ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
೧೦೧. ಶ್ರೀಮೂಲರಾಮ
ಅನಂತಕಲ್ಯಾಣಗುಣಾಭಿರಾಮ, ಹರವಿರಿಂಚಪ್ರಮುಖಕಿಂಕರಮ, ಚತುರ್ದಶಭುವನಸಾರ್ವಭೌಮ, ರವಿವಂಶಲಲಾಮ, ಶ್ರೀಮದಯೋಧಾರಾಮ, ನೀಲನೀರದಶ್ಯಾಮ, ಮುನಿಜನಪ್ರೇಮ, ಭಕ್ತಷ್ಟಪೂರಣನಿಮ, ಜಾನಕೀಹೃದಯಾಭಿರಾಮ, ಪರಮಮಂಗಳನಾಮ, ಶ್ರೀರಾಮ-ಜಗತ್ತಿನ ಆದರ್ಶದೇವ, ಆದರ್ಶಸಾರ್ವಭೌಮ, ಆದರ್ಶಪುತ್ರ, ಆದರ್ಶಶಿಷ್ಯ, ಆದರ್ಶಭ್ರಾತಾ, ಆದರ್ಶಪತಿ, ಆದರ್ಶಪಿತ ಎಲ್ಲಕ್ಕಿಂತ ಹೆಚ್ಚಾಗಿ ಆದರ್ಶ ಮಾನವೀಯತೆಯ ಸಾಕಾರಮೂರ್ತಿ ! ಮುಂತಾಗಿ ಶ್ರುತಿ-ಪುರಾಣ-ಇತಿಹಾಸ-ಕಾವ್ಯ-ನಾಟಕಾದಿ ವಾಹ್ಮಯವು ಸಾರುತ್ತಿದೆ. ಯುಗಯುಗಗಳಿಂದ ಜನತೆ ಅವನನ್ನು ಪೂಜಿಸುತ್ತಿದೆ. ಸಹಸ್ರಾರು ವರ್ಷಗಳಿಂದ ಜಗತ್ತಿನ ಮುಖ್ಯವಾಗಿ ಭಾರತದ ಮತ್ತಿತರ ದೇಶೀಯ ರಾಜರು-ಚಕ್ರವರ್ತಿಗಳು, ಆ ಪುರಾಣ ಪುರುಷೋತ್ತಮನ ಆದರ್ಶದಂತೆ ನಡೆದು ತಮ್ಮ ದೇಶವನ್ನು ಸುಖೀರಾಜ್ಯವನ್ನಾಗಿಸಲು ಬಹುವಾಗಿ ಶ್ರಮಿಸುತ್ತಾ ಬಂದಿದ್ದಾರೆ. ನಾಸ್ತಿಕಮಯವೆನಿಸದ, ಭೌತಿಕ ವಿಜ್ಞಾನದ ಅಬ್ಬರದಿಂದ ಮುನ್ನುಗ್ಗುತ್ತಿರುವ ಇಪ್ಪತ್ತನೆಯ ಶತಮಾನವಾದ ಇಂದೂ ಸಹ ಎಲ್ಲ ದೇಶದ ನಾಯಕರು, ಜನರು ಶ್ರೀರಾಮನ ಆದರ್ಶವನ್ನು ಮನಸಾರ ಗೌರವಿಸುತ್ತಿದ್ದಾರೆ, ಮಾತ್ರವಲ್ಲ ಶ್ರೀರಾಮಚಂದ್ರಮೂರ್ತಿಯ ದಿವ್ಯ ರಾಮರಾಜ್ಯವನ್ನು ಮತ್ತೊಮ್ಮೆ ಕಾಣಲು ತವಕಿಸುತ್ತಿದ್ದಾರೆ.
ಇಂತು ಸರ್ವಮಾನ್ಯನಾದ ಶ್ರೀರಾಮಚಂದ್ರದೇವನಿಂದಲೂ ಪೂಜಿತನಾಗಿ, ಆದರಿಂದಲೇ ಅಂದಿನಿಂದ ಮೂಲರಾಮ ನೆನಸಿ, ದೇವತೆಗಳು, ಋಷಿಗಳು, ಚಕ್ರವರ್ತಿಗಳು, ರಾಜರ್ಷಿಗಳಿಂದ ಪೂಜಿತನಾಗಿ, ಮುಂದೆ ಶ್ರೀಮಧ್ವಾಚಾರರಿಂದ ಅರ್ಚಿಸಲ್ಪಟ್ಟು, ಅವರ ಮುಖ್ಯಮಹಾಸಂಸ್ಥಾನಾಧೀಶ್ವರರಾದ ಶ್ರೀರಾಘವೇಂದ್ರಗುರುಸಾರ್ವಭೌಮರಿಂದ ಬಹುಕಾಲಪೂಜೆಗೊಂಡು, ಅನಂತರ ಆ ಪವಿತ್ರ ಮಹಾಪೀಠ ಪರಂಪರೆಯಲ್ಲಿರಾಜಿಸಿದ ಯತಿಶ್ರೇಷ್ಠರುಗಳಿಂದ ಸೇವಿತನಾಗಿ ಈಗ ಶ್ರೀಮತ್ತೂಜ್ಯ ಸುಯಮೀಂದ್ರತೀರ್ಥ ಶ್ರೀಪಾದಂಗಳವರ ವರಕುಮಾರಕರಾದ ಪರಮಪೂಜ್ಯ ೧೦೦೮ ಶ್ರೀಮತ್ತಜಯೀಂದ್ರತೀರ್ಥ ಶ್ರೀಪಾದಂಗಳವರ ಕರಕಮಲದಿಂದ ಪಾಜೆಗೊಳ್ಳುತ್ತಾ ಲೋಕಕಲ್ಯಾಣ ಮಾಡುತ್ತಿರುವ ಆ ಚತುರ್ಯುಗಮೂರ್ತಿಯಾದ ಶ್ರೀಮೂಲರಾಮನ ಇತಿಹಾಸ ಅತಿಸುಂದರ, ಮನೋಹರ, ಮತ್ತು ಮಹತ್ವಪೂರ್ಣವೂ ಆಗಿದೆ.
ಈ ಜಗದ್ವಿಲಕ್ಷಣಮೂರ್ತಿಯ ವಿಚಾರವು ವಾಸಿಷ್ಟ ರಾಮಾಯಣ, ಆಧ್ಯಾತ್ಮರಾಮಾಯಣ, ಮಾರಂಡೇಯಪುರಾಣ, ವಾಮನಪುರಾಣ, ಶ್ರೀಸುಮಧ್ವವಿಜಯ, ಶ್ರೀಜಯತೀರ್ಥವಿಜಯ, ಶ್ರೀವಿಬುಧೇಂದ್ರವಿಜಯ್, ಶ್ರೀವಿಜಯೀಂದ್ರ ವಿಜಯ್, ಶ್ರೀರಾಘವೇಂದ್ರವಿಜಯ್, ಶ್ರೀರಾಘವೇಂದ್ರಮಠಗತಾರ್ಚಾಗತಿಕ್ರಮ, ಮುಂತಾದ ಗ್ರಂಥಗಳಲ್ಲಿಯೂ, ಅಪರೋಕ್ಷಜ್ಞಾನಿಗಳಾದ ಶ್ರೀಪುರಂದರದಾಸರು, ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರುಗಳ ಪದಪದಸುಳಾದಿಗಳಲ್ಲಿಯೂ, ಶ್ರೀವಿಜಯೀಂದ್ರತೀರ್ಥ, ಶ್ರೀವಾದೀಂದ್ರತೀರ್ಥರು ರಚಿಸಿರುವ ಸ್ತೋತ್ರರೂಪ ಪದಗಳಲ್ಲಿಯೂ ಅತಿಸುಂದರವಾಗಿ ನಿರೂಪಿತ ವಾಗಿವೆ. ಈ ಎಲ್ಲ ಆಧಾರಗಳಿಂದ ತಿಳಿದುಬರುವ ಶ್ರೀಮೂಲರಾಮ-ಸೀತಾವಿಗ್ರಹಗಳ ಚರಿತೆಯು ಹೀಗಿದೆ -
ಜಗತ್ಕೃಷ್ಟಿಕರ್ತರೂ, ಸರ್ವಲೋಕಪಿತಾಮಹರೂ ಆದ ಚತುರಾನನ ಬ್ರಹ್ಮ ದೇವರು, ಅನಂತಕಲ್ಯಾಣಗುಣಾಭಿರಾಮನೂ, ಸರ್ವೋತ್ತಮನೂ, ತಮಗೆ ಜನಕನೂ ಸ್ವಾಮಿಯೂ ಆದ ಶ್ರೀಹರಿಯನ್ನು ಪ್ರತಿದಿನವೂ ಪರಿಪರಿಯಿಂದ ಪೂಜಿಸಿ ಆನಂದಿಸುವರು. ಅವರೊಂದು ದಿನ ಪೂಜೆ ಸ್ವೀಕರಿಸಲು ಮೈದೋರಿದ ಶ್ರೀರಾಮ ರೂಪೀಹರಿಯನ್ನು ಪ್ರತಿಮಾರೂಪವಾಗಿ ಪೂಜಿಸಿ ಜಗತ್ತಿನ ಜನತೆಗೆ ಪ್ರತಿಮಾ ಪೂಜೆಯ ಮಹತ್ವವನ್ನು ತಿಳಿಸಿಕೊಡಲಾಶಿಸಿ ತಮ್ಮ ಪೂಜೆಯನ್ನು ಸ್ವೀಕರಿಸಿ ಅನುಗ್ರಹಿಸಿದ ಮಂಗಳಮೂರ್ತಿ ಶ್ರೀರಾಮ ಮತ್ತು ಸೀತಾದೇವಿಯರು ತಮಗೆ ಮೈದೋರಿದ ಭಂಗಿಯಲ್ಲಿಯೇ ರಚಿಸಿಕೊಡಬೇಕೆಂದು ವಿಶ್ವಕರ್ಮನಿಗೆ ಆಜ್ಞಾಪಿಸಿ ಪ್ರತಿಮಾ ಲಕ್ಷಣಗಳನ್ನು ತಿಳಿಸಿದರು. ವಿಶ್ವಕರ್ಮನು ಅದರಂತೆ ಸರ್ವಾಂಗಸುಂದರವಾದ ಶ್ರೀರಾಮಸೀತಾಪ್ರತಿಮೆಗಳನ್ನು ನಿರ್ಮಿಸಿಕೊಟ್ಟನು. ಅತ್ಯಂತ ಸುಂದರವಾದ, ದುಂಡುಪೀಠದ, ಉದ್ದಕಿವಿಗಳ, ಸೊಟ್ಟಭಂಗಿಯ (ತ್ರಿವಕ್ರ-ಮೂರುಕಡೆ ವಕ್ರವಾಗಿ ಭವಭಂಗಿಯಲ್ಲಿ ನಿಂತಿರುವ) ಕಾಲುಗಳಲ್ಲಿ ಕಂಕಣಗಳನ್ನು ಧರಿಸಿರುವ, ಸರ್ವಲಕ್ಷಣ ಸಂಪನ್ನವಾದ, ಅನುರೂಪ ವಧೂ-ವರ ಸಾಮ್ಯ ಶೋಭಿತವಾದ-ಶ್ರೀಸೀತಾರಾಮ ಪ್ರತಿಮೆಗಳನ್ನು ಕಮಲಸಂಭವರು ಬಹುಕಾಲ ಭಕ್ತಿಶ್ರದ್ಧೆಗಳಿಂದ ಪೂಜಿಸಿ
ಪರಮಾನಂದಭರಿತರಾದರು.
“ಶುದ್ಧಾಂ ತಾಮ್ರಮಯೀಂ ಶಸ್ತ್ರಾಂ ಬ್ರಹ್ಮಣಾ ಚಿರಪೂಜಿತಾಮ್' |
ಸರ್ವಲಕ್ಷಣಸಂಪನ್ನಾಂ ಪಾದೇ ದ್ವಿರದಸಂಯುತಾಮ್ ||”
“ವೃತ್ತಪೀಠಾ ಲಂಬಕರ್ಣಾ ತ್ರಿವಕ್ರಾ ಸೀತೆಯಾ ಸಹ |
ಮಮೇಯಂ ಪ್ರತಿಮಾ ದೇವಿ ! ಯಥಾಹಂ ನಾತ್ರ ಸಂಶಯಃ ||”
“ವೃತ್ತಪೀಠಾ ಲಂಬಕರ್ಣಾ ತ್ರಿವಕ್ರಾ ಸೀತಯಾ ಸಹ |
ಕರ್ಣತೋ ವರ್ಣತವ ಪೀಠತಃ ಪರಿಮಾಣತಃ ||”
- ಶ್ರೀವಾಷಿಷರಾಮಾಯಣ
- ಶ್ರೀಅರ್ಚಾಗತಿಕ್ರಮ
ಪ್ರತಿಮಾಪೂಜೆಯು ಅವಶ್ಯ ಕರ್ತವ್ಯವೆಂದು ಜಗತ್ತಿಗೆ ಬೋಧಿಸಲು. (ಲೋಕಶಿಕ್ಷಣಾರ್ಥವಾಗಿ ಬ್ರಹ್ಮದೇವರು ಬಹುಕಾಲ ಸೀತಾರಾಮ ಪ್ರತಿಮೆಗಳನ್ನು ಪೂಜಿಸಿ, ಲೋಕೋದ್ಧಾರಾರ್ಥವಾಗಿ ಕಾರುಣ್ಯದಿಂದ ಕಮಲಾಸನರು ಈ ಪ್ರತಿಮೆಗಳನ್ನು ಜಾಬಾಲಮುನಿಗಳಿಗೆ ಅನುಗ್ರಹಿಸಿದರು. ಆನಂತರ ಕೈಲಾಸಾಧಿಪತಿಗಳಾದ ಶ್ರೀರುದ್ರದೇವರು ಈ ಪ್ರತಿಮೆಗಳನ್ನು ಪೂಜಿಸಿ ತಮ್ಮ ಪತ್ನಿಯಾದ ಶ್ರೀಪಾರ್ವತಿಗೆ ನೀಡಿದರು. ಅವರು ಚಿರಕಾಲ ಪೂಜಿಸಿ ಅದರ ಪ್ರಭಾವದಿಂದ ಸರ್ವಮಂಗಳೆಯೆನಿಸಿ ಜಗತ್ತಿನ ಸತೀಮಣಿಯರಿಗೆ ಸೌಮಂಗಲ್ಯಪ್ರದಾನಾಶಕ್ತಿಸಂಪನ್ನರಾಗಿ ಖ್ಯಾತರಾದರು.
ಮುಂದೊಮ್ಮೆ ಮಾರ್ಕಂಡೇಯ ಋಷಿಗಳಿಗೆ ರುದ್ರದೇವರು ಒಲಿದಾಗ, ಅವರು ಮೋಕ್ಷವನ್ನು ಬೇಡಿದಾಗ “ಅಹಂ ಭೋಗಪ್ರದೋ ವತ್ಥ ! ಮೋಕ್ಷದನ್ನು ಜನಾರ್ದನಃ ” - “ವತ್ತ, ನಾನು ಭೋಗಗಳನ್ನು ಕೊಡಲು ಸಮರ್ಥನಾಗಿದ್ದೇನೆ. ಮೋಕ್ಷವನ್ನು ಕರುಣಿಸುವ ಪ್ರಭುವ ಶ್ರೀಮನ್ನಾರಾಯಣನೊಬ್ಬನೇ!”-ಎಂದು ಹೇಳಿ ಅವರಿಗೆ ತಾರಕಮಂತ್ರವನ್ನು ಉಪದೇಶಿಸಿದರು.
ಮತ್ತು ತಾರಕಮಂತ್ರ ಸಿದ್ಧಿಯ ವಿಚಾರದಲ್ಲಿ, ತಾವು ಸ್ವತಃ ಈ ಸೀತಾರಾಮ ಪ್ರತಿಮೆಗಳನ್ನು ಪೂಜಿಸಿ ಶ್ರೀರಾಮ ತಾರಕಮಂತ್ರ ಸಿದ್ದಿಯನ್ನು ಪಡೆದುದನ್ನೂ ಮಾರಂಡೇಯರಿಗೆ ತಿಳಿಸಿ ರುದ್ರದೇವರು ಈ ಪ್ರತಿಮೆಗಳ ಆರಾಧನೆಯಿಂದ, ತಾರಕಮಂತ್ರ ಜಪದಿಂದ ಮೋಕ್ಷವು ಲಭಿಸುವುದೆಂದು ಉಪದೇಶಿಸಿದರು. ರುದ್ರದೇವರು ಅದ್ಯಾಪಿ ಕಾಶಿಯಲ್ಲಿ ಮೃತರಾಗುವ ಸರ್ವರಿಗೂ ಉತ್ಪಾಂತಿಕಾಲದಲ್ಲಿ ತಾರಕ ಮಂತ್ರೋಪದೇಶಮಾಡಿ ತಮ್ಮನಕ ಸುಜನರು ಉದ್ಧತರಾಗುವಂತೆ ಮಾಡುತ್ತಿರುವರೆಂದು “ಕಾಶೀಖಂಡ” ಮತ್ತು “ಮಾರಂಡೇಯ ಮುಂತಾದ ಪುರಾಣಗಳಿಂದ ತಿಳಿದುಬರುತ್ತದೆ.
ಶಿವ-ಪಾರ್ವತಿಯರಿಂದ ಪೂಜಿತವಾದ ಈ ಶ್ರೀಸೀತಾರಾಮ ಪ್ರತಿಮೆಗಳು ಮುಂದೆ ದಕ್ಷಪ್ರಜೇಶ್ವರರ ಕೈಸೇರಿ ಅವರಿಂದ ಅರ್ಚಿಸಲ್ಪಟ್ಟವು. ತರುವಾಯ ಸೌರಭ ಋಷಿಗಳು ಇವನ್ನು ಪಡೆದು ಪೂಜಿಸಿದರು. ಕೆಲಕಾಲಾನಂತರ ಇವು ಮತ್ತೆ ಸತ್ಯಲೋಕದಲ್ಲಿ ಕಂಗೊಳಿಸಿ ಪೂಜೆಗೊಂಡವು.
ವಿವಸ್ವಾನ್ ತನ್ನ ತಪಸ್ಸಿನಿಂದ ಈ ಪ್ರತಿಮೆಗಳನ್ನು ಪಡೆದು ಪೂಜಿಸಿ, ತನ್ನ ಪುತ್ರನಾದ ವೈವಸ್ವತ ಮನುವಿಗಿತ್ತನು, ಅದೇ ಸೂರ್ಯವಂಶ ಪರಂಪರೆಯಲ್ಲಿ ಬಂದ ಇಕ್ಷಾಕುವು ಈ ಅಸಾರಣ ಪ್ರತಿಮೆಗಳನ್ನು ತನ್ನ ಕುಲದೇವತೆಗಳೆಂದು ಆರಾಧಿಸಿದನು. ಮುಂದೆ ಅವನ ಮಂಶಜರಾದ ಮಾಂಧಾತಾ, ಅನರಣ್ಯ, ತ್ರಿಶಂಕು ಹರಿಶ್ಚಂದ್ರ, ಸಗರ, ಭಗೀರಥ, ಅಂಬರೀಷ, ದಿಲೀಪ-ಮೊದಲಾದ ಚಕ್ರವರ್ತಿಗಳು ಪೂಜಿಸಿ ಪುನೀತರಾದರು. ದಶರಥ ಚಕ್ರವರ್ತಿಯು ಈ ಪ್ರತಿಮೆಗಳನ್ನು ಶ್ರದ್ಧಾಭಕ್ತಿಗಳಿಂದ ಆರಾಧಿಸಿ, ಶ್ರೀರಾಮಚಂದ್ರನ ಅವತಾರವಾದಮೇಲೆ ತನ್ನ ಕುಮಾರನಿಗೆ ಈ ಪ್ರತಿಮೆಯ ಹೆಸರನ್ನೇ ಇಟ್ಟನು! ಅಂದಿನಿಂದ ಈ ಪ್ರತಿಮೆಗೆ ಶ್ರೀಮೂಲರಾಮ ಚಂದ್ರನೆಂದು ಹೆಸರಾಯಿತು. ಭಗವಂತನಾದ ಶ್ರೀರಾಮಚಂದ್ರಪ್ರಭುವೂ ಈ ಪ್ರತಿಮೆಗಳನ್ನು ಪೂಜಿಸಿದ್ದ ರಿಂದಲೂ, ಆ ರಾಮ ಈ ರಾಮರಲ್ಲಿ ಅಭೇದವೇ ಇದ್ದರೂ ವ್ಯವಹಾರಕ್ಕಾಗಿ ಆ ರಾಮನಿಂದ ಪೂಜಿತನಾದ್ದರಿಂದ ಈ ರಾಮನು ಮೂಲರಾಮನೆನಸಿ ಮಂಗಳನಾಮವಿಭೂಷಿತನಾಗಿ ಪ್ರಖ್ಯಾತನಾದನು.
ಶ್ರೀರಾಮಚುದ್ರನು ಲೋಕಕಲ್ಯಾಣ, ಪ್ರಜಾರಂಜನೆ, ಪ್ರಜಾಹಿತಸಾಧನೆಗಾಗಿ ಹೆಚ್ಚುಕಾಲ ದರ್ಬಾರಿನಲ್ಲಿಯೇ ಇರುತ್ತಿದ್ದರಿಂದ, ಪತಿಯ ವಿರಹದಿಂದ ಬಳಲುತ್ತಿದ್ದ ಸೀತಾಮಾತೆಗೆ ರಾಮಚಂದ್ರನು ಸಮಾಧಾನ ಹೇಳಿ, ಈ ಪ್ರತಿಮೆಗಳನ್ನು ಸೀತಾದೇವಿಗೆ ನೀಡಿ “ವೃತ್ತಪೀಠಾ ಲಂಬಕರ್ಣಾ ತ್ರಿವಕ್ರಾ ಸೀತೆಯಾ ಸಹ | ಮಮೇಯಂ ಪ್ರತಿಮಾ ದೇವಿ ನಾತ್ರಕಾರಾ ವಿಚಾರಣಾ- ದೇವಿ, ದುಂಡುಪೀಠದ ಉದ್ದ ಕಿವಿಯ, ಮೂರುಕಡೆ ವಕ್ರವಾಗಿರುವ ಸೀತೆಯಿಂದೊಡಗೂಡಿದ ಈ ಪ್ರತಿಮೆಯು ನನ್ನ ಸಂಬಂಧಿಯಾಗಿದ್ದು ನಾನೇ ಈ ಪ್ರತಿಮೆಯೆಂದು ಭಾವಿಸಿ ಇದರೊಡನೆ ಕಾಲವನ್ನು ಕಳೆ, ನಾನಿಲ್ಲದ ವೇಳೆಯಲ್ಲಿ ಇದಿರಲು ನಿನಗೇತರ ಬೇಸರ'? ಎಂದು ಹೇಳಿ ಸೀತಾದೇವಿಯು ಇವುಗಳನ್ನು ಪೂಜಿಸಲಾರಂಭಿಸಿದಳು. ಮುಂದೆ ಲಕ್ಷ್ಮಣನು ಇವನ್ನು ಆರಾಧಿಸಿದನು. ನಂತರ ಜಾಂಬುವ೦ತನು ಮನಸಾರೆ ಪೂಜಿಸಿದನು.
ಹೀಗಿರಲು ಅಯೋಧ್ಯೆಯಲ್ಲಿ ಪ್ರತಿದಿನವೂ ಶ್ರೀರಾಮಚಂದ್ರನ ದರ್ಶನ ಮಾಡಿಯೇ ಭೋಜನ ಮಾಡುವ ಪದ್ಧತಿಯನ್ನಿಟ್ಟುಕೊಂಡಿದ್ದ 'ವೇದಗರ್ಭ' ಎಂಬ ಬ್ರಾಹ್ಮಣನು ಒಮ್ಮೆ ಕಾರಾಂತರ ವ್ಯಾವೃತನಾಗಿದ್ದ ಶ್ರೀರಾಮನ ದರ್ಶನವು ನಾಲ್ಕಾರು ದಿನ ಕಾಲ ದೊರಕದಿದ್ದರಿಂದ ಶ್ರೀರಾಮದರ್ಶನವಿಲ್ಲದೆ ಆಹಾರವನ್ನು ಸ್ವೀಕರಿಸದಿದ್ದ ಆ ಭೂಸುರನು ಉಪವಾಸದಿಂದ ಬಳಲಿ ರಾಮನ ದರ್ಶನಕ್ಕಾಗಿ ಹಾತೊರೆಯುತ್ತಿದ್ದನು. ಇದನ್ನರಿತ ಶ್ರೀರಾಮನು ವೇದಗರ್ಭನಿಗೆ ದರ್ಶನವಿತ್ತು ಇನ್ನು ಮುಂದೆ ತನಗಾಗಿ ಕಾಯಬಾರದೆಂದೂ ಈ ಮೂಲಸೀತಾರಾಮ ಪ್ರತಿಮೆಗಳನ್ನು ತಾನೆಂದು ಪೂಜಿಸಿ ಆಹಾರವನ್ನು ಸ್ವೀಕರಿಸಬೇಕೆಂದೂ ಹೇಳಿ ಈ ಪ್ರತಿಮೆಗಳನ್ನು ಆತನಿಗೆ ಅನುಗ್ರಹಿಸಿದನು. ವೇದಗರ್ಭನು ಬಹುಕಾಲ ಇವನ್ನು ಆರಾಧಿಸಿ ತೃಪ್ತನಾಗಿ, ಮತ್ತೆ ಈ ಪ್ರತಿಮೆಗಳನ್ನು ಶ್ರೀರಾಮನಿಗೆ ಅರ್ಪಿಸಿದನು.
ಆನಂತರ ಇವನ್ನು ರಾಮನು ಹನುಮಂತನಿಗೆ ಕೊಟ್ಟನು. ಶ್ರೀಹನುಮಂತದೇವರು ಇದನ್ನು ತ್ರೇತಾಯುಗವು ಮುಗಿದು ದ್ವಾಪರಯುಗದವರೆಗೆ ಪೂಜಿಸುತ್ತಿದ್ದು, ಸೌಗಂಧಿಕಾಪುಷ್ಪವನ್ನು ತರಲು ಬಂದ ತಮ್ಮ ಅಂಶರಾದ ಶ್ರೀಭೀಮಸೇನದೇವರಿಗೆ ಕರುಣಿಸಿ ಇವನ್ನು ಪೂಜಿಸಿ ಮುಂದೆ ಕಲಿಯುಗದಲ್ಲಿ ಯತಿಯಾಗಿ ಅವತರಿಸಿದಾಗಲೂ ಆರಾಧಿಸಬೇಕು” ಎಂದು ಹೇಳಿದರು. ಪಾಂಡವರಿಂದ ಆರಾಧಿತವಾದ ಈ ಪ್ರತಿಮೆಗಳು ಮುಂದೆ ಅನೇಕ ಅರಸರಿಂದ ಅರ್ಚಿತರಾಗಿ ಕಲಿಯುಗದಲ್ಲಿ ಕ್ಷೇಮಕರಾಜನ ಪರಂತವೂ ಆ ವಂಶೀಯರಿಂದ ಪೂಜಿಸಲ್ಪಟ್ಟು ಆನಂತರ ಕಳಿಂಗ ದೇಶದ ಗಜಪತಿಯ ಕೋಶಾಗಾರದಲ್ಲಿ ನೆಲೆಗೊಂಡವು.
“ಅರ್ಜಾತು ರಾಮಚಂದ್ರ ನಿರ್ಮಿತಾ ವಿಶ್ವಕರ್ಮಣಾ |
ವೃತ್ತಪೀಠಾ ಲಂಬಕರ್ಣಾ ತ್ರಿವಕ್ರಾ ಸೀತೆಯಾ ಸಹ ||
ತಾಮರ್ಚಯಿತ್ವಾ ವಿಧಿವತ್ ರಂಗನಾಥಾರ್ಚಯಾ ಸಹ |
ವಿಧಿರಿಕ್ಷಾಕವೇ ಪ್ರಾದಾದರ್ಚಯಾಮಾಸ ತೇ ಚ ಸಃ ||
ನಿಜಾನ್ವಯನಪೈರಕ್ಷಾ ಮರ್ಚಿತಾಂ ಜಾನಕೀಪತೇಃ ।
ಅರ್ಚಾ ದಶರಥಶ್ವಕ್ಕೆ ತನ್ನಾಮಾತ್ಮತನೂಭವಃ |
ರಾಮಸ್ವಾಮರ್ಚಯಿತ್ವಾರ್ಚಾ೦ ಸ್ಕೋಪಾಸ್ತಿಮನುಷ್ಯತೇ |
ಪ್ರೀತ್ಯಾ ಜಾಂಬವತೇ ಪ್ರಾದಾತೊರ್ಚಯಾಮಾಸ ತಾಂ ಚಿರಮ್ |
ಸ ಚ ದೈವವಶಾದರ್ಚಾ ರಘುನಾಥಸ್ಯ ವಿಶ್ರುತಾ |
ಜಗನ್ನಾಥ ಗಜಪತೇಃ ಕೋಶಮೇವಾಭ್ಯಪದತ ||”
ಅರ್ಚಾಗತಿಕ್ರಮಃ
ಗಜಪತಿಯ ಆಸ್ಥಾನದಿಂದ ಯತಿಪತಿಯ ಆಸ್ಥಾನಕ್ಕೆ!
ಕಲಿಯುಗದಲ್ಲಿ ಶ್ರೀಹರಿಯ ಆಜ್ಞೆಯಂತೆ ತತ್ವಜ್ಞಾನಪ್ರಸಾರಕ್ಕಾಗಿ ಶ್ರೀವಾಯುದೇವರು ಶ್ರೀಮಧ್ವಾಚಾರ್ಯರಾಗಿ ಅವತರಿಸಿ ರೈತಸಿದ್ಧಾಂತವನ್ನು ಪ್ರತಿಷ್ಠಾಪಿಸಿ ಪ್ರಥಮಬಾರಿ ಬದರೀಯಾತ್ರೆಯನ್ನು ಮುಗಿಸಿಕೊಂಡು ಬರುವಾಗ ಕಳಿಂಗದೇಶಕ್ಕೆ ದಯಮಾಡಿಸಿದಾಗ ಅವರನ್ನು ಶೋಭನಭಟ್ಟರು ಮತ್ತು ಶಾಮಶಾಸ್ತ್ರಿಗಳೆಂಬ ಮಹಾಪಂಡಿತರು ವಾಕ್ಯಾರ್ಥದಲ್ಲಿ ಎದುರಿಸಿದರು ಶೋಭನಭಟ್ಟರು ವಾದದಲ್ಲಿ ಪರಾಜಿತರಾಗಿ ಆಚಾರರ ಶಿಷ್ಯರಾದರು. ಶಾಮಾಶಾಸ್ತ್ರಿಗಳು ಆಗ ಸರ್ವಜ್ಞರೊಡನೆ ವಾದಕ್ಕಿಳಿದರು. ಶಾಮಾಶಾಸ್ತ್ರಿಗಳು ಮಹಾಪ್ರತಿಭಾಶಾಲಿಗಳು, ಉತ್ತಮ ರಾಜಕಾರಣಿಗಳವಂಶಸ್ಥರೂ-ಪಂಡಿತೋತ್ತಮರೂ, ಸಾಹಿತಿಗಳೂ ಆಗಿದ್ದು, ಕಂಗಳಿ ದೇಶದಲ್ಲಿ ಆಗ ಲೌಕಿಕ-ವೈದಿಕ ಪ್ರಪಂಚದಲ್ಲಿ ಮತ್ತು ರಾಜದರ್ಬಾರಿನಲ್ಲಿ ಉನ್ನತ ಸ್ಥಾನಗಳಿಸಿದ್ದರು. ಅವರೂ ವಾದದಲ್ಲಿ ಆಚಾರರ ಪಾಂಡಿತ್ಯದ ಮುಂದೆ ನಿಲ್ಲಲಾಗದೇ ಪರಾಜಿತರಾಗಿ ಶ್ರೀಸರ್ವಜ್ಞರ ಶಿಷ್ಯತ್ವವನ್ನು ವಹಿಸಿ ಅವರೊಡನೆ ಸುಮಾರು ಕ್ರಿ.ಶ. ೧೨೬೨ರ ಹಾಗೆ ಉಡುಪಿಗೆ ಬಂದು ಆಚಾರರಾಯರಿಂದ ಪರಮಹಂಸಾಶ್ರಮವನ್ನು ಸ್ವೀಕರಿಸಿ ಶ್ರೀನರಹರಿತೀರ್ಥರೆಂಬ ಹೆಸರಿನಿಂದ ಖ್ಯಾತರಾದರು.
ಶ್ರೀಮದಾಚಾರರು ತಮ್ಮ ಹಿಂದಿನ ಹನುಮ-ಭೀಮಾವತಾರಗಳಲ್ಲಿ ಪೂಜಿಸಿದಂತೆ ಈ ಮಧ್ಯಾತಾರದಲ್ಲಿಯೂ ಶ್ರೀಮೂಲರಾಮ ಸೀತಾ ಪ್ರತಿಮೆಗಳನ್ನು ಪೂಜಿಸಲಿಚ್ಚಿಸಿ, ಶಿಷ್ಯರಾದ ಶ್ರೀನರಹರಿತೀರ್ಥರನ್ನು ಈ ಪ್ರತಿಮೆಗಳನ್ನು ತರಲು ಕಳಿಂಗ ದೇಶಕ್ಕೆ ಕಳುಹಿಸಿದರು. ದೈವವಿಪಾಕದಿಂದ ಆಗ ಕಳಿಂಗದೇಶಾಧಿಪತಿಯು ಮೃತನಾನಾಗಿದ್ದು, ಆತನ ಪತ್ನಿಯು ಗರ್ಭವತಿಯಾಗಿದ್ದಳು. ಭಗವತ್ಸಂಕಲ್ಪವೋ ಎಂಬಂತೆ ನರಹರಿತೀರ್ಥರು ಅಲ್ಲಿಗೆ ಬಂದಾಗ ತಮ್ಮ ದೇಶೀಯರೂ, ವಿಖ್ಯಾತರಾಜಕಾರಣಿಗಳೂ ಶ್ರೇಷ್ಠಪಂಡಿತರೂ, ದಕ್ಷ ಆಡಳಿತಗಾರರೂ ಪ್ರಜಾಜನರ ಪ್ರೀತಿ-ಗೌರವಗಳಿಗೆ ಪಾತ್ರರೂ ಆಗಿದ್ದ ಶ್ರೀಶಾಮಶಾಸ್ತ್ರಿಗಳೇ ಈಗ ಯತಿರೂಪದಿಂದ ಬಂದಿರುವುದನ್ನರಿತ ದರ್ಬಾರಿನ ಎಲ್ಲ ಪ್ರಮುಖರೂ, ರಾಣಿಯೂ “ನೀವು ರಾಜ್ಯವನ್ನು ನಿರ್ವಹಿಸಿ ರಾಜವಂಶದ ಹಿತವನ್ನು ಸಾಧಿಸಬೇಕು” ಎಂದು ಅವರನ್ನು ಪ್ರಾರ್ಥಿಸಿದರು. ಶ್ರೀಮದಾಚಾರರ ಆಜ್ಞೆಯನ್ನು ಪಾಲಿಸಲು ಈವೊಂದು ಸಂದರ್ಭವು ತಾನಾಗಿ ಒದಗಿಬಂದಿದ್ದರಿಂದ ಆನಂದಿಸಿದ ನರಹರಿತೀರ್ಥರು ಅದಕ್ಕೆ ಸಮ್ಮತಿಸಿ ಬಹುವರ್ಷಕಾಲ ರಾಜ್ಯ ಸೂತ್ರಗಳನ್ನು ಸ್ವೀಕರಿಸಿ, ರಾಜಪ್ರತಿನಿಧಿಗಳಾಗಿದ್ದು ಶತ್ರುಮರ್ದನ, (ಶಬರರನ್ನು ಸೋಲಿಸಿ ದೇಶವನ್ನು ರಕ್ಷಿಸಿ), ಪ್ರಜಾಕ್ಷೇಮ, ರಾಜ್ಯಸಂವರ್ಧನಾದಿ ಕಾರನಿರತರಾಗಿ ರಾಜಕುಮಾರನು ಜನಿಸಿ, ಪ್ರಾಪ್ರವಯಸ್ಕನಾದ ಮೇಲೆ ಅವನಿಗೆ ಪಟ್ಟಾಭಿಷೇಕ ಮಾಡಿ, ರಾಜ್ಯಾಡಳಿತವನ್ನು ಒಪ್ಪಿಸಿಕೊಟ್ಟು ತಮ್ಮ ಗುರುಸನ್ನಿಧಿಗೆ ತೆರಳಲು ಹೊರಟು ನಿಂತಾಗ ರಾಜ-ಮತ್ತಿತರ ರಾಜಪ್ರಮುಖವರು ನರಹರಿತೀರ್ಥರು ಮಾಡಿದ ಉಪಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿ ರಾಜಕಾಣಿಕೆಯಾಗಿ ಏನನ್ನಾದರೂ ಸ್ವೀಕರಿಸಬೇಕೆಂದು ಪ್ರಾರ್ಥಿಸಿದಾಗ ರಾಜಭಂಡಾರದಲ್ಲಿದ್ದ ಶ್ರೀಮೂಲರಾಮ ಸೀತಾಪ್ರತಿಮೆಗಳನ್ನು ಸ್ವೀಕರಿಸಿ ಸಕಲ ರಾಜಮರ್ಯಾದೆಯೊಡನೆ ಹೊರಟು ಶ್ರೀಕೂರ್ಮಕ್ಕೆ ಬಂದು ಅಲ್ಲಿಂದ ಉಡುಪಿಗೆ ಬಂದು ಆಶ್ರಮಜೇಷ್ಠರಾದ ಶ್ರೀಪದ್ಮನಾಭತೀರ್ಥರ ದ್ವಾರಾಪಿಂಗಳ ಸಂವತ್ಸರದ ಆಶ್ವಿನವಾಸದಲ್ಲಿ ಅಂದರೆ ಕ್ರಿಸ್ತಶಕ ೧೩೧೭ ನೇ ಅಕ್ಟೋಬರ್ ೨೩ರಂದು (೨೩-೧೦-೧೩೧೭) ಶ್ರೀಮೂಲರಾಮ-ಸೀತಾಪ್ರತಿಮೆಗಳನ್ನು ಶ್ರೀಮಧ್ವಾಚಾರರಿಗೆ ಸಮರ್ಪಿಸಿದರು.
ಈ ವಿಚಾರವನ್ನು ಶ್ರೀನರಹರಿತೀರ್ಥರ ತರುವಾಯ ಸರ್ವಜ್ಞಪೀಠವನ್ನೇರಿದ ಅವರ ಶಿಷ್ಯರಾದ ಶ್ರೀಮಾಧವತೀರ್ಥರು “ಸ ಸೀತಾ ಮೂಲರಾಮಾರ್ಚಾ ಕೋಶೇ ಗಜಪತೇಃ ಸ್ಥಿತಾ | ಯೇನಾನೀತಾ ನಮಸ್ತಸ್ಯೆ ಶ್ರೀಮಹರಿಭಿಕ್ಷವೇ ||” ಎಂದು ಚರಮಶ್ಲೋಕದಿಂದ ಕೊಂಡಾಡಿದ್ದಾರೆ.
ಶ್ರೀಜಯತೀರ್ಥವಿಜಯದಲ್ಲಿಯೂ ಸಹ ಶ್ರೀಮೂಲರಾಮ-ಸೀತಾಪ್ರತಿಮೆಗಳನ್ನು ಗಜಪತಿಭಂಡಾರದಿಂದ ತರಬೇಕೆಂದು ಶ್ರೀಮದಾಚಾರ್ಯರು ಶ್ರೀನರಹರಿತೀರ್ಥರಿಗೆ ಆಜ್ಞಾಪಿಸಿದನ್ನು ಹೀಗೆ ವರ್ಣಿಸಿದ್ದಾರೆ.
“ತತ್ರಾಸ್ತ ರಾಮದೇವಃ ಸಕಲಸುರಪತಿ ಬ್ರಹ್ಮಪೂಜ್ಯಾಂಘಿಕಂಜಃ |
ಸೀತಾಯುಕ್ತಸ್ತಮೇನಂ ಚತುರತರಧಿಯೇಹಾನಯೇತು ಆಸೀತ್ ||”
ಶ್ರೀಮದಾಚಾರ್ಯರು ನರಹರಿತೀರ್ಥರು ತಂದೊಪ್ಪಿಸಿದ ಶ್ರೀಮೂಲರಾಮಸೀತಾ ಪ್ರತಿಮೆಗಳನ್ನು ಎಂಭತ್ತು ದಿನಗಳು ಪೂಜಿಸಿ ತಮ್ಮ ಪ್ರಿಯ ಪಟ್ಟದ ಶಿಷ್ಯರಾದ ಶ್ರೀಪದ್ಮನಾಭತೀರ್ಥರಿಗೆ ಕರುಣಿಸಿ ತಮ್ಮ ಮಹಾಸಂಸ್ಥಾನದಲ್ಲಿ ಪರಂಪರೆಯಿಂದ ಈ ಪ್ರತಿಮೆಗಳನ್ನು ಆರಾಧಿಸುತ್ತಾ, ಪಾಠಪ್ರವಚನ, ವಾದಿದಿಗ್ವಿಜಯಪೂರ್ವಕ ಸಿದ್ಧಾಂತ ಸ್ಥಾಪನೆ-ಗ್ರಂಥ ರಚನೆ-ಶಿಷ್ಯದಾರಾದಿ ಕಾರ್ಯಮಾಡುತ್ತಾ ಬರಬೇಕೆಂದು ಆಜ್ಞಾಪಿಸಿದರು.
ಶ್ರೀಪದ್ಮನಾಭತೀರ್ಥರು ೧೩೧೭ ರಿಂದ ೧೩೨೪ ರವರೆಗೆ ಮಹಾಸಂಸ್ಥಾನವನ್ನಾಳಿ ಶ್ರೀಮೂಲರಾಮಸೀತಾಪ್ರತಿಮಾ ಸಹಿತವಾಗಿ ಮಹಾಸಂಸ್ಥಾನವನ್ನು ಶ್ರೀನರಹರಿತೀರ್ಥರಿಗೆ ವಹಿಸಿಕೊಟ್ಟರು. ಅವರು ೧೩೨೪ರಿಂದ ೧೩೩೩ರವರೆಗೂ ಶ್ರೀಮಾಧವತೀರ್ಥರು ೧೩೩೩ರಿಂದ ೧೩೫೦ರವರೆಗೂ, ಶ್ರೀಅಕ್ಟೋಭ್ಯತೀರ್ಥರು ೧೩೫೦ ರಿಂದ ೧೩೬೫ ರವರೆಗೂ ಮಹಾಸಂಸ್ಥಾನವನ್ನಾಳಿ ಶ್ರೀಮೂಲರಾಮದೇವರನ್ನು ಪೂಜಿಸಿದರು. ಅವರ ತರುವಾಯ ಇಂದ್ರಾಂಶರೂ, ದೈತಟೀಕಾಕಾರರೂ ಆದ ಶ್ರೀಜಯತೀರ್ಥಮುನಿಗಳು ೧೩೬೫ ರಿಂದ ೧೩೮೮ ರವರೆಗೆ ಶ್ರೀಮೂಲರಾಮರ ಪೂಜಾರಾಧನೆ, ವಾದಿದಿಗ್ವಿಜಯ, ಪಾಠಪ್ರಚನ, ಶಿಷ್ಯದಾರಮಾಡುತ್ತಾ ಮಹಾಸಂಸ್ಥಾನವನ್ನಾಳಿ ತಮ್ಮ ಶಿಷ್ಯರಾದ ಶ್ರೀವಿದ್ಯಾಧಿರಾಜರಿಗೆ ಮಹಾಸಂಸ್ಥಾನವನ್ನು ಅನುಗ್ರಹಿಸಿದರು. ಈ ಮಹಾಪರಂಪರೆಯಲ್ಲಿ ಶ್ರೀವಿದ್ಯಾಧಿರಾಜರ (೧೩೮೮-೧೩೯೨), ಶ್ರೀಕವೀಂದ್ರರು (೧೩೯೨-೧೩೯೮), ಶ್ರೀವಾಗೀಶರು (೧೩೯೮-೧೪೦೬), ಶ್ರೀರಾಮಚಂದ್ರತೀರ್ಥರು (೧೪೦೬-೧೪೩೫) ಮತ್ತು ಅವರ ಪಟ್ಟದಶಿಷ್ಯರಾದ ವಿಬುಧೇಂದ್ರತೀರ್ಥರು (೧೪೩೫-೧೪೯೦) ಮಹಾಸಂಸ್ಥಾನವನ್ನಾಳಿ, ಶ್ರೀಮೂಲರಾಮಸೀತಾಪ್ರತಿಮೆಗಳನ್ನಾರಾಧಿಸಿ, ಬಹುವಿಧವಾಗಿ ಆಚಾರರ ಸಿದ್ದಾಂತವನ್ನು ಅಭಿವೃದ್ಧಿಪಡಿಸಿದರು. ಆ ತರುವಾಯ ಶ್ರೀವಿಬುಧೇಂದ್ರತೀರ್ಥರು ವಿರಾಜಿಸಿದ ಶ್ರೀಸರ್ವಜ್ಞರ ವೇದಾಂತ ಸಾಮ್ರಾಜ್ಯದಲ್ಲಿ ಕ್ರಮವಾಗಿ ಶ್ರೀಜಿತಾಮಿತ್ರತೀರ್ಥರು (೧೪೯೦-೧೪೯೨), ಶ್ರೀರಘುನಂದನತೀರ್ಥರು (೧೪೯೨-೧೫೦೪), ಶ್ರೀಸುರೇಂದ್ರತೀರ್ಥರು (೧೫೦೪-೧೫೭೫) ಶ್ರೀವಿಜಯೀಂದ್ರತೀರ್ಥರು (೧೫೭೫-೧೬೧೪), ಶ್ರೀಸುಧೀಂದ್ರತೀರ್ಥರು ೧೬೧೪-೧೬೨೩) ಗಳು ಶ್ರೀಮದಾಚಾರರ ಮಹಾಸಂಸ್ಥಾನವನ್ನಾಳಿ, ಶ್ರೀಮೂಲರಾಮದೇವರನ್ನು ಆರಾಧಿಸುತ್ತಾ ದೈತಸಿದ್ಧಾಂತದ ವಿಜಯ ಪತಾಕೆಯನ್ನು ದೇಶದಲ್ಲೆಲ್ಲಾ ಮೆರೆಸಿದರು.
ಹಿಂದೆ ಶ್ರೀವಾಮನರೂಪಿ ಪರಮಾತ್ಮನು ಬಲಿಚಕ್ರವರ್ತಿಯಿಂದ ಮೂರು ಪಾದಭೂಮಿಯನ್ನು ಯಾಚಿಸಿ ತ್ರಿವಿಕ್ರಮನಾಗಿ ಬೆಳೆದು ಸಮಸ್ತ ಲೋಕಗಳನ್ನೂ ಆಕ್ರಮಿಸಿ, ಬಲಿಯನ್ನು ಪತಾಳಕ್ಕೆ ಮೆಟ್ಟಿ ಅಲ್ಲಿ ಅವನ ಮನೆಯನ್ನು ಕಾಯುತ್ತಾ ರಕ್ಷಕನಾಗಿ ನಿಂತು ಅನುಗ್ರಹಿಸಿದ ಸಂದರ್ಭದಲ್ಲಿ ಶ್ರೀಪ್ರಹ್ಲಾದರಾಜರು ಶ್ರೀವಾಮನರೂಪೀಹರಿಯನ್ನು “ದೇವ, ಬಲಿಯಲ್ಲಿ ಎಂಥ ಅನುಗ್ರಹಮಾಡಿರುವೆ! ನನ್ನಲ್ಲೇಕೆ ಅಂತು ಅನುಗ್ರಹಮಾಡಲಿಲ್ಲ?” ಎಂದು ಪ್ರಶ್ನಿಸಿದಾಗ ಶ್ರೀವಾಮನದೇವರು “ಪಾಪ ರಹಿತನಾದ ಪ್ರಹ್ಲಾದ ! ನಿನ್ನಲ್ಲಿ ಮಾಡಿರುವ ಅನುಗ್ರಹವನ್ನು ನಾನು ಮತ್ತಾರಲ್ಲೂ ಮಾಡಿಲ್ಲ ! ನಿನ್ನ ಪೌತ್ರನೆಂದೇ ಈ ಬಲಿರಾಜನಲ್ಲಿ ಹೀಗೆ ಅನುಗ್ರಹಿಸಿದ್ದೇನೆ ನೀನು ನನ್ನ ಸನ್ನಿಧಿಗೆ ಬರಲು ಬಹುಕಾಲಬೇಕು. ಆ ಕಾಲವನ್ನು ಹೇಳುವೆನು ಕೇಳು “ಯುಧಸಮಾತ್ಮನೀನಮನಫ್ ! ಯಚ್ಚಾಂತಿಮೇಚಾಂತಿಮೇ ||” (ವಾಮನಪುರಾಣ)
ಪಾಪರಹಿತನಾದ ಪ್ರಹ್ಲಾದ ! ನೀನು ಬ್ರಹ್ಮಸಂಬಂಧಿಯಾದ (ಬ್ರಹ್ಮಕರಾರ್ಚಿತವಾದ) ನನ್ನದೇ ಆದ ಮೂಲರಾಮಪ್ರತಿಮೆಯನ್ನು ಅಂತಿಮಯುಗವಾದ ಕಲಿಯುಗದಲ್ಲಿ ಅಂತಿಮ ಅವತಾರದಲ್ಲಿ, ಕೊನೆಯ ಆಶ್ರಮವಾದ ಯತ್ನಾಶ್ರಮದಲ್ಲಿ ಬಹುಕಾಲ ಪೂಜಿಸಿ ನಂತರ ನನ್ನ ಸನ್ನಿಧಿಯಲ್ಲಿ ಸರ್ವದಾ ಸುಖಿಸುತ್ತಿಯೇ !” ಎಂದು ಆಜ್ಞಾಪಿಸಿದರು.
ಮುಂದೆ ಭಗವಂತನ ಸಂಕಲ್ಪ, ಆಜ್ಞೆಯಂತೆ ಶ್ರೀಮೂಲರಾಮನ ಪೂಜೆ, ದೈತಸಿದ್ಧಾಂತದ ಸ್ಥಾಪನೆ, ಗ್ರಂಥರಚನೆ, ತತ್ವ-ಧರ್ಮಪ್ರಸಾರ, ಲೋಕಕಲ್ಯಾಣಾರ್ಥವಾಗಿ ಶ್ರೀಪ್ರಹ್ಲಾದರು ತಮ್ಮ ಕೊನೆಯ ಅವತಾರವನ್ನು ತಾಳಿ, ಶ್ರೀರಾಘವೇಂದ್ರ ಯತೀಂದ್ರರೆಂಬ ಹೆಸರಿನಿಂದ ಅವತರಿಸಿದರು. ಈ ಮೇಲೆ ಹೇಳಿದ ಮಹತ್ಕಾರ್ಯಗಳನ್ನು ಮಾಡಲೋಸುಗ ಪರಮಹಂಸಾಶ್ರಮವನ್ನು ಸ್ವೀಕರಿಸಬೇಕೆಂದು ಸಾಕ್ಷಾತ್ ಶ್ರೀವಾಗೇವಿಯೇ ಪ್ರತ್ಯಕ್ಷಳಾಗಿ ತಿಳಿಸಿದಳು “ಶ್ರೀರಾಮಾರ್ಚಾ ಪೂಜ್ಯತೇ ಯೇನ ತಸ್ಮಿನ್ | ವಾಸೋ ಯನ್ನೇ ಕಲ್ಪಯಪ್ಪಾ ಸದೇವಃ || ಕರ್ಮದೀಂದ್ರರೇವ ಪೂಜಾಪಿ ಕ್ಲಪ್ತಾ | ತಸ್ಮಾತ್ಸಾಹಂ ತೇಷು ನಿತ್ಯಂ ವಸಾಮಿ।।... ತಸ್ಮಾದಂಗಿಕೃತ ಕರ್ಮಂದಿಭಾವಂ| ರಾಜಾ ವಿದ್ಯಾರಾಜ್ಯಲಾ ಭವತ್ವಮ್ ||” (ಶ್ರೀರಾಘವೇಂದ್ರವಿಜಯ)
ಶ್ರೀಬ್ರಹ್ಮಕರಾರ್ಚಿತ ಶ್ರೀಮೂಲರಾಮನು ಪೂಜೆಗೊಂಬಲ್ಲಿ ನಾನು ವಾಸಿಸುವಂತೆ ವೇದವ್ಯಾಸರು ನೇಮಿಸಿದ್ದಾರೆ. ಆ ಮೂಲರಾಮನು ಯತಿಗಳಿಂದಲೇ ಪೂಜೆಗೊಳ್ಳಬೇಕೆಂಬ ನಿಯಮವೂ ಇದೆ. ಆದ್ದರಿಂದ ನಾನು ಅವರಲ್ಲಿ ನಿತ್ಯವೂ ವಾಸಿಸುತ್ತೇನೆ. ನೀನು ಶ್ರೀಮೂಲರಾಮನ ಪೂಜೆಗಾಗಿ ಪರಮಹಂಸಾಶ್ರಮವನ್ನು ಸ್ವೀಕರಿಸಿ ಸರ್ವಜ್ಞರ ವಿದ್ಯಾಸಾಮ್ರಾಜ್ಯಕ್ಕೆ ಚಕ್ರವರ್ತಿಯಾಗು - ನಾನು ನಿನ್ನಲ್ಲಿ ನೆಲೆಸಿ, ನಿನ್ನೆಲ್ಲ ಮನೋರಥಗಳನ್ನೂ ಪೂರ್ಣಮಾಡುವೆನು - ಎಂದು ಆಜ್ಞಾಪಿಸಿದ್ದಳು. ಅದರಂತೆ ಶ್ರೀಸುಧೀಂದ್ರತೀರ್ಥರಿಂದ ಪರಮಹಂಸಾಶ್ರಮವನ್ನು ಪಡೆದು ಶ್ರೀಪ್ರಹ್ಲಾದ-ವ್ಯಾಸರಾಜಾವತಾರಿಗಳಾದ ಗುರುರಾಜರು ಶ್ರೀಮದಾಚಾರರ ಮಹಾಸಂಸ್ಥಾನಾಧಿಪತಿಗಳಾಗಿ ಶ್ರೀಮದಾಚಾರರ ಭಾಷ್ಯಗಳಿಗೆ ಟೀಕೆಗಳನ್ನು ರಚಿಸಿದ ಶ್ರೀಜಯತೀರ್ಥರ ಸಮಸ್ತ ಟೀಕೆಗಳಿಗೂ ಟಿಪ್ಪಣಿಗಳನ್ನೂ ರಚಿಸಿ ಸ್ವತಂತ್ರಗ್ರಂಥಗಳನ್ನೂ ರಚಿಸಿ, ವಾದಿನಿಗ್ರಹ, ಸಿದ್ಧಾಂತಸ್ಥಾಪನೆ, ಲೋಕಕಲ್ಯಾಣ ಮಾಡುತ್ತಾ, ಶ್ರೀಮೂಲರಾಮರನ್ನು ಪೂಜಿಸುತ್ತಾದೈತಸಿದ್ಧಾಂತವನ್ನು ಅಜರಾಮರಗೊಳಿಸಿ ಲೋಕವಿಖ್ಯಾತರಾದ ವಿಚಾರ ಸರ್ವಸಜ್ಜನರಿಗೂ ತಿಳಿದ ವಿಷಯವೇ ಆಗಿರುತ್ತದೆ.
ಶ್ರೀಗುರುಸಾರ್ವಭೌಮರ ತರುವಾಯ ಆ ಮಹಾಪರಂಪರೆಯಲ್ಲಿ ಬಂದ ಎಲ್ಲಯತಿವರ್ಯರಿಂದಲೂ ಪೂಜಿತನಾಗಿ ಶ್ರೀಮೂಲರಾಮಚಂದ್ರದೇವರು ಅದ್ಯಾಪಿ ಶ್ರೀಮದಾಚಾರರ ಮಹಾಸಂಸ್ಥಾನಾದಿಪತಿಗಳಾದ ಪಾಜ್ಯ ಶ್ರೀಮತ್ತುಶಮೀಂದ್ರತೀರ್ಥ ಶ್ರೀಪಾದಂಗಳವರಿಂದ ಅರ್ಚನೆಗೊಳ್ಳುತ್ತಾರಾರಾಜಿಸುತ್ತಿದ್ದಾನೆ.
ಇಂತಹ ಪರಮಾದ್ಭುತಚರಿತನಾದ ಶ್ರೀಮೂಲರಾಮಚಂದ್ರನನ್ನು ಅಪರೋಕ್ಷ ಜ್ಞಾನಿಗಳಾದ ಎಲ್ಲಾ ಹರಿದಾಸರೂ ಕೊಂಡಾಡಿದ್ದಾರೆ, ಹಿಂದೆ ಶ್ರೀ ಚಂದ್ರಿಕಾರಾಯರು ಮತ್ತು ಶ್ರೀಸುರೇಂದ್ರತೀರ್ಥರು ವಿಜಯನಗರದಲ್ಲಿ ಮಿಳಿತರಾಗಿ ಒಂದೆಡೆಯಲ್ಲಿ ಪೂಜೆ ಮಾಡುತ್ತಿರುವಾಗ ಶ್ರೀಸುರೇಂದ್ರರು ಪೂಜಿಸುತ್ತಿದ್ದ ಶ್ರೀಮೂಲರಾಮನ ದರ್ಶನದಿಂದ ಹರ್ಷಪುಳಕಿತರಾಗಿ ಶ್ರೀಪುರಂದರದಾಸರಾಯರು ಹೀಗೆ ಸ್ತುತಿಸಿದ್ದಾರೆ -
ರಾಗ : ಬಿಲಹರಿ ತಾಳ-ಝಂಪೆ
ಇಂದಿನದಿನ ಸುದಿನವಾಯಿತು
ಇಂದಿರೇಶ ಮೂಲರಾಮ
ಚಂದ್ರನ ಪದಕಮಲ ಕಂಡು
ಈತನ ಪದಕಮಲಗಳ ವಿಧಾತ ತನ್ನ ಸದನದೊಳಗೆ
ಸೀತೆಯ ಸಹ ಪೂಜಿಸಿ ಇಕ್ಷಾಕುನೃಪತಿಗಿತ್ತನು |
ಆತನನ್ವಯ ನೃಪತಿಗಳು ಸುಪ್ರೀತಿಯಿಂದ ಪೂಜಿಸಿ ರಘು
ನಾಥ ವೇದಗರ್ಭಗಿ ಮೂರ್ತಿಯ ಪದಕಮಲ ಕ೦ಡು
ಗಜಪತಿ ಭಂಡಾರದಲ್ಲಿ ಅಜಕರಕಮಲಾರ್ಚಿತ ಭೂ-
ಮಿಜೆಸಹಿತ ರಾಮನಿರಲು ನಿಜಜ್ಞಾನದಿ ತಿಳಿದು ಬೇಗ |
ದ್ವಿಜರಗುರುಗಳೆನಿಪ ನಮ್ಮ ಸುಜನವಂದಿತ ನರಹರಿಮುನಿ
ರಜನಿಯಲ್ಲಿ ತಂದ ಸುಲೋಹಜ ಪ್ರತಿಮೆಯನ್ನು ಕಂಡು
ಅಂದವುಳ್ಳ ಮೂಲರಾಮಚಂದ್ರನ ಅತಿಭಕ್ತಿಯಿಂದ
ವೃಂದಾರಕ ವೃಂದವದ್ರ ಪವನನಂದನ |
ನಂದತೀರ್ಥರಚಿಸಿ ದಯದಿಂದ ನಿಜಾನ್ವಯದೊಳಿಟ್ಟ
ಪುರಂದರವಿಠಲನ ಸುರೇಂದ್ರಮುನಿಪ ತಂದುತೋರಲು
- ಶ್ರೀಪುರಂದರದಾಸರು.
ಹರಿದಾಸಪಂಥದಲ್ಲಿ ಅದ್ವಿತೀಯಸ್ಥಾನ ಗಳಿಸಿ ಜಗದ್ವಿಖ್ಯಾತರಾದ ಶ್ರೀಜಗನ್ನಾಥದಾಸರು ತಮ್ಮ ಕುಲಗುರುಗಳಾದ ಶ್ರೀವಸುಧೇಂದ್ರತೀರ್ಥರು ಶ್ರೀಮೂಲರಾಮನನ್ನು ಪೂಜಿಸುತ್ತಿರುವಾಗ ಭಕ್ತಿಯಿಂದ ಮೈಮರೆತು ಇಂತು ಸ್ತೋತ್ರಮಾಡಿದ್ದಾರೆ -
ರಾಮನ ನೋಡಿರೈ ನಿಮ್ಮಿಯ ಕಾಮಿತಬೇಡಿರೈ || ಪ ||
ತಾಮರಸಸಖಿಸುವಂಶಾಭಿಶರತ್ತೋಮ ಕಮಲಾಧಾಮ
ಧಾತನನುಜ್ಜದಿ ದೇವತಷ್ಟ ನಿರ್ಮಿಸಿದ ಅಜ ಪೂಜಿಸಿದ |
ಜ್ಯೋತಿರ್ಮಯ ಜಾಬಾಲಿ ಮುನಿಯ ತಪವರಿದ ಕಾಮಿತಗರೆದ ||
ಭೂತಾಧಿಪನ ಭವನದೊಳರ್ಚನೆಗೊಂಡ ಧೃತಕೋದಂಡ |
ಮಾತಂಗಾರಿವರೂಥಿಯ ಜನಕನ ಮೇಧಾಗಾರಕೆ ಪೋದ
ಸೌಭರಿಮುನಿಪಗೆ ಸೌಖ್ಯವ ಕರುಣಿಸಿಕೊಟ್ಟ ಜಗಕತಿದಿಟ್ಟ |
ನಾಭಿಜನ್ಮನಿಹ ಸಗರಸ್ಥಾನಕ್ಕೆ ಬಂದ ಶುಭಗುಣವೃಂದ |
ವೈಭವದಿಂದ ಅಯೋಧ್ಯಾನಗರದಿ ಮೆರೆದ ಕಾಮಿತಗರೆದ !
ಸ್ವಾಭಿಮಾನದಲ್ಲಿ ಸತಿಯಳಿಗಿತ್ತನು ವರವ ದೇವರದೇವ
ಜಾಂಬುವಂತನಿಗೆ ಜಾನಕಿರಮಣನು ಇತ್ತ ತನ್ನಯಧ್ಯಾತಾ |
ಸಂಭ್ರಮದಿಂದಲಿ ವೇದಗರ್ಭ ನೋಡ್ಡ ಮುಕ್ತಿಯ ನಿಡ್ಡ
ಕುಂಭಿನೀಶ್ವರನ ಕೋಶದಿ ಬಹುದಿನ ವಾಸವೆಸಗಿದನೀತ |
ನ೦ಬಿ ತುತಿಸಿದ ನರಹರಿಮುನಿಪಗೆ ಒಲಿದ ಮೋದದಿ ನಲಿದ
ಅಲವಬೋಧಮುನಿ ಅತಿಮೋದದಲರ್ಚಿಸಿದ ಸಲೆಮೆಚ್ಚಿಸಿದ |
ಇಳೆಯೊಳು, ಬಹುಯತಿ ಕರಪೂಜಿತನಾದ ಲೀಲಾವಿನೋದ ||
ಬಲುನಂಬಿದ ಭಕುತರ ಕಲಿಮಲಗಳ ಕಳೆದ ಮನದೊಳು ಪೊಳೆದ ||
ಸುಲಲಿತಗುಣನಿಧಿ ವಸುಧೇಂದ್ರಾರ್ಯರ ಪ್ರಿಯ ಕವಿಜನಗೇಯ
ವಾರಿಬಂಧನದಿ ವಾನರನಾಯಕರಾಳ ದೈತ್ಯರಸೀಳ್ |
ನಾರದಮುಖಮುನಿ ನಮಿಪಪದಾಂಬುಜನೀತ ತ್ರಿಗುಣಾತೀತ ||
ಆರಾಧಿಪರಿಗೆ ಆಖಿಳಾರ್ಥಗಳನ್ನು ಕೊಡುವ ದುರಿತವ ತಡೆವ |
ನೀರಾಜಾಕ್ಷ ಸಿರಿಜಗನ್ನಾಥವಿಠಲ ನಿಶ್ಚಿಂತ ಸೀತಾಕಾಂತಾ
- ಶ್ರೀಜಗನ್ನಾಥದಾಸರು
ದಾಸಕುಲಮಕುಟಮಣಿಗಳಾದ ಪುರಂದರದಾಸರು ರಚಿಸಿರುವ “ಶ್ರೀನರಹರಿ ತೀರ್ಥರ ಮಹಿಮಾ” ಎಂಬ ಪದದಲ್ಲಿರುವ ಶ್ರೀಮೂಲರಾಮ-ಸೀತಾದೇವಿಯರ ಆಗಮ ಚರಿತೆಯು ಬಲು ರಮ್ಯವೂ, ಅದ್ಭುತವೂ, ಭಕ್ತಿಪ್ರಚೋದಕವೂ ಆಗಿದೆ.
ರಾಗ : ಮುಖಾರಿ ತಾಳ-ಝಂಪೆ
ನರಹರಿತೀರ್ಥರ ಮಹಿಮೆ ಕೇಳಿರೋ |
ನರದೇಹವನ್ನು ಸಾರ್ಥಕ ಮಾಡಿರೋ
ಕಾರಸಬ್ರಹ್ಮ ಮಾಡಿಸಿ ಪೂಜಿಸಿ ಕೊಡಲು |
ಆರ ಜಾಬಾಲಿಮುನಿಗೆ ಪ್ರಸನ್ನನಾಗಿ ||
ಭಾರ್ಯಾಸಹಿತ ಶರ್ವಪೂಜಿಸಿ ಸೌಭರಿಗೆ ಕೊಡಲು |
ಸೂರವಂಶಕೆ ರಾಮಸೀತೆ ಬರಲು
ಜಾಂಬುವಂತ ಪೂಜಿಸಿ ವೇದಗರ್ಭಗೆ ಕೊಡಲು |
ಕುಂಭೀಶ್ವರನ ಕೋಶದಲ್ಲಿ ಇರಲು ||
ಅಂಬುಜೋದ್ಭವನಲ್ಲಿ ನಿತ್ಯಪೂಜಿಸುತ್ತಿರಲು |
ಜಂಭಾರಿಪುರವೈದಿದನೇ ಆ ಜನಪ
ಗುರುಆನಂದತೀರ್ಥರಿಂದ ಚತುರ್ಥಾಶ್ರಮ ಸ್ವೀಕರಿಸಿ |
ವರಗಗನ ನದೀತೀರದಿ ಗುಹ್ಯದೊಳಿರಲು ||
ಕರಿಬಂದು ಕೂಗುತಿರೆ ಕೇಳಿ ಹೊರಗೆ ಬರಲು |
ಭರದಿ ಪಟ್ಟಭಿಷೇಕನಾಗಿ ರಾಷ್ಟ್ರದೊಳೊಪ್ಪಿದ
ಆ ದೇಶಪದವಿ ಹನ್ನೆರಡು ವರುಷ ಮೂರು ಮಾಸ |
ಮೋದದಿಂದನುಭವಿಸಿ ರಾಜಪದವ ||
ಸಾದರದಿ ಪಿಂಗಳಾಜ ಶುದ್ಧ ಸಪ್ತಮಿ |
ಆ ಧರೆಯ ರಾಜಪುತ್ರಗೆ ಇತ್ತ ಮಹಿಮ
ರಾಜಪತ್ನಿ ಪುತ್ರ ನಿಮಗೆ ಬೇಕಾದ ವಸ್ತು ವೈವದೆನಲು |
ಆ ಜನಪನ ಕೋಶದಲ್ಲಿ ಮಂದಾಸನದೊಳು
ರಾಜಿಸುತಿಪ್ಪ ಸೀತರಾಮ ಮೂರ್ತಿಗಳನು ತೆಗೆದುಕೊಂಡು |
ವಾಜಿಯನೇರಿ ಕೂರ್ಮಕ್ಕೆ ಬಂದು ಪದ್ಮನಾಭರಿಗಿತ್ತರು
ಪದುಮನಾಭಯತಿಯು ತಾನು ದಶಮತಿಗೆ ಅರ್ಪಿಸಲು
ಮುದದೊಳೆರಡು ಮಾಸ ಮೇಲೆ ಇಪ್ಪತ್ತು ದಿನವು ||
ಮದನನಯ್ಯನ ಪೂಜಿಸಿ ಕೊಡಲು ತಾ ಪೂಜಿಸಿದ |
ವದಗಿ ಆರುವರ್ಷ ಇನ್ನೂರು ತೊಂಬತ್ತು ದಿನ
ಗುರು ಪದ್ಮನಾಭರ ಆಜ್ಞದಲ್ಲಿಂದ ಒಂಭತ್ತು |
ವರುಷ ಮೇಲೈವತ್ತು ಮೂರು ದಿನವು ||
ಧರಣಿಜೆಯ ಸಹ ಮೂಲರಾಮನಂಟ್ರಿಯಂ ಭಜಿಸಿ |
ಪುರಂದರ ವಿಠಲನ ಪ್ರೀತಿಯ ಪಡೆದ ಅಪರೋಕ್ಷಜ್ಞಾನಿಗಳೂ ಮಹಾಮಹಿಮರೂ ಆದ ಶ್ರೀವಿಜಯದಾಸರು ಶ್ರೀಮೂಲರಾಮಚಂದ್ರದೇವರ ಚರಿತ್ರೆಯನ್ನೂ, ಅವರು ನರಹರಿತೀರ್ಥರಿಗೆ ಒಲಿದು ಅವರ ದ್ವಾರಾ ಶ್ರೀಮದಾಚಾರರಲ್ಲಿಗೆ ಬಂದವಿಚಾರವನ್ನೂ ಒಂದು ಸುಳಾದಿಯಲ್ಲಿ ಬಹು ರಮಣೀಯವಾಗಿ ಬಣ್ಣಿಸಿದ್ದಾರೆ.
ಶ್ರೀಮೂಲರಾಮರು ಬಂದ ಸುಳಾದಿ
ಧ್ರುವತಾಳ
ಮಧ್ವವಲ್ಲಭ ಜಯ ಸದೈಷ್ಣವ ಪ್ರಿಯ | ಅದೈತಮಹಿಮ ಜಗದ್ವಿಲಕ್ಷಣ ರಾಮ || ಸವರ್ಣಭೂತಭವಿಷ್ಯದ್ವರ್ತಮಾನಬಲ್ಲ || ವಿದಾಂಸರೊಡೆಯಾಘ್ರಧ್ವಂಸಿ ಅಪ್ರಮೇಯಾ | ಸದ್ದೀರ ಏಕಮೇವ | ಅದ್ವಿತೀಯ ಪಾದದ್ವಂದ್ವವೆನಿಸುವ | ಸಾಣಿವುಳ್ಳ ಗುರುದ್ವಾರ ಸಾರಿದವರ | ಹೃದ್ದನಜದಲ್ಲಿದ್ದು ತದ್ವಿಚಾರ ನಡೆಸುವ | ತದ್ವಿಪರೀತಕಾರ | ಅದ್ದರಭೋಕ್ತ ನಮ್ಮ ವಿಜಯವಿಠಲ | ಮಾರಧ್ವ೦ಸನಿಂದನಿತ್ಯ | ಸಾಲಗಗೊಂಡ ಮೂರ್ತಿ
ಮಟ್ಟತಾಳ
ಪೆರ್ಮೆಯಿಂದಲಿ ಅಂದು ವಿಶ್ವಕರ್ಮನಿಂದ ನಿರ್ಮಿತವಾಗಿದ್ದ | ನಿರ್ಮಲ ಶರೀರ ಧರ್ಮಬೋಧಕ ರಾಮ | ನಿರ್ಮಯನ ಜಾತುಮೊಗ ನಿತ್ಯ ನಿಷ್ಕರ್ಮಭವದಲ್ಲಿ ನಿರ್ಮತ್ಸರವಾದ ವಿಜಯವಿಠಲರೇಯನ | ನಿರ್ಮಲಚಿತ್ತದಲ್ಲಿ ಅರ್ಚನೆಮಾಡಿದರು
ತ್ರಿಪುಟತಾಳ
ಬಹುಕಾಲ ಲೋಕೇಶ ತನ್ನ ಮನೆಯಲ್ಲಿ | ಚಲುವರಾಮನ ಪೂಜೆ ಮಾಡಲು | ಒಲಿದು ಜಾಬಾಲಿಮುನಿ ಪ್ರಾರ್ಥನೆಯಿಂದಲಿ | ಸಲಿಸಿ ಮಾತನು ಋಷಿಗೆ ಈ ಪ್ರತಿಮೆಯ ಕೊಡಲಾಗ | ಒಲಿಸಿಕೊಂಡಲ್ಲಿಂದ ಶಿವಗೆ ಕೊಡಲು | ಸುಲಭದಿಂದಲು ಆ ಶಿವನು ತನ್ನಯ ನಿಜಾಲಲನೆಗೆ ಕೊಡಲಾಗಿ ವಿನಯದಿಂದ || ಕೆಲವು ದಿವಸ ಗಿರಿಜೆ ಪೂಜಿಸಿ ಆ | ಮ್ಯಾಲೆ ತಿಳಿದು ದಕ್ಷನ ಯಾಗದಲ್ಲಿಗೆ ಪೋಗಿ | ಇಳಿದು ಪೋವಾಗ ವೈಮಾನಿಕ ಋಷಿ ಕೈ | ಯಲ್ಲಿಟ್ಟು ತರುವಾಯ ರಾಮ ಪ್ರತಿಮೆಯನ್ನು | ಜಲಜಾ ಗರ್ಭನಾ ವಶಕೆ ತಂದುಕೊಡಲು | ಪೊಳವ ವಿಜಯವಿಠಲ ಜಾನಕೀಪತಿ | ಬಲವಂತ ಭಕ್ತರಪ್ರಿಯಾ ಸುಜನರಗೇಯಾ
ಅಟ್ಟತಾಳ
ತಪಮಾಡಿ ಇಕ್ಷಾಕು ಬ್ರಹ್ಮಗೆ ಮೆಚ್ಚಿಸಿ | ಕೃಪೆಯಲಿ ಮೂಲರಾಮನ ಕೊಡುತ್ತಲೆ | ಕ್ಷಿತಿಯೊಳಯೋಧ್ಯಾದಲ್ಲಿ ಪೂಜಿಸಲಾಗೆ | ಅತಿಶಯವಾಗಿ ರಾಮಚಂದ್ರ ಪರಿಯಂತ 1 ಮಿತಿಯಿಲ್ಲದ ವಾಲಗದಲ್ಲಿ ವಪ್ಪುವ || ಕ್ಷಿತಿಸುತೆ ತಾನೆ ಪೂಜಸಿ ಹನುಮಂತಗೆ | ಪ್ರತಿಮೆಯ ಪಾಲಿಸೆ ಅಲ್ಲಿಂದ ಮಾ |ರುತ ಸುತನು ಜಾಂಬವಂತಗೆ ದಯಮಾಡಿದ ಸತತ ಮಂಗಳಕಾಯ ವಿಜಯವಿಠಲರಾಮ | ನುತಿಸಿಕೊಳ್ಳುತಲಿದ್ದನು ಸುರರಾದಿಗಳ ಕೈಯಾಗೆ
ಆದಿತಾಳ
ವೇದಗರ್ಭನೆಂಬೋ ಭೂಸರ ರಾಮನ | ಪಾದಸಂದರುಶನವಾ ತಿಳಿಯದಲೆ ಆ | ನೋದಕಕೊಳ್ಳದಿರೆ ರಾಘವ ಭಕ್ತಾ | ನಿಂದಾದ ಪ್ರತಿಜ್ಞೆಯನ್ನು ಕಾದು ತನ್ನ ಮೂರ್ತಿಯ | ಆದರದಿಂದ ಕೊಟ್ಟು ಕಳಹುತಲಿತ್ತ | ಭೂದೇವ ಬಹು ಕಾಲಪೂಜಿಸಿ ತೀರ್ಥಾಯಾತ್ರೆ | ಆದರದಿಂದ ಮಾಡಿಕೊಳ್ಳುತ್ತಾ ಬರಲು ಗತಿಗೆ | ಐದುವಕಾಲದಲ್ಲಿ ಸೀತಾರಾಮ ಪ್ರತಿಮೆಯು | ಮೇದಿನಿಯಲ್ಲಿ ಬಿಟ್ಟು ಪೋಗಲಾಗಿ ಇತ್ತ | ಸಾಧುಗುಣವುಳ್ಳ ಮುಕುಂದವರ್ಮನೆಂಬೋ | ಮೇದಿನಿಪತಿಯಾಗಿ ವಡೀ ದೇಶದಲ್ಲಿರೆ | ಆದ ಅಶರೀರ ವಾಕ್ಯಾಂತರವ ಕೇಳಿ| ಆದಿತ್ಯ ವಂಶಜ ರಾಮಾರಾಧನೆ ಕೊಳ್ಳುತ್ತಿದ್ದ ಆ ಜನಾದ ಕೋಶದಲ್ಲಿ || ೫ ||
ಜತೆ
ನರಹರಿ ತೀರ್ಥರಿಗೆ ವಲಿದ ವಿಜಯವಿಠಲ |ಸ್ಮರಿಸಿದವರ ಕಾವ ನಿತ್ಯ ರಘುರಾಮ
ಶ್ರೀವಿಜಯೀಂದ್ರತೀರ್ಥರು ಕುಂಭಕೋಣದಲ್ಲಿ ವೇದಮತವಿರೋಧಿಗಳಾಗಿದ್ದ ಶೈವಸನ್ಯಾಸಿಗಳಾದ ಶ್ರೀಲಿಂಗರಾಜೇಂದ್ರರನ್ನು ಹನ್ನೊಂದು ದಿನ ವಾದಮಾಡಿ ಸೋಲಿಸಿ, ವೇದಮತವನ್ನು ಎತ್ತಿಹಿಡಿದು ಲಿಂಗರಾಜೇಂದ್ರರ “ಶೈವಮಠ”ವನ್ನೂ, ಬಸವನಘಂಟೆ, ಚಿತ್ರಾಸನದಯ ಮತ್ತು ಅನೇಕ ಬಿರುದಾವಳಿಗಳನ್ನೂ ಗೆದ್ದ ದಿವಸ ನಡೆದ ಮಹೋತ್ಸವವು ಶ್ರೀಮಾದ್ದ ಇತಿಹಾಸದಲ್ಲಿಯೇ ಚಿರಸ್ಮರಣೀಯವಾದದ್ದು. ಅಂದು ತಂಜಾಪುರದ ನರಪತಿ ಚವ್ವಪ್ಪನಾಯಕ, ನ್ಯಾಯಾಮೃತಕ್ಕೆ “ತರಂಗಿಣಿ'ಯನ್ನು ರಚಿಸಿದ, ಶ್ರೀವಿಜಯೀಂದ್ರರ ಮಿತ್ರರಾದ ರಾಮಾಚಾರ್ಯರು. ಗುರುಪುರಂದರದಾಸರೇ ಮೊದಲಾಗಿ ಬಹುಜನರು ಸೇರಿದ್ದರು, ಅಂದು ಮಹಾಸಂಸ್ಥಾನ ಪೂಜೆಯು ಮುಗಿದು ದೇವರನ್ನು ಭುಜಂಗಿಸುವಾಗ ಶ್ರೀವಿಜಯೀಂದ್ರರು ಅಂದಿನ ವಾದದಿಗ್ವಿಜಯವನ್ನು ಶ್ರೀಮೂಲರಾಮನಿಗೆ ಅರ್ಪಿಸುತ್ತಾರಚಿಸಿದ ಸುಳಾದಿಯು ಅತಿ ಮನೋಹರವಾಗಿದೆ, ಅದರಲ್ಲಿ ಶ್ರೀರಾಮಚರಿತೆ ಮಹಿಮಾದಿಗಳು ಹೀಗೆ ವರ್ಣಿತವಾಗಿದೆ.
ಶ್ರೀವಿಜಯೀಂದ್ರತೀರ್ಥಕೃತ ಸುಳಾದಿ
ಅಟ್ಟತಾಳ
ಪೊರಬೊಮ್ಮ ಹರಿಯು ತಾನರರೂಪತಾಳಿದ | ನರನಾಗಿ ದಶರಥನ ವರಗೇಹ ದಲವತರಿಸಿ | ಸಿರಿರಾಮನೆಂಬ ನಾಮದಿಂದ ಮೆರೆವುತ್ತಿರೆ | ಹರುಷದಿಂದ ಲೀಲೆಗೈದು |ಕರೆಯಬಂದ ಕೌಶಿಕನ | ಉರು ಯಜ್ಞವಿಘ್ನವನ್ನು ಪರಿಹರಿಸುವುದಕ್ಕಾಗಿ | ಪರಿತಂದು ವಿಘ್ನವನ್ನು ಪರಿಹರಿಸಿ ಮುನಿವರನ | ಹರುಷದಿಂದ ಪರಮಾನಂದ ಶರಧಿಯೋಲೋಡಾಡಿಸಿದ | ಸಿರಿವಿಜಯೀಂದ್ರರಾಮ ಹೊರೆಯಲೆಮ್ಮ ನಾವಾಗಲೂ
ಮಟ್ಟತಾಳ
ಈತನೆಂತು ಯಜ್ಞದ ವಿಘ್ನಪರಿಹರಿಸಿದ | ಪೂತ ಮಹಾದ್ಭುತ ರಕ್ಕಸರ | ಪೀತ ಭಯನಾಗ ಕೊಲ್ಲುವುದೆಂತೋ | ಭೂತಳಕಚ್ಚರಿ ವಿಜಯೀಂದ್ರರಾಮನ ಚರಿತಾ
ರೂಪಕತಾಳ
ಜನಕನೆಂಬ ಜನಪತಿಯ ಮನೆಗೆ ಪೋಗಿ | ಜಾನಕಿಯ ಮನಕೆ ಹರುಷವಪ್ಪಂತೆ | ಜನಪದ ಕೈವಾರಿಸುತ್ತಿರೆ ಮಾನಕ್ಕೆ | ಅಣಕವಾಡಿ ಶಿವಧನುವಮುರಿದ ವಿಜಯೀಂದ್ರ ರಾಮ
ಝಂಪೆತಾಳ
ಇವನರ್ಭಕನೇ ಇವನ ಮುನಿಗಳಾದವರೆಲ್ಲ ಮನದಿ | ಭಾವಿಸಿ ಕಾಣರೆಂಬುದರಿಯಾ ಇಲಾಸುತೆಯರಸ | ಭುವನಪಾವನನಾಮ ಸಿರಿವಿಜಯೀಂದ್ರ ರಾಮ
ತ್ರಿಪುಟತಾಳ
ರಾಮಜಾನಕಿಯ ಮದುವೆಯಾಗಿ ಬರುವಾಗ ಪರಶು | ರಾಮನಿದಿರಿಸಿ ಅವನ ಬಿಲ್ಲನೇರಿಸಿ ಮೆರೆದ |ರಾಮನಿದಿರಿಸಿ ಶ್ಯಾಮಲಾಂಗ ವಿಜಯೀಂದ್ರ | ರಾಮ ಬಾಲಕನೇ ಹೇಳಾ ರಾಮ ನಿದಿರಿಸಿ
ಅಮೃತಾಳ
ನೊಸಲಲಿ ಕಣ್ಣು ಪಡೆದವನ ಗೆಲಿದೆ | ಹಸುಳೆಯೆಂದು ಬೆಂಕೊಂಡು ಕಂದನ ಕಾಯ್ದೆ | ಕುಸುರಿ ಜವದಳೊಂದೇ ಬಾಣದಿಂದ ನಿಮಿಷದಲಿ | ಹಸುಳೆಯೇ ಅಸಮವಿಕ್ರಮ ವಿಜಯೀಂದ್ರರಾಮ ಜಗದೊಳು
ಏಕತಾಳ
ಉರವಣಿಸಿ ಬಹ ತಾಟಕಿಯ ಮಹಾ | ಕರಗಳ ನಿಮಿಷದಿ ಕತ್ತರಿಸುಯೆಂಬು | ಹಿರಿಯರು ಹೇಳಲಿದರು ಹೇಳದೆ
ತಾಯಿ | ಕರಗಳ (ಅಸುರೆಯ) ಕಡಿದ ವಿಜಯೇಂದ್ರ ರಾಮ | ಸರಸಿಜಾಸನ ವಿನುತ ಸಿರಿಮೂಲರಾಮ
ಜತೆ
ಲೋಕಾಭಿರಾಮ ಸದ್ಗುಣಧಾಮ | ಲೊಕೈಕಭೂಮ್ ವಿಜಯೀಂದ್ರರಾಮ
ಇದರಂತೆ ಶ್ರೀಗುರುರಾಜರ ತರುವಾಯ ಮುಂದೆ ಮಹಾಸಂಸ್ಥಾನ ಪೀಠಾಧೀಶ್ವರರಾಗಿ “ಉಭಯವಂಶಾಭಿ ಚಂದ್ರಮ'ರೆಂದು ಕೀರ್ತಿಗಳಿಸಿದ ಶ್ರೀಗುರುರಾಜರ ಪೂರ್ವಾಶ್ರಮ ಮರಿಮಕ್ಕಳೂ, ವಿಜಯದಾಸರ ಕುಲಗುರುಗಳೂ ಆದ ವಾದೀಂದ್ರತೀರ್ಥರು ರಚಿಸಿರುವ ಶ್ರೀಮೂಲರಾಮದೇವರ ಚರಿತ ವರ್ಣನ ಪರವಾದ ಪದವು ಅತ್ಯಂತ ಸುಂದರವಾಗಿದೆ.
ರಾಗ : ಕಾಂಬೋಧಿ ತಾಳ-ಝಂಪೆ
ಮೂಲರಾಮನ ದಿವ್ಯಮೂರ್ತಿ ಅರ್ಚಿಸಲೆನ್ನ ಮೇಲುಮೇಲೆಂಬೆನಯ್ಯ || ಪ ||
ಶೀಲದಿಂದಿಳೆಯಲ್ಲಿ ಶಿವನು ಪೊಸಲು ಪೂರ್ವ |
ಶಿಷ್ಟಾರ್ಚನೆ ಮಾಡಿದ ಚಲುವ
ಆದಿಯಲಿ ಅಜನಾಜ್ಞೆಯಿಂದಲಿ ದೇವರಬಡಿಗ್ಯಾ | ಆದರದಿ ನಿರ್ಮಿಸಿದ ವೇದಗರ್ಭನು ದೇಹದಲ್ಲಿ ಭಕುತಿಯೋಗ- ದಿಂದರ್ಚಿಸಿದ || ಮೋದದಿಂದಿಕ್ಷಾ ಕುರಾಯನರ್ಚಿಸಲವಗೆ ಮೋಕ್ಷವನೆ ಪಾಲಿಸಿದ || ಮೇದಿನೀಪತಿಗಳಲ್ಲಮಿತ ವೈಭವದಿಂದ ಮೆರೆದ ಸಂತೋಷದಾ ಚೆಲುವ || 1 ||
ದಾಶರಥಿ ಜಾಂಬವಂತಗೆ ಹರುಷದಿ ಕೊಡಲು | ದಾಸನೆಂದವನ ಪೊರೆದ | ಕೋಶದೋಳ ಜಪತಿಗಳನರಸಿ | ನರಹರಿ ಮುನಿಯು ಕೊಂಡುಬರಲಂದು ಮೆರೆದ || ದೇಶಿಕಾನಂದತೀರ್ಥಾರ್ಯರರ್ಚಿಸಿ ತಮ್ಮ ದೇವರೆಂದಾಗ ಕರೆದು | ಈಶನೆಂದಿವರ ಕಾಲಯೋಗಿಗಳಿಂದರ್ಚಿಸಲವರಾಭೀಷಗಳ ತಂದು ಸುರಿದಾ ಚಲುವ || 2 ||
ವಿನುತವಿಬುಧೇಂದ್ರ ವಂಶಾ ಪೂರ್ಣವಿಧುಬಿಂಬನೆನಿಸುತಿಹ | ಅನುದಿನವು ಸನ್ನುತೋಪೇಂದ್ರರಾಯರ ಮತವನನುಸರಿಸಿ ನಡೆಯುತಿಹ | ಘನಭಕುತ ವಾದೀಂದ್ರಯತಿ ಮನೋರಥವನ್ನು ಘ | ಟನೆಯನು ಮಾಡುತಿಹ ಚಲುವ || 3 ||
- ಶ್ರೀವಾದೀಂದ್ರತೀರ್ಥರು
ಶ್ರೀವಾದೀಂದ್ರರು ಶ್ರೀಮೂಲರಾಮನ ಮೇಲೆ ರಚಿಸಿರುವ ಇನ್ನೊಂದು ಪದವೂ ಹೃದಯಂಗಮವಾಗಿದೆ. ಅವರು ಶ್ರೀಮೂಲರಾಮನನ್ನು ಪೂಜಿಸುವ ಭಾಗ್ಯ ತಮಗೆ ದೊರೆತುದಕೆ ಕಾರಣವೇನಿರಬಹುದೆಂದು ಪ್ರಶ್ನಿಸಿಕೊಂಡು ಉತ್ತರವನ್ನು ಕೊಟ್ಟು, ಮೂಲರಾಮನ ಪೂಜೆಯಲ್ಲಿ ಮೈಮರೆತು ಹಾಡಿ-ನಲಿದು ಆನಂದಿಸಿರುವ ಪರಿ ರಮಣೀಯವಾಗಿದೆ.
ರಾಗ : ಕಲ್ಯಾಣ ತಾಳ-ಝಂಪೆ
ಮುನ್ನೇನು ಸುಕೃತವ ರಚಿಸಿದೆನೋ ನಿನ್ನನರ್ಚಿಸಲಾದೆನೋ |
ಸನ್ನುತಶುಭಗುಣ ಸಂದೋಹ ರಘುಕುಲರನ್ನ ಮೂಲರಾಮನೆ ನಾನು
ಗಂಗಾದಿ ಶುಭತೀರ್ಥಗಳನ್ನು ಮರೆತಾರುತಿಂಗಳು ಧರಿಸಿದೆನೋ |
ಮಂಗಳವನು ನಮಗೆ ಮನ್ನಿಸಿಕೊಡುವ ಶ್ರೀರಂಗಾದಿಗಳಲ್ಲಿದೆನೋ || ಶೃಂಗಾರನಿಧಿಯಾದ ಸಿರಿದೇವಿಯರಸ ನಿಮ್ಮಂಗವ ಭಜಿಸಿದ್ದೆನೋ | ಹಿಂಗಾದೆ ಗುರುಹಿರಿಯರ ಪದಾಂಭೋಜ ಸಂಗತಿಯನ್ನು ಬಲು ಸಂಪಾದಿಸಿದ್ದೆನೋ ಹ್ಯಾಂಗೋ|| ೧ ||
ಪರಿಪರಿಯಲಿ ಬಂದ ಪಾತ್ರರಲ್ಲು ಚಿತವನರಿತು ವಾಂಛಿತವಿತ್ತೆನೋ | ಪೆರಿಮೆಯಿಲ್ಲದೆ ವಾಜಪೇಯಾದಿ ಮುಖದಿಂದ 1 ಧರೆಯಲ್ಲಿ ಯಾಜಿಸಿದ್ದೆನೋ | ಹರಿಕಥೆಗಳ ಕೇಳಿ ಹಸನಾಗಿ ಮನದಲ್ಲಿ ಧರಿಸಿ ಹರುಷದಲ್ಲಿದೆನೋ | ವರತಪೋವನದಲ್ಲಿ ವರ್ತಿಸಿ ಹೃದಯಾದಲಿ | ಚಿರಕಾಲದಲಿ ನಿನ್ನ ಚಿಂತಿಸಿದ್ದೆನೋ ಹ್ಯಾಂಗೋ || 2 ||
ಆ ದೇಶಿಕಾಶ್ರಮದಾರ್ಯೋಚಿತ ಮತ | ಭೇದವನ್ನರಿತಿದ್ದೆನೋ | ವೇದ ಮೂರುತಿ ರಾಘವೇಂದ್ರ ದೇಶಿಕರ ಶ್ರೀ | ಪಾದವ ಹಿಡಿದಿದ್ದೆನೋ || ಉದಾರ ಉತ್ತಮಗುಣವುಳ್ಳ ಉಪೇಂದ್ರಗುರುಗಳ | ಮೋದಪಡಿಸಿದ್ದೆನೋ | ವಾದೀಂದ್ರ ಯತಿಕುಲವರಿಯನಾಳುವ ನಿಮ್ಮ ಸಾದರ ಭಜನೆಯ ಸಾಧಿಸಿದ್ದೆನೋ ಹ್ಯಾಂಗೋ || 3 ||
ಶ್ರೀಪುರಂದರದಾಸರ ಮಕ್ಕಳಾದ ಗುರುಪುರಂದರದಾಸರೂ, ಶ್ರೀಮೂಲರಾಮರು ಶ್ರೀಮಧ್ವರಿಗೊಲಿದ ಚರಿತೆಯನ್ನು ಬಲುಸ್ವಾರಸ್ಯವಾಗಿ “ವೇದಾಂತವೇದ್ಯನಾದ ಹರಿಯ ಜಗದೊಳು ವಿಚಾರಮಾಡುವಕಾಲದಲ್ಲಿ” ಎಂಬ ಪದದಲ್ಲಿ ಬಹು ಸುಂದರವಾಗಿ ಬಣ್ಣಿಸಿದ್ದಾರೆ. ಶ್ರೀಗೋಪಾಲದಾಸರು, ಶ್ರೀಗುರುಗೋಪಾಲ ವಿಠಲರೇ ಮೊದಲಾದ ಮಹನೀಯರೂ ಸಹ ಶ್ರೀಮೂಲರಾಮನನ್ನು ಸ್ತುತಿಸಿದ್ದಾರೆ. ಶ್ರೀವರದೇಂದ್ರತೀರ್ಥರಂತೂ “ತಂತ್ರಸಾರ'ವನ್ನು “ಮೂಲರಾಮ” ಎಂಬ ಅಂಕಿತದಿಂದಲೇ ರಚಿಸಿದ್ದಾರೆ.
ಶ್ರೀವಿಜಯದಾಸರು ತಮ್ಮ ಕುಲಗುರುಗಳಾದ ಶ್ರೀವಾದೀಂದ್ರತೀರ್ಥರನ್ನೂ, ಅವರು ಪೂಜಿಸುವ ಮೂಲರಾಮನನ್ನೂ ಭಕ್ತಿಯಿಂದ ಮೈಮರೆತು ಸ್ತುತಿಸಿದ್ದಾರೆ.
ರಾಗ : ಭೈರವಿ ತಾಳ : ತ್ರಿಪುಟ
ಕಂಡೆನು ಕಂಡೆನು ಕಂಗಳಲ್ಲಿ-ಭೂಮಂಡಲದೊಳು ಮೆರೆವ ಯತಿಗಳ |
ಮಂಡಲಾ ಸೋಮನೆನಿಪ, ಅಖಂಡಮಹಿಮವಾದೀಂದ್ರ ಗುರುಗಳ
ಮಿಸುನಿಮಂಟಪದೊಳಗೆ ನೆರೆ ರಂಜಿಸುವ ಮೂಲರಾಮನ್ನ ಕುಳ್ಳಿರಿಸಿ ಆ
ರ್ಚಿಸುತ್ತಿದ್ದರು ಚಿತ್ತೇಕಾಗ್ರದಲ್ಲಿ ಒಲಿಸುವ ತಂತ್ರಸಾರೋಗ್ಯ ಬಗೆಯನ್ನು
ಕುಶಲರಾದ ಉಪೇಂದ್ರ ಮುನಿಕರ ಬಿಸಜದಿಂದಲಿ ಜನಿಸಿ ಭಕುತಿಲಿ |
ಅಸುರರಿಪು ಸಿರಿವಿಜಯವಿಠಲನ |
ಪೆಸರುಗಳ ಎಣಿಸುವಾ ಗುರುಗಳ
ಇದರಂತೆ ಶ್ರೀಗೋಪಾಲದಾಸರಾಯರು ತಮ್ಮ ಕುಲಗುರುಗಳಾದ ಶ್ರೀವಸುಧೇಂದ್ರತೀರ್ಥರು ಪೂಜಿಸುವ ಶ್ರೀಮೂಲರಾಮನನ್ನು ತರುಣಿ ಕುಲೋತ್ಪನ್ನ ತಪ್ತಕಾಂಚನವರ್ಣ | ಪರಮಮಂಗಳಮೂರ್ತಿ ಪಾವನ ಸುಕೀರ್ತಿ” ಎಂಬ ಸುಳಾದಿಯಲ್ಲಿ ಸುಂದರಶೈಲಿಯಲ್ಲಿ ವರ್ಣಿಸಿ ಸ್ತುತಿಸಿದ್ದಾರೆ.
ಘನ ಮಹಾಮಹಿಮ ಮೂಲರಾಮ ನಿನ್ನ ನಾಮ ಒಮ್ಮೆ ಸ್ಮರಿಸಿದೊಡಾಯಿತೆ....
ಘನ್ನಮಹಾಮಹಿಮ ಮೂಲರಾಮ ನಿನ್ನ ಪರಿವಾರ ಸಹಿತ ಎನ್ನ ಗುರು ವಸುಧೇಂದ್ರ
ಮುನ್ನೆ ನಿನ್ನನರ್ಚಿಸುವ ಭಾಗವೆಂತೋ ಚಿನುಮಯಮೂರುತಿ
ಗೋಪಾಲವಿಠಲ ನಿನ್ನ ಭಕುತರ, ನಿನ್ನ ಮಹಿಮೆಗೆ ನಮೋ
ಜತೆ
ಗುರುವಸುಧೇಂದ್ರರ ಕರಕಮಲದೊಳು ತೋರ್ಪ | ಸಿರಿರಾಮಗೋಪಾಲವಿಠಲ ಶರಣುಶರಣು
ಹೀಗೆ ಶ್ರೀಮೂಲರಾಮನಚರಿತ್ರೆ, ಅವನು ಶ್ರೀಮದಾಚಾರ್ಯರಿಗೆ ಒಲಿದು ಬಂದು ಪೂಜೆ ಸ್ವೀಕರಿಸಿದ ವಿಚಾರ ಮತ್ತು ಮಧ್ವಾಚಾರರ ಮುಖ್ಯಮಹಾಸಂಸ್ಥಾನದಲ್ಲಿ ಪರಂಪರೆಯಿಂದ ಪೂಜೆಗೊಳ್ಳುತ್ತಾ ರಾಘವೇಂದ್ರಗುರುಸಾರ್ವಭೌಮರಿಂದ ಬಹುಕಾಲ ಅರ್ಚನೆಗೊಂಡು ಶ್ರೀಮೂಲರಾಮನು ಅವರಲ್ಲಿ ವಿಶೇಷಾನುಗ್ರಹಮಾಡಿ ಅವರ ಮೂಲಕ ಲೋಕಕಲ್ಯಾಣ ಮಾಡಿಸುತ್ತಿರುವ ವಿಚಾರಗಳನ್ನು ಅರಿಯುವುದರಿಂದ ಶ್ರೀಗುರುರಾಜರ ಭಕ್ತರಿಗೆ ಅಧಿಕ ಭಕ್ತಿ-ಶ್ರದ್ಧೆಗಳುಂಟಾಗಿ ಮೂಲರಾಮ ಶ್ರೀಮದಾಚಾರರು-ಶ್ರೀಟೀಕಾರಾಯರು ಮತ್ತು ರಾಘವೇಂದ್ರಸ್ವಾಮಿಗಳವರ ಪೂರ್ಣಾನುಗ್ರಹವುಂಟಾಗಿ ಅವರಿಗೆ ಸಕಲ ಸನ್ಮಂಗಳಗಳೂ ದೊರಕುವುದರಲ್ಲಿ ಸಂದೇಹವಿಲ್ಲ.
ಇಂತು ಬ್ರಹ್ಮದೇವರಿಂದ ಅರ್ಚಿತನಾದ ಮಹಾವಿಭೂತಿಪುರುಷರಿಂದ ಪೂಜೆಗೊಂಡ ಪ್ರತಿಮೆಯಲ್ಲಿ ಪರಮಾತ್ಮನ ಸಾನ್ನಿಧ್ಯವೆಷ್ಟಿರಬೇಕೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪ್ರತಿಮಾಯಾಂ ತು ಸಾನ್ನಿಧ್ಯಂ ಅರ್ಚಕಸ್ಯ ತಪೋಬಲಾತ್” ಎಂಬ ಪ್ರಮಾಣವನ್ನು ವಿಚಾರಮಾಡಿದಾಗ ಮೂಲರಾಮನನ್ನು ಬ್ರಹ್ಮದೇವರು, ಹನುಮ-ಭೀಮ-ಮಧ್ವಾವತಾರಗಳಲ್ಲಿ ವಾಯುದೇವರು, ರುದ್ರದೇವರು, ಪಾರ್ವತೀದೇವಿಯರು, ಋಷಿ-ಮುನಿ-ಮನುಗಳು, ರಾಜರ್ಷಿಗಳು, ಮೇಲಾಗಿ ಲೋಕಶಿಕ್ಷಣಾರ್ಥವಾಗಿ ತಮ್ಮದೇ ಆದ ಈ ಪ್ರತಿಮೆಯನ್ನು ಶ್ರೀರಾಮಚಂದ್ರಸೀತಾಮಾತೆಯರು ಪೂಜಿಸಿದ್ದಾರೆಂದಮೇಲೆ ಇಂದು ಈ ಮೂಲರಾಮನೇ ಪ್ರತ್ಯಕ್ಷದೇವರೆಂದು ಹೇಳಿದರೆ ತಪ್ಪಾಗಲಾರದು ! ತಿರುಪತಿಯಲ್ಲಿ “ಶಿಲಾವೃಶ್ಯತೇ ಹರಿಃ” ಎಂಬ ಪ್ರಮಾಣದಂತೆ ಸಾಕ್ಷಾತ್ ಹರಿಯೇ ಅಲ್ಲಿ ನಿಂತಿರುವನೆಂದು ಜ್ಞಾನಿಗಳು ಹೇಳುವಂತೆಯೇ “ಲೋಹವದೃಶ್ಯತೇ ಹರಿಃ” ಅಂದರೆ ಸಾಕ್ಷಾತ್ ಪರಮಾತ್ಮನೇ ಮೂಲರಾಮನಾಗಿ ಲೋಹರೂಪದಿಂದ ಇಲ್ಲಿರಾಜಿಸುತ್ತಿದ್ದಾನೆ ಎಂದು ಹೇಳಬಹುದು. ಇಂತಹ ಮಹಾಮಹಿಮೋಪೇತ ಪ್ರತಿಮೆಯನ್ನು ಪೂಜಿಸುವವರು ಮಹಾಸುಕೃತಶಾಲಿಗಳೂ, ವಿಭೂತಿಪುರುಷರೂ, ಶ್ರೀಹರಿಯ ಅನುಗ್ರಹಕ್ಕೆ ಪೂರ್ಣಪಾತ್ರರಾದ ದೇವಾಂಶರೆಂದೂ ಘಂಟಾಘೋಷವಾಗಿ ಹೇಳಬಹುದು.
ದುಂಡುಪೀಠದ, ಜೋಲುಕಿವಿಯ ಸೊಟ್ಟ ಭಂಗಿಯ ಈ ಮೂಲರಾಮನ ಪೂಜೆಗಾಗಿಯೇ ಶ್ರೀಪ್ರಹ್ಲಾದಾವತಾರಿಗಳಾದ ಶ್ರೀವ್ಯಾಸರಾಜರು ಮತ್ತೆ ರಾಘವೇಂದ್ರಸ್ವಾಮಿಗಳಾಗಿ ಅವತರಿಸಿದ ಮೇಲೆ ಲೋಕವಿಲಕ್ಷಣಮೂರ್ತಿಯಾದ ಶ್ರೀಮೂಲರಾಮಚಂದ್ರನ ಬಗ್ಗೆ ಹೆಚ್ಚು ವಿವರ ಬೇಕಿಲ್ಲವಷ್ಟೇ.
ಹೀಗೆ ಚತುರ್ಯುಗಮೂರ್ತಿಯಾದ ಶ್ರೀಮೂಲರಾಮಚಂದ್ರದೇವರಪೂಜಾರಾಧನೆ ಮಾಡುತ್ತಾ ಶ್ರೀಗುರುರಾಜರು ನವವೃಂದಾವನದಿಂದ ಮುಂದೆ ಸಂಚಾರ ಹೊರಟರು. ಮಹಾಮಹಿಮರಾದ ಶ್ರೀಗಳವರು ತಮ್ಮ ಪಾದರಜಸ್ಸಿನಿಂದ ಭೂಮಿಯನ್ನು ಪಾವನಗೊಳಿಸುತ್ತಾ ಶಿಷ್ಯರಿಗೆ ಮಂತ್ರ ಮುದ್ರಾಧಾರಣ, ಭಕ್ತ-ಧಾರ್ಮಿಕ ಜನರಿಗೆ ಗುರೂಪದೇಶ, ಶ್ರೀಮೂಲರಾಮರ ಸಂದರ್ಶನ, ತೀರ್ಥಪ್ರಸಾದ, ತತ್ವಧರ್ಮೋಪದೇಶಾದಿಗಳನ್ನು ಮಾಡಿ ಅನುಗ್ರಹಿಸುತ್ತಾ ಸಂಚಾರ ಮಾಡುತ್ತಿದ್ದರು. ಶ್ರೀಯವರು ಕೈಗೊಂಡ ಈ ಬಾರಿಯ ಸಂಚಾರ ವೈಶಿಷ್ಟ್ಯಪೂರ್ಣವಾಗಿದ್ದಿತು. ವಿವಿಧರೋಗಾದ್ರುಪದ್ರವಗಳಿಂದ, ಮಾನಸಿಕಾದಿರೋಗಗಳಿಂದ ಕಷ್ಟಪಡುತ್ತಿದ್ದವರು, ಗ್ರಹಬಾಧೆ, ಕಡುದಾರಿದ್ರಗಳಿಂದ ಬಳಲುತ್ತಿದ್ದವರು, ಪುತ್ರಾಪೇಕ್ಷಿಗಳು, ದೀನ-ದಲಿತಜನರ ಶ್ರೀಪಾದಂಗಳವರ ದರ್ಶನ, ಮಂತ್ರಪೂರಿತ ಆನ್ನೇಕ ಜಲ ಪ್ರೋಕ್ಷಣ, ಅಭಿಮಂತ್ರಿತ ಮಂತ್ರಾಕ್ಷತಾಪ್ರದಾನ, ಆಶೀರ್ವಾದಗಳಿಂದ ತಮ್ಮೆಲ್ಲ ರೋಗ, ದಾರಿದ್ರ, ಕಷ್ಟಗಳಿಂದ ಪಾರಾಗಿ ಪುತ್ರಪ್ರಾಪ್ತಿ ಮನೋರಥ ಸಿದ್ದಿಗಳಿಂದ ಅಪಾರ ಸುಖ-ಶಾಂತಿಗಳನ್ನು ಪಡೆದು ಕೃತಾರ್ಥರಾಗುತ್ತಿದ್ದರು. ಶ್ರೀಗಳವರ ಈ ದೀನದಲಿತ ಜನರ ಉದ್ದಾರ, ಸರ್ವಜನ ಹಿತಾಕಾಂಕ್ಷೆ, ಲೋಕಕಲ್ಯಾಣ ದೀಕ್ಷೆಗಳ ಕೀರ್ತಿಯು ಎಲ್ಲೆಡೆ ಹರಡಿ, ಹೋದಹೋದಲ್ಲಿ ಜನಜಂಗುಳಿಯೇ ಗುರುಗಳ ದರ್ಶನ ಅನುಗ್ರಹಾಶಿರ್ವಾದಗಳಿಗಾಗಿ ಹಾತೊರೆಯುತ್ತಿತ್ತು ! ಕೃಪಾಸಾಗರರೂ, ಉದಾರ ಅಂತಃಕರಣ ಪೂರ್ಣ ಸಾತ್ವಿಕ ತೇಜೋವಿಭೂಷಿತರೂ ಆದ ಗುರುವರರು ಸರ್ವರ ಹಿತಗೈಯುತ್ತಾ ಲೋಕಕಲ್ಯಾಣಮಾಡುತ್ತಾ ಸಕಲಜನರ ಭಕ್ತಿ-ಗೌರವಗಳಿಗೆ ಪಾತ್ರರಾಗುತ್ತಿದ್ದರು. ಸಕಲಜನರೂ, ಜನತೆಯ ಕಷ್ಟಪರಿಹಾರ, ಅಭೀಷ್ಟಪ್ರದಾನ, ಅಭ್ಯುದಯಗಳಿಗಾಗಿಯೇ ಧರೆಗಿಳಿದು ಬಂದ ದೇವತೆಗಳಿವರೆಂದು ಭಾವಿಸಿ, ಗುರುವರರನ್ನು ಸೇವಿಸಿ ಕೃತಾರ್ಥರಾಗುತ್ತಿದ್ದರು.
ಈ ಪ್ರಕಾರವಾಗಿ ಗುರುವರರು ಸಂಚಾರಮಾಡುತ್ತಾ ಎರಡನೆಯ ಬಾರಿ ಉಡುಪಿಕ್ಷೇತ್ರಕ್ಕೆ ದಯಮಾಡಿಸಿ, ಅಲ್ಲಿ ಶ್ರೀಅಷ್ಟಮಠಾಧೀಶರಿಂದ ಮಾನಿತರಾಗಿ ಶ್ರೀಕೃಷ್ಣನ ದರ್ಶನಮಾಡಿ, ಶ್ರೀಮದಾಚಾರ್ಯರ ಲೀಲಾಸ್ಥಳಗಳನ್ನೂ ಸಂದರ್ಶಿಸಿ ಸಮುದ್ರಸ್ನಾನಾದಿಗಳಿಂದ ಸಂತೃಪ್ತರಾಗಿ ಕೆಲದಿನ ಅಲ್ಲಿ ವಾಸಮಾಡಿದರು.
ಶ್ರೀಪಾದರು ಶಾಲಿವಾಹನ ಶಕೆ ೧೫೮೫ ನೇ ಶೋಭನಕೃತು ಸಂವತ್ಸರದ ಚೈತ್ರ ಶುಕ್ಲ ನವಮಿಯಂದು (ಕ್ರಿ.ಶ. ೧೬೬೩ ಏಪ್ರಿಲ್) ಶ್ರೀಕೃಷ್ಣನ ಸನ್ನಿಧಿಯಲ್ಲಿ ಶ್ರೀಮೂಲರಾಮದೇವರ ಮಹಾಭೀಷೇಕವನ್ನು ವೈಭವದಿಂದ ನೆರವೇರಿಸಿ ಸಂಚಾರ ಕ್ರಮದಿಂದ ಮಹೀಶ್ವರ ಪುರಕ್ಕಾಗಮಿಸಿ, ಅಲ್ಲಿಂದ ವೈಶಾಖಮಾಸ ಪ್ರಯುಕ್ತ ಸಂಗಮಸ್ನಾನಕ್ಕಾಗಿ ತಿರುಮಕೂಡಲಿಗೆ ದಯಮಾಡಿಸಿದರು.
ತಿರುಮಕೂಡಲು ಕ್ಷೇತ್ರದಲ್ಲಿ ಬ್ರಹ್ಮಾಶ್ವತ್ಥ ಹಾಗೂ ಗುಂಜಾ ನರಸಿಂಹಸ್ವಾಮಿಯವರ ಸನ್ನಿಧಿಯಲ್ಲಿ ಬಿಡಾರಮಾಡಿ ಪ್ರತಿದಿವಸ ಸಂಗಮಸ್ನಾನ, ದೇವರಪೂಜಾ, ಪಾಠಪ್ರವಚನ ನಿರತರಾದರು. ವೈಶಾಖ ಶುಕ್ಲ ಪೂರ್ಣಿಮಾದಿನ ಶ್ರೀವ್ಯಾಸಪೂಜಾ ಮಹೋತ್ಸವವನ್ನು ಆಚರಿಸಿ ಮಹಾಸಂಸ್ಥಾನದ ಮೂಲಸ್ಥಳವಾದ ನಂಜನಗೂಡಿಗೆ ದಿಗ್ವಿಜಯ ಮಾಡಿದರು.
ಶ್ರೀಸ್ವಾಮಿಗಳವರ ಪಾಂಡಿತ್ಯ, ಅಲೌಕಿಕ ತೇಜಸ್ಸು, ಭಗವದ್ಭಕ್ತಿ, ತಪಸ್ಸು, ವಿದ್ವಜ್ಜನಪೋಷಣೆ, “ಸರ್ವಜನಾಸ್ಸುಖಿನೋ ಭವಂತು” ಎಂಬ ಉದಾರಭಾವನೆಯಿಂದ ಸರ್ವರನ್ನೂ ಪೊರೆದು ಅನುಗ್ರಹಿಸುವ ಬುದ್ದಿಗಳನ್ನು ಕಂಡು ಪ್ರಭಾವಿತರಾದ ನಂಜನಗೂಡಿನ ತ್ರಿಮತಸ್ಥ ವೈದಿಕ-ಲೌಕಿಕ ವಿದ್ವಜ್ಜನರು ಚಾತುರ್ವಣ್ಯ್ರದ ಇತರ ಆಸ್ತಿಕರೂ ಸಹ ಶ್ರೀಯವರಲ್ಲಿ ವಿಶೇಷ ಭಕ್ತಾದರಗಳಿಂದ ವರ್ತಿಸುತ್ತಾ ಅವರ ಉಪದೇಶಾಮೃತದಿಂದ ಉದ್ಧತರಾಗುತ್ತಿದ್ದರು.
ಗುರುಗಳು ಪ್ರತಿದಿನ ಕಪಿಲಾನದಿಯಲ್ಲಿ ಸ್ನಾನಮಾಡಿ ಆತ್ಮೀಕವನ್ನು ಮುಗಿಸಿಕೊಂಡು ಶ್ರೀಪರಶುರಾಮದೇವರು ತಥಾ ಶ್ರೀಕಂಠೇಶ್ವರಸ್ವಾಮಿಯವರ ದರ್ಶನ ಮಾಡಿ ಶ್ರೀರುದ್ರದೇವರನ್ನು ಸ್ತುತಿಸಿ, ಶುಕನಾಸ ಮಂಟಪದಲ್ಲಿ ಕುಳಿತು ಸಜ್ಜನರಿಗೆ ವೇದ, ಉಪನಿಷತ್ತು, ಗೀತಾ, ಭಾಗವತ, ರಾಮಾಯಣ, ಭಾರತಾದಿ ಶಾಸ್ತ್ರಗಳಲ್ಲಿ ಉಕ್ತವಾದ ಸತ್ತತ್ವಸಾರವನ್ನು ಉಪದೇಶಮಾಡುತ್ತಿದ್ದರು. ಆಸ್ತಿಕರು ಅಪೂರ್ವವಾದ ಶ್ರೀಯವರ ಉಪದೇಶದಿಂದ ಆನಂದಪರವಶರಾಗುತ್ತಿದ್ದರು.
ಜೇಷ್ಠ ಶುಕ್ಲ ಪೂರ್ಣಿಮಾ ದಿವಸ, ಪೂರ್ಣಿಮಾ ರಥೋತ್ಸವಕ್ಕಾಗಿ ಆಕಸ್ಮಿಕವಾಗಿ ಶ್ರೀರಂಗಪಟ್ಟಣದಿಂದ ಬಂದಿದ್ದ ಕರ್ನಾಟಕ ರತ್ನಸಿಂಹಾಸನಾಧೀಶ್ವರರೂ, ಮೈಸೂರು ಪುರವರಾಧೀಶರೂ ಆದ ದೊಡ್ಡದೇವರಾಜ ಒಡೆಯರಿಗೆ, ದೇವಾಲಯದಲ್ಲಿ ಶ್ರೀರಾಘವೇಂದ್ರಗುರುಸಾರ್ವಭೌಮರು ನಂಜನಗೂಡಿನಲ್ಲಿ ಬಿಡಾರಮಾಡಿ ತತ್ವಧರ್ಮ ಪ್ರಸಾರಮಾಡುತ್ತಿರುವ ವಿಚಾರತಿಳಿದು ಪರಮಾನಂದವಾಯಿತು.
ದೊಡ್ಡರಾಜ ಒಡೆಯರು ಭಗವದ್ಭಕ್ತರೂ, ಸಾಧುಸಂತರಲ್ಲಿ ಆದರವುಳ್ಳವರೂ ಪ್ರಜಾರಂಜಕರೂ, ಸರ್ವರ ಪ್ರೇಮಾದರಗಳಿಗೆ ಪಾತ್ರರೂ ಆಗಿ ವಿಶ್ವಾಸಗಳಿಸಿದ್ದ ಆದರ್ಶ ರಾಜರಾಗಿದ್ದರು. ಅವರು ಗುರುಗಳ ದರ್ಶನಾಕಾಂಕ್ಷಿಗಳಾಗಿ ಮಿತಪರಿವಾರದೊಡನೆ ಶ್ರೀಮಠಕ್ಕೆ ಬಂದರು. ಮಠದ ಪಂಡಿತರು, ಅಧಿಕಾರಿಗಳು ಪೂರ್ಣಕುಂಭ ವೇದಘೋಷ, ವಾದ್ಯವೈಭವದೊಡನೆ ರಾಜರನ್ನು ಸ್ವಾಗತಿಸಿ ಗುರುಸನ್ನಿಧಿಗೆ ಕರೆದುತಂದರು.
ಅಪೂರ್ವ ವರ್ಚವಿಭೂಷಿತರೂ, ಮಹಾತೇಜಸ್ತಿಗಳೂ ಆದ ಗುರುಪಾದರನ್ನು ಕಂಡು ಮಹಾರಾಜರು ಸಾಷ್ಟಾಂಗವೆರಗಿ ಫಲಪುಷ್ಪಹಾರ-ಖಿಲ್ಲತ್ತು-ಕಾಣಿಕೆಗಳನ್ನು ಸಮರ್ಪಿಸಿದರು.
ದೊಡ್ಡರಾಜ ಒಡೆಯರು ಕೃತಾಂಜಲಿಪುಟರಾಗಿ “ಮಹಾಸ್ವಾಮಿ, ತಮ್ಮ ದರ್ಶನದಿಂದ ಪುನೀತನಾದೆ. ತಾವು ನಮ್ಮ ರಾಜಧಾನಿ ಶ್ರೀರಂಗಪಟ್ಟಣಕ್ಕೆ ಬಿಜಯಮಾಡಿಸಿ ರಾಜಧಾನಿಯಲ್ಲಿಯೇ ಈ ವರ್ಷದ ಚಾತುರ್ಮಾಸ ವ್ರತಕ್ಕೆ ಕುಳಿತು, ದೇವರ ದರ್ಶನ ಉಪದೇಶಾಮೃತಗಳಿಂದ ನಮ್ಮನ್ನೂ ನಮ್ಮ ಪ್ರಜರನ್ನೂ ಸುಕೃತಭಾಗಿಗಳನ್ನಾಗಿ ಮಾಡಬೇಕಾಗಿ ಪ್ರಾರ್ಥಿಸುತ್ತೇನೆ” ಎಂದು ವಿನಯದಿಂದ ವಿಜ್ಞಾಪಿಸಿದರು.
ಮಹಾರಾಜರ ವಿನಯ, ಭಕ್ತಿ, ಸಾತ್ವಿಕಪ್ರವೃತ್ತಿಗಳನ್ನು ಕಂಡು ಸಂತುಷ್ಟರಾದ ಗುರುರಾಜರು ಮಹಾಪ್ರಭುಗಳ ಕೋರಿಕೆಯಂತೆ ಚಾತುರ್ಮಾಸ್ಯ ಸಂಕಲ್ಪಕ್ಕಾಗಿ ರಾಜಧಾನಿಗೆ ಬರುವುದಾಗಿ ಭರವಸೆ ನೀಡಿ ರಾಜೋಚಿತ ರೀತಿಯಲ್ಲಿ ಪ್ರಭುಗಳನ್ನು ಸತ್ಕರಿಸಿ, ಫಲಮಂತ್ರಾಕ್ಷತೆ, ಪುಷ್ಪಹಾರ, ಖಿಲ್ಲತ್ತುಗಳನ್ನು ಅನುಗ್ರಹಿಸಿ ಆಶೀರ್ವದಿಸಿದರು. ಶ್ರೀಪಾದಂಗಳವರಿಗೆ ನಮಸ್ಕರಿಸಿ ಅಪ್ಪಣೆ ಪಡೆದು ಮಹಾರಾಜರು ರಾಜಧಾನಿಗೆ ತೆರಳಿದರು.