|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೧೦೪, ಶ್ರೀರಾಘವೇಂದ್ರವಿಜಯಮಹಾಕಾವ್ಯ

ಮಹಾಮಹಿಮರಾದ ರಾಯರು ಶ್ರೀರಂಗಪಟ್ಟಣಕ್ಕೆ ಬಂದ ಲಾಗಾಯಿತು, ಪ್ರತಿದಿನ ಪಂಡಿತಮಂಡಲೀಲಾಲಮಾನರಾಗಿ, ಧರ್ಮಾಭಿಮಾನಿಗಳಿಂದಾವೃತರಾಗಿ ಕಾವೇರಿ ಸ್ನಾನ, ಶ್ರೀರಂಗನಾಥನ ದರ್ಶನ, ಮಠದಲ್ಲಿ ಪಾಠ-ಪ್ರವಚನ ಜಪತಪಾದನುಷ್ಠಾನ, ಶ್ರೀಮೂಲರಾಮಪೂಜಾರಾಧನೆ, ತೀರ್ಥಪ್ರಸಾದ ವಿತರಣೆ, ಸಂಜೆ ವಿದ್ವತ್ಸಭೆ-ವಿದ್ವಜ್ಜನರಿಂದ ಉಪನ್ಯಾಸ, ಅನುಗ್ರಹೋಪದೇಶ, ಸಾಯಂದೀಪಾರಾಧನೆ ಫಲಮಂತ್ರಾಕ್ಷತಾ ಪ್ರದಾನಾದಿ ಸತ್ಕಾರ್ಯಗಳಲ್ಲಿ ಆಸಕ್ತರಾಗಿದ್ದರು. ಪ್ರಾತಃಕಾಲ ಶ್ರೀಯವರು ಹೇಳುವ ನ್ಯಾಯ-ವೇದಾಂತ-ವ್ಯಾಕರಣ. ಮೀಮಾಂಸಾದಿ ಶಾಸ್ತ್ರಗಳ ಉದ್ದಂಥಗಳ ಪಾಠವನ್ನು ಶ್ರವಣಮಾಡಲೆಂದೇ ನೂರಾರುಜನರು ಶ್ರೀಮಠಕ್ಕೆ ಬರುತ್ತಿದ್ದರು. ರಾಯರ ಮುಖಾರವಿಂದದಿಂದ ಗಂಗಾಪ್ರವಾಹದಂತೆ ಹೊರಡುತ್ತಿದ್ದ ವಾಗ್‌ಝರಿಯ ಸೊಬಗಿನಲ್ಲಿ ಸರ್ವರೂ ತನ್ಮಯರಾಗುತ್ತಿದ್ದರು. ಅನೇಕ ಪಂಡಿತರು ಅನೇಕ ಶಾಸ್ತ್ರಗಳಲ್ಲಿ ತಮಗೆ ಅರ್ಥವಾಗದೆ ಜಟಿಲವಾಗಿದ್ದ ಭಾಗಗಳ ಬಗ್ಗೆ ಶ್ರೀಯವರಲ್ಲಿ ವಿಜ್ಞಾಪಿಸಿ, ತಮ್ಮ ಸಂದೇಹ ಪರಿಹಾರ ಮಾಡಿಕೊಂಡು ತೃಪ್ತರಾಗುತ್ತಿದ್ದರು. ಅನೇಕ ಧರ್ಮಸೂಕ್ಷ್ಮಗಳು, ಸನಾತನಧರ್ಮ, ಆಚಾರ-ವಿಚಾರಗಳು ಸಭೆಯಲ್ಲಿ ಚರ್ಚಿಸಲ್ಪಡುತ್ತಿದ್ದು ರಾಯರು ನೀಡುವ ವಿವರಣೆ ನಿರ್ಣಯಗಳಿಂದ ಆಸ್ತಿಕರು ಪರಮಾನಂದ ಹೊಂದುತ್ತಿದ್ದರು. 

ಒಂದು ದಿನ ರಾಯರು ಶಿಷ್ಯರಿಗೆ ಪಾಠ ಹೇಳುತ್ತಿದ್ದಾರೆ. ಆಗ ವೆಂಕಟನಾರಾಯಣಾಚಾರ್ಯರ ಜೊತೆಗೆ ಬಂದ ರಾಯರ ಸೋದರಳಿಯಂದಿರಾದ ಪಂಡಿತ ನಾರಾಯಣಾಚಾರ್ಯರು ಶ್ರೀಯವರಿಗೆ ನಮಸ್ಕರಿಸಿ ಒಂದು ದೊಡ್ಡ ತಾಳಾ ಓಲೆಯ ಗ್ರಂಥವನ್ನು ಗುರುಗಳ ಮುಂದಿಟ್ಟರು. ವೆಂಕಟನಾರಾಯಣಾಚಾರ್ಯರು “ಮಹಾಸ್ವಾಮಿ ತಮ್ಮ ಪ್ರಿಯಶಿಷ್ಯ ನಾರಾಯಣ ಒಂದು ಮಹಾಕಾವ್ಯವನ್ನು ರಚಿಸಿದ್ದಾನೆ. ಅದೇ ಈ ಗ್ರಂಥ” ಎಂದರುಹಿದರು. 

ತಮ್ಮ ಶಿಷ್ಯರಲ್ಲಿ ಈಗ ಮತ್ತೊಬ್ಬರು ಗ್ರಂಥರಚನೆ ಮಾಡಿರುವದನ್ನರಿತು ರಾಯರು ಮುದಿಸಿದರು. ಮಂದಸ್ಮಿತರಾಗಿ “ನಾರಾಯಣ, ಇದಾವ ಕಾವ್ಯ?” ಎಂದು ಪ್ರಶ್ನಿಸಿದರು. 

ವೆಂಕಟ : ಗುರುವರ್ಯ, ಇದು “ಶ್ರೀರಾಘವೇಂದ್ರವಿಜಯ'ವೆಂಬ ಮಹಾಕಾವ್ಯ ! 

ರಾಯರು : (ಅಚ್ಚರಿಯಿಂದ) ಏನು? ನಮ್ಮ ಮೇಲಿನ ಕಾವ್ಯವೇ ? 

ನಾರಾಯಣ : (ಕರಜೋಡಿಸಿ) ಅಹುದು ಗುರುದೇವ ! ನಾನು ಬಹುವರ್ಷಗಳಿಂದ ಶ್ರೀಯವರ ವಿಜಯವನ್ನು ಕಾವ್ಯರೂಪದಲ್ಲಿ ರಚಿಸಬೇಕೆಂದು ಆಶಿಸಿ ವಿಷಯಸಂಗ್ರಹಮಾಡುತ್ತಾ ಬಂದಿದ್ದೆ. ನವವೃಂದಾವನದಿಂದ ವೆಂಕಟನಾರಾಯಣನೊಡನೆ ಶ್ರೀಯವರ ಅಪ್ಪಣೆ ಪಡೆದು ಕುಂಭಕೋಣಕ್ಕೆ ಹೋದಮೇಲೆ ಬಹುವರ್ಷಗಳಿಂದ ಸಂಗ್ರಹಿಸಿದ್ದ ವಿಷಯಗಳನ್ನು ಪರಾಲೋಚಿಸಿ, ಕಾವ್ಯವು ಸುಗಮವಾಗಿ ಪೂರ್ಣವಾಗಲು ಪರಮಪೂಜ್ಯ ಶ್ರೀವಿಜಯೀಂದ್ರಗುರುಗಳ ಬೃಂದಾವನ ಸನ್ನಿಧಿಯಲ್ಲಿ ಏಳು ದಿನಗಳ ಕಾಲ ಸೇವೆಮಾಡಿದೆ. ಗುರುಗಳು ಸ್ವಪ್ನದಲ್ಲಿ ದರ್ಶನವಿತ್ತು ಕಾವ್ಯರಚನೆ ಮಾಡಲು ಅಣತಿ ನೀಡಿ, ಮಂದಹಾಸದಿಂದ ಫಲಮಂತ್ರಾಕ್ಷತೆ ಅನುಗ್ರಹಿಸಿ ಆಶೀರ್ವದಿಸಿದರು. ಮರುದಿನದಿಂದಲೇ ಹಗಲು-ರಾತ್ರಿ ಕುಳಿತು ನನ್ನ ಯೋಗ್ಯತಾನುಸಾರವಾಗಿ ಈ ಮಹಾಕಾವ್ಯವನ್ನು ರಚಿಸಿದೆ. ಸ್ವಲ್ಪಭಾಗ ಉಳಿದಿತ್ತು. ಅದು ಮೊನ್ನೆಯ ದಿನ ಪೂರ್ಣವಾಯಿತು. ಈಗ ಸನ್ನಿಧಿಗೆ ಅರ್ಪಿಸಿದ್ದೇನೆ. ಪರಿಶೀಲಿಸಿ ಆಶೀರ್ವದಿಸಬೇಕು. 

ರಾಯರು : ಶ್ರೀಹರಿ ಚಿತ್ತ. ನಾರಾಯಣ! ಎಷ್ಟು ಸರ್ಗಾತ್ಮಕವಾಗಿದೆ ಈ ಕಾವ್ಯ ? 

ನಾರಾಯಣ : ಸ್ವಾಮಿ, ಇದು ಹದಿನಾರು ಸರ್ಗಾತ್ಮಕವಾದ ಕಾವ್ಯ. 

ರಾಯರು : “ಹದಿನಾರು ಸರ್ಗವೇ ? ಕೂಡದು, ಕೂಡದು.” ಶ್ರೀಯವರ ವಚನವನ್ನಾಲಿಸಿ ಎಲ್ಲರೂ ವಿಸ್ಮಿತರಾದರು. ಆಗ ವೆಂಕಟನಾರಾಯಣಾಚಾರರು ಹಾಗೆಂದರೇನು ಮಹಾಸ್ವಾಮಿ ? ತಮ್ಮ ಆಶಯವು ಅರ್ಥವಾಗಲಿಲ್ಲ” ಎಂದರು. 

ರಾಯರು : ವೆಂಕಟನಾರಾಯಣ ! ಲೋಕಗುರುಗಳಾದ ಶ್ರೀಮದಾಚಾರರ ವಿಜಯವು ಹದಿನಾರು ಸರ್ಗಾತ್ಮಕವಾಗಿದೆ. ನಮ್ಮ ವಿಜಯವೂ ಹದಿನಾರು ಸರ್ಗಾತ್ಮಕವಾಗಿದೆ. ಆದ್ದರಿಂದ ನಮ್ಮ ವಿಜಯವೂ ಹದಿನಾರು ಸರ್ಗಾತ್ಮಕವಾಗಿರುವುದು. ಯುಕ್ತವಲ್ಲ. 

ನಾರಾಯಣ : (ಭೀತರಾಗಿ), ಸ್ಪಷ್ಟವಾಗಿ ಅಪ್ಪಣೆಕೊಡಿಸಬೇಕು. 

ರಾಯರು : ನಾರಾಯಣ, ನಾವು ಯಾವ ವಿಧದಿಂದಲೂ ಆದಿಗುರುಗಳ ಕಿಂಚಿತ್ ಸಾಮ್ಯವನ್ನೂ ಸಹಿಸಲಾರೆವು ! ಅದು ನಮ್ಮ ಕಾವ್ಯಕ್ಕೂ ಅನ್ವಯಿಸುವುದು. ಕಾವ್ಯದ ಸರ್ಗಗಳಲ್ಲಿಯೂ ಸಾಮ್ಯವಿರಬಾರದು. ಆದ್ದರಿಂದ ಆರು ಸರ್ಗಗಳನ್ನು ತೆಗೆದುಬಿಡು. 

ನಾರಾಯಣ : (ದೀನರಾಗಿ), ಹಾಗನ್ನಬಾರದು ಮಹಾಸ್ವಾಮಿ, ಕೊನೆಯ ಆರು ಸರ್ಗಗಳಲ್ಲಿ ಗುರುದೇವರ ಅಗಾಧ ಪಾಂಡಿತ್ಯ, ವೇದಭಾಷ್ಯಾದಿ ಲೋಕಮಾನ್ಯ ಗ್ರಂಥರಚನಾಚಾತುರ, ಪರವಾದಿದಿಗ್ವಿಜಯ, ದೈತಸಿದ್ಧಾಂತಸ್ಥಾಪನೆ, ಆಚಾರ್ಯ ಪದ್ಮನಾಭ-ಜಯತೀರ್ಥ-ವಿಬುಧೇಂದ್ರ ಪರಂಪರೆಯಿಂದ ಅವ್ಯಾಹತವಾಗಿ ನಡೆದು ಬಂದು ಸಂಪ್ರದಾಯ ಪಾಠಪ್ರವಚನ ಕುಶಲತೆ, ಶಿಷ್ಯ-ಭಕ್ತ-ದೀನ-ದಲಿತ ಜನೋದ್ದಾರ, ಮಹಾಮಹಿಮೆಗಳು ಮುಂತಾಗಿ ಶ್ರೀಪಾದಂಗಳವರ ಬಹುಗುಣಗಳು, ಬಹುಮುಖ ವ್ಯಕ್ತಿತ್ವಗಳು ಚೆನ್ನಾಗಿ ಮೂಡಿಬಂದಿವೆ. ಅದನ್ನೇ ತೆಗೆದುಬಿಟ್ಟರೆ.

ರಾಯರು : (ನಸುನಕ್ಕು) ನಾರಾಯಣ, ನಮ್ಮ ವಿಚಾರಗಳು ಕಾವ್ಯದಲ್ಲಿ ಮೂಡಿಬರುವುದಕ್ಕಿಂತ ಸಜ್ಜನರ ಹೃದಯದಲ್ಲಿ ಶಾಶ್ವತವಾಗಿ ಮೂಡಿಬರಬೇಕು ! ಅದೇ ಉತ್ತಮ. ಆದ್ದರಿಂದ ಆರು ಸರ್ಗಗಳನ್ನು ತೆಗೆದುಬಿಡು ಸ್ವಾಮಿ. 

ನಾರಾಯಣ : ಗುರುದೇವ ! ಅದರಿಂದ ಕಾವ್ಯವು ಅಪೂರ್ಣವಾಗುವುದಿಲ್ಲವೆ ? ಸಮಾಪ್ತಿಮಂಗಳವೂ ಇಲ್ಲದಾಗುವುದಲ್ಲಾ 

ರಾಯರು ಕಾವ್ಯವನ್ನು ತೆಗೆದುಕೊಂಡು ಕೊನೆಯ ಭಾಗವನ್ನು ಪರಿಶೀಲಿಸಿ ಮಂದಹಾಸಬೀರಿ - “ನಾರಾಯಣ, ನಿನ್ನ ಕಾವ್ಯವು ಹತ್ತು ಸರ್ಗಕ್ಕೆ ಪೂರ್ಣವಾಗಿದೆ ! ಶ್ರೀಹರಿವಾಯುಗಳ ಸಂಕಲ್ಪದಂತೆ ನಿನಗೆ ತಿಳಿಯದಂತೆಯೇ ಕಾವ್ಯವು ಪೂರ್ಣವಾಗಿ ಸಮಾಪ್ತಿಯಾಗಿದೆ. 

ನಾರಾಯಣ : (ಅಪ್ರತಿಭರಾಗಿ) ಪ್ಲಾ, ಹಾಗೆಂದರೇನು ಸ್ವಾಮಿ ? 

ರಾಯರು : ಹತ್ತನೆಯ ಸರ್ಗದಲ್ಲಿ ನಾವು ಸಾಯಂ ದೀಪಾರಾಧನೆಯ ನಂತರ ಪೀಠದಲ್ಲಿ ಕುಳಿತು ಶ್ರೀಹರಿಧ್ಯಾನರತ- ರಾಗಿರುವಂತೆ ವರ್ಣಿಸಿದಿಯೇ ಮತ್ತು ಕವಿಗಳು ನಮ್ಮನ್ನು ಆಶುಕವಿತೆಗಳಿಂದ ಕೊಂಡಾಡಿದರೆಂದೂ ವರ್ಣಿಸಿದ್ದೀಯೆ. ಅಲ್ಲಿಗೆ ಸರ್ಗವು ಮುಗಿದಿದೆ. ಭಗವಂತನ ಚಿಂಚನೆ, ಧ್ಯಾನಗಳೇ ಮಂಗಳ ! ಆದರಿಂದ ನಿನ್ನ ಕಾವ್ಯ ಮಂಗಳದೊಡನೆಯೇ ಪರಿಸಮಾಪ್ತಿಯಾಗಿದೆ. 

ನಾರಾಯಣ : (ವಿಷಾದದಿಂದ) ಆದರೂ........... 

ರಾಯರು : ನಾರಾಯಣ ! ಆರು ಸರ್ಗಗಳು ಮುಖ್ಯವೋ ? ಅಥವಾ ಪ್ರಸನ್ನಚಿತ್ತರಾಗಿ ನಾವು ಮಾಡುವ ಆಶೀರ್ವಾದ ಮುಖ್ಯವೋ? ಹೇಳು ಎನಲು ನಾರಾಯಣಚಾರರು ಮಹಾಸ್ವಾಮಿ, ಜಗತ್ತಿನ ಎಲ್ಲ ಭಾಗ್ಯಗಳಿಗಿಂತಲೂ ನನಗೆ ತಮ್ಮ ಆಶೀರ್ವಾದವೇ ಮುಖ್ಯ !” ಎಂದು ವಿಜ್ಞಾಪಿಸಿದರು. ಶ್ರೀರಾಯರು ಹಸಿತವದನರಾಗಿ “ಹಾಗಿದ್ದರೆ, ಆರು ಸರ್ಗಗಳನ್ನು ತೆಗೆದುಬಿಡು !” ಎಂದಾಜ್ಞಾಪಿಸಿದರು. 

ನಾರಾಯಣ : ಆರು ಸರ್ಗಗಳನ್ನೇನು ಮಾಡಬೇಕು ಗುರುದೇವ ? 

ರಾಯರು : ಈಗಲೇ ಶ್ರೀರಂಗನಾಥನ ದೇವಾಲಯದ ಪಕ್ಕದಲ್ಲಿ ಹರಿಯುವ ಕಾವೇರಿತಾಯಿಯ ಉಡಿಗೆ ಸಮರ್ಪಿಸಿಬಿಡು! 

ನಾರಾಯಣಾಚಾರರು ಗುರುಗಳ ಆದೇಶವನ್ನು ಶಿರಸಾಧರಸಿ ಆರು ಸರ್ಗಗಳನ್ನು ಕಾವ್ಯದಿಂದ ಬೇರ್ಪಡಿಸಿ ಅವನ್ನು ಕಾವೇರಿನದಿಗೆ ಸಮರ್ಪಿಸಿ ಬಂದರು. ಅವರ ಮುಖ ಮ್ಯಾನವಾಗಿತ್ತು. ಏನನ್ನೋ ಕಳೆದುಕೊಂಡ ಬಾಧೆ ಕಂಡುಬರುತ್ತಿತ್ತು. ಶ್ರೀಗಳವರು ನಾರಾಯಣಾಚಾರ್ಯರನ್ನು ಹತ್ತಿರ ಕರೆದು ಮೃದುನುಡಿಗಳಿಂದ ಸಾಂತ್ವನಗೊಳಿಸಿ “ನಾರಾಯಣ, ನಿನ್ನ ಕಾವ್ಯವು ಈಗ ಉಳಿದಿರುವ ಹತ್ತು ಸರ್ಗಗಳಿಂದಲೇ ಜಗತ್ತಿನಲ್ಲಿ ಖ್ಯಾತವಾಗಿ ನಿನಗೆ ಕೀರ್ತಿ-ಪ್ರತಿಷ್ಠೆಗಳು ಲಭಿಸುವವು! ನೀನು ಸರ್ವಮಾನ್ಯ ಕವಿಯೆನಿಸಿ ಖ್ಯಾತನಾಗುವೆ. ನಿನ್ನ ಕಾವ್ಯಕ್ಕೆ ಶ್ರೀಮೂಲರಾಮ. ಶ್ರೀಮದಾಚಾರರು ಮತ್ತು ನಮ್ಮ ಆಶೀರ್ವಾದವಿದೆ. ಮಂಗಳವಿಲ್ಲದೇ ಕಾವ್ಯ ಅಪೂರ್ಣವಾಗಿದೆಯೆಂಬ ಚಿಂತೆಬಿಡು. ಇದರ ಮೇಲೂ ನಿನಗೆ ತೃಪ್ತಿಯಾಗದಿದ್ದರೆ, ಈಗ ಮಂಗಳಪದ್ಯಗಳನ್ನೂ, ಫಲಸ್ತುತಿಯನ್ನೂ ರಚಿಸಿ ಸೇರಿಸು. ನೀನು ರಚಿಸುವ ಮಂಗಳವು ಮಹಾಕಾವ್ಯಗಳ ಮಂಗಳಾಚರಣಪದ್ಯ ಭಾಗಯುಕ್ತವಾಗಿ ಚಮತ್ಕಾರವಾಗುವಂತೆ ಇರಲಿ! ಎಲ್ಲಿಈ ಸಭೆಯಲ್ಲಿಯೇ ಆಶುಕವಿತೆಯಿಂದ ನಮ್ಮಾಣತಿಯನ್ನು ಪೂರೈಸು ನೋಡೋಣ” ಎಂದರು. 

ಶ್ರೀಯವರ ವಚನಾಮೃತದಿಂದ ಪರಮಾನಂದಭರಿತರಾದ ನಾರಾಯಣಾಚಾರರು ಶ್ರೀಯವರಿಗೆ ನಮಸ್ಕರಿಸಿ, ನಾಲ್ಕು ಮಹಾಕಾವ್ಯಗಳ ಮಂಗಳಪದಗಳ ಪ್ರಥಮಚರಣಗಳನ್ನು ಬಳಸಿ ಕೂಡಲೇ ಕಾವ್ಯಾಸಮಾಪ್ತಿ, ಮಂಗಳಾಚರಣವನ್ನು ರಚಿಸಿ ಹೇಳಿದರು.

ನಾರಾಯಣಾಚಾರರ ಕಾವ್ಯಕರಣಕೌಶಲ್ಯವನ್ನು ಕಂಡು ಸಭಾಸದರು ಆಶ್ಚರಾನಂದನದಿಂದ “ಸಾಧು, ಸಾಧು” ಎಂದು ಹೊಗಳಿ ಕರತಾಡನಮಾಡಿದರು. 

ಆನಂತರ ನಾರಾಯಣಾಚಾರರು ಕಾವ್ಯದ ಫಲಸ್ತುತಿರೂಪವಾಗಿ ಹೀಗೆ ಪದ್ಯವನ್ನು ರಚಿಸಿ ಹೇಳಿದರು - 

ಸಂತಂ ಶ್ರೀರಮಣಂ ಪ್ರಿಯಂ ಯತಿವರಂ ವ್ಯಾಸಸ್ಯ ಭಾವೇ ಭಶಮ್ ದುರ್ವಾರಾಮಿತಮಾಯಿಭಿಕ್ಷುತಿಮಿರೇ ಪೂರ್ವಸ್ತಚಂದ್ರಂ ಭುವಿ | ಸಂಘಸ್ತುತಮಿಷ್ಟದಕ್ಷಿತಿರುಹಂ ವಂದಾರು ವಿಪ್ರಾಶ್ರಯಮ್ 

ತಂ ನತ್ವಾ ಸಕಲೋ ದುರೂಹ ಸುದೃಶಂ ಸಂಯಾತಿ ವಿದ್ಯಾದಿಕಮ್ 

ಪರಮಮಂಗಳಕರವಾದ ಫಲಸ್ತುತಿಯನ್ನಾಲಿಸಿ ಸಮಸ್ತರೂ ಆನಂದಭರಿತರಾದರು. ಆಗ ನಗೆಮೊಗದ ಶ್ರೀಗಳವರು “ನಾರಾಯಣ, ಕಾವ್ಯವನ್ನು ರಚಿಸಿದ ಕವಿಯ ವಂಶಾದಿ ನಿರೂಪಣಪೂರ್ವಕ ಕಾವ್ಯವನ್ನು ಮುಗಿಸು” ಎಂದು ಆದೇಶವಿತ್ತರು. ನಾರಾಯಣಾಚಾರೈರು ಗುರುಗಳ ಅಪ್ಪಣೆಯಂತೆ - 

ಶ್ರೀಮತಶ್ಯಪವಂಶವಾರ್ಧಿಶನಃ ಪಡರ್ಶನೀವಲ್ಲಭ- ಶ್ರೀಲಕ್ಷ್ಮೀನರಸಿಂಹವಿತ್ತವಿದುಷಃ ಶ್ರೀವೆಂಕಟಾಂಬಾಮಣೆ | 

ಜಾತೇನಾರ್ಯದಯಾಸುಧಾಮಯಗಿರಾ ನಾರಾಯಣೇನೋದಿತೇ 

ಕಾವೇ ಚಾರುಣಿ ರಾಘವೇಂದ್ರವಿಜಯೇ ಸರ್ಗೊಂತಿಮೋ ಭೂದಿಹ 

ಎಂದು ಹೇಳಿ ಕಾವ್ಯಪರಿಸಮಾಪ್ತಿ ಮಾಡಿದರು. ಶ್ರೀಯವರು ಸುಪ್ರೀತರಾಗಿ ನಾರಾಯಣಾಚಾರರನ್ನು ಆಶೀರ್ವದಿಸಿ “ನಾರಾಯಣಾ, ಇದೇ ಪದ್ಯವನ್ನೇ ಪ್ರತಿಸರ್ಗದ ಕೊನೆಯಲ್ಲಿಯೂ ಆಯಾಸರ್ಗಗಳ ಸಂಖ್ಯಾನಿರೂಪಣಾಪೂರ್ವಕ ಸೇರಿಸು” ಎಂದು ಅಪ್ಪಣೆ ಕೊಡಿಸಿದರು. 

ಆಗ ಸಭೆಯಲ್ಲಿದ್ದ ಪಂಡಿತರೊಬ್ಬರು ಶ್ರೀಯವರಿಗೆ ನಮಸ್ಕರಿಸಿ “ಮಹಾಸ್ವಾಮಿ, ಈ ಮಹಾಕಾವ್ಯವನ್ನು ಕೇಳುವ ಸೌಭಾಗ್ಯ ನಮಗೆ ಕರುಣಿಸಬೇಕು. ಪ್ರತಿಭಾನ್ವಿತ ಪಂಡಿತರೂ, ಶ್ರೇಷ್ಠಕವಿಗಳೂ ಆದ ಆಚಾರರೇ ಕಾವ್ಯವನ್ನು ಓದಿ ಅನುವಾದಮಾಡಿ ನಮ್ಮೆಲ್ಲರನ್ನೂ ಆನಂದಗೊಳಿಸುವಂತೆ ಅವರಿಗೆ ಆಜ್ಞಾಪಿಸಿ ನಮ್ಮಲ್ಲಿ ಅನುಗ್ರಹಮಾಡಬೇಕು” ಎಂದು ವಿಜ್ಞಾಪಿಸಿದರು. ಶ್ರೀಪಾದಂಗಳವರು ಸಂತೋಷದಿಂದ ತಥಾಸ್ತು ಎಂದರು. 

ಅಂದು ಸಂಜೆಯಿಂದಲೇ ಶ್ರೀನಾರಾಯಣಾಚಾರರು ವಿದ್ವತ್ತಭೆಯಲ್ಲಿ ಶ್ರೀರಾಘವೇಂದ್ರವಿಜಯಕಾವ್ಯ ವಾಚನಾನುವಾದಗಳನ್ನು ಪ್ರಾರಂಭಿಸಿದರು. ಕರ್ನಾಟಕ ಸಾಮ್ರಾಜ್ಯದ ಖ್ಯಾತ ಆಚಾರತ್ರಯರಲ್ಲಿ ಒಬ್ಬರಾದ ಶ್ರೀಮಧ್ವಾಚಾರರ ಮಹಾಸಂಸ್ಥಾನಾಧಿಪತಿಗಳೂ ಅಚ್ಚಕನ್ನಡಿಗರೂ ಆದ ಶ್ರೀರಾಘವೇಂದ್ರಸ್ವಾಮಿಗಳ ಮಹಿಮಾತಿಶಯ ನಿರೂಪಣಪರವಾದ ಮಹಾಕಾವ್ಯವನ್ನು ಕನ್ನಡಿಗರೇ ಆದ ಶ್ರೇಷ್ಠಪಂಡಿತ ಕವಿಗಳಾದ ನಾರಾಯಣಾಚಾರರು ರಚಿಸಿದ್ದು, ಗುರುಪಾದರ ಸಮಕ್ಷ ಪಂಡಿತಸಭೆಯಲ್ಲಿ ಅನುವಾದ ಜರಗುತ್ತಿರುವ ವಿಚಾರವರಿತು ಶ್ರೀದೊಡ್ಡದೇವರಾಜರಿಗೆ ಪರಮಹರುಷವಾಯಿತು. ಆ ಕಾವ್ಯಾಮೃತಪಾನಮಾಡಿ ಕನ್ನಡಿಗರಾದ ಅಂಥ ಕವಿಗಳನ್ನು ಸನ್ಮಾನಿಸುವುದು ಕರ್ನಾಟಕರತ್ನಸಿಂಹಾಸನಾಧೀಶ್ವರಾದ ತಮ್ಮ ಕರ್ತವ್ಯವೆಂದು ಭಾವಿಸಿದ ಮಹಾರಾಜರು ಆಸ್ಥಾನಪಂಡಿತ ರಿಂದೊಡಗೂಡಿ ಬಂದು ಒಂದೆರಡು ದಿನ ಕಾವ್ಯಾನುವಾದವನ್ನು ಕೇಳಿ ತುಂಬಾ ಸಂತಸಗೊಂಡರು.

ಶ್ರೀನಾರಾಯಣಾಚಾರರ ಕಾವ್ಯಶೈಲಿ, ವಿವಿಧಪ್ರಾಸ, ಶಬ್ದಾರ್ಥಾಲಂಕಾರಗಳ ವಿಜೃಂಭಣೆ, ಪದವಿನ್ಯಾಸ, ಅರ್ಥಗಾಂಭಿರ- ಗಳಿಂದ ಬೆಡಗುಗೊಂಡ ಶ್ರವಣಮಾತ್ರದಿಂದ ಆನಂದವನ್ನೀವ, ಮತ್ತು ಕಾವ್ಯವು ನವರಸಭರಿತವಾಗಿರುವುದನ್ನು ಮನಗಂಡು ಪಂಡಿತರು ಈ ಕಾವ್ಯವು ಮಹಾಕಾವ್ಯದ ಸಕಲಲಕ್ಷಣಗಳಿಂದ ಶೋಭಿಸುತ್ತಿದ್ದು, ಮಹಾಮಹಿಮರಾದ ಗುರುಗಳ ಅಮರಚರಿತೆ ಸದ್ಗುಣಗಳನ್ನು ಎತ್ತಿತೋರಿ ಶ್ರಾವಕರನ್ನು ರಂಜಿಸುವುದು ಮಾತ್ರವಲ್ಲದೆ, ಎಲ್ಲರಹೃದಯಭೂಮಿಯಲ್ಲಿ ಗುರುರಾಜರ ಬಗ್ಗೆ ಭಕ್ತಿ ತರಂಗಗಳನ್ನು ಉಕ್ಕೇರಿಸುವುದೆಂದು ಪ್ರತಿದಿನ ಪಂಡಿತರು, ಕವಿಗಳು ಹಾಗೂ ಕಾವ್ಯವನ್ನೂ ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದರು. 

ಕಾವ್ಯವಾಚನದ ಕೊನೆಯ ದಿನ ಮಹಾರಾಜರು ಸ್ವತಃ ಸಭೆಗೆ ಬಂದು ಕಾವ್ಯಾನುವಾದ ಮಂಗಳವಾದ ಮೇಲೆ ಸಭೆಯಲ್ಲಿ ನಾರಾಯಣಾಚಾರೈರ ಕಾವ್ಯವನ್ನು ಕೊಂಡಾಡಿ ಅವರಿಗೆ 'ಮಹಾಕವಿ' ಎಂಬ ಪ್ರಶಸ್ತಿಯನ್ನೂ ಬಂಗಾರದ ತೋಡಾ, ಸುವರ್ಣ ಪದಕ ಸಹಿತ ಕಂಠಾಭರಣ, ಶಾಲುಜೋಡಿ, ಸುವರ್ಣವರಹಗಳೊಡನೆ ನೀಡಿ ಆಚಾರರನ್ನು ಸನ್ಮಾನಿಸಿದರು. 

ಶ್ರೀಯವರ ಜಯಜಯಕಾರಗಳೊಂದಿಗೆ ಅಂದಿನ ಶ್ರೀರಾಘವೇಂದ್ರವಿಜಯ ಮಹಾಕಾವ್ಯಪ್ರಕಾಶನ, ಸಮರ್ಪಣ ಸಮಾರಂಭವು ಮುಕ್ತಾಯವಾಯಿತು. 

ಶ್ರೀಯವರು ದೊಡ್ಡ ದೇವರಾಜ ಒಡೆಯರಿಂದ ಸನ್ಮಾನಿತರಾಗಿ, ಚಾತುರ್ಮಾಸ್ಯ ವ್ರತವನ್ನು ಮುಗಿಸಿ ಶ್ರೀರಂಗಪಟ್ಟಣದಿಂದ ಹೊರಟು ಸಂಚಾರ ಕ್ರಮದಿಂದ ಅಟ್ಟೂರಿಗೆ ದಯಮಾಡಿಸಿದರು. ಅಲ್ಲಿನ ಅರ್ಚಕರು ಶ್ರೀಬ್ರಹ್ಮಣ್ಯತೀರ್ಣರ ಮಹಿಮೆಯನ್ನು ಬಣ್ಣಿಸಿ ಶ್ರೀವ್ಯಾಸರಾಜಯತಿವರರ ಅವತಾರಕ್ಕೆ ಕಾರಣರಾದ ಈ ಮಹನೀಯರು ತಮ್ಮ ಮಹಾಪೀಠದಲ್ಲಿ ವ್ಯಾಸರಾಜರನ್ನು ಮಂಡಿಸಿ ಸಾಮ್ರಾಜ್ಯಾಭಿಷೇಕ ಮಾಡಿದ ಗುರುಗಳು-ಮುಂತಾಗಿ ಶ್ರೀಯವರಲ್ಲಿ ವಿಜ್ಞಾಪಿಸಿದಾಗ ಶ್ರೀಪಾದಂಗಳವರು ನಸುನಗುತ್ತಾ “ವ್ಯಾಸರಾಜರ ಗುರುಗಳು ನಮಗೂ ಗುರುಗಳೇ!” ಎಂದು ಉದ್ದರಿಸಿದರು. ಅಂದು ಶ್ರೀಬ್ರಹ್ಮಣ್ಯತೀರ್ಥರಿಗೆ ಹಸ್ತೋದಕವನ್ನು ಸಮರ್ಪಿಸಿ, ಫಲಮಂತ್ರಾಕ್ಷತೆಯನ್ನು ಸ್ವೀಕರಿಸಿ, ಅಲ್ಲಿಂದ ಬೆಂಗಳೂರು, ತುಮಕೂರು, ಹಿರಿಯೂರು ಮಾರ್ಗವಾಗಿ ಚಿತ್ರದುರ್ಗಕ್ಕೆ ಬಿಜಯಮಾಡಿದರು.