ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೧೦೩. ಶ್ರೀರಾಯರು
ಶ್ರೀರಾಘವೇಂದ್ರಸ್ವಾಮಿಗಳ ಈವರೆಗಿನ ೪೨ ವರ್ಷಗಳ ಪೀಠಾಧಿಪತ್ಯಕಾಲದಲ್ಲಿ ಅವರ ಬಹುಮುಖವಕಿತ್ತ, ವಿದ್ವತ್ತು, ಗ್ರಂಥರಚನೆ, ಪರವಾದಿ ದಿಗ್ವಿಜಯ ಪೂರ್ವಕ ಸಿದ್ಧಾಂತಸ್ಥಾಪನೆ, ಪಾಠಪ್ರವಚನಕೌಶಲ, ಶಿಷ್ಯ-ಭಕ್ತಜನೋದ್ದಾರ, ದುಃಖಾರ್ತರು, ದೀನದಲಿತರ ಕಲ್ಯಾಣ, ಅಗಾಧ ಮಹಿಮಾ ಪ್ರದರ್ಶನಾದಿ ಸದ್ಗುಣಗಳಿಂದ ಪ್ರಭಾವಿತರಾದ ಪಂಡಿತರು, ಜನಸಾಮಾನ್ಯರು, ರಾಜಾಧಿರಾಜರು, ಆಶ್ರಿತ ಜನರುಗಳು ಅವರನ್ನು ಅತಿ ಗೌರವ-ಆದರಗಳಿಂದ “ಶ್ರೀರಾಯರು” ಎಂದು ಭಕ್ತಿಯಿಂದ ಸಂಬೋಧಿಸುತ್ತಿದ್ದರು. “ರಾಯರು” ಎಂಬುದು ಬಹು ಗೌರವಸೂಚಕಪದ. ಅಷ್ಟೇ ಅಲ್ಲ; ಅದು ವೇದಪ್ರತಿಪಾದ್ಯ ಮಹಿಮೋಪೇತತ್ವಾದಿಗಳನ್ನು ಬೋಧಿಸುವುದರಿಂದ ಅತ್ಯಂತ ಪಾವನನಾಮವೆಂದು ಪ್ರಸಿದ್ಧವಾಗಿದೆ.
ವೇದ-ಉಪನಿಷದಾದಿಗಳಲ್ಲಿ “ರ” ಎಂದು ಭಾರತೀದೇವಿಯನ್ನೂ, 'ರಾಯ' ಎಂದರೆ ವಾಯುದೇವರನ್ನು ಸಂಬೋಧಿಸುವುದು ಕಂಡುಬರುತ್ತದೆ. ದೈತಸಿದ್ಧಾಂತಸ್ಥಾಪಕರೂ ವಾಯುದೇವರ ಅವತಾರರೂ ಆದ ಮಧ್ವಾಚಾರರನ್ನು “ಮಧ್ವರಾಯರು, ಆಚಾರ್ಯರಾಯರು” ಎಂದೂ, ಟೀಕೆಗಳನ್ನು ರಚಿಸಿದ ಇಂದ್ರಾಶಸಂಭೂತರಾದ ಶ್ರೀಜಯತೀರ್ಥರನ್ನು “ಜಯರಾಯರು ಟೀಕಾರಾಯರು” ಎಂದೂ, ಧ್ರುವಾಂಶರೂ, ಜ್ಞಾನಿನಾಯಕರೂ ಆದ ಶ್ರೀಲಕ್ಷ್ಮೀನಾರಾಯಣಮುನಿಗಳನ್ನು `ಶ್ರೀಪಾದರಾಯರು' ಎಂದೂ, ಪ್ರಹ್ಲಾದಾಂಶರೂ, ವಾಗ್ದಾವೇಶಯುಕ್ತರೂ ಆದ ಶ್ರೀಚಂದ್ರಿಕಾಕೃತ್ಪಾದರನ್ನು ವ್ಯಾಸರಾಯರು, ಚಂದ್ರಿಕಾರಾಯರು” ಎಂದೂ ಗೌರವಾಭಿಮಾನಗಳಿಂದ ರಾಯರು” ಎಂದೇ ಪರಂಪರೆಯಿಂದ ಕರೆಯುವುದು ಕಂಡುಬಂದಿದೆ. ಮತ್ತು ರೂಢಮೂಲವಾಗಿದೆ. ಅದರಂತೆ ರಾಘವೇಂದ್ರತೀರ್ಥರನ್ನು ರಾಘವೇಂದ್ರರಾಯರು, ಮಂತ್ರಾಲಯದ ರಾಯರು, ಶ್ರೀರಾಯರು” ಎಂದು ಆಪಂಡಿತಪಾಮರರು ಭಕ್ತಿಯಿಂದ ಕರೆಯುತ್ತಿದ್ದರು. ಸಾಮ್ರಾಜ್ಯಾಧೀಶ ಚಕ್ರವರ್ತಿಗಳನ್ನು ರಾಯರು ಎಂದೇ ಕರೆಯುವುದು ಕನ್ನಡನಾಡಿನ ಇತಿಹಾಸದಿಂದ ಕಂಡುಬರುವುದು, ರಾಘವೇಂದ್ರಸ್ವಾಮಿಗಳೂ ದೈತಸಾಮ್ರಾಜ್ಯಾಧೀಶ್ವರ- ರಾಗಿದ್ದುದರಿಂದ ಜನರು ಅವರನ್ನು ರಾಯರು ಎಂದೇ ಕರೆಯುತ್ತಿದುದು ಸಹಜವೂ, ಯುಕ್ತವೂ ಆಗಿದೆ. ವಿದ್ವನ್ಮಂಡಲಿ ಮಾತ್ರವಲ್ಲ; ಜನ ಸಾಮಾನ್ಯರಲ್ಲೂ ಅವರು ರಾಯರು ಎಂದೇ ಖ್ಯಾತಿಗಳಿಸಿದ್ದರು.
ಶಾಸ್ತ್ರೀಯ ವ್ರುತ್ಪತ್ತಿಗಳಿಂದಲೂ ರಾಯರು ಎಂಬ ಪದದ ಮಹತ್ವ, ಮಹಿಮಾದಿಗಳು ವ್ಯಕ್ತವಾಗುವುದು. ಸಜ್ಜನರ ಸಂತೋಷಕ್ಕಾಗಿ ಇಲ್ಲಿ ಕೆಲವು ಶಾಸ್ತ್ರೀಯ ವುತ್ಪತಿಗಳಿಂದ ರಾಯರು ಎಂಬಪದದ ಶ್ರೇಷ್ಠತೆಯನ್ನು ನಿರೂಪಿಸಬಯಸುತ್ತೇವೆ.
೧) ರಾತಿ ಸುಜನಮಿತಿ ರಾಃ ಸಚಾಸೌ (ಅಶ್ವಾಸ್) ಏತಿ ಸುಖಮನೇನೇತಿ ಯೋಗೇನ ಅಯಶಬ್ದವಾಚ್ಯ ಸತ್ಕರ್ಮ ರಾಜಯತಿ ಪ್ರಕಾಶಯತೀತಿ ಅಯರಃ ಸಾಸೌಅಯರಶ್ವರಾಯರಃ-ಮೋಕ್ಷಾದಿಪುರುಷಾರ್ಥಪ್ರದಾತೃಸತಿಸತ್ಕರ್ಮೋಪದೇಶಕತ್ವಂ ರಾಯರ ಪದಪ್ರವೃತ್ತಿನಿಮಿತ್ತಂ ತಾದೃಶಃ ಶ್ರೀಭಗವಾನ್ ಹಂಸನಾಮಕ ಪರಮಾತ್ಮಾ, ಸಃ ಅಸ್ಮಿನ್ ವಿರಾಜತೇ ಇತಿರಾಯರಃ ಅಂದರೆ ಮೋಕ್ಷಾದಿ ಪುರುಷಾರ್ಥಪ್ರದನೂ ಸತ್ಕರ್ಮೊಪದೇಶಕನೂ ಆದವನು ಶ್ರೀಭಗವಂತನು. ಅಂಥಾ ಹಂಸನಾಮಕ ಪರಮಾತ್ಮನು ತನ್ನ ವಂಶದೀಪಕರಾದ ಶ್ರೀರಾಘವೇಂದ್ರ ಸ್ವಾಮಿಗಳಲ್ಲಿ ಸರ್ವದಾ ವಿರಾಜಿಸುತ್ತಾನಾದ್ದರಿಂದ ಇವರು ರಾಯರು ಎಂದು ಪ್ರಖ್ಯಾತರಾಗಿದ್ದಾರೆಂದು ಭಾವ.
೨) ರಂ ಮೋಕ್ಷಸಾಧನ ಭಗವಂತಂ, ಆ ಸಮ್ಯಕ್ ಯಾತಿ ಜಾನಾತೀತಿ ರಾಯಃ ರಾಜತೇ ಇತಿ ರಃ ರಾಯಶ್ಚಾಸೌ ರ ರತ್ನ ರಾಯರಃ, ಪರಮಾತ್ಮವಿಷಯಕ ಸಮ್ಯಕ್ ಜ್ಞಾನವಸತಿ ಪ್ರಸಿದ್ಧತ್ವಂ ರಾಯರ ಪದಪ್ರವೃತ್ತಿನಿಮಿತ್ತಂ, ಅಥವಾ ರಾಂ ತಾದೃಶಂ ಶ್ರೀಶಂ ಆಯಾಪಯತಿ ಪ್ರಾಪಯತೀತಿ ರಾಯಃ, ಪರಮಾತ್ಮ ಪ್ರಾಪಕತ್ವಂ ವಾಯೋರೇವೇತಿ ಶ್ರುತಿಸ್ಮತ್ಯಾದಿ- ಪ್ರಮಾಣಪ್ರಮಿತಂ - ತಥಾ ಹಿ 'ದೀನಂ ದೂನಮನಾಥಂ ಶರಣಾಗತಮೇನಮುದ್ಧರ ಇತಿ ಭಗವಂತಂ ಸ್ವಭಕ್ತ ಮುದ್ದಿಶ್ಯ ತಂ ಪರಮಾತ್ಮಾನಂ ಪ್ರಾಪಯತಿ ವಾಯುರೇ - (ಪ್ರಾತಸ್ತಂತಲ್ಪಗದಮ್) ಸಚಾಸೌ ವೇದಾದಿಷು ತ್ರಿಲೋಕೇಶು ಚ ಪ್ರಕಾಶಮಾನತೇನ ರಃ, ಮದ್ದ ನಾಮಾ ಪ್ರಾಣಪತಿರೇವ, ಸಃ ಅಸ್ಮಿನ್ ಸದಾ ಸನ್ನಿಹಿತ ಇತಿ ರಾಯರಃ ! ಅಂದರೆ ಮೋಕ್ಷಪ್ರದನಾದ ಶ್ರೀಹರಿಯನ್ನು ಹೊಂದಿಸುವವರು ಮತ್ತು ವೇದಾದಿಗಳಲ್ಲಿ ಮೂರು ಲೋಕಗಳಲ್ಲಿಯೂ ಪ್ರಕಾಶಮಾನರಾದವರು ಶ್ರೀಮಧ್ವಾವತಾರಿ ಮುಖ್ಯಪ್ರಾಣದೇವರು, ಅವರು ರಾಘವೇಂದ್ರರಲ್ಲಿ ವಿಶೇಷಾವೇಶ (ಸದಾ ಸನ್ನಿಧಾನ) ಉಳ್ಳವರಾಗಿದ್ದರಿಂದ ಇವರು ರಾಯರು ಎಂದು ಖ್ಯಾತರಾಗಿದ್ದಾರೆಂದು ಭಾವ.
೩) ಪೂರ್ವೋಕ್ತ ವ್ಯುತ್ಪತ್ಯಾ “ಮದ್ಭಕ್ತಾಸ್ವಾಮನುವ್ರತಾಃ, ತ್ವಾಂ ಚ ಮಾಂ ಚ ಸ್ಮರನ್ ಕಾಲೇ ಕರ್ಮಬಂಧಾತ್ಮಮುಚ್ಯತೇ” ಇತ್ಯಾದಿ ಪ್ರಮಾಣೈಃ ಪರಮಾತ್ಮಪ್ರಾಪಕತೇನ ರಾಯಃ, ಕಿಂಚ, ರಾಯಃ ಶ್ರೀವಾಯುಃ ಸಃ ಅಸ್ಸಾತಿ ರಾಯಃ, ಸಂತತ ವಾಗ್ದಾವೇಶಯುತಃ (ವಾಯುನಾ ಚ ಸಮಾವಿಷ್ಟಃ) ರಾಯಃ ಸಚಾಸ್ ರಶ್ವರಾಯರಃ - ಸಂತತವಾಯ್ತಾವೇಶಯುಕ್ತಸತಿ, ಪರಮಾತ್ಮಪ್ರಾಪಕಾನನ್ಯಸಾಧಾರಣ ಸಾಮರ್ಥ್ಯವಸತಿ ಜಗತ್ನಸಿದತ್ತಂ ರಾಯರಶಬ್ದ ಪ್ರವೃತ್ತಿ ನಿಮಿತ್ತಮ್-ತಚ್ಚ ಶ್ರೀಪರಿಮಳಾಚಾರಾಣಾಮ್, ಉಕ್ತಪ್ರಮಾಣೈ “ಪ್ರಹ್ಲಾದೋ ವೈ ಕಾಯಾಧವಃ” ಇತ್ಯಾದಿ ವೇದವಚನೈಶ್ಚ ಅವಗತಮಿತಿ ತೇ ರಾಯರಪದ ವಾಚ್ಯಾಃ ಅಂದರೆ ವಾಯುದೇವರ ಸತತ ಸನ್ನಿಧಾನಯುಕ್ತರೂ, ಪರಮಾತ್ಮನನ್ನು ಆಶ್ರಿತರಿಗೆ ತೋರಿಕೊಡುವುದೇ ಮುಂತಾದ ಅನನ್ಯಸಾಧಾರಣ ಸಾಮರ್ಥ್ಯಶಾಲಿಗಳೂ, ಜಗತ್ನಸಿದ್ದರಾದವರು, ರಾಯರು. ಇದು ಶ್ರೀಪರಿಮಳಾಚಾರರಿಗೆ ಸಲ್ಲುವುದಾದ್ದರಿಂದ ಇವರು ರಾಯರು ಎಂದು ಭಾವ.
೪) ಯುಕ್ತಯೋಗೇನ ರಾಯಃ ಶ್ರೀವಾಯುಃ, ಸಃ ಗುರುತ್ತೇನ ಏಷಾಮಸೀತಿ ರಾಯಾಃ - ಶ್ರೀಪದ್ಮನಾಭ- ಟೀಕಾಕೃತ್ಪಾದಾದಯಃ, ತೇ ಚ ಲೋಕ ಪ್ರಖ್ಯಾತಾಃ, ಶೇಷಾವೇಶ ಇಂದ್ರಾವತಾರಿಖ್ಯಾತಾ ಇತಿ ವೇದಾದಿ ಪ್ರಸಿದ್ಧಾ, ತೇನ ತೇsಪಿ ರಾಯರ ಪದವಾಚ್ಯಾ - ರಾಯಾಃ ಶ್ರೀಪದ್ಮನಾಭಟೀಕಾಕೃತ್ಪಾದಾದಯಃ, ತೇ ಅಸ್ಮಿನ್ ರಾಜಂತ ಇತಿ ರಾಯರಃ ಶ್ರೀರಾಘವೇಂದ್ರಗುರುಸಾರ್ವಭೌಮಾ. ಅಂದರೆ ಶ್ರೀವಾಯುದೇವರೇ ಗುರುಗಳಾಗುಳ್ಳ ಶೇಷ - ಇಂದ್ರಾದಿದೇವಾಂಶರಾದ ಶ್ರೀಪದ್ಮನಾಭ ಟೀಕಾಕೃತ್ಪಾದ ಗುರುಗಳು ರಾಯರಶಬ್ದವಾಚ್ಯರು, ಅಂಥ ಶ್ರೀಪದ್ಮನಾಭ ಟೀಕಾಕೃತ್ಪಾದರು ಇವರಲ್ಲಿರಾಜಿಸುವುದರಿಂದ ರಾಘವೇಂದ್ರಸ್ವಾಮಿಗಳು ರಾಯರು ಎಂದು ಭಾವ.
೫. ರಾಯೇ ಶ್ರೀವಾಯುದೇವೇ ರಮತೇ ಇತಿ ರಾಯರ ಗುರುಸಾರ್ವಭೌಮಾಃ - ಜೀವೋತ್ತಮರಾದ ಶ್ರೀವಾಯುದೇವರಲ್ಲಿ ರಮಿಸುವವರಾದ್ದರಿಂದ ರಾಘವೇಂದ್ರರು, ರಾಯರು ಎಂದು ತಾತ್ಪರ್ಯ.
ಹೀಗೆ ಮೇಲ್ಕಂಡ ಐದು ವಿಧ ವುತ್ಪತ್ತಿಯಿಂದ ಹಂಸನಾಮಕ ಪರಮಾತ್ಮನು ತನ್ನ ವಂಶದೀಪಕರಾದ ಇವರಲ್ಲಿ ವಿರಾಜಿಸುವುದರಿಂದ ಇವರು ರಾಯರು. ಮೋಕ್ಷಪ್ರದನಾದ ಭಗವಂತನನ್ನು ಚೆನ್ನಾಗಿ ತಿಳಿದವರು, ರಾಯರು ಅಥವಾ ಮೋಕ್ಷಪ್ರದನನ್ನು ಹೊಂದಿಸುವ ವೇದಪ್ರಸಿದ್ಧರಾದ ಮುಖ್ಯಪ್ರಾಣದೇವರು ಇವರಲ್ಲಿ ಸದಾ ಆವೇಶಯುಕ್ತರಾಗಿರುವುದರಿಂದ ಇವರು ರಾಯರು, ಶ್ರೀವಾಯುದೇವರೇ ಗುರುಗಳಾಗುಳ್ಳ ಶೇಷ-ಇಂದ್ರಾವತಾರರಾದ ಶ್ರೀಪದ್ಮನಾಭತೀರ್ಥರು, ಶ್ರೀಜಯತೀರ್ಥರು ಇವರಲ್ಲಿ ರಾಜಿಸುವುದರಿಂದ (ಶ್ರೀವಾಯುದೇವರ ಸಂತತ ಸನ್ನಿಧಾನಯುಕ್ತರಾದ್ದರಿಂದ ಶೇಷ ಇಂದ್ರಾದಿಗಳೂ ಇವರಲ್ಲಿ ಸನ್ನಿಹಿತರಾಗಿರಬೇಕಾದ್ದು ಸ್ವಾಭಾವಿಕವಾದ್ದರಿಂದ) ಇವರು ರಾಯರು, ಸದಾ ಶ್ರೀವಾಯುದೇವರಲ್ಲಿರಮಿಸುವವರಾದರಿಂದ ಶ್ರೀರಾಘವೇಂದ್ರಸ್ವಾಮಿಗಳವ ರಾಯರು ! ಹೀಗೆ ಇವರಲ್ಲಿ ಅನಿತರಸಾಧಾರಣ ಮಾಹಾತ್ಮವು ವ್ಯಕ್ತವಾಗುವುದರಿಂದ ಇವರಿಗೆ ರಾಯರು ಎಂಬ ಹೆಸರು. ಇಷ್ಟು ಮಹತ್ವಪೂರ್ಣ, ಅರ್ಥಯುಕ್ತವಾಗಿರುವುದರಿಂದ ಗುರುಗಳ ಮಠವನ್ನು 'ಶ್ರೀರಾಯರ ಮಠ' ಎಂದು ಅತಿಗೌರವದಿಂದ ಕರೆಯುವುದೂ ಅತ್ಯಂತ ಸಮಂಜಸವೂ, ಪರಮಮಾನ್ಯವೂ, ಅನ್ವರ್ಥಕವೂ ಆಗಿರುತ್ತದೆ. ಇಂತು ಮಹಾಮಹಿಮರಾದ ಶ್ರೀರಾಘವೇಂದ್ರಗುರುಸಾರ್ವಭೌಮರನ್ನು ಮುಂದಿನ ಅಧ್ಯಾಯಗಳಿಂದ ನಾವೂ ಶ್ರೀರಾಯರು ಎಂದೇ ಸಂಬೋಧಿಸಿ ಕೃತಾರ್ಥರಾಗೋಣ.