ಸ್ಥಳಕ್ಕೆ ಬಂದ. ಅಡಿಗೆಯವರು ತಮ್ಮ ಕೆಲಸದಲ್ಲಿ ಮಗ್ನರಾಗಿದ್ದಾರೆ. ಬಾಲ್ಯಚಾಪಲ್ಯದಿಂದ ಶ್ರೀನಿವಾಸ ಅಲ್ಲಿದ್ದ ದೊಡ್ಡ ಕಡಾಯವನ್ನು ಕಂಡು ಅದರಲ್ಲೇನಿದೆ ನೋಡಬೇಕೆಂದು ಕುತೂಹಲದಿಂದ ಅದರತ್ತ ಬಂದ. ಕಡಾಯವು ಬಹಳ ಎತ್ತರವಾಗಿದ್ದರಿಂದ ಅಲ್ಲೇ ಇದ್ದ ಒಂದು ದೊಡ್ಡ ಕಲ್ಲನ್ನು ಅದರ ಹತ್ತಿರ ಉರುಳಿಸಿ, ಅದರ ಮೇಲೆ ಹತ್ತಿ ಬಗ್ಗಿದ ಶ್ರೀನಿವಾಸ, ಪಾಪ, ನಿಂತಿದ್ದ ಕಲ್ಲು ಜಾರಿತು. ಆಯತಪ್ಪಿ ಶ್ರೀನಿವಾಸ ಮಾವಿನಹಣ್ಣಿನ ರಸಾಯನದ ಆ ಕಡಾಯದಲ್ಲಿ ಬಿದ್ದುಬಿಟ್ಟ ! ಕ್ಷಣಕಾಲ ಕೈಕಾಲು ಬಡಿದ, ನಂತರ ಎಲ್ಲ ಸ್ತಬ್ಧವಾಯಿತು!
ನೇವೇದ್ಯಕ್ಕೆ ಸಿದ್ಧಪಡಿಸಲು ಬಂದ ಅಡಿಗೆಯವರು ಕೂತಫಲ ರಸಾಯನವಿದ್ದ ಪಂಚಪಾತ್ರೆಯಲ್ಲಿ ತೇಲುತ್ತಿರುವ ದೇಶಾಯಿ ಪುತ್ರನನ್ನು ಕಂಡು ಗಾಬರಿಯಾದರು. ಕೂಡಲೇ ದೇಶಾಯಿಯವರನ್ನು ಕರೆಸಿಕೊಂಡು ವಿಷಯ ತಿಳಿಸಿದರು. ದೇಶಾಯಿ ಮಗನ ಶವವನ್ನು ಕಂಡು ಮೂರ್ಛಿತನಾದ, ಹೇಗೋ ವಿಷಯ ತಿಳಿದು ಅಲ್ಲಿಗೆ ಬಂದ ದೇಶಾಯಿ ಪತ್ನಿ ದುಃಖಾರ್ತಳಾಗಿ ಪ್ರಲಾಪಿಸಹತ್ತಿದಳು. ಮೂರ್ಛ ತಿಳಿದೆದ್ದ ದೇಶಾಯಿಯ ಕಣ್ಣುಗಳಿಂದ ಧಾರಾಕಾರವಾಗಿ ದುಃಖಾಶ್ರು ಹರಿಯುತ್ತಿತ್ತು. ಅವನ ಪತ್ನಿಯ ದುಃಖಕ್ಕಂತೂ ಪಾರವೇ ಉಳಿಯಲಿಲ್ಲ. ವೆಂಕಟರಾಯ ಹೇಗೋ ದುಃಖವನ್ನು ತಡೆಹಿಡಿದು “ಈ ವಿಚಾರವನ್ನು ಯಾರಿಗೂ ತಿಳಿಸಬಾರದು. ಗುರುಗಳ ಪೂಜೆ, ಬ್ರಾಹ್ಮಣ ಭೋಜನಾದಿಗಳಿಗೆ ತೊಂದರೆಯಾಗಬಾರದು. ಮತ್ತೆ ಬೇರೆ ಮಾವಿನ ಹಣ್ಣುಗಳಿಂದ ರಸಾಯನವನ್ನು ಸಿದ್ಧಪಡಿಸಿರಿ” ಎಂದು ಹೇಳಿ ಪುತ್ರನ ಕಳೇಬರವನ್ನು ಹೊತ್ತು, ಪತ್ನಿಯೊಡನೆ ಹಿಂದಿನ ಬಾಗಿಲಿನಿಂದ ತನ್ನ ಮನೆಗೆ ಸ್ವಲ್ಪ ದೂರದಲ್ಲಿದ್ದ ಬಂಧುಗಳ ಮನೆಯಲ್ಲಿ ಮಗನ ಶವವನ್ನಿಟ್ಟು ಕುಳಿತ. ಅವನಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಗಿತ್ತು.
ಸ್ವಲ್ಪ ವೇಳೆಯಲ್ಲೇ ಅವನ ಬಾಂಧವರು, ಮಿತ್ರರೆಲ್ಲಾ ಅಲ್ಲಿ ನೆರೆದರು. ಎಲ್ಲರೂ ದೇಶಾಯಿ ದಂಪತಿಗಳಿಗೊದಗಿದ ದುಃಖವನ್ನು ಕಂಡು ಮರುಗಿದರು. ಒಬ್ಬಿಬ್ಬರು “ಮಹಾಮಹಿಮರೆಂದು ಗುರುಗಳನ್ನು ಮನೆಗೆ ಕರೆಸಿ ಸೇವಿಸಿದ್ದಕ್ಕೆ ದೇಶಾಯಿಯವರಿಗೆ ದೊರೆತ ಫಲವೇನು ? ಮಗನ ಮರಣ ! ಇವರೆಂಥ ಮಹಾತ್ಮರೋ ನಾವು ಕಾಣೆವು !” ಎಂದು ಹಂಗಿಸಿದರು. ಅದನ್ನು ಕೇಳಿ ದೇಶಾಯಿ ಅವರ ಮೇಲೆ ಸಿಟ್ಟಾಗಿ, “ಪ್ರಾರಬಕರ್ಮಕ್ಕೆ ಯಾರೇನು ಮಾಡಲು ಸಾಧ್ಯ? ದೈವಚಿತ್ತವೇ ಹೀಗಿರಲು ಗುರುಗಳೇನು ಮಾಡುವರು ? ಹೀಗೆ ಮಹನೀಯರನ್ನು ನಿಂದಿಸಬಾರದು. ಮೇಲಾಗಿ ನನಗಿಲ್ಲದ ದುಃಖ ನಿಮಗೆಲ್ಲಿ ? ನೀವು ಬಾಯಿಮುಚ್ಚಿಕೊಂಡು ಸುಮ್ಮನಿರಿ” ಎಂದು ಗದರಿಸಿದ. ದೇಶಾಯಿಯವರ ಮಾತುಕೇಳಿ ಎಲ್ಲರೂ ಸ್ತಬ್ಧರಾದರು.
ದೇವರಿಗೆ ನೇವೇದ್ಯ ಸಮರ್ಪಣೆಯಾಗಿ ಮಹಾಮಂಗಳಾರತಿ ಪ್ರಾರಂಭವಾಯಿತು. ಶ್ರೀಯವರು “ದೇಶಾಯರು ಕುಟುಂಬಸಹಿತರಾಗಿ ಬಂದು ದೇವರ ದರ್ಶನಮಾಡಲಿ. ಅವರನ್ನು ಕರೆಯಿರಿ” ಎಂದಾಜ್ಞಾಪಿಸಿದರು. ಹತ್ತಿರದಲ್ಲೇ ನಿಂತಿದ್ದ ದೇಶಾಯರ ಮಿತ್ರರು “ಸ್ವಾಮಿ, ದೇಶಾಯರು ಕಾರಾಂತರದಿಂದ ಬರಲಾಗುವುದಿಲ್ಲ. ಪೂಜೆ ಮುಗಿಯಲಿ ಎಂದು ವಿಜ್ಞಾಪಿಸಿದರು ಎಂದು ವಿನಂತಿಸಿದರು. ಮೂಲರಾಮರ ಪೂಜೆ ಸಾಂಗವಾಗಿ ಶ್ರೀಯವರು ತೀರ್ಥಪ್ರಸಾದ ಸ್ವೀಕರಿಸಿ ಸರ್ವರಿಗೂ ತೀರ್ಥ, ತುಳಸೀಪ್ರಸಾದ ಕರುಣಿಸಿದರು. ಆಗಲೂ ದೇಶಾಯರು ಬರದಿದ್ದರಿಂದ ಚಕಿತರಾದ ರಾಯರು “ದೇಶಾಯಿ ಇನ್ನೂ ಏಕೆ ಬರಲಿಲ್ಲ? ನೋಡಿ, ಎಲ್ಲಿದ್ದರೂ ಕರೆದುಕೊಂಡು ಬನ್ನಿರಿ” ಎಂದಾಗ ದೇಶಾಯಿಯ ಸ್ನೇಹಿತರು ನಿರ್ವಾಹವಿಲ್ಲದೆ ದೇಶಾಯಿ ಬಳಿಗೆ ಹೋಗಿ ಗುರುಗಳ ಆದೇಶವನ್ನರುಹಿದರು. ಕಣ್ಣೀರು ಸುರಿಸುತ್ತಾ ಕುಳಿತ್ತಿದ್ದ ದೇಶಾಯರು "ಗುರುಗಳ ಭಿಕ್ಷೆ ಸ್ವೀಕರಿಸಿದ ಮೇಲೆ ಬರುವುದಾಗಿ ವಿಜ್ಞಾಪಿಸಿರಿ. ನೀವೇ ಕೃಷ್ಣಾರ್ಪಣ ಬಿಟ್ಟು ಗುರುಗಳ ಮತ್ತು ಬ್ರಾಹ್ಮಣರ ಭೋಜನ ಮಾಡಿಸಿರಿ” ಎಂದು ಹೇಳಿದರು. ದೇಶಾಯಿ ಮಿತ್ರರು ಗುರುಗಳಲ್ಲಿಗೆ ಬಂದು “ಸ್ವಾಮಿ, ದೇಶಾಯರು ಈಗ ಬರುವಂತಿಲ್ಲ. ತಾವು ಭಿಕ್ಷೆ ಸ್ವೀಕರಿಸಿ, ಬ್ರಾಹ್ಮಣರ ಭೋಜನವಾದ ಮೇಲೆ ಬಂದು ದರ್ಶನ ಪಡೆಯುತ್ತಾರೆ” ಎಂದು ಅರಿಕೆಮಾಡಿದರು.
ಶ್ರೀಯವರು “ಛೇ ಛೇ, ಹಾಗೆಂದರೇನು ಮನೆಯ ಯಜಮಾನರಿಲ್ಲದೆ ನಾವು ಭಿಕ್ಷೆ ಸ್ವೀಕರಿಸುವುದಾದರೂ ಹೇಗೆ? ಅವರಿಗೆ ಎಷ್ಟೇ ಕಾರಗಳಿದ್ದರೂ ಅವೆಲ್ಲವನ್ನೂ ಬದಿಗಿರಿಸಿ ಬರಲೇಬೇಕೆಂದೂ, ಇದು ನಮ್ಮ ಅಪ್ಪಣೆಯೆಂದೂ ತಿಳಿಸಿ ಕರೆದುಕೊಂಡು ಬನ್ನಿರಿ” ಎಂದು ಹೇಳಲು ಗುರುಗಳಿಗೆ ಏನು ಹೇಳಲು ಸಾಧ್ಯವಾಗದೆ ಅವರು ದೇಶಾಯಿ ಇದ್ದಲ್ಲಿಗೆ ಧಾವಿಸಿ ಗುರುಗಳ ಅಪ್ಪಣೆಯನ್ನು ವಿವೇದಿಸಿದರು. ದೇಶಾಯರು ಉಭಯಸಂಕಟದಲ್ಲಿ ಸಿಕ್ಕಿಬಿದ್ದರು. "ಹೋದರೆ ವಿಷಯ ಹೊರಬಿದ್ದು ಶ್ರೀಯವರ ಭಿಕ್ಷೆ, ಬ್ರಾಹ್ಮಣರ ಭೋಜನಕ್ಕೆ ಧಕ್ಕೆಯುಂಟಾಗುತ್ತದೆ, ಹೋಗದಿದ್ದರೆ ಮಹಾತ್ಮರು ಅಸಮಾಧಾನ ತಾಳಿ ಭಿಕ್ಷೆಯನ್ನು ಸ್ವೀಕರಿಸದಿರಲೂಬಹುದು. ದೇವಾ ನಾನೀಗ ಏನು ಮಾಡಲಿ? ಇಂತಹ ಕಷ್ಟ ನನಗೇಕೆ ಕೊಟ್ಟೆ?” ಎಂದು ಮರುಗಿದರು. ಕೊನೆಗೆ 'ಭವಿತವ್ಯಂ ಭವತೇವ' ಎಂದು ಧೈರ್ಯತಾಳಿ ಮನೆಗೆ ಬಂದು ಬಾಗಿಲ ಹೊರಗೆ ನಿಂತರು, ದೇಶಾಯಿ ಒಳಗೆ ಬರದೇ ವಿಷಣ್ಣವದನನಾಗಿ ಹೊರಗೆ ನಿಂತಿರುವುದನ್ನು ಕಂಡು ಏನೋ ಅಚಾತುರ್ಯ ನಡೆದಿರಬೇಕು ಎಂದು ಊಹಿಸಿ, ತಾವೇ ಬಾಗಿಲ ಬಳಿ ಬಂದು ದೇಶಾಯಿಗಳೇ, ಏಕೆ ಹೊರಗೆ ನಿಂತಿರುವಿರಿ ? ತೀರ್ಥ-ಪ್ರಸಾದ ಸ್ವೀಕರಿಸಲೇಕೆ ಬರಲಿಲ್ಲ?” ಎಂದು ಪ್ರಶ್ನಿಸಿದರು. ಅದುವರೆಗೆ ತಡೆಹಿಡಿದಿದ್ದ ದುಃಖದ ಕಟ್ಟೆಯೊಡೆದು ಹರಿಯಿತು, ದೇಶಾಯಿಗಳ ಕಣ್ಣಿಂದ ದುಃಖಾಶ್ರು ಹೊರ ಹೊಮ್ಮಿತು. ದೇಶಾಯಿ ಬಿಕ್ಕಳಿಸುತ್ತಾ “ಸ್ವಾಮಿ, ನಾನು ಒಳಗೆ ಬರುವಂತಿಲ್ಲ” ಎಂದ.
ರಾಯರು : ಸರಿ, ನಿಮ್ಮ ಪುತ್ರನನ್ನಾದರೂ ಕಳಿಸಿರಿ.
ದೇಶಾಯಿ : (ಅಳುತ್ತಾ) ಆಗಲೇ ಆ ಕಾವ್ಯ ಆಗಿಹೋಗಿದೆ. ಸ್ವಾಮಿ!
ರಾಯರು : ನೀವೇನು ಹೇಳುತ್ತಿರುವಿರಿ ?
ದೇಶಾಯಿ : ಗುರುವರ್ಯ ! ನನ್ನ ಮಗನು ಇನ್ನೆಂದಿಗೂ ತಿರುಗಿ ಬಾರದ ಸ್ಥಳಕ್ಕೆ ಹೊರಟುಹೋಗಿದ್ದಾನೆ!
ರಾಯರು : (ಕಳವಳದಿಂದ) ಪ್ಲಾ ಹಾಗೆಂದರೇನು ಸ್ಪಷ್ಟವಾಗಿ ತಿಳಿಸಿರಿ.
ದೇಶಾಯಿ : ಸ್ವಾಮಿ, ನನ್ನ ಮಗ........ನನ್ನ ಮಗ.....ಮಾವಿನ ಹಣ್ಣಿನ ರಸಾಯನ ಪಾತ್ರೆಯಲ್ಲಿ ಬಿದ್ದು ಅಸುನೀಗಿದ್ದಾನೆ - ಇನ್ನೆಲ್ಲಿ ನನ್ನ ಮಗ..........
ದೇಶಾಯಿಗಳೇ,
ಶ್ರೀಯವರಿಗೆ ಆಘಾತವಾದಂತಾಯಿತು. “ಶಾಂತಂ ಪಾಪಂ, ನಾಲಂ ಕೀರ್ತಯೇತ್” - ಅಭದ್ರಮಾತುಗಳನ್ನಾಡದಿರಿ. ನಿಮ್ಮ ಪುತ್ರ ಮೃತನಾಗಿಲ್ಲ, ಇಲ್ಲ ಖಂಡಿತ ಅದು ಸಾಧ್ಯವಿಲ್ಲ. ಪರಮಾತ್ಮನ ಪಾದಸಾಕ್ಷಿಯಾಗಿ ಹೇಳುತ್ತಿದ್ದೇವೆ, ಕೇಳಿ, ಪರಮಮಂಗಳಮೂರ್ತಿಯಾದ ಶ್ರೀಮೂಲರಾಮನಿರುವಲ್ಲಿ ನಿತ್ಯವೂ ಮಂಗಳವೇ ವಿನಃ ಅಲ್ಲಿ ಸಾವು-ನೋವುಗಳಿಗೆ ಎಡೆಯಿಲ್ಲ ! ಹೂಂ, ಹೋಗಿ ನಿಮ್ಮ ಕುಮಾರನ ದೇಹವನ್ನು ತಕ್ಷಣ ಇಲ್ಲಿಗೆ ತೆಗೆದುಕೊಂಡು ಬನ್ನಿರಿ” ಎಂದು ಆದೇಶವಿತ್ತರು.
ಮಗನು ಮೃತನಾಗಿರುವುದು ಸ್ಪಷ್ಟವಾದರೂ, ಗುರುಗಳ ವಚನವು ಅವರ ಹೃದಯದಲ್ಲಿ ಆಶಾಕಿರಣವೊಂದನ್ನು ಮೂಡಿಸಿತು! ದೇಶಾಯರು ಕೂಡಲೇ ಧಾವಿಸಿ ಮಗನ ಶರೀರವನ್ನು ತಂದು ಗುರುಗಳ ಮುಂದಿಟ್ಟರು. ದೇಶಾಯಿ ಪತ್ನಿಯ ಪತಿಯನ್ನು ಹಿಂಬಾಲಿಸಿಬಂದು ಖಿನ್ನಳಾಗಿ ನಿಂತಳು. ಮೃತನಾಗಿ ಮಲಗಿದ್ದ ಆ ಬಾಲಕನನ್ನು ನೋಡಿ ಶ್ರೀಗಳವರ ಹೃದಯ ಕರಗಿ ನೀರಾಯಿತು. ಅವರ ಹೃದಯದಲ್ಲಿ ಕಾರುಣ್ಯ ಝರಿ ಉಕ್ಕಿಹರಿಯಿತು. ಶ್ರೀಗಳವರು “ದೇವದೇವ, ಮೂಲರಘುನಂದನ ಮಂಗಳಮೂರ್ತಿ, ನಿನ್ನ ಸನ್ನಿಧಿಯಲ್ಲಿ ಮರಣವೇ ? ಇದೇನು ವೈಪರೀತ್ಯ, ನಿನ್ನೀ ಭಕ್ತನನ್ನು ಪರೀಕ್ಷಿಸುತ್ತಿರುವೆಯಾ? ಪ್ರಭು, ದಯೆ ಬೀರು, ಈ ಬಾಲಕನನ್ನು ಉಜ್ಜಿವನಗೊಳಿಸು !” ಎಂದು ಪ್ರಾರ್ಥಿಸಿ ಆಸನಾಸೀನರಾಗಿ ಕುಳಿತು, ತಾವು ಮತ್ತೆ ಕಣೆಗೆಯುವವರೆಗೆ ಯಾರೂ ಅತ್ತಿತ್ತ ಕದಲದೇ ಕುಳಿತಿರಬೇಕೆಂದು ಕಟ್ಟಳೆ ಮಾಡಿ, ಆಚಮನ-ಸಂಕಲ್ಪಪೂರ್ವಕವಾಗಿ ಧ್ಯಾನಪರರಾದರು.
ಶ್ರೀಗುರುರಾಜರು ತಮ್ಮ ಹೃದಯಕಮಲದಲ್ಲಿ ಬಿಂಬಮೂರ್ತಿಯನ್ನು ಚಿಂತಿಸಿದರು. ಆಗವರಿಗೆ ಬಿಂಬಮೂರ್ತಿಯ ದರ್ಶನವಾಯಿತು ! ಆನಂತರ ಅಲ್ಲಿ ಜಗನ್ನೋಹನಾಕಾರನಾದ ಶ್ರೀರಾಮಭದ್ರನ ದರ್ಶನವಾಯಿತು. ಶ್ರೀಯವರು ಹಾಗೆಯೇ ಧ್ಯಾನಿಸುತ್ತಿದ್ದಾರೆ. ಇದಕ್ಕಿದ್ದಂತೆ ಅವರ ಹೃದಯಸಿಂಹಾಸನದಲ್ಲಿ ಮಿಂಚಿನ ಕಾಂತಿಯ ನಗೆಮೊಗದಿಂದ ಕೊಳಲು ಹಿಡಿದು ನರ್ತಿಸುವ ಬಾಲಕೃಷ್ಣ ಗೋಚರಿಸಿದ ! ಮನದಲ್ಲೇ ಭಗವಂತನನ್ನು ಸ್ತುತಿಸುತ್ತಿರಲು ಕೃಷ್ಣನಸುನಗುತ್ತಾ ನಿಂತ. ಧ್ಯಾನಸ್ಥರಾಗಿದ್ದಂತೆಯೇ ಶ್ರೀಯವರು ವಿಜ್ಞಾಪಿಸಿದರು - “ದೇವ ಮುರಳೀಮೋಹನ ! ಉಡುಪಿಯಲ್ಲಿ ನೀನು ನಮಗಿತ್ತ ವರವು ಜ್ಞಾಪಕವಿದೆಯೇ ?' ಕೃಷ್ಣ ಕಣ್ಣುಗಳನ್ನರಳಿಸುತ್ತಾ “ಏನು ವರವಿತ್ತೆ?” ಎಂದು ಮರುಪ್ರಶ್ನೆ ಹಾಕಿದ. ಶ್ರೀಯವರು “ಇದೇನು ನಿನ್ನ ಲೀಲೆ ಪ್ರಭು! ನಾನು ಕರೆದಾಗ ಬರುವುದಾಗಿಯೂ, ಪ್ರಾರ್ಥಿಸಿದ್ದನ್ನು ನೆರವೇರಿಸುವುದಾಗಿಯೂ ಅಭಯವಿತ್ತಿರಲ್ಲಿಲ್ಲವೇ ? ಈಗ ಏನೂ ತಿಳಿಯದವನಂತೆ ನಟಿಸುವುದು ನಿನಗುಚಿತವೇ ?” ಎನಲು ಬಾಲಗೋಪಾಲನು ದರಹಾಸ ಬೀರುತ್ತಾ “ಓಹೋ, ಅದೇ ! ಹೂ, ಜ್ಞಾಪಕವಿದೆ. ಈಗ ನನ್ನಿಂದೇನಾಗಬೇಕು ಹೇಳು?” ಎಂದು ನುಡಿಯಲು ರಾಯರು “ಪ್ರಭು, ನಿನ್ನ ಭಕ್ತನು ನಮ್ಮನ್ನು ಕರೆಯಿಸಿ ಪೂಜಾರಾಧನೆ ಮಾಡಿಸಿದ್ದಾನೆ. ಅಂತಹವನ ಮಗನು ಮರಣಹೊಂದುವುದೆಂದರೇನು ? ಇದು ನಿನ್ನ ಕೀರ್ತಿಗೆ ಕಳಂಕವಲ್ಲವೇ ? ದೇವರು ಅತೀಂದ್ರಿಯ ವಸ್ತುಗಳನ್ನು ನಂಬದ ನಾಸ್ತಿಕರೇ ಅಧಿಕವಾಗಿರುವಾಗ ಧಾರ್ಮಿಕನೂ, ದೈವಭಕ್ತನೂ ಆದ ದೇಶಾಯಿಯ ಮಗನು ನಿನ್ನ ಪೂಜಾರಾಧನೆ ನಡೆಯುತ್ತಿರುವಾಗಲೇ ಮೃತನಾದನೆಂದರೆ, ಮುಂದೆ ಯಾರು ತಾನೆ ಧಾರ್ಮಿಕರಾಗುಳಿಯುವರು, ದೇವ-ಗುರುಪೂಜಕರಾಗುವರು ? ನಿನ್ನ ಸತ್ತಪ್ರಸಾರಕರಾದ ನಮ್ಮಂಥವರ ಪಾಡೇನು ? ದೇವ, ಹೀಗಾಗಬಾರದು, ಅನುಗ್ರಹಿಸು” ಎಂದು ಧ್ಯಾನಸಮಾಧಿಸ್ಥರಾದಂತೆಯೇ ತಮ್ಮ ಹೃತ್ಪದಲ್ಲಿ ಮೈದೋರಿದ ಶ್ರೀಬಾಲಗೊಪಾಲ- ನನ್ನು ಪ್ರಾರ್ಥಿಸಿದರು.
ಬಾಲಕೃಷ್ಣನು ನಗೆಬೀರಿ “ಸಾಕಪ್ಪಾ ಈ ಸನ್ಯಾಸಿಗಳ ಸಹವಾಸ ! ನಿಮ್ಮನ್ನು ಕಟ್ಟಿಕೊಂಡು ಭಕ್ತಾಗ್ರೇಸನೆಂದು ಒಪ್ಪಿದ್ದಕ್ಕೆ ಈ ಭವಣೆ ಪಡಬೇಕಾಗಿದೆ! ನೀನು ಮಹಾ ಹಟಿಯಪ್ಪ “ನಿನ್ನಿಷ್ಟದಂತೆಯೇ ಆಗಲಿ, ಕೇಳು, ಆ ಬಾಲಕನು ಅಪಮೃತ್ಯುವಿಗೀಡಾಗಿದ್ದನೆ. ಈಗವನು ಬದುಕಬೇಕು! ಇಷ್ಟೇ ಅಲ್ಲವೆ ನಿನ್ನ ಕೋರಿಕೆ ? ತಥಾಸ್ತು! ಶ್ರೀರಾಮಮಂತ್ರವನ್ನು ಜಪಿಸಿ ಮಂತ್ರೋದಕವನ್ನು ಬಾಲಕನ ಶರೀರದ ಮೇಲೆ ಪ್ರೋಕ್ಷಿಸು. ಬಾಲಕ ಉಜೀವಿಸುವನು!” ಎಂದು ಹೇಳಿದಾಗ ಗುರುರಾಜರು “ದೇವ! ಇದು ಅಕಾಲಮೃತ್ಯುವೆಂದರಿತೇ ನಿನ್ನನ್ನು ಪ್ರಾರ್ಥಿಸಿದೆ! ಭಕ್ತವತ್ಸಲನಾದ ನೀನು ಕರುಣಿಸಿದೆ, ಧನ್ಯನಾದೆ ಪ್ರಭು, ನಿನಗೆ ಅನಂತ ವಂದನೆಗಳು” ಎಂದು ಮನಸಾ ನಮಸ್ಕರಿಸಿದರು. ಶ್ರೀಕೃಷ್ಣ ಅವರ ಹೃತ್ಕಮಲದಿಂದ ಅದೃಶ್ಯನಾದ.
ಶ್ರೀರಾಯರ ಮುಖದಲ್ಲಿ ಮಂದಹಾಸಮಲ್ಲಿಗೆ ಅರಳಿತು! ಮೈರೋಮಾಂಚನವಾಯಿತು. ಕೃಪಾದೃಷ್ಟಿಯಿಂದ ವೀಕ್ಷಿಸಿ ನಸುನಕ್ಕರು. ತರುವಾಯ ರಾಯರು ರಾಮಮಂತ್ರ ಜಪಿಸಿ ಕಮಂಡಲೋದಕವನ್ನು ಅಭಿಮಂತ್ರಿಸಿ ಬಾಲಕನ ಶರೀರದ ಮೇಲೆ ಪ್ರೋಕ್ಷಿಸಿ “ಏಳು ಕುಮಾರ!” ಎಂದು ನುಡಿದರು. ಜನರು ಆಶ್ಚರ್ಯದಿಂದ ಮುಂದೇನಾಗುವುದೋ ಎಂದು ಕಾತರದಿಂದ ನೋಡುತ್ತಿರುವಂತೆಯೇ ಕಾಲನ ಕರಾಳ ದವಡೆಯಲ್ಲಿ ಶಿಲುಕಿದ್ದ ಆ ಬಾಲಕನು ಆಗ ತಾನೇ ನಿದ್ರೆಯಿಂದೆಚ್ಚತ್ತವನಂತೆ ಮೈ-ಕೈ ಮುರಿಯುತ್ತಾ ಆಕಳಿಸಿ ದಿಗ್ಗನೆ ಮೇಲೆದ್ದು ಕುಳಿತನು ! ಆ ಪರಮಾದ್ಭುತ ಪವಾಡವನ್ನು ಕಣ್ಣಾರೆ ಕಂಡ ಜನಸ್ತೋಮ ಮೈಮರೆತು ರಾಯರ ಜಯಕಾರ ಮಾಡುತ್ತಾ ಮೃತಪೋತಪ್ರಾಣದಾತರಿಗೆ ಜಯವಾಗಲಿ” ಎಂದು ಘೋಷಿಸಿದರು. ದೇಶಾಯಿ ದಂಪತಿಗಳಿಗಾದ ಆನಂದವನ್ನು ವರ್ಣಿಸಲು ಸಾಧ್ಯವಿಲ್ಲ!
ವೆಂಕಟರಾಯ ದಂಪತಿಗಳು ಗುರುಗಳಿಗೆ ಸಾಷ್ಟಾಂಗವೆರಗಿ “ಮಹಾನುಭಾವ, ಶಿಷ್ಯವತ್ಸಲರಾದ ತಮ್ಮ ಕಾರುಣ್ಯಕ್ಕೆ ಎಣೆಯಿಲ್ಲ. ನಮ್ಮ ವಂಶದ ಕುಡಿಯನ್ನು ಉಜೀವನಗೊಳಿಸಿ ಅನುಗ್ರಹ ಮಾಡಿರುವಿರಿ! ಮಹಾತ್ಮರಾದ ನಿಮಗೆ ಅಲ್ಪರಾದ ನಾವೇನು ತಾನೇ ಪ್ರತಿಯಾಗಿ ನೀಡಬಲ್ಲೆವು ? “ಭೂಯಿಷ್ಠಾಂತೇ ನಮ ಉಕ್ತಿಂ ವಿಧೇಮ” ಎಂಬಂತೆ ಭಕ್ತಿಪೂರ್ವಕ ನಮನಗಳನ್ನರ್ಪಿಸಲು ಮಾತ್ರ ನಾವು ಶಕ್ತರು” ಎಂದು ಆನಂದಬಾಷ್ಪಸಿಕ್ತನಯನರಾಗಿ ಬಿನ್ನವಿಸಿದರು. ಆ ಶ್ರೀನಿವಾಸ ತಂದೆ-ತಾಯಿಗಳ ಹತ್ತಿರ ಬಂದು ಅವರನ್ನು ಬಿಗಿದಪ್ಪಿ “ಅಪ್ಪಾ ನಾನೊಂದು ಕನಸು ಕಂಡೆ!” ಎಂದನು. ದೇಶಾಯಿ ವಿಸ್ಮಯದಿಂದ “ಕನಸು ಕಂಡೆಯಾ ಶ್ರೀನಿವಾಸ! ಅದೇನು ಕನಸು ಹೇಳು ಮಗು” ಎಂದು ಪ್ರೀತಿಯಿಂದ ಮಗನನ್ನು ಆಲಂಗಿಸಿದ.
ಶ್ರೀನಿವಾಸ ಹೇಳಿದ - “ಅಪ್ಪಾ ನಾನೊಬ್ಬನೇ ಆಟವಾಡುತ್ತಿದ್ದಾಗ ನೋಡಲು ಭಯಂಕರ ರೂಪದ ಇಬ್ಬರು ಶೂಲ-ಹಗ್ಗಗಳನ್ನು ಹಿಡಿದು ನನ್ನ ಹತ್ತಿರ ಬಂದು ಹೂಂ, ನಡೆ ಹೋಗೋಣ” ಎಂದರು. ಅವರನ್ನು ಕಂಡು ನನಗೆ ಭಯವಾಯಿತು. ಆದರೂ ನಾನು ಗುರುಗಳ - ದೇವರ ಪೂಜೆ ನೋಡಬೇಕು. ನಾನು ಬರುವುದಿಲ್ಲ” ಎಂದು ಹೇಳಿದೆ. ಆಗವರು ನನ್ನನ್ನು ಬೆದರಿಸುತ್ತಾ “ಬರದಿದ್ದರೆ ಎಳೆದುಕೊಂಡು ಹೋಗುತ್ತೇವೆ” ಎಂದು ಕೈಯಲ್ಲಿದ್ದ ಹಗ್ಗವನ್ನು ನನ್ನ ಕುತ್ತಿಗೆಗೆ ಹಾಕಿ ಎಳೆಯಲಾರಂಭಿಸಿದರು! ಭಯದಿಂದ ನಾನು “ರಾಘವೇಂದ್ರಗುರುಗಳೇ ಕಾಪಾಡಿ” ಎಂದು ಅರಚಿದೆ. ಅಪ್ಪಾ, ಆಗ ಈ ಗುರುಗಳು ಎಲ್ಲಿಂದಲೋ ಬಂದು ಆ ಭಯಂಕರ ಮನುಷ್ಯರತ್ತ ಕೈಲಿದ್ದ ದಂಡವನ್ನು ಬೀಸಿ “ಅವನನ್ನು ಬಿಟ್ಟು ಹೊರಟುಹೋಗಿ” ಎಂದರು. ಗುರುಗಳು ಹಾಗೆ ಹೇಳಿದೊಡನೆಯೇ ಅವರು ಹೆದರಿ ಓಡಿಹೋದರು! ಆಗ ಅಳುತ್ತಿದ್ದ ನನ್ನನ್ನು ಈ ಗುರುಗಳು “ಅಳಬೇಡ ಮಗು, ನಿಮ್ಮಪ್ಪನ ಹತ್ತಿರ ಕರೆದುಕೊಂಡು ಹೊಗುತ್ತೇವೆ ಬಾ” ಎಂದು ನನ್ನನ್ನು ಎತ್ತಿಕೊಂಡರು - ಅಷ್ಟೇ ನನಗೇ ಜ್ಞಾಪಕ. ಈಗ ಎಚ್ಚರವಾಯಿತು” ಎಂದು ಹೇಳಿದನು.
ಬಾಲಕನ ಮಾತು ಕೇಳಿ ಸಕಲರೂ ದಿಗ್ರಮೆಗೊಂಡರು. ಶ್ರೀರಾಯರ ಭಕ್ತವಾತ್ಸಲ್ಯವನ್ನು ಕಂಡು ಸರ್ವರೂ ಆನಂದಭರಿತರಾಗಿ ತಮ್ಮ ಪ್ರಿಯಷ್ಯನಾದ ವೆಂಕಟನಾಥ ದೇಶಾಯಿಗಾಗಿ ಯಮಭಟರನ್ನೇ ಅಟ್ಟಿಸಿ ಶ್ರೀನಿವಾಸನನ್ನು ಬದುಕಿಸಿದ ಮಹಾತ್ಮರೆಂದು ರಾಯರ ಮಹಿಮೆಯನ್ನು ಭಕ್ತತಿಶಿಯದಿಂದ ಕೊಂಡಾಡಿದರು. ಶೋಕಪೂರ್ಣವಾಗಿದ್ದ ಮನೆ ಕ್ಷಣಾರ್ಧದಲ್ಲಿ ಗುರುಸಾರ್ವಭೌಮರ ಕಾರುಣ್ಯದಿಂದ ಸುಖ-ಸಂತೋಷಗಳ ಬೀಡಾಯಿತು.
ಆನಂತರ ಸಕಲರೂ ಗುರುಗಳ ಮಹಿಮೆ, ದೇಶಾಯಿ ವೆಂಕಟರಾಯರ ಮಹಾಭಾಗ್ಯ, ಅದೃಷ್ಟಗಳ ಬಗೆಗೆ ಮಾತನಾಡಹತ್ತಿದರು. ತರುವಾಯ ಗುರುಗಳು ಸ್ನಾನಮಾಡಿ, ಜಪಮುಗಿಸಿ ಪಂಡಿತರು-ಶಿಷ್ಯಮಂಡಲಿಯೊಡನೆ ಭಿಕ್ಷಾಸ್ವೀಕರಿಸಿದರು.
ಮರುದಿನವೂ ದೇಶಾಯಿಯ ಮನೆಯಲ್ಲಿ ಶ್ರೀಮೂಲರಾಮರ ಪೂಜಾರಾಧನೆ ಜರುಗಿತು. ಸಹಸ್ರಾರು ಜನ ದೇವರ ದರ್ಶನ ಮಾಡಿ ಪುನೀತರಾದರು. ಪೂಜಾಕಾಲದಲ್ಲಿ ವೆಂಕಟರಾಯ ದೇಶಾಯಿ ತನ್ನ ವಂಶವನ್ನು ಉದ್ದರಿಸಿದ ಶ್ರೀರಾಯರ ಮಹೋಪಕಾರವನ್ನು ಸ್ಮರಿಸಿ ತನಗಿದ್ದ ಕಿರೀಟಗಿರಿ ಗ್ರಾಮವನ್ನೇ ಶ್ರೀಮೂಲರಘುಪತಿ ವೇದವ್ಯಾಸರ ಭಂಡಾರಕ್ಕೆ ದಾನಮಾಡಿ ಕೃತಾರ್ಥನಾದನು.